AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Nadu: ಬಿರ್ಯಾನಿ ತಿಂದ ಕೆಲಹೊತ್ತಲ್ಲೇ 10 ವರ್ಷದ ಬಾಲಕಿ ಸಾವು; 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಬಿರ್ಯಾನಿ ತಿಂದು ಮೃತಪಟ್ಟ ಬಾಲಕಿಯ ಹೆಸರು ಲೋಕ್ಷಣಾ. ಈಕೆ ತನ್ನ ಕುಟುಂಬದವರೊಂದಿಗೆ ಉಪಾಹಾರಗೃಹಕ್ಕೆ ಹೋಗಿ ಬಿರ್ಯಾನಿ ತಿಂದಿದ್ದಳು. ಆದರೆ ಕೆಲವೇ ಹೊತ್ತಲ್ಲಿ ವಾಂತಿ ಶುರುವಾಗಿದೆ.

Tamil Nadu: ಬಿರ್ಯಾನಿ ತಿಂದ ಕೆಲಹೊತ್ತಲ್ಲೇ 10 ವರ್ಷದ ಬಾಲಕಿ ಸಾವು; 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಬಿರ್ಯಾನಿ ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Sep 12, 2021 | 11:27 AM

ತಿರುವನಣ್ಣಮಲೈ: ತಮಿಳುನಾಡಿನ (Tamil Nadu) ತಿರುವಣ್ಣಾಮಲೈ ಜಿಲ್ಲೆ ಅರ್ಣಿ ಎಂಬಲ್ಲಿರುವ 7ಸ್ಟಾರ್​ ಹೋಟೆಲ್​ವೊಂದರಲ್ಲಿ ಚಿಕನ್​ ತಂದೂರಿ ಬಿರ್ಯಾನಿ (Chicken Tandoori Biryani) ತಿಂದ 10 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಹಾಗೇ, 40ಕ್ಕೂ ಹೆಚ್ಚು ಮಂದಿ ಆರೋಗ್ಯ ಹಾಳಾಗಿದ್ದು, ಅದರಲ್ಲಿ 10 ಮಂದಿಯ ಪರಿಸ್ಥಿತಿ ತುಸು ಗಂಭೀರವಾಗಿಯೇ ಇದೆ. ಅದರಲ್ಲೂ ಮೂರು ಜನ ಮೃತ ಬಾಲಕಿಯ ಕುಟುಂಬದವರೇ ಆಗಿದ್ದಾರೆ.

ಇಲ್ಲಿ ಚಿಕನ್​ ತಂದೂರಿ ಬಿರ್ಯಾನಿ ತಿಂದವರಿಗೆಲ್ಲ ವಾಂತಿ, ವಾಕರಿಕೆ, ಅತಿಸಾರ ಶುರುವಾಗಿದೆ. ಎಲ್ಲರನ್ನೂ ಅರ್ಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರು ಚೇತರಿಸಿಕೊಂಡು ಡಿಸ್​ಚಾರ್ಜ್​ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕನ್​ ಪೀಸ್​ ಹಳಸಿತ್ತು ಮತ್ತು ಕಲುಷಿತವಾಗಿತ್ತು. ಅದನ್ನು ಪರಿಶೀಲನೆ ಮಾಡದೆ ತಂದೂರಿ ಚಿಕನ್​ ಬಿರ್ಯಾನಿ ಮಾಡಿ ಗ್ರಾಹಕರಿಗೆ ಬಡಿಸಿದ್ದಾರೆ. ಅದು ಫುಡ್​ ಪಾಯ್ಸನ್​ ಆಗಿದ್ದರಿಂದ ತಿಂದವರ ಆರೋಗ್ಯ ಹದಗೆಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಬಾಲಕಿಯ ಹೆಸರು ಲೋಕ್ಷಣಾ. ಈಕೆ ತನ್ನ ಕುಟುಂಬದವರೊಂದಿಗೆ ಉಪಾಹಾರಗೃಹಕ್ಕೆ ಹೋಗಿ ಬಿರ್ಯಾನಿ ತಿಂದಿದ್ದಳು. ಆದರೆ ಕೆಲವೇ ಹೊತ್ತಲ್ಲಿ ವಾಂತಿ ಶುರುವಾಗಿದೆ. ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ ಬಾಲಕಿಯ ಸಾವಿನಿಂದ ಸ್ಥಳೀಯರು ತುಂಬ ಕಂಗಾಲಾಗಿದ್ದಾರೆ.  ಘಟನೆ ನಡೆದ ಬೆನ್ನಲ್ಲೇ ಪೊಲೀಸ್​ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳ ಜಂಟಿ ತಂಡ ಆ ಹೋಟೆಲ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಆ ಬಿರ್ಯಾನಿ ಪರೀಕ್ಷೆಗೆಂದು ಸ್ಯಾಂಪಲ್​ ತೆಗೆದುಕೊಂಡಿದ್ದಾರೆ. ಹಾಗೇ, ಅಲ್ಲಿದ್ದ ಸುಮಾರು 15 ಕೆಜಿ ಚಿಕನ್​ಗಳು ಹಳಸಿವೆ ಎಂದು ಮೇಲ್ನೋಟಕ್ಕೇ ಗೊತ್ತಾಗಿದ್ದು, ಅದನ್ನೆಲ್ಲ ಜಪ್ತಿ ಮಾಡಲಾಗಿದೆ. ಸದ್ಯ ಆ ಉಪಾಹಾರ ಗೃಹವನ್ನೇ ಪೊಲೀಸರು ಸೀಲ್​ ಮಾಡಿದ್ದಾರೆ. ಹಾಗೇ, ನಗರದಲ್ಲಿ ಇರುವ ಎಲ್ಲ ನಾನ್​ ವೆಜ್​ ಹೋಟೆಲ್​​ಗಳಲ್ಲಿ ಸಂಗ್ರಹಿಸಡಲಾದ ಚಿಕನ್​ ಮತ್ತಿತರ ಮಾಂಸಗಳ ಕ್ವಾಲಿಟಿ ಚೆಕ್​ ಮಾಡುವ ಅಭಿಯಾನ ಕೂಡ ಪ್ರಾರಂಭವಾಗಿದೆ.

ಇದನ್ನೂ ಓದಿ: 120 ಆ್ಯಂಬುಲೆನ್ಸ್​ಗಳಿಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ನರೇಂದ್ರ ಮೋದಿ, ರಜನಿಕಾಂತ್, ಅಕ್ಷಯ್ ಕುಮಾರ್ ನಂತರ ಭಾರತದ ಮತ್ತಿಬ್ಬರು ಸೆಲೆಬ್ರಿಟಿಗಳು ‘ಇನ್​ಟು ದಿ ವೈಲ್ಡ್​​’ನಲ್ಲಿ!

(10 year old Girl dies 40 hospitalised after consuming biryani In Tamil Nadu)

ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ
ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
ರಾಗಿಣಿ ಹಾಗೂ ಕುರಿ ಸೇರಿದ್ರೆ ‘ಕುರಾಗಿಣಿ’; ಪ್ರತಾಪ್ ಲೆಕ್ಕಾಚಾರ ನೋಡಿ
ರಾಗಿಣಿ ಹಾಗೂ ಕುರಿ ಸೇರಿದ್ರೆ ‘ಕುರಾಗಿಣಿ’; ಪ್ರತಾಪ್ ಲೆಕ್ಕಾಚಾರ ನೋಡಿ
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್