Old Ram Idol: 1949ರಲ್ಲಿ ಬಾಬರಿ ಮಸೀದಿಯೊಳಗೆ ಕಾಣಿಸಿಕೊಂಡಿದ್ದ ಹಳೇ ರಾಮನ ವಿಗ್ರಹ ಈಗ ಎಲ್ಲಿದೆ?

ಬಾಬರಿ ಮಸೀದಿಯಲ್ಲಿ ಕಾಣಿಸಿಕೊಂಡಿದ್ದ ರಾಮನ ಹಳೆಯ ವಿಗ್ರಹವನ್ನು ಹೊಸ ದೇವಾಲಯಕ್ಕೆ ಸ್ಥಳಾಂತರಿಸಲಾಗುತ್ತದೆ. ಅದನ್ನು ಸಿಂಹಾಸನದ ಮೇಲೆ ಇರಿಸಲಾಗುತ್ತದೆ ಎಂದು ಅಧಿಕಾರಿಗಳು ಮತ್ತು ಅರ್ಚಕರು ಹೇಳಿದರು. ಹಳೇ ವಿಗ್ರಹವನ್ನು ಹೊಸ ರಾಮಲಲ್ಲಾ ವಿಗ್ರಹದ ಎದುರು ಸಿಂಹಾಸನದ ಮೇಲೆ ಇರಿಸಲಾಗುವುದು ಎಂದಿದ್ದಾರೆ ಅವರು.

Old Ram Idol: 1949ರಲ್ಲಿ ಬಾಬರಿ ಮಸೀದಿಯೊಳಗೆ ಕಾಣಿಸಿಕೊಂಡಿದ್ದ ಹಳೇ ರಾಮನ ವಿಗ್ರಹ ಈಗ ಎಲ್ಲಿದೆ?
ರಾಮಲಲ್ಲಾ
Follow us
|

Updated on: Jan 23, 2024 | 3:14 PM

ಅಯೋಧ್ಯೆ ಜನವರಿ 23: ಜನವರಿ 22,ಸೋಮವಾರ  ಅಯೋಧ್ಯೆಯಲ್ಲಿ (Ayodhya) ರಾಮಮಂದಿರದ(Ram mandir) ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ನಮ್ಮ ರಾಮಲಲ್ಲಾ ಇನ್ನು ಮುಂದೆ ಟೆಂಟ್​​ನಲ್ಲಿ ಅಲ್ಲ ಭವ್ಯ ರಾಮಮಂದಿರದಲ್ಲಿರುತ್ತಾನೆ ಎಂದು ಹೇಳಿದ್ದಾರೆ. ನೂತನ ರಾಮಮಂದಿರದಲ್ಲಿ ರಾಮಲಲ್ಲಾನನ್ನು ಪ್ರತಿಷ್ಠಾಪನೆ ಮಾಡಿದ್ದಾಯ್ತು, ಆದರೆ ಹಳೇ ವಿಗ್ರಹ? ಡಿಸೆಂಬರ್ 22, 1949 ರ ರಾತ್ರಿ ಬಾಬರಿ ಮಸೀದಿಯೊಳಗೆ ಕಾಣಿಸಿಕೊಂಡಾಗಿನಿಂದ ಈ ವಿಗ್ರಹ ತಾತ್ಕಾಲಿಕ ಡೇರೆಯಂತಹ ರಚನೆಯಲ್ಲಿದೆ.

ಬಾಬರಿ ಮಸೀದಿಯಲ್ಲಿ ರಾಮನ ವಿಗ್ರಹವು ನಿಗೂಢವಾಗಿ ಕಾಣಿಸಿಕೊಂಡಿದೆ ಎಂದು ಹಲವಾರು ಜನರು ಹೇಳಿಕೊಳ್ಳುತ್ತಾರೆ. ಇದು ಸೈಟ್ ಸುತ್ತಲೂ ಧಾರ್ಮಿಕ ಭಾವನೆಗಳನ್ನು ತೀವ್ರಗೊಳಿಸಿ, ದಶಕಗಳ ಕಾಲ ಕಾನೂನು ಹೋರಾಟಕ್ಕೆ ಕಾರಣವಾಯಿತು. ನಿನ್ನೆ ಅಯೋಧ್ಯೆಯಲ್ಲಿ ನಡೆದ ಮಹಾ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಮೈಸೂರು ಮೂಲದ ಕಲಾವಿದ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ ಹೊಸ ವಿಗ್ರಹವನ್ನು ದೇವಾಲಯದ ಗರ್ಭಗುಡಿಯಲ್ಲಿ ಇರಿಸಲಾಯಿತು. ಕಪ್ಪು ಕಲ್ಲಿನಿಂದ ಕೆತ್ತಿದ 51 ಇಂಚಿನ ವಿಗ್ರಹವು ಚಿನ್ನದ ಕಿರೀಟ, ಹಳದಿ ಧೋತಿಯನ್ನು ಧರಿಸಿದ್ದು, ಕೈಯಲ್ಲಿ ಚಿನ್ನದ ಬಿಲ್ಲು ಮತ್ತು ಬಾಣವನ್ನು ಹಿಡಿದಿದೆ.

ಏತನ್ಮಧ್ಯೆ, ಹಳೆಯ ವಿಗ್ರಹವನ್ನು ಹೊಸ ದೇವಾಲಯಕ್ಕೆ ಸ್ಥಳಾಂತರಿಸಲಾಗುತ್ತದೆ. ಅದನ್ನು ಸಿಂಹಾಸನದ ಮೇಲೆ ಇರಿಸಲಾಗುತ್ತದೆ ಎಂದು ಅಧಿಕಾರಿಗಳು ಮತ್ತು ಅರ್ಚಕರು ಹೇಳಿದರು. ಹಳೇ ವಿಗ್ರಹವನ್ನು ಹೊಸ ರಾಮಲಲ್ಲಾ ವಿಗ್ರಹದ ಎದುರು ಸಿಂಹಾಸನದ ಮೇಲೆ ಇರಿಸಲಾಗುವುದು ಎಂದಿದ್ದಾರೆ ಅವರು.

ತಾತ್ಕಾಲಿಕ ದೇವಾಲಯದಲ್ಲಿರುವ ವಿಗ್ರಹವು ಗರ್ಭಗೃಹಕ್ಕೆ (ಗರ್ಭಗೃಹ) ಸ್ಥಳಾಂತರಗೊಳ್ಳಲಿದೆ ಎಂದು ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಎನ್​ಡಿಟಿವಿಗೆ ತಿಳಿಸಿದ್ದಾರೆ.  ನಿಮಗೆ ರಾಮ್ ಲಲ್ಲಾನ ನಿಂತಿರುವ ವಿಗ್ರಹವಿದೆ. 1949 ರಲ್ಲಿ ಕಾಣಿಸಿಕೊಂಡ ‘ಮೂರ್ತಿ’  ಇರುತ್ತದೆ. ಎರಡೂ ವಿಗ್ರಹಗಳು ಸಿಂಹಾಸನದಲ್ಲಿರುತ್ತವೆ ಎಂದಿದ್ದಾರೆ ಅವರು.

ಕೆಲವು ಧಾರ್ಮಿಕ ಕ್ರಿಯೆಗಳ ನಂತರ ಅರ್ಚಕರಿಂದ ತಾತ್ಕಾಲಿಕ ಗುಡಾರದಿಂದ ದೇವಸ್ಥಾನಕ್ಕೆ ಸ್ಥಳಾಂತರಿಸಲಾಗುವುದು ಎಂದು ಮಿಶ್ರಾ ಹೇಳಿದ್ದಾರೆ.

ದೇವಾಲಯದ ಉದ್ಘಾಟನೆಯಲ್ಲಿ ಚಲನಚಿತ್ರ ತಾರೆಯರು, ಕ್ರೀಡಾ ಪಟುಗಳು, ಸಂಗೀತಗಾರರು, ಕೈಗಾರಿಕೋದ್ಯಮಿಗಳು ಮತ್ತು ಇತರ ಪ್ರಸಿದ್ಧ ವ್ಯಕ್ತಿಗಳು ಭಾಗಿಯಾಗಿದ್ದರು, ‘ಪ್ರಾಣ ಪ್ರತಿಷ್ಠಾ’ ಪ್ರಕ್ರಿಯೆಯ ನೇತೃತ್ವ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ರಾವಣನನ್ನು ಸೋಲಿಸಿದ ನಂತರ ಭಗವಾನ್ ರಾಮನ ಗೃಹಪ್ರವೇಶವನ್ನು ಸೂಚಿಸುವ ಹಬ್ಬವಾದ ದೀಪಾವಳಿಯನ್ನು ದೀಪ ಬೆಳಗಿಸಿ ಈ ಸಂಭ್ರಮವನ್ನು ಆಚರಿಸಲು ಭಾರತೀಯರನ್ನು ಒತ್ತಾಯಿಸಿದರು.

ಇದನ್ನೂ ಓದಿ: ಕರ್ನಾಟಕದ ರಾಮಮಂದಿರಗಳಲ್ಲಿರೋದು ರಾಮ, ಲಕ್ಷ್ಮಣ ಸೀತೆಯರಲ್ಲವೇ? ಸಿದ್ದರಾಮಯ್ಯ

ಈ ಘಟನೆಯು ಭಾರತದಾದ್ಯಂತ ಧಾರ್ಮಿಕ ಉತ್ಸಾಹವನ್ನು ಹುಟ್ಟುಹಾಕಿತು, ಅನೇಕ ರಾಜ್ಯಗಳು ರಜಾದಿನವನ್ನು ಘೋಷಿಸಿದವು, ಷೇರು ಮಾರುಕಟ್ಟೆಗಳು ಮುಚ್ಚಲ್ಪಟ್ಟವು.ಮನೆಗಳಲ್ಲಿ ದೀಪ ಬೆಳಗಿಸಿ ಜನರು ಸಂಭ್ರಮಿಸಿದರು. 70 ಎಕರೆ ಸಂಕೀರ್ಣದಲ್ಲಿ 2.67 ಎಕರೆ ಪ್ರದೇಶದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಅದರ ಮೊದಲ ಹಂತ ಮಾತ್ರ ಸಿದ್ಧವಾಗಿದೆ. ಎರಡನೇ ಮತ್ತು ಅಂತಿಮ ಹಂತವು ಡಿಸೆಂಬರ್ 2025 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಈ ಯೋಜನೆಗೆ ₹ 1,500 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಮತ್ತು ಸಂಪೂರ್ಣವಾಗಿ ದೇಶದೊಳಗಿನ ದೇಣಿಗೆಯಿಂದ ಹಣವನ್ನು ನೀಡಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದ ಹುಲಿ ಕುಣಿತ ಕಂಡು ತಲೆ ದೂಗಿದ ಬಾಲಿವುಡ್ ಬಾಬ ಸಂಜಯ್ ದತ್
ಕರ್ನಾಟಕದ ಹುಲಿ ಕುಣಿತ ಕಂಡು ತಲೆ ದೂಗಿದ ಬಾಲಿವುಡ್ ಬಾಬ ಸಂಜಯ್ ದತ್
ಜಗದೀಶ್-ಹಂಸಾ ಡುಯೆಟ್, ವಕೀಲರ ಮನಸು ಗೆಲ್ಲೋ ಪ್ರಯತ್ನದಲ್ಲಿ ಹಂಸಾ
ಜಗದೀಶ್-ಹಂಸಾ ಡುಯೆಟ್, ವಕೀಲರ ಮನಸು ಗೆಲ್ಲೋ ಪ್ರಯತ್ನದಲ್ಲಿ ಹಂಸಾ
ಬಳ್ಳಾರಿ: ಉತ್ಸವ ಮೂರ್ತಿಗಾಗಿ ಪರಸ್ಪರ ಬಡಿದಾಟ, ಹರಿದ ನೆತ್ತರು
ಬಳ್ಳಾರಿ: ಉತ್ಸವ ಮೂರ್ತಿಗಾಗಿ ಪರಸ್ಪರ ಬಡಿದಾಟ, ಹರಿದ ನೆತ್ತರು
ಕೊಪ್ಪಳ: ಬೀಡಿ ಸೇದುತ್ತ ಕೆಎಸ್​ಆರ್​ಟಿಸಿ ಬಸ್ ಓಡಿಸಿದ ಚಾಲಕ, ವಿಡಿಯೋ ವೈರಲ್
ಕೊಪ್ಪಳ: ಬೀಡಿ ಸೇದುತ್ತ ಕೆಎಸ್​ಆರ್​ಟಿಸಿ ಬಸ್ ಓಡಿಸಿದ ಚಾಲಕ, ವಿಡಿಯೋ ವೈರಲ್
ದಾವಣಗೆರೆ: ಎಳೆಹೊಳೆ ಗ್ರಾಮದಲ್ಲಿ ಕ್ರಿಶ 1271ರ ಶಾಸನ ಪತ್ತೆ
ದಾವಣಗೆರೆ: ಎಳೆಹೊಳೆ ಗ್ರಾಮದಲ್ಲಿ ಕ್ರಿಶ 1271ರ ಶಾಸನ ಪತ್ತೆ
ದಾವಣಗೆರೆ: ಗೌಳಿ ಸಮುದಾಯದಿಂದ ವಿಭಿನ್ನವಾಗಿ ದಸರಾ ಆಚರಣೆ
ದಾವಣಗೆರೆ: ಗೌಳಿ ಸಮುದಾಯದಿಂದ ವಿಭಿನ್ನವಾಗಿ ದಸರಾ ಆಚರಣೆ
"ಇಟ್ಟ ರಾಮನ ಬಾಣ ಹುಸಿಯಿಲ್ಲ" ಆತಂಕ ಮೂಡಿಸಿದ ಮೈಲಾರಲಿಂಗೇಶ್ವರ ಕಾರ್ಣಿಕ
ತುಮಕೂರು ದಸರಾದಲ್ಲಿ ಪುನೀತ್ ಅವರ ಹಾಡು ಹಾಡಿದ ಸಚಿವ ಪರಮೇಶ್ವರ್
ತುಮಕೂರು ದಸರಾದಲ್ಲಿ ಪುನೀತ್ ಅವರ ಹಾಡು ಹಾಡಿದ ಸಚಿವ ಪರಮೇಶ್ವರ್
ಬಾಂಗ್ಲಾ ಬೌಲರ್​ಗಳನ್ನ ಚೆಂಡಾಡಿದ ಭಾರತೀಯ ಬ್ಯಾಟರ್​ಗಳು: ಇಲ್ಲಿದೆ ಹೈಲೈಟ್ಸ್
ಬಾಂಗ್ಲಾ ಬೌಲರ್​ಗಳನ್ನ ಚೆಂಡಾಡಿದ ಭಾರತೀಯ ಬ್ಯಾಟರ್​ಗಳು: ಇಲ್ಲಿದೆ ಹೈಲೈಟ್ಸ್
Daily Devotional: ಸನಾತನ ಹಿಂದೂ ಧರ್ಮದಲ್ಲಿ ದರ್ಭೆಯ ಮಹತ್ವ ತಿಳಿಯಿರಿ
Daily Devotional: ಸನಾತನ ಹಿಂದೂ ಧರ್ಮದಲ್ಲಿ ದರ್ಭೆಯ ಮಹತ್ವ ತಿಳಿಯಿರಿ