AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Compliment Day: ವಿಶ್ವ ಅಭಿನಂದನಾ ದಿನದ ಇತಿಹಾಸ ಹಾಗೂ ವಿಶೇಷತೆಗಳು ಇಲ್ಲಿವೆ

ಮಾರ್ಚ್ 1 ರಂದು ವಿಶ್ವ ಅಭಿನಂದನಾ ದಿನವೆಂದು ಆಚರಿಸಲಾಗುತ್ತದೆ. ನೀವು ಅಭಿನಂದನೆ ಹೇಳಲು ಬಯಸುವ ವ್ಯಕ್ತಿಗೆ ಇಂದು ಅಭಿನಂದನೆಯನ್ನು ತಿಳಿಸಬಹುದಾಗಿದೆ.

World Compliment Day: ವಿಶ್ವ ಅಭಿನಂದನಾ ದಿನದ ಇತಿಹಾಸ ಹಾಗೂ ವಿಶೇಷತೆಗಳು ಇಲ್ಲಿವೆ
ವಿಶ್ವ ಅಭಿನಂದನಾ ದಿನ
ಅಕ್ಷತಾ ವರ್ಕಾಡಿ
|

Updated on: Mar 01, 2023 | 7:30 AM

Share

ಮಾರ್ಚ್ 1 ರಂದು ವಿಶ್ವ ಅಭಿನಂದನಾ ದಿನ(World Compliment Day) ವೆಂದು ಆಚರಿಸಲಾಗುತ್ತದೆ. ನೀವು ಅಭಿನಂದನೆ ಹೇಳಲು ಬಯಸುವ ವ್ಯಕ್ತಿಗೆ ಇಂದು ಅಭಿನಂದನೆಯನ್ನು ತಿಳಿಸಬಹುದಾಗಿದೆ. ಇದು ನಿಮ್ಮಿಂದ ಅಭಿನಂದನೆ ಸ್ವೀಕರಿಸಿದ ವ್ಯಕ್ತಿಗೆ ಖುಷಿಯನ್ನು ನೀಡುವುದರ ಜೊತೆಗೆ ನಿಮ್ಮ ಮುಖದಲ್ಲೂ ನಗುವನ್ನು ಮೂಡಿಸಲು ಕಾರಣವಾಗುತ್ತದೆ. ಆದ್ದರಿಂದ ಈ ವಿಶೇಷ ದಿನದಂದು ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ಸಂತೋಷವನ್ನು ಹರಡಲು ಈ ದಿನ ಸೂಕ್ತವಾಗಿದೆ.

ವಿಶ್ವ ಅಭಿನಂದನಾ ದಿನದ ಇತಿಹಾಸ:

ವಿಶ್ವ ಅಭಿನಂದನಾ ದಿನವನ್ನು ಅಧಿಕೃತವಾಗಿ ಹ್ಯಾನ್ಸ್ ಪೂರ್ಟ್‌ಲಿಟ್ ಅವರು ತಮ್ಮ ತಾಯ್ನಾಡಿನ ನೆದರ್‌ಲ್ಯಾಂಡ್‌ನಲ್ಲಿ ಪ್ರಾರಂಭಿಸಿದರು. ಈ ದಿನ ರಜಾ ದಿನವೆಂದು ಘೋಷಿಸಲಾಯಿತು. ನೆದರ್ಲ್ಯಾಂಡ್ಸ್ನಲ್ಲಿ, ಇದು ಕೇವಲ ರಾಷ್ಟ್ರೀಯ ಅಭಿನಂದನೆ ದಿನವಾಗಿ ಪ್ರಾರಂಭವಾಯಿತು, ಆದರೆ ಪ್ರಪಂಚದಾದ್ಯಂತದ ಹೆಚ್ಚಿನ ಜನರು ಈ ರಜಾದಿನವನ್ನು ಆಚರಿಸಲು ಪ್ರಾರಂಭಿಸಿದರು. ಮುಂದೆ ಈ ದಿನ ವಿಶ್ವ ಅಭಿನಂದನೆ ದಿನವಾಗಿ ಬದಲಾಯಿತು.

ಇದನ್ನೂ ಓದಿ: ನಿಮ್ಮ ರಿಲೇಷನ್​​​ಶಿಪ್​​ನಲ್ಲಿ ಇಂತಹ ಅಭ್ಯಾಸಗಳು ಕಂಡುಬಂದರೆ ತಕ್ಷಣ ಸಂಬಂಧಕ್ಕೆ ಬ್ರೇಕ್ ಹಾಕಿ

ವಿಶ್ವ ಅಭಿನಂದನಾ ದಿನವನ್ನು ಆಚರಿಸುವುದು ಹೇಗೆ?

ಈ ರಜಾದಿನವನ್ನು ಆಚರಿಸುವುದು ಯಾರಿಗಾದರೂ ಪ್ರಾಮಾಣಿಕ ಅಭಿನಂದನೆಯನ್ನು ನೀಡುವಷ್ಟು ಸರಳವಾಗಿದೆ. ಸ್ನೇಹಿತ, ಕುಟುಂಬದ ಸದಸ್ಯರು, ಸಹೋದ್ಯೋಗಿ ಅಥವಾ ಸಂಪೂರ್ಣ ಅಪರಿಚಿತರಾಗಿದ್ದರೂ ಪರವಾಗಿಲ್ಲ ನೀವು ಅಭಿನಂದನೆಯನ್ನು ಸಲ್ಲಿಸಬಹುದಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ #WorldComplimentDay ಎಂಬ ಹ್ಯಾಶ್‌ಟ್ಯಾಗ್ ಬಳಸಿಕೊಂಡು ತಮ್ಮ ಖಾತೆಗಳಲ್ಲಿ ಇತರ ಜನರಿಗೆ ತಮ್ಮ ಅಭಿನಂದನೆಗಳನ್ನು ಪೋಸ್ಟ್ ಮಾಡಬಹುದು.

ಅಭಿನಂದನೆಗಳನ್ನು ನೀಡುವ ಪ್ರಯೋಜನಗಳು:

ಅಭಿನಂದನೆಗಳು ನೀಡುವ ವ್ಯಕ್ತಿ ಮತ್ತು ಸ್ವೀಕರಿಸುವ ವ್ಯಕ್ತಿಯು ಉತ್ತಮ ಭಾವನೆಯನ್ನು ಉಂಟುಮಾಡುತ್ತದೆ. ನೀವು ನಿಮ್ಮನ್ನು ಖುಷಿಪಡಿಸುವುದು ಮಾತ್ರವಲ್ಲದೇ ಇನ್ನೊಬ್ಬರ ಮುಖದಲ್ಲಿ ನಗುವನ್ನು ಮೂಡಿಸುವಲ್ಲಿಯೂ ಕೂಡ ಸಹಾಯಕವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು