AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದ್ದಿ ತಾಣವೊಂದರ ವಿರುದ್ಧ 100 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡಿದ ಭಾರತ್ ಬಯೋಟೆಕ್​; ತೆಲಂಗಾಣ ಕೋರ್ಟ್ ಹೇಳಿದ್ದೇನು?

ನಮಗೆ ಬಾರ್ ಆ್ಯಂಡ್ ಬೆಂಚ್​ ವರದಿಯಿಂದಲೇ ಕೋರ್ಟ್ ತೀರ್ಪು ನೀಡಿದ್ದು ಗೊತ್ತಾಯಿತು. ಇದಕ್ಕೂ ಮೊದಲು ನಮಗೆ ಯಾವುದೇ ನೋಟಿಸ್​ ಕೂಡ ನೀಡಿಲ್ಲ ಎಂದು ಸುದ್ದಿ ಮಾಧ್ಯಮ ತಿಳಿಸಿದೆ.

ಸುದ್ದಿ ತಾಣವೊಂದರ ವಿರುದ್ಧ 100 ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡಿದ ಭಾರತ್ ಬಯೋಟೆಕ್​; ತೆಲಂಗಾಣ ಕೋರ್ಟ್ ಹೇಳಿದ್ದೇನು?
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Feb 24, 2022 | 5:57 PM

Share

ದಿ ವೈರ್​ ಸುದ್ದಿ ಮಾಧ್ಯಮದ ಪ್ರಕಾಶಕರು, ಸಂಪಾದಕರು ಮತ್ತು ಅಲ್ಲಿರುವ ಕೆಲವು ಬರಹಗಾರರ ವಿರುದ್ಧ ತೆಲಂಗಾಣ ಕೋರ್ಟ್​​ವೊಂದರಲ್ಲಿ ಭಾರತ್ ಬಯೋಟೆಕ್​​ ಔಷಧೀಯ ಕಂಪನಿ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದೆ. ಭಾರತ್​ ಬಯೋಟೆಕ್​ (Bharat Biotech) ಅಭಿವೃದ್ಧಿ ಪಡಿಸಿದ ಕೊವ್ಯಾಕ್ಸಿನ್​ ಕೊವಿಡ್​ 19 ಲಸಿಕೆ (covaxin)  ಬಗ್ಗೆ ಅವಹೇಳನಕಾರಿ ಸುದ್ದಿಗಳನ್ನು ಬರೆದು, ಪ್ರಕಟಿಸಿದ ಆರೋಪದಡಿ ಈ ಮಾನನಷ್ಟ ಮೊಕದ್ದಮೆಯನ್ನು ಹಾಕಿದ್ದಾಗಿ ಕಂಪನಿ ಹೇಳಿಕೊಂಡಿದೆ. ತೆಲಂಗಾಣದ ರಂಗಾರೆಡ್ಡಿ ಕೋರ್ಟ್​​ನಲ್ಲಿ ಕೇಸ್​ ದಾಖಲಾಗಿದ್ದು, XVI ನೇ ಹೆಚ್ಚುವರಿ ನ್ಯಾಯಾಧೀಶರು ವಿಚಾರಣೆ  ನಡೆಸಿದ್ದು, ಭಾರತ್​ ಬಯೋಟೆಕ್​ ವಿರುದ್ಧ ಪ್ರಕಟಿಸಿದ್ದ 14 ಲೇಖನಗಳನ್ನೂ  ತೆಗೆದುಹಾಕಲು ದಿ ವೈರ್​ ಸುದ್ದಿ ತಾಣಕ್ಕೆ ಸೂಚನೆ ನೀಡಿದ್ದಾರೆ.

ಭಾರತ್​ ಬಯೋಟೆಕ್​ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕೆ.ವಿವೇಕ್​ ರೆಡ್ಡಿ, ದಿ ವೈರ್ ಸುದ್ದಿ ಮಾಧ್ಯಮ ಸರಿಯಾಗಿ ಪರಿಶೀಲನೆ ಮಾಡದೆ, ಸತ್ಯವನ್ನು ಅರ್ಥ ಮಾಡಿಕೊಳ್ಳದೆ ಭಾರತ್​ ಬಯೋಟೆಕ್​ ಮತ್ತು ಕೊವ್ಯಾಕ್ಸಿನ್​ ವಿರುದ್ಧ ವೃಥಾ ಆರೋಪ ಮಾಡಿ ಲೇಖನಗಳನ್ನು ಪ್ರಕಟಿಸಿದೆ. ಇದು ಔಷಧ ಕಂಪನಿಯ ಗೌರವವನ್ನು ಹಾಳು ಮಾಡಿದೆ ಎಂದು ವಾದ ಮಂಡನೆ ಮಾಡಿದ್ದರು.  ಅರ್ಜಿ ಕೂಲಂಕಷವಾಗಿ ವಿಚಾರಣೆ ನಡೆಸಿದ ನ್ಯಾಯಾಧೀಶರು, 14 ಲೇಖನಗಳನ್ನೂ ತತ್​ಕ್ಷಣ ತೆಗೆದುಹಾಕಬೇಕು ಮತ್ತು ಮುಂದಿನ ದಿನಗಳಲ್ಲಿ ಭಾರತ್​ ಬಯೋಟೆಕ್​ ಬಗ್ಗೆಯಾಗಲೀ, ಲಸಿಕೆಯ ಕುರಿತಾಗಲೀ ಯಾವುದೇ ಅವಹೇಳನಕಾರಿ ಲೇಖನಗಳನ್ನು ಪ್ರಕಟಿಸಬಾರದು ಎಂದು ಸೂಚನೆ ನೀಡಿದ್ದಾರೆ ಎಂದು ಬಾರ್ ಆ್ಯಂಡ್ ಬೆಂಚ್​ ವರದಿ ಮಾಡಿದೆ. ಅಂದಹಾಗೇ, ಇದು ಸದ್ಯ ಮಧ್ಯಂತರ ಆದೇಶವಾಗಿದೆ ಎಂದೂ ಹೇಳಲಾಗಿದೆ.

ಭಾರತ್​ ಬಯೋಟೆಕ್​ ಹಾಕಿರುವ ಮಾನನಷ್ಟ ಮೊಕದ್ದಮೆಯಲ್ಲಿ ದಿ ವೈರ್​​ನ ಸಂಪಾದಕರು,  ಆರ್ಟಿಕಲ್​ಗಳನ್ನು ಬರೆದವರ ಹೆಸರೂ ಇದೆ. ತೆಲಂಗಾಣ ಕೋರ್ಟ್​ ಆದೇಶ ಹೊರಡಿಸಿದ ಬೆನ್ನಲ್ಲೇ ದಿ ವೈರ್ ಪ್ರಕಟಣೆ ಬಿಡುಗಡೆ ಮಾಡಿದ್ದು, ನಮಗೆ ಬಾರ್ ಆ್ಯಂಡ್ ಬೆಂಚ್​ ವರದಿಯಿಂದಲೇ ಕೋರ್ಟ್ ತೀರ್ಪು ನೀಡಿದ್ದು ಗೊತ್ತಾಯಿತು. ಇದಕ್ಕೂ ಮೊದಲು ನಮಗೆ ಯಾವುದೇ ನೋಟಿಸ್​ ಕೂಡ ನೀಡಿಲ್ಲ. ಭಾರತ್​ ಬಯೋಟೆಕ್​ ಪರ ವಕೀಲರೂ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ, ಮಾಧ್ಯಮ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ಕೊಟ್ಟಿದೆ. ಹಾಗೇ, ಉಳಿದ ಸುದ್ದಿ ಮಾಧ್ಯಮಗಳಂತೆ ನಾವೂ ಭಾರತ್​ ಬಯೋಟೆಕ್​ ಬಗ್ಗೆ ಹಲವು ಆರ್ಟಿಕಲ್​ಗಳನ್ನು ಪ್ರಕಟಿಸಿದ್ದೆವು. ಆದರೆ ಇದು ಮಾಧ್ಯಮ ಸ್ವಾತಂತ್ರ್ಯ ಹರಣ ಮಾಡಿದಂತೆ ಭಾಸವಾಗುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: ಕರ್ನಾಟಕದ ಮುಖಂಡರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಭೆ, ಸಿದ್ದರಾಮಯ್ಯ ಭಾಗಿ

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು