AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bihar Rain: ನೋಡನೋಡುತ್ತಿದ್ದಂತೆ ಕುಸಿದು ನದಿಗೆ ಬಿದ್ದ ಮನೆ; ಭಯಾನಕ ದೃಶ್ಯದ ವಿಡಿಯೋ ವೈರಲ್​

ಅತಿಯಾದ ಮಳೆಯಿಂದಾಗಿ ಸಿಕ್ರಹ್ನಾ (ಬುರ್ಹಿ ಗಂಡಕ್) ನದಿಯ ನೀರಿನ ಮಟ್ಟ ಏರಿದೆ. ಇದರಿಂದಾಗಿ ನದಿ ದಡದಲ್ಲಿ ಮಣ್ಣಿನ ಸವಕಳಿ ಉಂಟಾಗುತ್ತಿದೆ. ನದಿ ದಡದಲ್ಲಿ ಇರುವ ಮನೆಗಳಿಗೆ ಇದು ಅಪಾಯ ತಂದೊಡ್ಡುತ್ತಿದೆ.

Bihar Rain: ನೋಡನೋಡುತ್ತಿದ್ದಂತೆ ಕುಸಿದು ನದಿಗೆ ಬಿದ್ದ ಮನೆ; ಭಯಾನಕ ದೃಶ್ಯದ ವಿಡಿಯೋ ವೈರಲ್​
ಮನೆ ಕುಸಿತ
TV9 Web
| Edited By: |

Updated on:Jul 04, 2021 | 3:26 PM

Share

ಪಾಟ್ನಾ: ಬಿಹಾರದಲ್ಲಿ ನಿರಂತರವಾಗಿ, ಸಿಕ್ಕಾಪಟೆ ಮಳೆ ಸುರಿಯುತ್ತಿದೆ. ಗುಡುಗು-ಮಿಂಚು ಸಹಿತ ಮಳೆಯಾಗುತ್ತಿದ್ದು, ಯೆಲ್ಲೋ ಅಲರ್ಟ್​ ಘೋಷಣೆಯಾಗಿದೆ. ನದಿಗಳು ತುಂಬಿ ಹರಿಯುತ್ತಿವೆ. ಮಣ್ಣು ಕುಸಿತ, ಮನೆ ಕುಸಿತದಂಥ ಅವಘಡಗಳು ಸಂಭವಿಸುತ್ತಿವೆ. ಭವಾನಿಪುರದ ಮೋತಿಹಾರದಲ್ಲಿ ನೋಡುನೋಡುತ್ತಿದ್ದಂತೆಯೇ ಮನೆಯೊಂದು ಕುಸಿದುಬಿದ್ದಿದೆ. ಆ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗುತ್ತಿದೆ.

ಅತಿಯಾದ ಮಳೆಯಿಂದಾಗಿ ಸಿಕ್ರಹ್ನಾ (ಬುರ್ಹಿ ಗಂಡಕ್) ನದಿಯ ನೀರಿನ ಮಟ್ಟ ಏರಿದೆ. ಇದರಿಂದಾಗಿ ನದಿ ದಡದಲ್ಲಿ ಮಣ್ಣಿನ ಸವಕಳಿ ಉಂಟಾಗುತ್ತಿದೆ. ನದಿ ದಡದಲ್ಲಿ ಇರುವ ಮನೆಗಳಿಗೆ ಇದು ಅಪಾಯ ತಂದೊಡ್ಡುತ್ತಿದೆ. ಇದೀಗ ಕುಸಿದು ಬಿದ್ದಿರುವ ಮನೆಯೂ ಕೂಡ ಸಿಕ್ರಹ್ನಾ ನದಿ ದಡದಲ್ಲಿಯೇ ಇದ್ದಿದ್ದಾಗಿತ್ತು. ಅತಿಯಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಈ ಮನೆ ತೀವ್ರವಾಗಿ ಹಾನಿಗೊಳಗಾದ ಹಿನ್ನೆಲೆಯಲ್ಲಿ, ಅದರಲ್ಲಿದ್ದ ನಿವಾಸಿಗಳು ಮನೆ ತೊರೆದಾಗಿತ್ತು. ಮನೆ ಕುಸಿದು ನದಿಗೆ ಬಿದ್ದು, ಅದರ ಭಗ್ನಾವಶೇಷಗಳೆಲ್ಲ ನದಿಯಲ್ಲಿ ತೇಲಿ ಹೋಗುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಬಿಹಾರದಲ್ಲಿ ಬುಧವಾರದವರೆಗೂ ಮಳೆ ಮುಂದುವರಿಯಲಿದೆ. ಹಾಗೇ, ಉತ್ತರಾಖಂಡ, ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾ, ಅಸ್ಸಾಂ, ಮೇಘಾಲಯ, ರಾಯಲ್​ಸೀಮಾ, ತಮಿಳುನಾಡು, ಪುದುಚೇರಿಗಳಲ್ಲಿ ಅತಿಯಾದ ಮಳೆಯಾಗಲಿದೆ ಎಂದು ಇಂದು ಹವಾಮಾನ ಇಲಾಖೆ ತಿಳಿಸಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್​, ಹರ್ಯಾಣ, ಚಂಡೀಗಢ್​, ದೆಹಲಿ ಮತ್ತು ಜಮ್ಮುಕಾಶ್ಮೀರ, ಲಡಾಖ್​, ಗಿಲ್ಗಿಟ್​ ಬಲ್ಚೀಸ್ತಾನ್​, ಉತ್ತರ ಪ್ರದೇಶ, ಛತ್ತೀಸ್​ಗಢ, ನಾಗಾಲ್ಯಾಂಡ್​, ಮಣಿಪುರದ ಕೆಲವು ಕಡೆ ಗುಡುಗು-ಮಿಂಚು-ಗಾಳಿ(30-40 ಕಿಮೀ ವೇಗ)ಸಹಿತ ಮಳೆ ಬೀಳಲಿದೆ ಎಂದೂ ಐಎಂಡಿ ಅಂದಾಜಿಸಿದೆ.

ಇದನ್ನೂ ಓದಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್​ಗೆ ಸ್ವಾತಂತ್ರ್ಯ ದಿನದ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ

A house collapses Due to Heavy Rainfall in Bhawanipur Of Bihar

Published On - 3:24 pm, Sun, 4 July 21

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು