AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

8 Years of Modi Government Live: ಮೋದಿ ಸರ್ಕಾರಕ್ಕೆ 8 ವರ್ಷ, ಚೆನ್ನೈ-ಹೈದರಾಬಾದ್​ನಲ್ಲಿ ವಿವಿಧ ಕಾರ್ಯಕ್ರಮ

PM Modi in Tamil Nadu Live Updates: ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಮಾಣವಚನ ಸ್ವೀಕರಿಸಿ ಇಂದಿಗೆ (ಮೇ 26) ಎಂಟು ವರ್ಷ ತುಂಬಿದೆ. ಇತ್ತೀಚೆಗಷ್ಟೇ ಜಪಾನ್​ನ ರಾಜಧಾನಿ ಟೋಕಿಯೊದಲ್ಲಿ ನಡೆಸಿದ್ದ ಕ್ವಾಡ್ ಸಮಾವೇಶದಿಂದ ಹಿಂದಿರುಗಿರುವ ಪ್ರಧಾನಿ, ಇಂದು ತೆಲಂಗಾಣದ ಹೈದರಾಬಾದ್​ ಮತ್ತು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

8 Years of Modi Government Live: ಮೋದಿ ಸರ್ಕಾರಕ್ಕೆ 8 ವರ್ಷ, ಚೆನ್ನೈ-ಹೈದರಾಬಾದ್​ನಲ್ಲಿ ವಿವಿಧ ಕಾರ್ಯಕ್ರಮ
ನರೇಂದ್ರ ಮೋದಿ
Ghanashyam D M | ಡಿ.ಎಂ.ಘನಶ್ಯಾಮ
|

Updated on:May 26, 2022 | 2:51 PM

Share

ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ (ಮೇ 26) ಎಂಟು ವರ್ಷಗಳಾಗುತ್ತಿವೆ. 2014ರ ಮೇ 26ರಂದು ಅವರು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇತ್ತೀಚೆಗಷ್ಟೇ ಜಪಾನ್​ನ ರಾಜಧಾನಿ ಟೋಕಿಯೊದಲ್ಲಿ ನಡೆಸಿದ್ದ ಕ್ವಾಡ್ ಸಮಾವೇಶದಿಂದ ಹಿಂದಿರುಗಿರುವ ಪ್ರಧಾನಿ, ಇಂದು ತೆಲಂಗಾಣದ ಹೈದರಾಬಾದ್​ ಮತ್ತು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

LIVE NEWS & UPDATES

The liveblog has ended.
  • 26 May 2022 11:54 AM (IST)

    ಅಮರ ವೀರರ ಬಲಿದಾನ ಉಜ್ವಲ ಭವಿಷ್ಯಕ್ಕಾಗಿ

    ತೆಲಂಗಾಣವನ್ನು ನಾಶ ಮಾಡುತ್ತಿರುವವರು ಇಂದಿಗೂ ಇದ್ದಾರೆ. ಅಮರ ವೀರರ ಬಲಿದಾನ ಒಂದೇ ಕುಟುಂಬಕ್ಕಾಗಿ ಅಲ್ಲ, ಉಜ್ವಲ ಭವಿಷ್ಯಕ್ಕಾಗಿ ಈ ತ್ಯಾಗ ಮಾಡಲಾಗಿದೆ ಎಂದು ಮೋದಿ ಹೇಳಿದರು. ತೆಲಂಗಾಣದಲ್ಲಿ ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಹೋರಾಡಬೇಕೆಂದರು. ತೆಲಂಗಾಣದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಂದು ಮೋದಿ ಕಳವಳ ವ್ಯಕ್ತಪಡಿಸಿದರು.

  • 26 May 2022 11:27 AM (IST)

    ರೈಲು ನಿಲ್ದಾಣಗಳು ಮೇಲ್ದರ್ಜೆಗೆ

    ಚೆನ್ನೈನ ಎಗ್​ಮೋರ್, ರಾಮೇಶ್ವರಂ, ಮದುರೈ, ಕಾಟ್​ಪಾಡಿ ಮತ್ತು ಕನ್ಯಾಕುಮಾರಿ ರೈಲು ನಿಲ್ದಾಣಗಳ ಅಭಿವೃದ್ಧಿಗೂ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ರೈಲು ನಿಲ್ದಾಣಗಳನ್ನು ₹ 1,800 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

  • 26 May 2022 11:24 AM (IST)

    ಚತುಷ್ಪಥ ಡಬಲ್ ಡೆಕರ್ ರಸ್ತೆ

    ಚೆನ್ನೈ ನಗರದಲ್ಲಿ 21 ಕಿಮೀ ಉದ್ದದ ಚತುಷ್ಪಥ ಡಬಲ್ ಡೆಕರ್ ಎಲಿವೇಟೆಡ್ ರಸ್ತೆ ನಿರ್ಮಾಣ ಕಾಮಗಾರಿಗೂ ಇದೇ ವೇಳೆ ಮೋದಿ ಚಾಲನೆ ನೀಡಲಿದ್ದಾರೆ. ಈ ರಸ್ತೆಯು ಚೆನ್ನೈ ಬಂದರಿನಿಂದ ಮದುರವೊಯಲ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯನ್ನು ₹ 5,850 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

  • 26 May 2022 11:20 AM (IST)

    ವಿವಿಧ ಯೋಜನೆಗಳಿಗೆ ಶಿಲಾನ್ಯಾಸ

    ₹ 28,540 ಕೋಟಿ ವೆಚ್ಚದ ಆರು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರಲ್ಲಿ ₹ 14,870 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು-ಚೆನ್ನೈ ಎಕ್ಸ್​ಪ್ರೆಸ್​ ವೇ ಸಹ ಸೇರಿದೆ.

  • 26 May 2022 11:20 AM (IST)

    ಬಡವರಿಗೆ ಮನೆಗಳು

    ಚೆನ್ನೈನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ₹ 116 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 1,152 ಮನೆಗಳನ್ನು ಮೋದಿ ಉದ್ಘಾಟಿಸಲಿದ್ದಾರೆ.

  • 26 May 2022 11:14 AM (IST)

    ನೈಸರ್ಗಿಕ ಅನಿಲ ಕೊಳವೆ ಮಾರ್ಗ

    ಎಣ್ಣೋರ್-ಚೆಂಗಲುಪಟ್ಟು (115 ಕಿಮೀ) ಮತ್ತು ತುರುವಳ್ಳೂರು-ಬೆಂಗಳೂರು (271 ಕಿಮೀ) ನೈಸರ್ಗಿಕ ಅನಿಲ ಕೊಳವೆ ಮಾರ್ಗಗಳನ್ನು ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಉದ್ಘಾಟಿಸಲಿದ್ದಾರೆ. ಈ ಕೊಳವೆ ಮಾರ್ಗಗಳನ್ನು ₹ 1,760 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

  • 26 May 2022 11:09 AM (IST)

    ರೈಲು ಮಾರ್ಗ ಲೋಕಾರ್ಪಣೆ

    ₹ 500 ಕೋಟಿ ವೆಚ್ಚದಲ್ಲಿ 75 ಕಿಮೀ ಉದ್ದದ ಮಧುರೈ-ಥೇಣಿ ರೈಲು ಮಾರ್ಗವನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಚೆನ್ನೈ ಉಪನಗರಗಳಾದ ಥಂಬಂ ಮತ್ತು ಚೆಂಗಲಪಟ್ಟು ನಡುವೆ 30 ಕಿಮೀ ಅಂತರದ 3ನೇ ರೈಲು ಮಾರ್ಗ ನಿರ್ಮಿಸಲಾಗಿದೆ. ಈ ಕಾಮಗಾರಿಗೆ ₹ 590 ಕೋಟಿ ವೆಚ್ಚವಾಗಿದೆ. ಈ ರೈಲು ಮಾರ್ಗಗಳನ್ನೂ ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಲಿದ್ದಾರೆ.

  • 26 May 2022 11:05 AM (IST)

    ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ, ಲೋಕಾರ್ಪಣೆ

    ಹೈದರಾಬಾದ್​ನಿಂದ ಚೆನ್ನೈಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ, ₹ 31,400 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಪೂರ್ಣಗೊಂಡಿರುವ ₹ 2,960 ಕೋಟಿ ಮೊತ್ತದ ವಿವಿಧ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

  • 26 May 2022 11:02 AM (IST)

    ಮುಂಚೂಣಿ ಶಿಕ್ಷಣ ಸಂಸ್ಥೆ

    ಐಎಸ್​ಬಿ ಶಿಕ್ಷಣ ಸಂಸ್ಥೆಯನ್ನು 2ನೇ ಡಿಸೆಂಬರ್ 2001ರಂದು ಅಂದಿನ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಉದ್ಘಾಟಿಸಿದ್ದರು. ದೇಶದ ಮುಂಚೂಣಿ ಬ್ಯುಸಿನೆಸ್ ಸ್ಕೂಲ್ ಎನಿಸಿರುವ ಹೈದರಾಬಾದ್ ಐಎಸ್​ಬಿ (Indian School of Business – ISB) ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲು ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳೊಂದಿಗೆ ಸಹಯೋಗ ಹೊಂದಿದೆ.

  • 26 May 2022 10:58 AM (IST)

    ಹೈದರಾಬಾದ್​ ಕಾರ್ಯಕ್ರಮ

    ಇಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಹೈದರಾಬಾದ್​ನ ಇಂಡಿಯನ್ ಸ್ಕೂಲ್​ ಆಫ್ ಬ್ಯುಸಿನೆಸ್​ನ 20ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮೋದಿ ಭಾಗವಹಿಸಲಿದ್ದಾರೆ. ಸ್ನಾತಕೋತ್ತರ ಪದವೀಧರರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

Published On - May 26,2022 10:49 AM

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ