LK Advani: ಎಲ್‌ಕೆ ಅಡ್ವಾಣಿಗೆ ಭಾರತ ರತ್ನ: ನಾಡು ಕಂಡ ಧೀಮಂತ ರಾಜಕಾರಣಿಯ ಕಿರುಪರಿಚಯ

ಸುಮಾರು ಮೂರು ದಶಕಗಳ ಸಂಸದೀಯ ವೃತ್ತಿಜೀವನವನ್ನು ಪೂರ್ಣಗೊಳಿಸಿದ ಎಲ್ ಕೆ ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ (1999-2004) ಸಂಪುಟದಲ್ಲಿ ಮೊದಲು ಗೃಹ ಸಚಿವರಾಗಿದ್ದರು ಮತ್ತು ನಂತರ ಉಪಪ್ರಧಾನಿಯಾಗಿದ್ದರು. ಭಾರತರತ್ನ ಅಡ್ವಾಣಿ ಅವರ ವೃತ್ತಿ ಜೀವನ ಮತ್ತು ರಾಜಕೀಯ ಪಯಣದ ಬಗ್ಗೆ ಇಲ್ಲಿದೆ ಮಾಹಿತಿ.

LK Advani: ಎಲ್‌ಕೆ ಅಡ್ವಾಣಿಗೆ ಭಾರತ ರತ್ನ: ನಾಡು ಕಂಡ ಧೀಮಂತ ರಾಜಕಾರಣಿಯ ಕಿರುಪರಿಚಯ
ಎಲ್ ಕೆ ಅಡ್ವಾಣಿ
Follow us
|

Updated on:Feb 03, 2024 | 1:41 PM

ದೆಹಲಿ ಫೆಬ್ರುವರಿ 03:  ಬಿಜೆಪಿಯ ಪ್ರಮುಖ ನಾಯಕ ಮತ್ತು ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ (LK Advani) ಅವರಿಗೆ ‘ಭಾರತ ರತ್ನ’ (Bharat Ratna)ಪ್ರಶಸ್ತಿ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi)ಶನಿವಾರ ಘೋಷಿಸಿದ್ದಾರೆ. ಇಂದಿನ ಪಾಕಿಸ್ತಾನದ ಕರಾಚಿಯಲ್ಲಿ, ನವೆಂಬರ್ 8, 1927 ರಂದು ಜನಿಸಿದ ಅಡ್ವಾಣಿ, 1980ರಿಂದ ಬಿಜೆಪಿ ಅಧ್ಯಕ್ಷರಾಗಿ ಸುದೀರ್ಘ ಅವಧಿಯವರೆಗೆ ಸೇವೆ ಸಲ್ಲಿಸಿದ್ದಾರೆ. ಸುಮಾರು ಮೂರು ದಶಕಗಳ ಸಂಸದೀಯ ವೃತ್ತಿಜೀವನವನ್ನು ಪೂರ್ಣಗೊಳಿಸಿದ ಅವರು, ಅಟಲ್ ಬಿಹಾರಿ ವಾಜಪೇಯಿ (1999-2004) ಸಂಪುಟದಲ್ಲಿ ಮೊದಲು ಗೃಹ ಸಚಿವರಾಗಿದ್ದರು ಮತ್ತು ನಂತರ ಉಪಪ್ರಧಾನಿಯಾಗಿದ್ದರು. ಅಡ್ವಾಣಿ ಅವರ ಬೌದ್ಧಿಕ ಸಾಮರ್ಥ್ಯ, ಬಲವಾದ ತತ್ವಗಳು ಮತ್ತು ಸಮೃದ್ಧ ಭಾರತದ ಕಲ್ಪನೆಗೆ ಅಚಲವಾದ ಬೆಂಬಲವನ್ನು ಹೊಂದಿರುವ ವ್ಯಕ್ತಿ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.

‘ಭಾರತ ರತ್ನ’ ಲಾಲ್ ಕೃಷ್ಣ ಅಡ್ವಾಣಿ ಅವರ ಕಿರುಪರಿಚಯ

  1. ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ ಅವರು ಭಾರತದಲ್ಲಿ ಸುದೀರ್ಘ ಮತ್ತು ಪ್ರಭಾವಶಾಲಿ ರಾಜಕೀಯ ವೃತ್ತಿಜೀವನವನ್ನು ಹೊಂದಿದ್ದಾರೆ.
  2. ಅಡ್ವಾಣಿ ಅವರು ನವೆಂಬರ್ 8, 1927 ರಂದು ವಿಭಜನೆಯ ಪೂರ್ವ ಸಿಂಧ್‌ನಲ್ಲಿ ಜನಿಸಿದರು. 1947 ರಲ್ಲಿ, ವಿಭಜನೆಯ ನಂತರ ಅವರು  ದೆಹಲಿಗೆ ವಲಸೆ ಬಂದರು.
  3. 1951 ರಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿಯವರು ಜನಸಂಘ ರಚಿಸಿದಾಗ ಅಡ್ವಾಣಿ ಅದರ ಜತೆ ಸೇರಿದರು. 1970 ರಲ್ಲಿ ರಾಜ್ಯಸಭೆಯ ಸದಸ್ಯರಾದರು. 1989 ರವರೆಗೆ ತಮ್ಮ ಸ್ಥಾನವನ್ನು ಹೊಂದಿದ್ದರು. ಡಿಸೆಂಬರ್ 1972 ರಲ್ಲಿ ಅವರು ಭಾರತೀಯ ಜನಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು.
  4. 1975 ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದು ಮೊರಾರ್ಜಿ ದೇಸಾಯಿಯವರ ಪ್ರಧಾನ ಮಂತ್ರಿಯಾಗಿದ್ದಾಗ ಅಡ್ವಾಣಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ನೇಮಕಗೊಂಡರು.
  5. ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ 1980 ರಲ್ಲಿ ಬಿಜೆಪಿಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
  6. 1990 ರ ದಶಕದಲ್ಲಿ ರಾಮ ಜನ್ಮಭೂಮಿ ಆಂದೋಲನದಲ್ಲಿ ಅವರ ನಾಯಕತ್ವದ ಪಾತ್ರಕ್ಕಾಗಿ ಪ್ರಾಮುಖ್ಯತೆಯನ್ನು ಪಡೆದರು. ಅಯೋಧ್ಯೆಯಲ್ಲಿ ವಿವಾದಿತ ಸ್ಥಳದಲ್ಲಿ ಮಂದಿರ ನಿರ್ಮಾಣ ಮಾಡಿಯೇ ತೀರುವೆವು ಎಂಬ ನಿರ್ಧಾರದಲ್ಲಿ ಅಡ್ವಾಣಿ ಬದ್ಧರಾಗಿದ್ದರು.
  7. ಅಡ್ವಾಣಿ ಅವರು ಉಪಪ್ರಧಾನಿ ಮತ್ತು ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಆಡಳಿತದ ಅವಧಿಯಲ್ಲಿ ಸರ್ಕಾರದಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದರು.
  8. 1980 ಮತ್ತು 1990 ರ ದಶಕದ ನಡುವೆ, ಬಿಜೆಪಿಯನ್ನು ದೇಶದ ಪ್ರಮುಖ ರಾಜಕೀಯ ರಾಷ್ಟ್ರೀಯ ಪಕ್ಷಗಳಲ್ಲಿ ಒಂದನ್ನಾಗಿ ಮಾಡುವಲ್ಲಿ ಅಡ್ವಾಣಿ ನಿರ್ಣಾಯಕ ಪಾತ್ರ ವಹಿಸಿದರು. ಅವರು 1986 ರಿಂದ 1991 ರ ನಡುವೆ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಲೋಕಸಭೆ ಚುನಾವಣೆಯಲ್ಲಿ 1984 ರಲ್ಲಿ 2 ಸ್ಥಾನ ಗಳಿಸಿದ್ದ ಬಿಜೆಪಿ 1989 ರಲ್ಲಿ 86 ಸ್ಥಾನಗಳನ್ನು ಗೆದ್ದಿತ್ತು.992 ರಲ್ಲಿ 121 ಸ್ಥಾನ, 1996 ರಲ್ಲಿ 161 ಸ್ಥಾನಗಳನ್ನು ಗಳಿಸಿತು.

ಇದನ್ನೂ ಓದಿ: Bharat Ratna for LK Advani: ಎಲ್​​ಕೆ ಅಡ್ವಾಣಿಗೆ ಭಾರತ ರತ್ನ: ಪ್ರಧಾನಿ ಮೋದಿ ಘೋಷಣೆ

ರಾಮಮಂದಿರ ಚಳವಳಿ

1990 ರಲ್ಲಿ ಅಡ್ವಾಣಿ ಅವರು ಗುಜರಾತ್‌ನ ಸೋಮನಾಥದಿಂದ ಉತ್ತರ ಪ್ರದೇಶದ ಪವಿತ್ರ ನಗರ ಅಯೋಧ್ಯೆಗೆ ರಾಮ ರಥ ಯಾತ್ರೆಯನ್ನು ಕೈಗೊಂಡರು. ರಾಮ ಜನ್ಮಭೂಮಿ ಆಂದೋಲನಕ್ಕೆ ಸ್ವಯಂಸೇವಕರನ್ನು ಸಜ್ಜುಗೊಳಿಸಲು ಮೆರವಣಿಗೆಯು ಸಹಾಯ ಮಾಡಿತು. ದೇಶಾದ್ಯಂತ ರಾಮಮಂದಿರ ಆಂದೋಲನವನ್ನು ಆರಂಭಿಸಿದವರೇ ಅಡ್ವಾಣಿ. ಇದು ಸುಪ್ರೀಂ ಕೋರ್ಟ್‌ನಲ್ಲಿ 2019 ರಲ್ಲಿ ಅಯೋಧ್ಯೆಯಲ್ಲಿ ರಾಮ ನಿರ್ಮಾಣಕ್ಕೆ ಅನುಮತಿ ನೀಡುವುದರೊಂದಿಗೆ ಕೊನೆಗೊಂಡಿತು.ಈ ವರ್ಷ ಜನವರಿ 22 ರಂದು ಭವ್ಯ ರಾಮಮಂದಿರವನ್ನು ಮೋದಿ ಉದ್ಘಾಟಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಅಡ್ವಾಣಿ ಅವರು ಆರೋಗ್ಯ ಸಮಸ್ಯೆಗಳಿಂದಾಗಿ ಸಕ್ರಿಯ ರಾಜಕೀಯ ತೊಡಗಿಸಿಕೊಳ್ಳುವಿಕೆಯಿಂದ ಹಿಂದೆ ಸರಿದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:44 pm, Sat, 3 February 24