AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ‘ಬೆಣ್ಣೆ ಚಾಯ್’: ಅಯ್ಯೋ ಅಸಹ್ಯ ಎಂದ್ರು ಟೀ ಪ್ರಿಯರು​

ಇಂಥ ವಿಚಿತ್ರ ಕಾಂಬಿನೇಶನ್​ನ ಚಹಾ ನೋಡಿ, ಟೀ ಪ್ರಿಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಯ್ಯೋ ಇದು ಅಸಹ್ಯ ಎಂದಿದ್ದಾರೆ. ವಿಡಿಯೋ ಶೇರ್​ ಆದ ಕೆಲವೇ ಹೊತ್ತಲ್ಲಿ 251 ಸಾವಿರಕ್ಕೂ ಹೆಚ್ಚು ವೀವ್ಸ್​ ಪಡೆದಿದೆ.

ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ‘ಬೆಣ್ಣೆ ಚಾಯ್’: ಅಯ್ಯೋ ಅಸಹ್ಯ ಎಂದ್ರು ಟೀ ಪ್ರಿಯರು​
ಬೆಣ್ಣೆ ಹಾಕಿ ಚಹಾ ತಯಾರು ಮಾಡುತ್ತಿರುವುದು..
Lakshmi Hegde
|

Updated on:Jan 17, 2021 | 6:59 PM

Share

ನಿಮಗೆ ಹಾಲು ಹಾಕಿ ಮಾಡುವ ಚಹಾ ಗೊತ್ತೇ ಇರುತ್ತದೆ.. ಅದೂ ಬಿಡಿ, ಲೆಮೆನ್​ ಟೀ, ಗ್ರೀನ್​ ಟೀಗಳೂ ಫೇಮಸ್​ ಆಗಿವೆ. ಇನ್ನೂ ಮುಂದೆ ಹೋದರೆ ಚಾಕಲೇಟ್​ ಟೀ ಬಗ್ಗೆಯೂ ಕೇಳಿದ್ದಿರಬಹುದು. ಆದರೆ ಬೆಣ್ಣೆ ಚಾಯ್​ ಗೊತ್ತಿರಲಿಕ್ಕಿಲ್ಲ.. !

ಆಗ್ರಾದ ಫುಡ್​ ಸ್ಟಾಲ್​ (ತಿಂಡಿ ಅಂಗಡಿ)ವೊಂದರಲ್ಲಿ ಬೆಣ್ಣೆಯನ್ನು ಹಾಕಿ ಚಹಾ ತಯಾರಿಸುತ್ತಿರುವ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಆದರೆ ಈ ಚಾಯ್​​ ನೋಡಿದ ಟೀ ಪ್ರಿಯರು ಹೆಚ್ಚಾಗಿ ಅಸಮಾಧಾನವನ್ನೇ ವ್ಯಕ್ತಪಡಿಸಿದ್ದು ಸೋಜಿಗ.

ಹಾಲು ಹಾಕಿ ಚಹಾ ತಯಾರು ಮಾಡಿಕೊಂಡು, ಅದು ಕುದಿಯುತ್ತಿರುವಾಗ ಒಂದು ಪೀಸ್​ನಷ್ಟು ಅಂದರೆ ಸುಮಾರು 100 ಗ್ರಾಂಗಳಷ್ಟು ಅಮುಲ್​ ಬೆಣ್ಣೆಯನ್ನು ಅದಕ್ಕೆ ಹಾಕುವ ವಿಡಿಯೋವನ್ನು Foodieagraaaa ಎಂಬ  ಇನ್​ಸ್ಟಾಗ್ರಾಂ ಪೇಜ್ ಶೇರ್ ಮಾಡಿಕೊಂಡಿದೆ. ಹಾಗೇ, ಇದು ಬಾಬಾ ಟೀ ಸ್ಟಾಲ್​ನ ಸ್ಪೆಶಲ್ ಪ್ರಯೋಗ​ ಎಂದೂ ಹೇಳಿದೆ.

ಆದರೆ ಇಂಥ ವಿಚಿತ್ರ ಕಾಂಬಿನೇಶನ್​ನ ಚಹಾ ನೋಡಿ, ಟೀ ಪ್ರಿಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಯ್ಯೋ ಇದು ಅಸಹ್ಯ ಎಂದಿದ್ದಾರೆ. ವಿಡಿಯೋ ಶೇರ್​ ಆದ ಕೆಲವೇ ಹೊತ್ತಲ್ಲಿ 251 ಸಾವಿರಕ್ಕೂ ಹೆಚ್ಚು ವೀವ್ಸ್​ ಪಡೆದಿದೆ. ಸುಮಾರು 3000 ಕಾಮೆಂಟ್​ಗಳು ಬಂದಿವೆ.

View this post on Instagram

A post shared by FOODIEAGRA (@foodieagraaaaa)

ನಮ್ಮನ್ನು ನಂಬಿ ಪ್ಲೀಸ್.. ಫೇಸ್​ಬುಕ್​ನೊಂದಿಗೆ ನಿಮ್ಮ ಡೇಟಾ ಹಂಚಿಕೊಳ್ಳುವುದಿಲ್ಲ; ಸ್ಟೇಟಸ್​ ಮೂಲಕ ಅಂಗಲಾಚಿದ ವಾಟ್ಸ್​ಆ್ಯಪ್​

Published On - 6:56 pm, Sun, 17 January 21

Follow Us
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ