AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ‘ಬೆಣ್ಣೆ ಚಾಯ್’: ಅಯ್ಯೋ ಅಸಹ್ಯ ಎಂದ್ರು ಟೀ ಪ್ರಿಯರು​

ಇಂಥ ವಿಚಿತ್ರ ಕಾಂಬಿನೇಶನ್​ನ ಚಹಾ ನೋಡಿ, ಟೀ ಪ್ರಿಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಯ್ಯೋ ಇದು ಅಸಹ್ಯ ಎಂದಿದ್ದಾರೆ. ವಿಡಿಯೋ ಶೇರ್​ ಆದ ಕೆಲವೇ ಹೊತ್ತಲ್ಲಿ 251 ಸಾವಿರಕ್ಕೂ ಹೆಚ್ಚು ವೀವ್ಸ್​ ಪಡೆದಿದೆ.

ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ‘ಬೆಣ್ಣೆ ಚಾಯ್’: ಅಯ್ಯೋ ಅಸಹ್ಯ ಎಂದ್ರು ಟೀ ಪ್ರಿಯರು​
ಬೆಣ್ಣೆ ಹಾಕಿ ಚಹಾ ತಯಾರು ಮಾಡುತ್ತಿರುವುದು..
Lakshmi Hegde
|

Updated on:Jan 17, 2021 | 6:59 PM

Share

ನಿಮಗೆ ಹಾಲು ಹಾಕಿ ಮಾಡುವ ಚಹಾ ಗೊತ್ತೇ ಇರುತ್ತದೆ.. ಅದೂ ಬಿಡಿ, ಲೆಮೆನ್​ ಟೀ, ಗ್ರೀನ್​ ಟೀಗಳೂ ಫೇಮಸ್​ ಆಗಿವೆ. ಇನ್ನೂ ಮುಂದೆ ಹೋದರೆ ಚಾಕಲೇಟ್​ ಟೀ ಬಗ್ಗೆಯೂ ಕೇಳಿದ್ದಿರಬಹುದು. ಆದರೆ ಬೆಣ್ಣೆ ಚಾಯ್​ ಗೊತ್ತಿರಲಿಕ್ಕಿಲ್ಲ.. !

ಆಗ್ರಾದ ಫುಡ್​ ಸ್ಟಾಲ್​ (ತಿಂಡಿ ಅಂಗಡಿ)ವೊಂದರಲ್ಲಿ ಬೆಣ್ಣೆಯನ್ನು ಹಾಕಿ ಚಹಾ ತಯಾರಿಸುತ್ತಿರುವ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಆದರೆ ಈ ಚಾಯ್​​ ನೋಡಿದ ಟೀ ಪ್ರಿಯರು ಹೆಚ್ಚಾಗಿ ಅಸಮಾಧಾನವನ್ನೇ ವ್ಯಕ್ತಪಡಿಸಿದ್ದು ಸೋಜಿಗ.

ಹಾಲು ಹಾಕಿ ಚಹಾ ತಯಾರು ಮಾಡಿಕೊಂಡು, ಅದು ಕುದಿಯುತ್ತಿರುವಾಗ ಒಂದು ಪೀಸ್​ನಷ್ಟು ಅಂದರೆ ಸುಮಾರು 100 ಗ್ರಾಂಗಳಷ್ಟು ಅಮುಲ್​ ಬೆಣ್ಣೆಯನ್ನು ಅದಕ್ಕೆ ಹಾಕುವ ವಿಡಿಯೋವನ್ನು Foodieagraaaa ಎಂಬ  ಇನ್​ಸ್ಟಾಗ್ರಾಂ ಪೇಜ್ ಶೇರ್ ಮಾಡಿಕೊಂಡಿದೆ. ಹಾಗೇ, ಇದು ಬಾಬಾ ಟೀ ಸ್ಟಾಲ್​ನ ಸ್ಪೆಶಲ್ ಪ್ರಯೋಗ​ ಎಂದೂ ಹೇಳಿದೆ.

ಆದರೆ ಇಂಥ ವಿಚಿತ್ರ ಕಾಂಬಿನೇಶನ್​ನ ಚಹಾ ನೋಡಿ, ಟೀ ಪ್ರಿಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಯ್ಯೋ ಇದು ಅಸಹ್ಯ ಎಂದಿದ್ದಾರೆ. ವಿಡಿಯೋ ಶೇರ್​ ಆದ ಕೆಲವೇ ಹೊತ್ತಲ್ಲಿ 251 ಸಾವಿರಕ್ಕೂ ಹೆಚ್ಚು ವೀವ್ಸ್​ ಪಡೆದಿದೆ. ಸುಮಾರು 3000 ಕಾಮೆಂಟ್​ಗಳು ಬಂದಿವೆ.

View this post on Instagram

A post shared by FOODIEAGRA (@foodieagraaaaa)

ನಮ್ಮನ್ನು ನಂಬಿ ಪ್ಲೀಸ್.. ಫೇಸ್​ಬುಕ್​ನೊಂದಿಗೆ ನಿಮ್ಮ ಡೇಟಾ ಹಂಚಿಕೊಳ್ಳುವುದಿಲ್ಲ; ಸ್ಟೇಟಸ್​ ಮೂಲಕ ಅಂಗಲಾಚಿದ ವಾಟ್ಸ್​ಆ್ಯಪ್​

Published On - 6:56 pm, Sun, 17 January 21

Follow Us
ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ
ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ
‘ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ’ ಎಂದ ಫ್ಯಾನ್ಸ್
‘ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ’ ಎಂದ ಫ್ಯಾನ್ಸ್
ಕಗಿಸೋ ರಬಾಡಗೆ ಸತತ 5 ಬೌಂಡರಿ ಬಾರಿಸಿದ ಕೊಹ್ಲಿ
ಕಗಿಸೋ ರಬಾಡಗೆ ಸತತ 5 ಬೌಂಡರಿ ಬಾರಿಸಿದ ಕೊಹ್ಲಿ
‘ಕೆಡಿ’ ಸಿನಿಮಾ: ನಿರ್ದೇಶಕ ಪ್ರೇಮ್​​ ಕಾಲಿಗೆ ನಮಸ್ಕರಿಸಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾ: ನಿರ್ದೇಶಕ ಪ್ರೇಮ್​​ ಕಾಲಿಗೆ ನಮಸ್ಕರಿಸಿದ ಧ್ರುವ ಸರ್ಜಾ
ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು
ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು
ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ
ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ
ತೆಲಂಗಾಣದ ಈ ಭೀಕರ ಅಪಘಾತ ನೋಡಿದರೆ ಎದೆ ಝಲ್ ಎನ್ನದಿರದು!
ತೆಲಂಗಾಣದ ಈ ಭೀಕರ ಅಪಘಾತ ನೋಡಿದರೆ ಎದೆ ಝಲ್ ಎನ್ನದಿರದು!
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆದ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್
ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆದ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್
ರೈಲು ನಿಲ್ಲುವ ಮುನ್ನವೇ ಜಿಗಿದ ವ್ಯಕ್ತಿ, ಮುಂದೇನಾಯಿತು ನೋಡಿ
ರೈಲು ನಿಲ್ಲುವ ಮುನ್ನವೇ ಜಿಗಿದ ವ್ಯಕ್ತಿ, ಮುಂದೇನಾಯಿತು ನೋಡಿ
ಹಿಮಾಚಲ ಪ್ರದೇಶದ ಚಿಂತ್‌ಪುರಿ ಬಳಿ ಕಣಿವೆಗೆ ಉರುಳಿದ ಕಾರು; ಇಬ್ಬರು ಸಾವು
ಹಿಮಾಚಲ ಪ್ರದೇಶದ ಚಿಂತ್‌ಪುರಿ ಬಳಿ ಕಣಿವೆಗೆ ಉರುಳಿದ ಕಾರು; ಇಬ್ಬರು ಸಾವು