AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TRP ಸಮರದಲ್ಲಿ ಅಲ್ಪವಿರಾಮ: ಪ್ರತಿ ವಾರದ ರೇಟಿಂಗ್​ ಸೂಚ್ಯಂಕಕ್ಕೆ ಬ್ರೇಕ್​

ದೆಹಲಿ: TRPಯಿಂದ, TRPಗಾಗಿ, TRPಗೋಸ್ಕರ ಎಂದು 24X7 ನೇರ ಹಣಾಹಣಿಯಲ್ಲಿದ್ದ ಹಲವಾರು ಸುದ್ದಿ ವಾಹಿನಿಗಳ TRP ಸಮರಕ್ಕೆ ಇದೀಗ ತಾತ್ಕಾಲಿಕ ಬ್ರೇಕ್​ ಬಿದ್ದಿದೆ. ಟೆಲಿವಿಷನ್​ ರೇಟಿಂಗ್​ ಪಾಯಿಂಟ್​ ಅಥವಾ ಟಿಆರ್​ಪಿ ಎಂದೇ ಹೆಸರುವಾಸಿಯಾಗಿರುವ ಈ ಸೂಚ್ಯಂಕವನ್ನು ದೇಶದ ಪ್ರತಿ ಭಾಷೆಯ ಸುದ್ದಿವಾಹಿನಿ ಮತ್ತು ಮನರಂಜನಾ ವಾಹಿನಿಗಳಿಗೆ ಪ್ರತಿ ವಾರ ನೀಡಲಾಗುತ್ತಿತ್ತು. ಆದರೆ, ಇದೀಗ TRP ಶ್ರೇಣಿ ನೀಡುತ್ತಿದ್ದ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (BARC) ಇನ್ನು 8 ರಿಂದ 12 ವಾರಗಳ ಕಾಲ ಈ ಸೂಚ್ಯಂಕವನ್ನು ದೇಶದ […]

TRP ಸಮರದಲ್ಲಿ ಅಲ್ಪವಿರಾಮ: ಪ್ರತಿ ವಾರದ ರೇಟಿಂಗ್​ ಸೂಚ್ಯಂಕಕ್ಕೆ ಬ್ರೇಕ್​
KUSHAL V
|

Updated on:Oct 15, 2020 | 6:08 PM

Share

ದೆಹಲಿ: TRPಯಿಂದ, TRPಗಾಗಿ, TRPಗೋಸ್ಕರ ಎಂದು 24X7 ನೇರ ಹಣಾಹಣಿಯಲ್ಲಿದ್ದ ಹಲವಾರು ಸುದ್ದಿ ವಾಹಿನಿಗಳ TRP ಸಮರಕ್ಕೆ ಇದೀಗ ತಾತ್ಕಾಲಿಕ ಬ್ರೇಕ್​ ಬಿದ್ದಿದೆ. ಟೆಲಿವಿಷನ್​ ರೇಟಿಂಗ್​ ಪಾಯಿಂಟ್​ ಅಥವಾ ಟಿಆರ್​ಪಿ ಎಂದೇ ಹೆಸರುವಾಸಿಯಾಗಿರುವ ಈ ಸೂಚ್ಯಂಕವನ್ನು ದೇಶದ ಪ್ರತಿ ಭಾಷೆಯ ಸುದ್ದಿವಾಹಿನಿ ಮತ್ತು ಮನರಂಜನಾ ವಾಹಿನಿಗಳಿಗೆ ಪ್ರತಿ ವಾರ ನೀಡಲಾಗುತ್ತಿತ್ತು.

ಆದರೆ, ಇದೀಗ TRP ಶ್ರೇಣಿ ನೀಡುತ್ತಿದ್ದ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (BARC) ಇನ್ನು 8 ರಿಂದ 12 ವಾರಗಳ ಕಾಲ ಈ ಸೂಚ್ಯಂಕವನ್ನು ದೇಶದ ಎಲ್ಲಾ ಸುದ್ದಿವಾಹಿನಿಗಳಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೆಲವು ದಿನಗಳ ಹಿಂದೆ ಭಾರಿ ವಿವಾದ ಸೃಷ್ಟಿಸಿದ ಟಿಆರ್​ಪಿ ಹಗರಣದ ಹಿನ್ನೆಲೆಯಲ್ಲಿ BARC ಸಂಸ್ಥೆ ಇಂದು ಈ ನಿರ್ಧಾರ ಕೈಗೊಂಡಿದೆ. TRP ಸ್ಥಗಿತಗೊಂಡಿರುವ ಈ ವೇಳೆಯಲ್ಲಿ ಸಂಸ್ಥೆಯು TRP ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸದೃಢಗೊಳಿಸುವತ್ತ ತನ್ನ ಗಮನ ಹರಿಸುತ್ತದೆ ಎಂದು BARC ತಿಳಿಸಿದೆ.

ಜೊತೆಗೆ, ಮತ್ತೆಂದೂ ಈ ರೀತಿಯ ಹಗರಣ ಆಗದಂತೆ ಕ್ರಮ ಕೈಗೊಳ್ಳುತ್ತದೆ ಎಂದೂ ಸಹ ಹೇಳಿದೆ. ಸದ್ಯ ದೇಶದ ಎಲ್ಲಾ ಭಾಷೆಯ ಸುದ್ದಿವಾಹಿನಿಗಳಿಗೆ ಈ ಕ್ರಮ ಅನ್ವಯಿಸುತ್ತದೆ. ಹಾಗಾಗಿ ಸದ್ಯಕ್ಕೆ ಪ್ರತಿ ವಾರದ ರೇಟಿಂಗ್​ ಸೂಚ್ಯಂಕಕ್ಕೆ TRP ಬ್ರೇಕ್​ ಬಿದ್ದಿದೆ. ನ್ಯಾಷನಲ್​ ಬ್ರಾಡ್​ಕಾಸ್ಟರ್ಸ್​ ಅಸೋಸಿಯೇಷನ್​ ಸಂಸ್ಥೆಯು BARC ಈ ನಿರ್ಧಾರವನ್ನು ಸ್ವಾಗತಿಸಿದೆ. ತಾವು ಈ ನಿರ್ಧಾರಕ್ಕೆ ಬದ್ಧರಿದ್ದೇವೆ ಎಂದು ತಿಳಿಸಿದೆ.

Published On - 5:59 pm, Thu, 15 October 20

Follow Us
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ