AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಹಾರ ಮತ್ತು ಜಾರ್ಖಂಡ್ ಸಹೋದರರು’: ಭೋಜ್‌ಪುರಿ ಮತ್ತು ಮಗಾಹಿ ಭಾಷೆಗಳ ಕುರಿತು ಸೊರೆನ್ ಹೇಳಿಕೆಗೆ ನಿತೀಶ್ ಕುಮಾರ್ ಪ್ರತಿಕ್ರಿಯೆ

"ಇಂತಹ ವಿಷಯಗಳನ್ನು ಎಂದಿಗೂ ಯೋಚಿಸಬಾರದು". ಬಿಹಾರ ಮತ್ತು ಜಾರ್ಖಂಡ್ ಸಹೋದರರು, ನಾವು ಒಂದೇ ಕುಟುಂಬಕ್ಕೆ ಸೇರಿದವರು. ಜನರು ಪರಸ್ಪರರ ಬಗ್ಗೆ ಟೀಕೆ ಮಾಡುವ ಅಗತ್ಯವಿಲ್ಲ. ಅವರು ಒಬ್ಬರಿಗೊಬ್ಬರು ಮಾತ್ರ ಪ್ರೀತಿಯನ್ನು ಹೊಂದಿದ್ದಾರೆ ಎಂದಿದ್ದಾರೆ ನಿತೀಶ್ ಕುಮಾರ್.

‘ಬಿಹಾರ ಮತ್ತು ಜಾರ್ಖಂಡ್ ಸಹೋದರರು': ಭೋಜ್‌ಪುರಿ ಮತ್ತು ಮಗಾಹಿ ಭಾಷೆಗಳ ಕುರಿತು ಸೊರೆನ್ ಹೇಳಿಕೆಗೆ ನಿತೀಶ್ ಕುಮಾರ್ ಪ್ರತಿಕ್ರಿಯೆ
ನಿತೀಶ್ ಕುಮಾರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 20, 2021 | 5:02 PM

ದೆಹಲಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಭೋಜ್‌ಪುರಿ ಮತ್ತು ಮಗಾಹಿ ಭಾಷೆಗಳ ಕುರಿತು ಮಾಡಿದ ಹೇಳಿಕೆಗಳು ದೊಡ್ಡ ವಿವಾದವನ್ನು ಹುಟ್ಟುಹಾಕಿದ ಕೆಲವು ದಿನಗಳ ನಂತರ ಬಿಹಾರದ ಮುಖ್ಯಮಂತ್ರಿ  ನಿತೀಶ್ ಕುಮಾರ್ (Nitish Kumar)  ಸೋಮವಾರ ಪ್ರತಿಕ್ರಿಯಿಸಿದ್ದಾರೆ. ಎರಡು ನೆರೆಯ ರಾಜ್ಯಗಳು ಸಹೋದರರು ಎರಡೂ ಕಡೆಯ ಜನರು ಪರಸ್ಪರ ಪ್ರೀತಿಸುತ್ತಾರೆ ಎಂದು ಹೇಳಿದರು.

“2000ದಲ್ಲಿ ಬಿಹಾರವನ್ನು ಎರಡಾಗಿ ವಿಭಜಿಸಲಾಗಿದೆ” ಎಂದು ನಿತೀಶ್ ಕುಮಾರ್ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಜನತಾ ದಳ (ಯುನೈಟೆಡ್) ನಾಯಕ ಬಿಹಾರದ ದಕ್ಷಿಣ ಭಾಗದಿಂದ ಆ ವರ್ಷದ ನವೆಂಬರ್‌ನಲ್ಲಿ ಜಾರ್ಖಂಡ್ ರಚನೆಯನ್ನು ಉಲ್ಲೇಖಿಸಿ ಈ ಮಾತು ಹೇಳಿದ್ದಾರೆ. “ಎರಡೂ ರಾಜ್ಯಗಳ ಜನರು ಪರಸ್ಪರ ಪ್ರೀತಿಸುತ್ತಾರೆ. ಜನರು ರಾಜಕೀಯವಾಗಿ ಏನು ಹೇಳುತ್ತಾರೆಂದು ನನಗೆ ಗೊತ್ತಿಲ್ಲ. ಜಾರ್ಖಂಡ್ ನಮ್ಮಿಂದ ಬೇರ್ಪಟ್ಟಿದ್ದರೂ, ನಮಗೆ ಅವರ ಮೇಲೆ ಮಾತ್ರ ಪ್ರೀತಿ ಇದೆ.

“ಇಂತಹ ವಿಷಯಗಳನ್ನು ಎಂದಿಗೂ ಯೋಚಿಸಬಾರದು”. ಬಿಹಾರ ಮತ್ತು ಜಾರ್ಖಂಡ್ ಸಹೋದರರು, ನಾವು ಒಂದೇ ಕುಟುಂಬಕ್ಕೆ ಸೇರಿದವರು. ಜನರು ಪರಸ್ಪರರ ಬಗ್ಗೆ ಟೀಕೆ ಮಾಡುವ ಅಗತ್ಯವಿಲ್ಲ. ಅವರು ಒಬ್ಬರಿಗೊಬ್ಬರು ಮಾತ್ರ ಪ್ರೀತಿಯನ್ನು ಹೊಂದಿದ್ದಾರೆ ಎಂದಿದ್ದಾರೆ ನಿತೀಶ್ ಕುಮಾರ್.

ಇತ್ತೀಚಿನ ಸಂದರ್ಶನವೊಂದರಲ್ಲಿ ಸೊರೆನ್ ಭೋಜ್‌ಪುರಿ ಮತ್ತು ಮಗಾಹಿಗಳನ್ನು “ಬಿಹಾರದಿಂದ ಆಮದು ಮಾಡಿಕೊಳ್ಳಲಾಗಿದೆ” ಎಂದು ಹೇಳಿದ್ದರು. ಜಾರ್ಖಂಡ್‌ಗೆ ಪ್ರತ್ಯೇಕ ರಾಜ್ಯವನ್ನು ಕೋರಿ ಚಳುವಳಿಯ ಸಮಯದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಜನರು “ಭೋಜ್‌ಪುರಿಯಲ್ಲಿ ಕೆಟ್ಟದಾಗಿ ಬಯ್ಯುತ್ತಿದ್ದರು” ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಳಿದ್ದರು.

ಬಿಹಾರದಲ್ಲಿ ಎರಡು ಭಾಷೆಗಳನ್ನು ವ್ಯಾಪಕವಾಗಿ ಮಾತನಾಡಲಾಗುತ್ತದೆಯಾದರೂ, ಇವುಗಳನ್ನು ಅದರ ದಕ್ಷಿಣದ ಪ್ರಾಂತ್ಯದಲ್ಲಿಯೂ ಬಳಸಲಾಗುತ್ತದೆ.

ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಿರುವ ಮತ್ತು ಜಾರ್ಖಂಡ್ ನಲ್ಲಿ  ವಿರೋಧ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೊರೆನ್ ಅವರನ್ನು ಟೀಕಿಸಿತ್ತು. ಅವರು ಘರ್ಷಣೆಯನ್ನು ಸೃಷ್ಟಿಸಲು ಮತ್ತು ಭಾಷೆಯ ಆಧಾರದ ಮೇಲೆ ಜನರನ್ನು ಧ್ರುವೀಕರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಆಡಳಿತಾರೂಢ ಜೆಎಂಎಂ, ಸಿಎಂ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದೆ.

ಇದನ್ನೂ ಓದಿ:ಪಂಜಾಬ್​ ನೂತನ ಮುಖ್ಯಮಂತ್ರಿಗೆ ಪ್ರಧಾನಿ ಅಭಿನಂದನೆ; ಜನರ ಒಳಿತು ನಮ್ಮ ಆದ್ಯತೆಯಾಗಲಿ ಎಂದ ಮೋದಿ

ಇದನ್ನೂ ಓದಿ: Video: ರಷ್ಯಾದ ಯೂನಿವರ್ಸಿಟಿಯಲ್ಲಿ ಗುಂಡಿನ ದಾಳಿಗೆ 8 ಜನ ಸಾವು; ಕಿಟಕಿಯಿಂದ ಜಿಗಿದು ಓಡಿದ ವಿದ್ಯಾರ್ಥಿಗಳು

(Bihar and Jharkhand are brothers Bihar CM Nitish Kumar responds to Hemant Soren’s remarks on Bhojpuri and Magahi languages)

ಬೆಂಗಳೂರಿನಲ್ಲಿ ಇಂದು ಒಂದೇ ದಿನದಲ್ಲಿ 103 ಬೈಕ್​ ಟ್ಯಾಕ್ಸಿ ಸೀಜ್!
ಬೆಂಗಳೂರಿನಲ್ಲಿ ಇಂದು ಒಂದೇ ದಿನದಲ್ಲಿ 103 ಬೈಕ್​ ಟ್ಯಾಕ್ಸಿ ಸೀಜ್!
ಕಾಂತಾರ ತಂಡದ ಯಾರಿಗೂ ಗಾಯ ಆಗಿಲ್ಲ: ಶಿವಮೊಗ್ಗ ಜಿಲ್ಲಾಧಿಕಾರಿ ಸ್ಪಷ್ಟನೆ
ಕಾಂತಾರ ತಂಡದ ಯಾರಿಗೂ ಗಾಯ ಆಗಿಲ್ಲ: ಶಿವಮೊಗ್ಗ ಜಿಲ್ಲಾಧಿಕಾರಿ ಸ್ಪಷ್ಟನೆ
ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ
ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ
ಧುಮ್ಮುಕ್ಕುತ್ತಿರುವ ವಿಶ್ವ ವಿಖ್ಯಾತ ಜಲಪಾತ, ಜೋಗದ ಸಿರಿಯ ನಯನ ಮನೋಹರ ದೃಶ್ಯ
ಧುಮ್ಮುಕ್ಕುತ್ತಿರುವ ವಿಶ್ವ ವಿಖ್ಯಾತ ಜಲಪಾತ, ಜೋಗದ ಸಿರಿಯ ನಯನ ಮನೋಹರ ದೃಶ್ಯ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು