AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Compliment Day: ವಿಶ್ವ ಅಭಿನಂದನಾ ದಿನದ ಇತಿಹಾಸ ಹಾಗೂ ವಿಶೇಷತೆಗಳು ಇಲ್ಲಿವೆ

ಮಾರ್ಚ್ 1 ರಂದು ವಿಶ್ವ ಅಭಿನಂದನಾ ದಿನವೆಂದು ಆಚರಿಸಲಾಗುತ್ತದೆ. ನೀವು ಅಭಿನಂದನೆ ಹೇಳಲು ಬಯಸುವ ವ್ಯಕ್ತಿಗೆ ಇಂದು ಅಭಿನಂದನೆಯನ್ನು ತಿಳಿಸಬಹುದಾಗಿದೆ.

World Compliment Day: ವಿಶ್ವ ಅಭಿನಂದನಾ ದಿನದ ಇತಿಹಾಸ ಹಾಗೂ ವಿಶೇಷತೆಗಳು ಇಲ್ಲಿವೆ
ವಿಶ್ವ ಅಭಿನಂದನಾ ದಿನ
ಅಕ್ಷತಾ ವರ್ಕಾಡಿ
|

Updated on: Mar 01, 2023 | 7:30 AM

Share

ಮಾರ್ಚ್ 1 ರಂದು ವಿಶ್ವ ಅಭಿನಂದನಾ ದಿನ(World Compliment Day) ವೆಂದು ಆಚರಿಸಲಾಗುತ್ತದೆ. ನೀವು ಅಭಿನಂದನೆ ಹೇಳಲು ಬಯಸುವ ವ್ಯಕ್ತಿಗೆ ಇಂದು ಅಭಿನಂದನೆಯನ್ನು ತಿಳಿಸಬಹುದಾಗಿದೆ. ಇದು ನಿಮ್ಮಿಂದ ಅಭಿನಂದನೆ ಸ್ವೀಕರಿಸಿದ ವ್ಯಕ್ತಿಗೆ ಖುಷಿಯನ್ನು ನೀಡುವುದರ ಜೊತೆಗೆ ನಿಮ್ಮ ಮುಖದಲ್ಲೂ ನಗುವನ್ನು ಮೂಡಿಸಲು ಕಾರಣವಾಗುತ್ತದೆ. ಆದ್ದರಿಂದ ಈ ವಿಶೇಷ ದಿನದಂದು ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ಸಂತೋಷವನ್ನು ಹರಡಲು ಈ ದಿನ ಸೂಕ್ತವಾಗಿದೆ.

ವಿಶ್ವ ಅಭಿನಂದನಾ ದಿನದ ಇತಿಹಾಸ:

ವಿಶ್ವ ಅಭಿನಂದನಾ ದಿನವನ್ನು ಅಧಿಕೃತವಾಗಿ ಹ್ಯಾನ್ಸ್ ಪೂರ್ಟ್‌ಲಿಟ್ ಅವರು ತಮ್ಮ ತಾಯ್ನಾಡಿನ ನೆದರ್‌ಲ್ಯಾಂಡ್‌ನಲ್ಲಿ ಪ್ರಾರಂಭಿಸಿದರು. ಈ ದಿನ ರಜಾ ದಿನವೆಂದು ಘೋಷಿಸಲಾಯಿತು. ನೆದರ್ಲ್ಯಾಂಡ್ಸ್ನಲ್ಲಿ, ಇದು ಕೇವಲ ರಾಷ್ಟ್ರೀಯ ಅಭಿನಂದನೆ ದಿನವಾಗಿ ಪ್ರಾರಂಭವಾಯಿತು, ಆದರೆ ಪ್ರಪಂಚದಾದ್ಯಂತದ ಹೆಚ್ಚಿನ ಜನರು ಈ ರಜಾದಿನವನ್ನು ಆಚರಿಸಲು ಪ್ರಾರಂಭಿಸಿದರು. ಮುಂದೆ ಈ ದಿನ ವಿಶ್ವ ಅಭಿನಂದನೆ ದಿನವಾಗಿ ಬದಲಾಯಿತು.

ಇದನ್ನೂ ಓದಿ: ನಿಮ್ಮ ರಿಲೇಷನ್​​​ಶಿಪ್​​ನಲ್ಲಿ ಇಂತಹ ಅಭ್ಯಾಸಗಳು ಕಂಡುಬಂದರೆ ತಕ್ಷಣ ಸಂಬಂಧಕ್ಕೆ ಬ್ರೇಕ್ ಹಾಕಿ

ವಿಶ್ವ ಅಭಿನಂದನಾ ದಿನವನ್ನು ಆಚರಿಸುವುದು ಹೇಗೆ?

ಈ ರಜಾದಿನವನ್ನು ಆಚರಿಸುವುದು ಯಾರಿಗಾದರೂ ಪ್ರಾಮಾಣಿಕ ಅಭಿನಂದನೆಯನ್ನು ನೀಡುವಷ್ಟು ಸರಳವಾಗಿದೆ. ಸ್ನೇಹಿತ, ಕುಟುಂಬದ ಸದಸ್ಯರು, ಸಹೋದ್ಯೋಗಿ ಅಥವಾ ಸಂಪೂರ್ಣ ಅಪರಿಚಿತರಾಗಿದ್ದರೂ ಪರವಾಗಿಲ್ಲ ನೀವು ಅಭಿನಂದನೆಯನ್ನು ಸಲ್ಲಿಸಬಹುದಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ #WorldComplimentDay ಎಂಬ ಹ್ಯಾಶ್‌ಟ್ಯಾಗ್ ಬಳಸಿಕೊಂಡು ತಮ್ಮ ಖಾತೆಗಳಲ್ಲಿ ಇತರ ಜನರಿಗೆ ತಮ್ಮ ಅಭಿನಂದನೆಗಳನ್ನು ಪೋಸ್ಟ್ ಮಾಡಬಹುದು.

ಅಭಿನಂದನೆಗಳನ್ನು ನೀಡುವ ಪ್ರಯೋಜನಗಳು:

ಅಭಿನಂದನೆಗಳು ನೀಡುವ ವ್ಯಕ್ತಿ ಮತ್ತು ಸ್ವೀಕರಿಸುವ ವ್ಯಕ್ತಿಯು ಉತ್ತಮ ಭಾವನೆಯನ್ನು ಉಂಟುಮಾಡುತ್ತದೆ. ನೀವು ನಿಮ್ಮನ್ನು ಖುಷಿಪಡಿಸುವುದು ಮಾತ್ರವಲ್ಲದೇ ಇನ್ನೊಬ್ಬರ ಮುಖದಲ್ಲಿ ನಗುವನ್ನು ಮೂಡಿಸುವಲ್ಲಿಯೂ ಕೂಡ ಸಹಾಯಕವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ