AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಚಳವಳಿ ನಿಂತಿಲ್ಲ, ದೇಶದ ಜನರಿಗಾಗಿ ಅದು ಮುಂದುವರಿಯಲಿದೆ: ಅಣ್ಣಾ ಹಜಾರೆ

Anna Hazare: ಯುಪಿಎ ಆಡಳಿತದಲ್ಲಿದ್ದಾಗ ಚಳವಳಿ ನಡೆಸಿದಂತೆ ದೇಶ್ ಬಚಾವೋ ಜನ್ ಆಂದೋಲನ್ ಸಮಿತಿಯ ಬ್ಯಾನರ್ ಅಡಿಯಲ್ಲಿ ನೀವು ಯಾಕೆ ಈಗ ಚಳವಳಿ ನಡೆಸುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ ಹಜಾರೆ ಈ ರೀತಿ ಉತ್ತರಿಸಿದ್ದಾರೆ.

ನನ್ನ ಚಳವಳಿ ನಿಂತಿಲ್ಲ, ದೇಶದ ಜನರಿಗಾಗಿ ಅದು ಮುಂದುವರಿಯಲಿದೆ: ಅಣ್ಣಾ ಹಜಾರೆ
ಅಣ್ಣಾ ಹಜಾರೆ
TV9 Web
| Edited By: |

Updated on: Aug 22, 2021 | 7:00 PM

Share

ದೆಹಲಿ: ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ  (Anna Hazare) ಅವರು ದೇಶದ ನಾಗರಿಕರಿಗೆ ನ್ಯಾಯ ದೊರಕಿಸಿಕೊಡುವ ತನ್ನ ಆಂದೋಲನಗಳು ನಿಂತಿಲ್ಲ ಮತ್ತು ನಿಲ್ಲುವುದಿಲ್ಲ ಎಂದು ಹೇಳಿದರು. ಯಾರೋ ಹೇಳಿದ್ದಾರೆಂದು ನಾನು ಚಳವಳಿ ಮಾಡಿಲ್ಲ,ಈ ದೇಶದ ಜನರ ಹಿತಾಸಕ್ತಿಗಾಗಿ ನಾನು ಯಾವಾಗಲೂ ಆಂದೋಲನಗಳನ್ನು ನಡೆಸುತ್ತಿದ್ದೆ ಮತ್ತು ಅದನ್ನು ಮುಂದುವರಿಸುತ್ತೇನೆ” ಎಂದು ಅಣ್ಣಾ ಹಜಾರೆ ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಮೋದಿ ಸರ್ಕಾರ ರೈತ ವಿರೋಧಿ, ಕಾರ್ಮಿಕ ವಿರೋಧಿ ಮತ್ತು ಜನವಿರೋಧಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾಗ ನೀವೇಕೆ ಮೌನವಾಗಿದ್ದಿರಿ ಎಂದು ಪುಣೆಯ ಕಾರ್ಯಕರ್ತರು ಪತ್ರ ಬರೆದು ಕೇಳಿದ್ದರು. ಯುಪಿಎ ಆಡಳಿತದಲ್ಲಿದ್ದಾಗ ಚಳವಳಿ ನಡೆಸಿದಂತೆ ದೇಶ್ ಬಚಾವೋ ಜನ್ ಆಂದೋಲನ್ ಸಮಿತಿಯ ಬ್ಯಾನರ್ ಅಡಿಯಲ್ಲಿ ನೀವು ಯಾಕೆ ಈಗ ಚಳವಳಿ ನಡೆಸುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ ಹಜಾರೆ ಈ ರೀತಿ ಉತ್ತರಿಸಿದ್ದಾರೆ.

“ನಾನು ಮೋದಿ ಸರ್ಕಾರಕ್ಕೆ 46 ಪತ್ರಗಳನ್ನು ಬರೆದಿದ್ದೇನೆ ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾನು ಕೆಲವು ತಿಂಗಳ ಹಿಂದೆ ನನ್ನ ಇತ್ತೀಚಿನ ಆಂದೋಲನವನ್ನು ಮಾಡಿದಾಗ, ಕೇಂದ್ರ ಸರ್ಕಾರವು ತನ್ನ ಮಂತ್ರಿಗಳನ್ನು ಕಳುಹಿಸಿತು ಮತ್ತು ನಾನು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವ ಭರವಸೆ ನೀಡಿತು. ಇದರ ಪರಿಣಾಮವಾಗಿ, ಸರ್ಕಾರವು ತಕ್ಷಣವೇ ರೈತರಿಗೆ 2000 ರೂಪಾಯಿ ಪಿಂಚಣಿಯನ್ನು ಘೋಷಿಸಿತು ಮತ್ತು ಆ ಮೊತ್ತವನ್ನು ಅವರ ಖಾತೆಗಳಿಗೆ ಜಮಾ ಮಾಡಿದೆ. ಕೊವಿಡ್ -19 ನಿರ್ಬಂಧಗಳಿಂದಾಗಿ ಅವರು ಈಗ ದೊಡ್ಡ ಸಾರ್ವಜನಿಕ ಹಿತಾಸಕ್ತಿಗಾಗಿ ಆಂದೋಲನಗಳನ್ನು ನಡೆಸಲು ಸಾಧ್ಯವಾಗಲಿಲ್ಲ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

“ಅಣ್ಣಾ ಜನರಿಗೆ ನ್ಯಾಯ ದೊರಕಿಸಿಕೊಡಲು ತಮ್ಮ ಜೀವಮಾನವಿಡೀ ಆಂದೋಲನ ನಡೆಸಿದ್ದಾರೆ. ಅವರು ತಮ್ಮ ಜೀವನದ 50 ವರ್ಷಗಳ ಕಾಲ ಆಂದೋಲನಗಳನ್ನು ನಡೆಸಿದ್ದಾರೆ ಮತ್ತು ಒಂದು ದಶಕದಲ್ಲಿ ಭಾರತೀಯ ಸೇನೆಯಲ್ಲಿ ಕಳೆದಿದ್ದಾರೆ. ಈ ದೇಶದ ಜನರ ಸೇವೆಗೆ ಬಂದಾಗ ಅವರು ಯಾವಾಗಲೂ ಮುಂಚೂಣಿಯಲ್ಲಿದ್ದಾರೆ.

“ಈ ಜನರು 85 ರ ವಯಸ್ಸಾದ ವ್ಯಕ್ತಿಗೆ ಆಂದೋಲನ ಮಾಡಲು ಕೇಳುತ್ತಿದ್ದಾರೆ .ಅವರು ತಮ್ಮ ಮನೆಗಳಲ್ಲಿ ಹಿರಿಯರೊಂದಿಗೆ ಅದೇ ರೀತಿ ಮಾಡಬಹುದೇ? ಎಲ್ಲಾ ಆಂದೋಲನಗಳನ್ನು ಅಣ್ಣಾ ಮಾತ್ರ ಮಾಡಬೇಕೇ? ಈ ಕಾರ್ಯಕರ್ತರು ಏಕೆ ಮುಂದಿನಿಂದ ಮುನ್ನಡೆಸಲು ಮತ್ತು ಈ ದೇಶದ ಇತರ ನಾಗರಿಕರಿಗೆ ದಾರಿ ತೋರಿಸಲು ಸಾಧ್ಯವಿಲ್ಲವೇ? ಕಾರ್ಯಕರ್ತರು ಸ್ವಯಂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹಜಾರೆ ಕಾರ್ಯದರ್ಶಿ ಸಂಜಯ್ ಪಟ್ದೆ ಹೇಳಿದ್ದಾರೆ.

ದೇಶ್ ಬಚಾವೋ ಜನ್ ಆಂದೋಲನ್ ಸಮಿತಿಯ ಬ್ಯಾನರ್ ಅಡಿಯಲ್ಲಿ ಹಜಾರೆಯಿಂದ ಉತ್ತರಗಳನ್ನು ಹುಡುಕುತ್ತಿರುವವರಲ್ಲಿ ಒಬ್ಬರಾದ ಮಾರುತಿ ಭಾಪ್ಕರ್, “ನಾವು ಆಂದೋಲನವನ್ನು ನಡೆಸಲು ಅಣ್ಣನನ್ನು ಕೇಳುತ್ತಿಲ್ಲ. ಯುಪಿಎ ಆಡಳಿತದಲ್ಲಿದ್ದಂತೆ ಅವರು ಯಾಕೆ ದನಿಯತ್ತುತ್ತಿಲ್ಲ ಎಂದು ನಾವು ಕೇಳುತ್ತಿದ್ದೇವೆ. ಅಣ್ಣಾ ಏಕೆ ಬಿಜೆಪಿ ಸರ್ಕಾರದಲ್ಲಿ ಪ್ರಶ್ನೆಗಳನ್ನು ಕೇಳುತ್ತಿಲ್ಲ? ಅಣ್ಣ ಅತ್ಯಂತ ಗೌರವಾನ್ವಿತ ವ್ಯಕ್ತಿ. ಅವರು ಪತ್ರವನ್ನು ಬರೆದರೆ ಅಥವಾ ಒಂದು ಅಂಶವನ್ನು ಎತ್ತಿದರೆ, ಸರ್ಕಾರವು ಪ್ರತಿಕ್ರಿಯಿಸುತ್ತದೆ. ಅದನ್ನೇ ನಾವು ಅವನಿಗೆ ಮಾಡಲು ಕೇಳುತ್ತಿದ್ದೇವೆ. ಅವರು ದೀರ್ಘಕಾಲ ಮೌನವಾಗಿದ್ದಾರೆ ಮತ್ತು ಇದು ಬಿಜೆಪಿ ಆಡಳಿತದಲ್ಲಿ ಹೆಚ್ಚು ನಡೆಯುತ್ತಿದೆ ಎಂದಿದ್ದಾರೆ.

“ಕೇಂದ್ರ ಸರ್ಕಾರದ ಕಾನೂನುಗಳ ವಿರುದ್ಧ ರೈತರು ಎಂಟು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರವು ಕಾರ್ಮಿಕರಿಗೆ ಸಂಬಂಧಿಸಿದ 44 ಕಾರ್ಮಿಕ ಕಾನೂನುಗಳನ್ನು ತೆಗೆದುಹಾಕಿದೆ. ನಿರುದ್ಯೋಗ ಹೊಸ ಮಟ್ಟವನ್ನು ತಲುಪಿದೆ ಮತ್ತು ಹಣದುಬ್ಬರವೂ ಹೆಚ್ಚಾಗಿದೆ. ಆದರೂ, ಅಣ್ಣ ಈ ಸಮಸ್ಯೆಗಳ ವಿರುದ್ಧ ತನ್ನ ಧ್ವನಿಯನ್ನು ಎತ್ತುವುದನ್ನು ನಾವು ನೋಡುವುದಿಲ್ಲ. ಕಳೆದ ಬಾರಿ, ಅಣ್ಣಾ ತನ್ನ ಆಂದೋಲನವನ್ನು ಘೋಷಿಸಿದಾಗ ಕೇಂದ್ರವು ತನ್ನ ಮಂತ್ರಿಗಳನ್ನು ಅವರನ್ನು ಭೇಟಿ ಮಾಡಲು ಕಳುಹಿಸಿತು. ಸಭೆಯ ನಂತರ, ಅಣ್ಣಾ ತಮ್ಮ ಆಂದೋಲನವನ್ನು ನಿಲ್ಲಿಸಿದರು. ಅವರು ಈ ದೇಶದ ರೈತರು ಮತ್ತು ಜನರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಸರ್ಕಾರದ ಪರವಾಗಿದ್ದಾರೆ ಎಂದು ನಾವು ಅನುಮಾನಿಸುತ್ತೇವೆ. ಆದ್ದರಿಂದ, ಅಣ್ಣ ಮುಂದೆ ಬರಬೇಕು ಎಂದು ಭಾಪ್ಕರ್ ಹೇಳಿದ್ದಾರೆ.

ಸಮಿತಿಯ ಅಧ್ಯಕ್ಷ ನ್ಯಾಯವಾದಿ ರವೀಂದ್ರ ರಾನ್ಸಿಂಗ್ “ಕೇಂದ್ರ ಸರ್ಕಾರ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತಂದರೂ, ಹೆಚ್ಚುತ್ತಿರುವ ನಿರುದ್ಯೋಗ, ಹಣದುಬ್ಬರ ಮತ್ತು ಇಂಧನವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೂ, ಹಜಾರೆ ಒಂದು ಮಾತನ್ನೂ ಆಡಲಿಲ್ಲ. ಈ ದೇಶದ ಜನರು ಮೋದಿ ಸರ್ಕಾರದಿಂದ ಕಿರುಕುಳಕ್ಕೊಳಗಾಗುತ್ತಿದ್ದಾರೆ ಮತ್ತು ಇಂತಹ ಪರಿಸ್ಥಿತಿಯಲ್ಲಿ, ಹಜಾರೆಯಂತಹ ಹೋರಾಟಗಾರ ಸುಮ್ಮನಿರಬಾರದು. ಅವರು ಒಂದು ನಿಲುವನ್ನು ತೆಗೆದುಕೊಳ್ಳಬೇಕು ಮತ್ತು ಅದನ್ನು ಜನರಿಗೆ ತಿಳಿಸಬೇಕು, “ಇಲ್ಲದಿದ್ದರೆ ಅವರು ಅಣ್ಣಾ ವಾಸಿಸುವ ರಳೇಗಣ್ ಸಿದ್ದಿಯಲ್ಲಿ ಆಂದೋಲನಗಳನ್ನು ನಡೆಸುವಂತೆ ಒತ್ತಾಯಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ:  ಅಫ್ಘಾನಿಸ್ತಾನದ ಮಹಿಳೆಗೆ ಅಮೆರಿಕಾ ಮಿಲಿಟರಿ ವಿಮಾನದಲ್ಲಿ ಹೆರಿಗೆ; ತಾಯಿ, ಮಗು ಇಬ್ಬರೂ ಕ್ಷೇಮ

(Agitations to get justice for citizens of this country have not stopped and will not says Anna Hazare)

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ