AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದ ಮುಂದಿನ ಸಿಎಂ ನಿತೀಶ್ ಕುಮಾರ್ ಅಲ್ಲವಾ? ಬಿಜೆಪಿಯ ಸಾಮ್ರಾಟ್ ಚೌಧರಿ ಮುಖ್ಯಮಂತ್ರಿ ಆಗ್ತಾರಾ?

Who will be the next Bihar Chief Minister, speculations started in the political corridor: ಬಿಹಾರ ಚುನಾವಣೆಯಲ್ಲಿ ಆರ್​ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ನೆಲಕಚ್ಚಿದೆ. ಬಿಜೆಪಿ, ಜೆಡಿಯು ನೇತೃತ್ವದ ಎನ್​ಡಿಎ ಭರ್ಜರಿ ಗೆಲುವು ಪಡೆದಿದೆ. ಬಿಜೆಪಿ ಬಿಹಾರದಲ್ಲಿ ಮೊದಲ ಬಾರಿಗೆ ಅತಿಹೆಚ್ಚು ಸ್ಥಾನ ಗೆದ್ದ ಪಕ್ಷ ಎನಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸಿಎಂ ಅಭ್ಯರ್ಥಿ ಬಂದರೂ ಬರಬಹುದು. ಜೆಡಿಯು ಪಕ್ಷ ಪೋಸ್ಟ್ ಮಾಡಿದ ಒಂದು ಟ್ವೀಟ್ ಡಿಲೀಟ್ ಆಗಿರುವುದೂ ಕೂಡ ಈ ವದಂತಿಯನ್ನು ಬಲಪಡಿಸುತ್ತದೆ.

ಬಿಹಾರದ ಮುಂದಿನ ಸಿಎಂ ನಿತೀಶ್ ಕುಮಾರ್ ಅಲ್ಲವಾ? ಬಿಜೆಪಿಯ ಸಾಮ್ರಾಟ್ ಚೌಧರಿ ಮುಖ್ಯಮಂತ್ರಿ ಆಗ್ತಾರಾ?
ಸಾಮ್ರಾಟ್ ಚೌಧರಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 14, 2025 | 5:15 PM

Share

ಪಟ್ನಾ, ನವೆಂಬರ್ 14: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar assembly elections) ಎನ್​ಡಿಎ ಮೈತ್ರಿಕೂಟ 243 ಸ್ಥಾನಗಳ ಪೈಕಿ 200ರ ಗಡಿ ದಾಟಿದೆ. ಬಿಜೆಪಿ ಇದೇ ಮೊದಲ ಬಾರಿಗೆ ಈ ರಾಜ್ಯದಲ್ಲಿ ಇತರ ಪಕ್ಷಗಳಿಗಿಂತ ಹೆಚ್ಚು ಸೀಟು ಜಯಿಸಿದೆ. ಎನ್​ಡಿಎ ನಿಚ್ಚಳ ಬಹುಮತ ಬರುತ್ತಿದ್ದಂತೆಯೇ ಮುಂದಿನ ಸಿಎಂ ಯಾರು ಎನ್ನುವ ಸಹಜ ಪ್ರಶ್ನೆ ಎದುರಾಗಿದೆ. ಬರೋಬ್ಬರಿ 9 ಬಾರಿ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ (Nitish Kumar) ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಬಿಜೆಪಿ ಅತಿಹೆಚ್ಚು ಸ್ಥಾನ ಪಡೆದ ಹಿನ್ನೆಲೆಯಲ್ಲಿ ಕೇಸರಿಪಾಳಯದಿಂದಲೇ ಒಬ್ಬರು ಸಿಎಂ ಆಗಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.

ಮಹಾರಾಷ್ಟ್ರದಲ್ಲಿಯೂ ಇಂಥದ್ದೇ ಪರಿಸ್ಥಿತಿ ಇತ್ತು. ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟದ ಹಿಂದಿನ ಸರ್ಕಾರದಲ್ಲಿ ಶಿವಸೇನೆ ಹೆಚ್ಚು ಸ್ಥಾನ ಗಳಿಸಿತ್ತು. ಏಕನಾಥ್ ಶಿಂಧೆ ಸಿಎಂ ಆದರು. 2024ರಲ್ಲಿ ನಡೆದ ಚುನಾವಣೆಯಲ್ಲಿ ಶಿವಸೇನೆಗಿಂತ ಬಿಜೆಪಿ ಹೆಚ್ಚು ಸ್ಥಾನ ಗಳಿಸಿತು. ಶಿಂಧೆಯವರೇ ಸಿಎಂ ಆಗಿ ಮುಂದುವರಿಯಬಹುದು ಎಂದು ಎಲ್ಲರೂ ಎಣಿಸುತ್ತಿರುವಂತೆಯೇ ಬಿಜೆಪಿಯ ದೇವೇಂದ್ರ ಫಡಣವಿಸ್ ಅವರನ್ನು ಸಿಎಂ ಮಾಡಲಾಯಿತು. ಅಂಥದ್ದೇ ತಂತ್ರವನ್ನು ಬಿಹಾರದಲ್ಲೂ ಬಿಜೆಪಿ ಮಾಡುತ್ತಾ ಎಂಬುದು ಸ್ಪಷ್ಟ ಇಲ್ಲ.

ಬಿಜೆಪಿಯಿಂದ ಸಾಮ್ರಾಟ್ ಚೌಧರಿ ಸಿಎಂ?

ಬಿಹಾರದಲ್ಲಿ ಬಿಜೆಪಿಯವರೇ ಸಿಎಂ ಆಗುವುದಾದರೆ, ಹಿಂದಿನ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಸಾಮ್ರಾಟ್ ಚೌಧರಿ ಹೆಸರು ಮುಂಚೂಣಿಗೆ ಬರುತ್ತದೆ. ಚೌಧರಿ ಅವರು ಅಪಾರ ಸಂಘಟನಾ ಚಾತುರ್ಯ ಹೊಂದಿದ್ದು, ಸಾಕಷ್ಟು ರಾಜಕೀಯ ಅನುಭವ ಗಳಿಸಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ ನಿಮೋ ಮೋಡಿ; ಫಲಿತಾಂಶಕ್ಕೂ ಮೊದಲೇ ಗೆಲುವಿನ ನಗು ಬೀರಿದ ನಿತೀಶ್-ಮೋದಿ ಜೋಡಿ

ಆದರೆ, 20 ವರ್ಷ ಕಾಲ 9 ಬಾರಿ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಅವರನ್ನು ಹಿಂದಿಕ್ಕಿ ಬಿಜೆಪಿ ಸಿಎಂ ಸ್ಥಾನ ಗಿಟ್ಟಿಸುವುದು ಕಷ್ಟದ ಕೆಲಸ. ಆದರೆ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಜೆಡಿಯು ಪಕ್ಷದ ಎಕ್ಸ್ ಅಕೌಂಟ್​ನಲ್ಲಿ ಇವತ್ತು ಅಪ್​ಲೋಡ್ ಆಗಿದ್ದ ಒಂದು ಪೋಸ್ಟ್ ಡಿಲೀಟ್ ಆಗಿರುವುದು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಡಿಲೀಟ್ ಮಾಡಲಾದ ಪೋಸ್ಟ್​ನಲ್ಲಿ ಏನಿತ್ತು?

ಎನ್​ಡಿಎ ಮೈತ್ರಿಕೂಟ ಭರ್ಜರಿ ಬಹುಮತ ಗಳಿಸುವುದು ಖಚಿತವಾದೊಡನೆ ಜೆಡಿಯು, ‘ಹಿಂದೆಂದೂ ಕಂಡು ಕೇಳರಿಯದಂಥ ಗೆಲುವು. ನಿತೀಶ್ ಕುಮಾರ್ ಹಿಂದೆಯೂ ಮುಖ್ಯಮಂತ್ರಿ, ಮುಂದೆಯೂ ಮುಖ್ಯಮಂತ್ರಿ’ ಎಂದು ಎಕ್ಸ್​ನಲ್ಲಿ ಪೋಸ್ಟ್ ಹಾಕಿತ್ತು. ಅದಾಗಿ ಕೆಲ ನಿಮಿಷಗಳಲ್ಲಿ ಪೋಸ್ಟ್ ಡಿಲೀಟ್ ಆಗಿತ್ತು.

ಹೀಗಾಗಿ, ನಿತೀಶ್ ಕುಮಾರ್ ಅವರು ಸಿಎಂ ಆಗಿ ಮುಂದುವರಿಯದೇ ಇರಬಹುದು. ಬಿಜೆಪಿ ಅಗ್ರಮಾನ್ಯ ಪಕ್ಷವಾದ್ದರಿಂದ ಸಿಎಂ ಸ್ಥಾನ ಕೂಡ ಆ ಪಕ್ಷಕ್ಕೇ ಹೋಗಬಹುದು ಎನ್ನುವ ವದಂತಿ ಹಬ್ಬುತ್ತಿದೆ. ಬಹಳ ಅನಿರೀಕ್ಷಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಖ್ಯಾತರಾಗಿರುವ ನಿತೀಶ್ ಕುಮಾರ್ ಅವರನ್ನು ಸಿಎಂ ಸ್ಥಾನಕ್ಕಾಗಿ ಎದುರಾಕಿಕೊಳ್ಳುವುದು ಬಿಜೆಪಿಗೆ ಸಾಧ್ಯವಾಗುತ್ತದಾ?

ಇದನ್ನೂ ಓದಿ: ಆರ್ಥಿಕತೆಯ ಉಸಿರುಗಟ್ಟಿಸುವ ಉಚಿತ ಕೊಡುಗೆಗಳು; ಕರ್ನಾಟಕದಂಥ ಕರ್ನಾಟಕವೇ ಥರಗುಟ್ಟುತ್ತಿರುವಾಗ ಬಿಹಾರ ನಿಲ್ಲಬಲ್ಲುದಾ?

ಬಿಹಾರ ಚುನಾವಣೆ: ಇಲ್ಲಿಯವರೆಗಿನ ಫಲಿತಾಂಶ

ಒಟ್ಟು ಸ್ಥಾನ: 243

ಬಹುಮತಕ್ಕೆ ಬೇಕಿರುವುದು: 122 ಸ್ಥಾನ

  • ಎನ್​ಡಿಎ (ಬಿಜೆಪಿ, ಜೆಡಿಯು, ಎಲ್​ಜೆಪಿ +): 204
  • ಎಂಜಿಬಿ (ಕಾಂಗ್ರೆಸ್, ಆರ್​ಜೆಡಿ +): 34
  • ಇತರರು: 5

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ