AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TRP ಸಮರದಲ್ಲಿ ಅಲ್ಪವಿರಾಮ: ಪ್ರತಿ ವಾರದ ರೇಟಿಂಗ್​ ಸೂಚ್ಯಂಕಕ್ಕೆ ಬ್ರೇಕ್​

ದೆಹಲಿ: TRPಯಿಂದ, TRPಗಾಗಿ, TRPಗೋಸ್ಕರ ಎಂದು 24X7 ನೇರ ಹಣಾಹಣಿಯಲ್ಲಿದ್ದ ಹಲವಾರು ಸುದ್ದಿ ವಾಹಿನಿಗಳ TRP ಸಮರಕ್ಕೆ ಇದೀಗ ತಾತ್ಕಾಲಿಕ ಬ್ರೇಕ್​ ಬಿದ್ದಿದೆ. ಟೆಲಿವಿಷನ್​ ರೇಟಿಂಗ್​ ಪಾಯಿಂಟ್​ ಅಥವಾ ಟಿಆರ್​ಪಿ ಎಂದೇ ಹೆಸರುವಾಸಿಯಾಗಿರುವ ಈ ಸೂಚ್ಯಂಕವನ್ನು ದೇಶದ ಪ್ರತಿ ಭಾಷೆಯ ಸುದ್ದಿವಾಹಿನಿ ಮತ್ತು ಮನರಂಜನಾ ವಾಹಿನಿಗಳಿಗೆ ಪ್ರತಿ ವಾರ ನೀಡಲಾಗುತ್ತಿತ್ತು. ಆದರೆ, ಇದೀಗ TRP ಶ್ರೇಣಿ ನೀಡುತ್ತಿದ್ದ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (BARC) ಇನ್ನು 8 ರಿಂದ 12 ವಾರಗಳ ಕಾಲ ಈ ಸೂಚ್ಯಂಕವನ್ನು ದೇಶದ […]

TRP ಸಮರದಲ್ಲಿ ಅಲ್ಪವಿರಾಮ: ಪ್ರತಿ ವಾರದ ರೇಟಿಂಗ್​ ಸೂಚ್ಯಂಕಕ್ಕೆ ಬ್ರೇಕ್​
KUSHAL V
|

Updated on:Oct 15, 2020 | 6:08 PM

Share

ದೆಹಲಿ: TRPಯಿಂದ, TRPಗಾಗಿ, TRPಗೋಸ್ಕರ ಎಂದು 24X7 ನೇರ ಹಣಾಹಣಿಯಲ್ಲಿದ್ದ ಹಲವಾರು ಸುದ್ದಿ ವಾಹಿನಿಗಳ TRP ಸಮರಕ್ಕೆ ಇದೀಗ ತಾತ್ಕಾಲಿಕ ಬ್ರೇಕ್​ ಬಿದ್ದಿದೆ. ಟೆಲಿವಿಷನ್​ ರೇಟಿಂಗ್​ ಪಾಯಿಂಟ್​ ಅಥವಾ ಟಿಆರ್​ಪಿ ಎಂದೇ ಹೆಸರುವಾಸಿಯಾಗಿರುವ ಈ ಸೂಚ್ಯಂಕವನ್ನು ದೇಶದ ಪ್ರತಿ ಭಾಷೆಯ ಸುದ್ದಿವಾಹಿನಿ ಮತ್ತು ಮನರಂಜನಾ ವಾಹಿನಿಗಳಿಗೆ ಪ್ರತಿ ವಾರ ನೀಡಲಾಗುತ್ತಿತ್ತು.

ಆದರೆ, ಇದೀಗ TRP ಶ್ರೇಣಿ ನೀಡುತ್ತಿದ್ದ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (BARC) ಇನ್ನು 8 ರಿಂದ 12 ವಾರಗಳ ಕಾಲ ಈ ಸೂಚ್ಯಂಕವನ್ನು ದೇಶದ ಎಲ್ಲಾ ಸುದ್ದಿವಾಹಿನಿಗಳಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೆಲವು ದಿನಗಳ ಹಿಂದೆ ಭಾರಿ ವಿವಾದ ಸೃಷ್ಟಿಸಿದ ಟಿಆರ್​ಪಿ ಹಗರಣದ ಹಿನ್ನೆಲೆಯಲ್ಲಿ BARC ಸಂಸ್ಥೆ ಇಂದು ಈ ನಿರ್ಧಾರ ಕೈಗೊಂಡಿದೆ. TRP ಸ್ಥಗಿತಗೊಂಡಿರುವ ಈ ವೇಳೆಯಲ್ಲಿ ಸಂಸ್ಥೆಯು TRP ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸದೃಢಗೊಳಿಸುವತ್ತ ತನ್ನ ಗಮನ ಹರಿಸುತ್ತದೆ ಎಂದು BARC ತಿಳಿಸಿದೆ.

ಜೊತೆಗೆ, ಮತ್ತೆಂದೂ ಈ ರೀತಿಯ ಹಗರಣ ಆಗದಂತೆ ಕ್ರಮ ಕೈಗೊಳ್ಳುತ್ತದೆ ಎಂದೂ ಸಹ ಹೇಳಿದೆ. ಸದ್ಯ ದೇಶದ ಎಲ್ಲಾ ಭಾಷೆಯ ಸುದ್ದಿವಾಹಿನಿಗಳಿಗೆ ಈ ಕ್ರಮ ಅನ್ವಯಿಸುತ್ತದೆ. ಹಾಗಾಗಿ ಸದ್ಯಕ್ಕೆ ಪ್ರತಿ ವಾರದ ರೇಟಿಂಗ್​ ಸೂಚ್ಯಂಕಕ್ಕೆ TRP ಬ್ರೇಕ್​ ಬಿದ್ದಿದೆ. ನ್ಯಾಷನಲ್​ ಬ್ರಾಡ್​ಕಾಸ್ಟರ್ಸ್​ ಅಸೋಸಿಯೇಷನ್​ ಸಂಸ್ಥೆಯು BARC ಈ ನಿರ್ಧಾರವನ್ನು ಸ್ವಾಗತಿಸಿದೆ. ತಾವು ಈ ನಿರ್ಧಾರಕ್ಕೆ ಬದ್ಧರಿದ್ದೇವೆ ಎಂದು ತಿಳಿಸಿದೆ.

Published On - 5:59 pm, Thu, 15 October 20

Follow Us
ಯಾದಗಿರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 6 ಜನರ ವಿರುದ್ಧ ಕೇಸ್​​
ಯಾದಗಿರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 6 ಜನರ ವಿರುದ್ಧ ಕೇಸ್​​
ಏಣಿಯ ಮೇಲೆ ಬ್ಯಾಲೆನ್ಸ್, ಕ್ಯಾಪ್ಟನ್ ಆಗಲು ಏನೆಲ್ಲಾ ಸಾಹಸ: ವಿಡಿಯೋ
ಏಣಿಯ ಮೇಲೆ ಬ್ಯಾಲೆನ್ಸ್, ಕ್ಯಾಪ್ಟನ್ ಆಗಲು ಏನೆಲ್ಲಾ ಸಾಹಸ: ವಿಡಿಯೋ
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ತಮ್ಮದೇ ನಟನೆ ಸಿನಿಮಾ ನೋಡಿ ಕಣ್ಣೀರು ಹಾಕಿದ ನಟಿ ಮೋನಿಷಾ: ವಿಡಿಯೋ
ತಮ್ಮದೇ ನಟನೆ ಸಿನಿಮಾ ನೋಡಿ ಕಣ್ಣೀರು ಹಾಕಿದ ನಟಿ ಮೋನಿಷಾ: ವಿಡಿಯೋ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ