’ಯಾರೋ ರೂಪಿಸಿಕೊಂಡ ಕಾನೂನಿಗೆಲ್ಲ ಷರಿಯತ್​ ಎನ್ನಲಾಗದು..’-ಕೇರಳ ರಾಜ್ಯಪಾಲ ಆರಿಫ್​ ಮೊಹಮ್ಮದ್​ ಖಾನ್​

TV9 Digital Desk

| Edited By: Lakshmi Hegde

Updated on: Sep 12, 2021 | 10:39 AM

ದೇಶದಲ್ಲಿ ಮುಸ್ಲಿಂ ನಾಯಕತ್ವವನ್ನು ಮುಂಚೂಣಿಗೆ ತರಲು ಪ್ರಯತ್ನ ಮಾಡುತ್ತಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ವಿರುದ್ಧ ಅರೀಫ್​ ಮೊಹಮ್ಮದ್​ ಖಾನ್ ವಾಗ್ದಾಳಿ ನಡೆಸಿದ್ದಾರೆ.

’ಯಾರೋ ರೂಪಿಸಿಕೊಂಡ ಕಾನೂನಿಗೆಲ್ಲ ಷರಿಯತ್​ ಎನ್ನಲಾಗದು..’-ಕೇರಳ ರಾಜ್ಯಪಾಲ ಆರಿಫ್​ ಮೊಹಮ್ಮದ್​ ಖಾನ್​
ಅರೀಫ್​ ಮೊಹಮ್ಮದ್ ಖಾನ್​

ದೆಹಲಿ: ತಾಲಿಬಾನಿ (Taliban)ಗಳು ವಿದ್ಯಾಭ್ಯಾಸ ಮಾಡಿದ್ದು ಪಾಕಿಸ್ತಾನದ ದೇವಬಂಧಿ ಮದರಸಾಗಳಲ್ಲಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಕೇರಳ ರಾಜ್ಯಪಾಲ ಆರಿಫ್​ ಮೊಹಮ್ಮದ್​ ಖಾನ್​ ಹೇಳಿದ್ದಾರೆ. ಅಷ್ಟೇ ಅಲ್ಲ, ತಾಲಿಬಾನಿಗಳೇ ರೂಪಿಸಿಕೊಂಡಿರುವ ಕಾನೂನಿಗೆ ಷರಿಯತ್​ ಕಾನೂನು (ಇಸ್ಲಾಮಿಕ್​ ಲಾ) (Shariat) ಎಂದು ಕರೆಯಲು ಸಾಧ್ಯವೇ ಇಲ್ಲ ಎಂದೂ ಅವರು ಹೇಳಿದ್ದಾರೆ. ಹಾಗೇ, ಇದೀಗ ಅಫ್ಘಾನಿಸ್ತಾನದಲ್ಲಿರುವ ಬಂಡುಕೋರರ ಜತೆ ಮಾತುಕತೆ ನಡೆಸುವ ಮೂಲಕ ಭಾರತ ಸರ್ಕಾರ ಒಳ್ಳೆಯ ಕೆಲಸವನ್ನೇ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಟೈಮ್ಸ್​ ನೌ ಮಾಧ್ಯಮದೊಂದಿಗೆ ಮಾತನಾಡಿದ ಆರಿಫ್​ ಮೊಹಮ್ಮದ್​ ಖಾನ್, ಇಡೀ ಜಗತ್ತಿನಲ್ಲಿ ಶಾಂತಿ ಸ್ಥಾಪನೆ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ಏನು ಬೇಕೋ ಅದನ್ನು ಮಾಡಲಿದೆ ಎಂದು ಹೇಳಿದ್ದಾರೆ.  ಇನ್ನು ಈಗ ತಾಲಿಬಾನಿಗಳು ಹೇಳುತ್ತಿರುವುದು ಖಂಡಿತ ಷರಿಯತ್​ ಕಾನೂನು ಅಲ್ಲ. ಕುರಾನ್​ಗೆ ಷರಿಯತ್ ಕಾನೂನು ಎಂದು ಕರೆಯಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇವರು ತಮಗೆ ಬೇಕಾದಂತೆ ರೂಪಿಸಿಕೊಂಡ ಕಾನೂನಿಗೆ ಷರಿಯತ್​ ಎನ್ನಲಾಗುತ್ತಿದೆ ಎಂದು ಹೇಳಿದರು.

‘ಮನುಕುಲದ ಪ್ರಗತಿ ಧರ್ಮದ ಆಶಯ. ಧರ್ಮವು ಆಂತರಿಕ ಪ್ರಜ್ಞೆಗೆ ಸಂಬಂಧಪಟ್ಟ ವಿಚಾರ. ಆದರೆ ಮತಾಂಧತೆ ಎಂಬುದು ಧರ್ಮದ ಹೆಸರಲ್ಲಿ ಇತರರ ಮೇಲೆ ಪ್ರಾಬಲ್ಯ ಸಾಧಿಸುವುದಾಗಿದೆ ಎಂದು ಹೇಳಿದ ಆರಿಫ್​ ಮೊಹಮ್ಮದ್​ ಖಾನ್,  ತಾಲಿಬಾನಿಗಳ ಆಡಳಿತಕ್ಕೆ ಪಾಕಿಸ್ತಾನ ಎಷ್ಟು ಸಹಕಾರ ನೀಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತು ಎಂದೂ ಹೇಳಿದ್ದಾರೆ.  ಇನ್ನು ಕೇರಳದಲ್ಲಿ ಹಲವರು ಐಸಿಸ್​ ಉಗ್ರಸಂಘಟನೆ ಸೇರ್ಪಡೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸೇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದರು.

ದೇಶದಲ್ಲಿ ಮುಸ್ಲಿಂ ನಾಯಕತ್ವವನ್ನು ಮುಂಚೂಣಿಗೆ ತರಲು ಪ್ರಯತ್ನ ಮಾಡುತ್ತಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ ಆರೀಫ್​ ಮೊಹಮ್ಮದ್​ ಖಾನ್​, ಈ ಜನರು ತಮಗೆ ಪ್ರತ್ಯೇಕ ಗುರುತು ಬೇಕು ಎಂಬ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ನಾನೊಬ್ಬ ಭಾರತೀಯ ಎಂಬುದೇ ಪ್ರತಿಯೊಬ್ಬನ ಗುರುತಾಗಿರಬೇಕು ಎಂದು ಹೇಳಿದರು.

ಇದನ್ನೂ ಓದಿ: ‘ಕುಡಿಯೋ ಎಂದು ಅಂಬರೀಷ್​ ಯಾವತ್ತೂ ಒತ್ತಾಯ ಮಾಡಲಿಲ್ಲ, ಅದು ದೊಡ್ಡಗುಣ’; ರವಿಚಂದ್ರನ್​

6 ತಿಂಗಳ ಹಿಂದೆ ಮೃತಪಟ್ಟ ಮಹಿಳೆ ಹೆಸರಲ್ಲಿ ಕೊವಿಡ್ ಎರಡನೇ ಲಸಿಕೆ ಸಕ್ಸಸ್! ಮೆಸೆಜ್ ನೋಡಿದ ಮನೆಯವರಿಗೆ ಶಾಕ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada