AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ART Bill ಲೋಕಸಭೆಯಲ್ಲಿ ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ ಮಸೂದೆಗೆ ಅಂಗೀಕಾರ; ಏನಿದು ಮಸೂದೆ?

ಸಂತಾನೋತ್ಪತ್ತಿ ತಂತ್ರಜ್ಞಾನವನ್ನು ಬಳಸಿಕೊಂಡು ಜನಿಸಿದ ಮಗುವನ್ನು ಪಡೆಯುವ ದಂಪತಿಗೆ ಆ ಮಗುವನ್ನು ಬಯೋಲಾಜಿಕಲ್ ಮಗು (biological child) ಎಂದು ಪರಿಗಣಿಸಲಾಗುತ್ತದೆ. ಆ ಮಗು ದಂಪತಿಯ  ಮಗುವಿಗೆ ಲಭ್ಯವಿರುವ ಹಕ್ಕುಗಳು ಮತ್ತು ಸವಲತ್ತುಗಳಿಗೆ ಅರ್ಹರಾಗಿರುತ್ತಾರೆ. ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ (ನಿಯಂತ್ರಣ)ಮಸೂದೆಯ ಎಲ್ಲಾ ಪ್ರಮುಖ ನಿಬಂಧನೆಗಳ ವಿವರಗಳು ಇಲ್ಲಿವೆ

ART Bill ಲೋಕಸಭೆಯಲ್ಲಿ ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ ಮಸೂದೆಗೆ ಅಂಗೀಕಾರ; ಏನಿದು ಮಸೂದೆ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 01, 2021 | 7:03 PM

ಚಳಿಗಾಲದ ಅಧಿವೇಶನದಲ್ಲಿ (parliament winter session) ಲೋಕಸಭೆ ಇಂದು ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ (ನಿಯಂತ್ರಣ) ಮಸೂದೆ, 2020 (Assisted Reproductive Technology (Regulation) Bill, 2020) ಚರ್ಚೆ ನಡೆಸಿ ಅಂಗೀಕರಿಸಿದೆ.  ಗರ್ಭ ಫಲಿಸುವ  ಚಿಕಿತ್ಸೆಯನ್ನು ನಿಯಂತ್ರಿಸುವ, ಸುರಕ್ಷಿತ ಮತ್ತು ನೈತಿಕ ಬಳಕೆಯನ್ನು ಅನುಮತಿಸುವ ಮತ್ತು ಮಹಿಳೆಯರು ಮತ್ತು ಮಕ್ಕಳನ್ನು ಶೋಷಣೆಯಿಂದ ರಕ್ಷಿಸುವ ಉದ್ದೇಶ ಹೊಂದಿರುವ ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ (ನಿಯಂತ್ರಣ) ಮಸೂದೆಯನ್ನು ಕೇಂದ್ರ ಸರ್ಕಾರವು ಕಳೆದ ವರ್ಷ ಫೆಬ್ರವರಿಯಲ್ಲಿ ಅನುಮೋದಿಸಿತ್ತು. ಈ ಮಸೂದೆಯನ್ನು ಸೆಪ್ಟೆಂಬರ್ 14, 2020 ರಂದು ಲೋಕಸಭೆಯಲ್ಲಿ ಪರಿಚಯಿಸಲಾಯಿತು. ನಂತರ ಅದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸ್ಥಾಯಿ ಸಮಿತಿಗೆ ಉಲ್ಲೇಖಿಸಲಾಯಿತು. ಸಮಿತಿಯ ವರದಿಯನ್ನು ಮಾರ್ಚ್ 19, 2021 ರಂದು ಲೋಕಸಭೆಯಲ್ಲಿ ಮಂಡಿಸಿತ್ತು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಅವರು ನವೆಂಬರ್ 29 ರಂದು ಅಧಿವೇಶನದ ಮೊದಲ ದಿನದಂದು ಮತ್ತೊಮ್ಮೆ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಲು ನಿರ್ಧರಿಸಿದ್ದರು. ಆದರೆ ಕೃಷಿ ಕಾನೂನುಗಳ ರದ್ದತಿ ಮಸೂದೆಯ ನಂತರ ವಿಪಕ್ಷಗಳ ಗದ್ದಲದಿಂದಾಗಿ ಲೋಕಸಭೆಯು ದಿನಕ್ಕೆ ಮುಂದೂಡಲ್ಪಟ್ಟ ಕಾರಣ ಅದು ಸಾಧ್ಯವಾಗಿರಲಿಲ್ಲ.

ಏನಿದು  ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ (ART) ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಯು (Assisted Reproductive Technology)ಸಂತಾನೋತ್ಪತ್ತಿಗೆ ಸಹಾಯ ಮಾಡುವ ವೈದ್ಯಕೀಯ ಮಧ್ಯಸ್ಥಿಕೆಗಳ ವ್ಯಾಪ್ತಿಯನ್ನು ಸೂಚಿಸುತ್ತದೆ,. ಇದರಲ್ಲಿ ಐವಿಎಫ್ ಮೂಲಕ ಕೃತಕ ಗರ್ಭಧಾರಣೆ ಮತ್ತು ಓಸೈಟ್ ದಾನದಂತಹ ಕಾರ್ಯವಿಧಾನಗಳು ಸೇರಿವೆ.

ಪಿಆರ್​​ಎಸ್ ಲೆಜಿಸ್ಲೇಟಿವ್ ರಿಸರ್ಚ್ ಪ್ರಕಾರ, ಮಾನವ ದೇಹದ ಹೊರಗಿನ ವೀರ್ಯ ಅಥವಾ ಅಂಡಾಣುವನ್ನು ನಿರ್ವಹಿಸುವ ಮೂಲಕ ಮತ್ತು ಗ್ಯಾಮೆಟ್ ಅಥವಾ ಭ್ರೂಣವನ್ನು ಮಹಿಳೆಯ ಸಂತಾನೋತ್ಪತ್ತಿ ವ್ಯವಸ್ಥೆಗೆ ವರ್ಗಾಯಿಸುವ ಮೂಲಕ ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳಲು ಬಯಸುವ ಎಲ್ಲಾ ತಂತ್ರಗಳು ಎಆರ್​​ಟಿ ಗಳನ್ನು ಮಸೂದೆ ವ್ಯಾಖ್ಯಾನಿಸುತ್ತದೆ. ಎಆರ್​​ಟಿ ಸೇವೆಗಳ ಉದಾಹರಣೆಗಳಲ್ಲಿ ಗ್ಯಾಮೆಟ್ (ವೀರ್ಯ ಅಥವಾ ಓಸೈಟ್) ದಾನ, ಇನ್-ವಿಟ್ರೋ-ಫರ್ಟಿಲಿಸೇಷನ್ ಮತ್ತು ಗರ್ಭಾವಸ್ಥೆಯ ಬಾಡಿಗೆ ತಾಯ್ತನ ಸೇರಿವೆ.

ರಾಷ್ಟ್ರೀಯ ಮತ್ತು ರಾಜ್ಯ ಮಂಡಳಿಗಳು ಮಸೂದೆಯ ನಿಬಂಧನೆಗಳ ಪ್ರಕಾರ ಚಿಕಿತ್ಸಾಲಯಗಳಲ್ಲಿ ಕೆಲಸ ಮಾಡುವವರು ಪಾಲಿಸಬೇಕಾದ ನೀತಿ ಸಂಹಿತೆಯನ್ನು ರೂಪಿಸಲು ರಾಷ್ಟ್ರೀಯ ಮಂಡಳಿಯನ್ನು ರಚಿಸಲಾಗುವುದು, ಭೌತಿಕ ಮೂಲಸೌಕರ್ಯ, ಪ್ರಯೋಗಾಲಯ, ರೋಗನಿರ್ಣಯ ಉಪಕರಣಗಳು ಮತ್ತು ಕ್ಲಿನಿಕ್‌ಗಳು ಮತ್ತು ಬ್ಯಾಂಕ್‌ಗಳು ಕೆಲಸ ಮಾಡುವ ಮಾನವಶಕ್ತಿಯ ಕನಿಷ್ಠ ಮಾನದಂಡಗಳನ್ನು ಹೊಂದಿಸಬೇಕಾಗುತ್ತದೆ. ಅಂತೆಯೇ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೇಂದ್ರದಿಂದ ಅಧಿಸೂಚನೆಯ ಮೂರು ತಿಂಗಳೊಳಗೆ ರಾಜ್ಯ ಮಂಡಳಿಗಳು ಮತ್ತು ರಾಜ್ಯ ಪ್ರಾಧಿಕಾರಗಳನ್ನು ರಚಿಸುತ್ತವೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ಲಿನಿಕ್‌ಗಳಿಗಾಗಿ ರಾಷ್ಟ್ರೀಯ ಮಂಡಳಿಯು ರೂಪಿಸಿದ ನೀತಿಗಳು ಮತ್ತು ಯೋಜನೆಗಳನ್ನು ಖಾತ್ರಿಪಡಿಸುವ ಜವಾಬ್ದಾರಿಯನ್ನು ರಾಜ್ಯ ಮಂಡಳಿಯು ಹೊಂದಿರುತ್ತದೆ.

ಎಆರ್​​ಟಿ ಕ್ಲಿನಿಕ್‌ಗಳು ಮತ್ತು ಬ್ಯಾಂಕ್‌ಗಳನ್ನು ನಿಯಂತ್ರಿಸುವುದು ಕೇಂದ್ರೀಯ ಡೇಟಾಬೇಸ್ ನಿರ್ವಹಿಸಲು ಮತ್ತು ಅದರ ಕಾರ್ಯನಿರ್ವಹಣೆಯಲ್ಲಿ ರಾಷ್ಟ್ರೀಯ ಮಂಡಳಿಗೆ ಸಹಾಯ ಮಾಡಲು ರಾಷ್ಟ್ರೀಯ ನೋಂದಣಿ ಮತ್ತು ನೋಂದಣಿ ಪ್ರಾಧಿಕಾರವನ್ನು ಸ್ಥಾಪಿಸಲು ಮಸೂದೆ ಅನುವು ಮಾಡುತ್ತದೆ.  ಮಸೂದೆಯ ನಿಬಂಧನೆಗಳ ಪ್ರಕಾರ, ಪ್ರತಿ ಎಆರ್​​ಟಿ ಕ್ಲಿನಿಕ್ ಮತ್ತು ಬ್ಯಾಂಕ್‌ಗಳು ರಾಷ್ಟ್ರೀಯ ಬ್ಯಾಂಕ್‌ಗಳು ಮತ್ತು ಕ್ಲಿನಿಕ್‌ಗಳ ನೋಂದಣಿ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಮಸೂದೆಯ ಅಡಿಯಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ನೋಂದಣಿಯು ದೇಶಾದ್ಯಂತ ಕ್ಲಿನಿಕ್‌ಗಳು ಮತ್ತು ಬ್ಯಾಂಕ್‌ಗಳ ವಿವರಗಳೊಂದಿಗೆ ಕೇಂದ್ರೀಯ ಡೇಟಾಬೇಸ್ ಆಗಿ ಕಾರ್ಯನಿರ್ವಹಿಸುತ್ತದೆ.

ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ನೋಂದಣಿ ಅಧಿಕಾರಿಗಳನ್ನು ನೇಮಿಸುತ್ತವೆ. ಕ್ಲಿನಿಕ್‌ಗಳು ಮತ್ತು ಬ್ಯಾಂಕ್‌ಗಳು ಕೆಲವು ಮಾನದಂಡಗಳಿಗೆ (ವಿಶೇಷ ಮಾನವಶಕ್ತಿ, ಭೌತಿಕ ಮೂಲಸೌಕರ್ಯ ಮತ್ತು ರೋಗನಿರ್ಣಯ ಸೌಲಭ್ಯಗಳು) ಬದ್ಧವಾಗಿದ್ದರೆ ಮಾತ್ರ ನೋಂದಾಯಿಸಲ್ಪಡುತ್ತವೆ. ನೋಂದಣಿ ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ಅವುಗಳನ್ನು ಹೆಚ್ಚಿನ ಐದು ವರ್ಷಗಳವರೆಗೆ ನವೀಕರಿಸಬಹುದು. ಮಸೂದೆಯ ನಿಬಂಧನೆಗಳನ್ನು ಉಲ್ಲಂಘಿಸಿದರೆ ಘಟಕದ ನೋಂದಣಿಯನ್ನು ರದ್ದುಗೊಳಿಸಬಹುದು ಅಥವಾ ಅಮಾನತುಗೊಳಿಸಬಹುದು.

ಎಆರ್​​ಟಿ ಸೇವಾ ಪೂರೈಕೆದಾರರಿಗೆ ನಿಯಮಗಳು

ಎಆರ್​​ಟಿ ಸೇವೆಗಳನ್ನು ಬಯಸುವ ವ್ಯಕ್ತಿ ಹಾಗೂ ಗ್ಯಾಮೆಟ್ ದಾನಿ ಇಬ್ಬರ ಲಿಖಿತ  ಒಪ್ಪಿಗೆಯೊಂದಿಗೆ ಮಾತ್ರ ಎಆರ್​​ಟಿ ಕಾರ್ಯವಿಧಾನಗಳನ್ನು ಕೈಗೊಳ್ಳಬಹುದು. ಎಆರ್​​ಟಿ ಸೇವೆಗಳನ್ನು ಬಯಸುವ ಜನರು ದಾನಿಯ ಯಾವುದೇ ನಷ್ಟ, ಹಾನಿ ಅಥವಾ ಸಾವಿಗೆ ಓಸೈಟ್ ದಾನಿಯ ಪರವಾಗಿ ವಿಮಾ ರಕ್ಷಣೆಯನ್ನು ಒದಗಿಸುವ ಅಗತ್ಯವಿದೆ. ಹೆಚ್ಚುವರಿಯಾಗಿ ಮಗುವಿನ ಲಿಂಗ ಪೂರ್ವ ನಿರ್ಧರಿಸುವುದನ್ನು ಕ್ಲಿನಿಕ್​​ಗಳು ನಿಷೇಧಿಸಿವೆ. ಪಿಆರ್‌ಎಸ್ ಶಾಸಕಾಂಗ ಸಂಶೋಧನೆಯ ಪ್ರಕಾರ, ಭ್ರೂಣವನ್ನು ಅಳವಡಿಸುವ ಮೊದಲು ಆನುವಂಶಿಕ ಕಾಯಿಲೆಗಳನ್ನು ಪರಿಶೀಲಿಸುವ ಅಗತ್ಯವಿದೆ.

ಮಗುವಿನ ಮೇಲೆ ದಾನಿಗಳಿಗೆ ಯಾವುದೇ ಹಕ್ಕುಗಳಿಲ್ಲ ಎಆರ್​​ಟಿ ಮೂಲಕ ಜನಿಸಿದ ಮಗುವನ್ನು ಪಡೆದ ದಂಪತಿಗಳ ಜೈವಿಕ ಮಗು ಎಂದು ಪರಿಗಣಿಸಲಾಗುತ್ತದೆ ಮತ್ತು ಆ ದಂಪತಿಯ ಮಗುವಿಗೆ ಲಭ್ಯವಿರುವ ಹಕ್ಕುಗಳು ಮತ್ತು ಸವಲತ್ತುಗಳಿಗೆ ಅರ್ಹರಾಗಿರುತ್ತಾರೆ. ಗ್ಯಾಮೆಟ್ ದಾನಿಯು ಮಗುವಿನ ಮೇಲೆ ಪೋಷಕರ ಹಕ್ಕುಗಳನ್ನು ಹೊಂದಿರುವುದಿಲ್ಲ.

ಶಿಕ್ಷೆಗಳು ಮತ್ತು ದಂಡ ಎಆರ್​​ಟಿ ಮೂಲಕ ಜನಿಸಿದ ಮಕ್ಕಳನ್ನು ತ್ಯಜಿಸುವುದು ಅಥವಾ ಶೋಷಣೆ ಮಾಡುವುದು, ಮಾನವ ಭ್ರೂಣಗಳು ಅಥವಾ ಗ್ಯಾಮೆಟ್‌ಗಳನ್ನು ಮಾರಾಟ ಮಾಡುವುದು, ಖರೀದಿಸುವುದು, ವ್ಯಾಪಾರ ಮಾಡುವುದು ಅಥವಾ ಆಮದು ಮಾಡಿಕೊಳ್ಳುವುದು, ದಾನಿಗಳನ್ನು ಪಡೆಯಲು ಮಧ್ಯವರ್ತಿಗಳನ್ನು ಬಳಸುವುದು, ಪಡೆಯುವ ದಂಪತಿಗಳು, ಮಹಿಳೆ ಅಥವಾ ಗ್ಯಾಮೆಟ್ ದಾನಿಗಳನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳುವುದು, ಮಾನವ ಭ್ರೂಣವನ್ನು ಗಂಡು ಅಥವಾ ಪ್ರಾಣಿಗೆ ವರ್ಗಾಯಿಸುವುದು ಕಾನೂನಿನಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ

ತಪ್ಪಿತಸ್ಥರು ಮೊದಲ ಉಲ್ಲಂಘನೆಗೆ 5-10 ಲಕ್ಷ ರೂಪಾಯಿ ದಂಡದೊಂದಿಗೆ ಶಿಕ್ಷೆಗೆ ಗುರಿಯಾಗುತ್ತಾರೆ. ನಂತರದ ಉಲ್ಲಂಘನೆಗಳಿಗಾಗಿ, ಈ ಅಪರಾಧಗಳಿಗೆ 8-12 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10-20 ಲಕ್ಷ ರೂ ದಂಡ ವಿಧಿಸಲಾಗುತ್ತದೆ. ಯಾವುದೇ ಕ್ಲಿನಿಕ್ ಅಥವಾ ಬ್ಯಾಂಕ್ ಜಾಹೀರಾತು ಅಥವಾ ಮಗುವಿನ ಜನನ ಪೂರ್ವ ಲಿಂಗ ನಿರ್ಣಯ ಎಆರ್​​ಟಿ  ನೀಡಿದರೆ 5-10 ವರ್ಷಗಳ ಜೈಲು ಶಿಕ್ಷೆ ಅಥವಾ ರೂ 10-25 ಲಕ್ಷ ದಂಡ ಅಥವಾ ಎರಡನ್ನೂ ನಿಯಮಗಳ ಪ್ರಕಾರ ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ:Parliament Winter Session 12 ಸಂಸದರ ಅಮಾನತು ಹಿಂಪಡೆಯುವಂತೆ ಒತ್ತಾಯಿಸಿ ವಿಪಕ್ಷ ನಾಯಕರ ಪ್ರತಿಭಟನೆ

ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್