AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಣ್ಣು ಕರು ಮಾತ್ರ ಹುಟ್ಟುವಂತೆ ವರ್ಗೀಕೃತ ವೀರ್ಯ ಬಳಸಿ ಕೃತಕ ಗರ್ಭಧಾರಣೆ; ಅಸ್ಸಾಂನಲ್ಲಿ ಹೊಸ ಯೋಜನೆ

ಹಿಮಂತ ಬಿಸ್ವ ಶರ್ಮಾ ಚಹಾ ಗಾರ್ಡನ್​ನಲ್ಲಿ ಗೋಶಾಲೆ ನಿರ್ಮಿಸುವ ಬಗ್ಗೆಯೂ ಮಾತನಾಡಿದ್ದಾರೆ. ಅದರಿಂದ ಹಸುಗಳ ರಕ್ಷಣೆ ಮಾಡಬಹುದು. ಜೊತೆಗೆ, ದನದ ಸೆಗಣಿಯನ್ನು ಚಹಾ ಗಾರ್ಡನ್​ಗೆ ಗೊಬ್ಬರವಾಗಿಯೂ ಬಳಕೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಹೆಣ್ಣು ಕರು ಮಾತ್ರ ಹುಟ್ಟುವಂತೆ ವರ್ಗೀಕೃತ ವೀರ್ಯ ಬಳಸಿ ಕೃತಕ ಗರ್ಭಧಾರಣೆ; ಅಸ್ಸಾಂನಲ್ಲಿ ಹೊಸ ಯೋಜನೆ
ಹಿಮಂತ ಬಿಸ್ವ ಶರ್ಮಾ
TV9 Web
| Edited By: |

Updated on:Jul 16, 2021 | 4:30 PM

Share

ಗುವಹಾಟಿ: ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡುವಾಗ ಲೈಂಗಿಕ ವರ್ಗೀಕೃತ ವೀರ್ಯ ಬಳಸಿ ವೈಜ್ಞಾನಿಕ ವಿಧಾನದಲ್ಲಿ ಗರ್ಭಧಾರಣೆ ಮಾಡಲಾಗುವುದು. ಆ ಮೂಲಕ, ಮುಂದಿನ 10-20 ವರ್ಷಗಳ ಬಳಿಕ ಕೇವಲ ಹಸುಗಳು ಮಾತ್ರ ಹುಟ್ಟುವಂತೆ ಹಾಗೂ ಹೋರಿಗಳು ಹುಟ್ಟದಂತೆ ಮಾಡಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.

ಲೈಂಗಿಕ ವರ್ಗೀಕೃತ ವೀರ್ಯ ಬಳಸಿಕೊಂಡು ಕೃತಕ ಗರ್ಭಧಾರಣೆ ಮಾಡಬಹುದು. ಇದರಿಂದ ಮುಂದಿನ ವರ್ಷಗಳಲ್ಲಿ ಹೆಣ್ಣು ಕರು (ಹಸುಗಳು) ಮಾತ್ರ ಜನಿಸುತ್ತವೆ. ಈ ಬಗ್ಗೆ ಪಶುಸಂಗೋಪನಾ ಇಲಾಖೆಯು ಕೂಡ ಮಾಹಿತಿ ನೀಡಿದೆ ಎಂದು ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ವರ್ಗೀಕೃತ ವೀರ್ಯ ಬಳಸುವ ವಿಧಾನವು ಮುಂದೆ ಜನಿಸುವ ಕರುವಿನ ಲಿಂಗ ಯಾವುದು ಇರಬೇಕು ಎಂದು ಮೊದಲೇ ನಿರ್ಧರಿಸುವಂತೆ ಮಾಡುತ್ತದೆ.

ಪಿಟಿಐ ವರದಿಯ ಮಾಹಿತಿಯಂತೆ, ಹಿಮಂತ ಬಿಸ್ವ ಶರ್ಮಾ ಈ ಯೋಜನೆ ಬಗ್ಗೆ ತಿಳಿಸಲು ಹಿಂದೂ ಪುರಾಣವನ್ನು ಕೂಡ ಉಲ್ಲೇಖಿಸಿದ್ದಾರೆ. ಅದರಂತೆ ಪೌರಾಣಿಕವಾಗಿ ಹೋರಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಸುಗಳು ಇದ್ದವು. ಪುರಾಣಗಳಲ್ಲಿ ಕಾಮಧೇನುವಿನಂತಹ ಹಸುಗಳ ಬಗ್ಗೆ ಮಾತ್ರ ಉಲ್ಲೇಖವಿದೆ. ಅಂದರೆ, ಹಸುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವಂತೆ ಏನೋ ಇದ್ದಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಿಮಂತ ಬಿಸ್ವ ಶರ್ಮಾ ಚಹಾ ಗಾರ್ಡನ್​ನಲ್ಲಿ ಗೋಶಾಲೆ ನಿರ್ಮಿಸುವ ಬಗ್ಗೆಯೂ ಮಾತನಾಡಿದ್ದಾರೆ. ಅದರಿಂದ ಹಸುಗಳ ರಕ್ಷಣೆ ಮಾಡಬಹುದು. ಜೊತೆಗೆ, ದನದ ಸೆಗಣಿಯನ್ನು ಚಹಾ ಗಾರ್ಡನ್​ಗೆ ಗೊಬ್ಬರವಾಗಿಯೂ ಬಳಕೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿಧಾನಸಭೆಯಲ್ಲಿ ‘ಜಾನುವಾರು ಸಂರಕ್ಷಣಾ ಕಾಯ್ದೆ 2021’ಯ ಮಸೂದೆ ಮಂಡಿಸಿದ್ದರು. ಇದರ ಪ್ರಕಾರ ಹಿಂದೂ, ಜೈನ, ಸಿಖ್ ಮತ್ತು ಇತರ ಗೋಮಾಂಸ ತಿನ್ನದ ಸಮುದಾಯಗಳು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ, ಯಾವುದೇ ದೇವಾಲಯ ಅಥವಾ ಸತ್ರದ (ವೈಷ್ಣವ ಮಠಗಳು) 5 ಕಿ.ಮೀ ವ್ಯಾಪ್ತಿಯಲ್ಲಿ ಗೋಮಾಂಸ ಅಥವಾ ಗೋಮಾಂಸ ಉತ್ಪನ್ನಗಳ ಮಾರಾಟ  ಮತ್ತು ಖರೀದಿ ನಿಷೇಧಿಸಲಾಗುತ್ತದೆ.

ಇದು ಅಸ್ಸಾಂ ಜಾನುವಾರು ಸಂರಕ್ಷಣಾ ಮಸೂದೆ, 2021 ರ ಒಂದು ವಿಶಿಷ್ಟ ಅಂಶವಾಗಿದೆ. ಇದು ಜಾನುವಾರುಗಳ “ಹತ್ಯೆ, ಬಳಕೆ, ಅಕ್ರಮ ಸಾಗಣೆ” ಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. 1950 ರ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ, “ಹತ್ಯೆ, ಬಳಕೆ ಮತ್ತು ದನಗಳ ಸಾಗಣೆಯನ್ನು ನಿಯಂತ್ರಿಸಲು” ಸಾಕಷ್ಟು ಕಾನೂನು ನಿಬಂಧನೆಗಳ ಕೊರತೆಯಿದೆ ಎಂದು ಶರ್ಮಾ ಈ ಹಿಂದೆ ಹೇಳಿದ್ದರು.

ಇದನ್ನೂ ಓದಿ: Explainer: ಅಸ್ಸಾಂನಲ್ಲಿ ಗೋಮಾಂಸ ಸೇವಿಸದ ಸಮುದಾಯದವರ ಪ್ರದೇಶದಲ್ಲಿ ಗೋಮಾಂಸ ನಿಷೇಧ; ಏನಿದು ಜಾನುವಾರು ಸಂರಕ್ಷಣಾ ಮಸೂದೆ?

ಗೋಶಾಲೆಯಲ್ಲಿಯೇ ಕೊವಿಡ್​ ಐಸೋಲೇಶನ್ ಕೇಂದ್ರ ಸ್ಥಾಪನೆ; ಗೋಮೂತ್ರ, ಹಾಲು, ತುಪ್ಪದ ಔಷಧಗಳಿಂದಲೇ ಚಿಕಿತ್ಸೆ

Published On - 4:26 pm, Fri, 16 July 21

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ