AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಕತೀಯ ವಿಶ್ವವಿದ್ಯಾಲಯ: ಅಮವಾಸ್ಯೆ, ಹುಣ್ಣಿಮೆಗೆ ವಿಶ್ವವಿದ್ಯಾಲಯದಲ್ಲಿ ಕೋಳಿ-ಮೇಕೆ ಬಲಿ, ಕ್ಯಾಂಪಸ್​​ನಲ್ಲಿ ಮನೆ ಮಾಡಿದೆ ಭೀತಿಯ ವಾತಾವರಣ

Kakatiya University: ವಾರಂಗಲ್ ಜಿಲ್ಲೆಯಲ್ಲಿರುವ ಕಾಕತೀಯ ವಿಶ್ವವಿದ್ಯಾನಿಲಯದಲ್ಲಿ ಜನವಸತಿ ಇಲ್ಲದ ಪ್ರದೇಶಗಳು ಅತೀಂದ್ರಿಯ ಪೂಜೆಗೆ ಅಡ್ಡೆಯಾಗಿವೆ. ಇತ್ತೀಚಿಗೆ ಬೆಳಕಿಗೆ ಬರುತ್ತಿರುವ ಸರಣಿ ಘಟನೆಗಳು ಒಂದೆಡೆ ವಿದ್ಯಾರ್ಥಿಗಳನ್ನು ಮತ್ತೊಂದೆಡೆ ಸುತ್ತಮುತ್ತಲಿನ ಜನತೆಗೆ ತೊಂದರೆ ನೀಡುತ್ತಿವೆ. ಹಾಗಾದರೆ.. ವಿಶ್ವವಿದ್ಯಾನಿಲಯದ ಆಸುಪಾಸಿನಲ್ಲಿ ಕ್ಷುದ್ರ ಪೂಜೆ ಮಾಡುತ್ತಿರುವವರು ಯಾರು?.. ವಿಶ್ವವಿದ್ಯಾಲಯದ ಸ್ಥಿತಿ ವಿವಾದವೇಕೆ? ಇದು ಈಗ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

ಕಾಕತೀಯ ವಿಶ್ವವಿದ್ಯಾಲಯ: ಅಮವಾಸ್ಯೆ, ಹುಣ್ಣಿಮೆಗೆ ವಿಶ್ವವಿದ್ಯಾಲಯದಲ್ಲಿ ಕೋಳಿ-ಮೇಕೆ ಬಲಿ, ಕ್ಯಾಂಪಸ್​​ನಲ್ಲಿ ಮನೆ ಮಾಡಿದೆ ಭೀತಿಯ ವಾತಾವರಣ
ಕಾಕತೀಯ ವಿಶ್ವವಿದ್ಯಾಲಯ: ಅಮಾವಾಸ್ಯೆ, ಹುಣ್ಣಿಮೆಗೆ ವಿಶ್ವವಿದ್ಯಾಲಯದಲ್ಲಿ ಕೋಳಿ-ಮೇಕೆ ಬಲಿ
Follow us
ಸಾಧು ಶ್ರೀನಾಥ್​
|

Updated on: Oct 02, 2023 | 3:34 PM

ತೆಲಂಗಾಣದ ಉಸ್ಮಾನಿಯಾ ನಂತರ ಕಾಕತೀಯ ವಿಶ್ವವಿದ್ಯಾಲಯ (Kakatiya University) ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯ.. ಆದರೆ ಇತ್ತೀಚಿನ ದಿನಗಳಲ್ಲಿ ವಾರಂಗಲ್ ಜಿಲ್ಲೆಯ (Warangal District) ಕಾಕತೀಯ ವಿಶ್ವವಿದ್ಯಾಲಯ ಕೆಲವು ಅಕ್ರಮಗಳಿಗೆ ಅಡ್ಡಿಯಾಗಿದೆ. ಕಾಕತೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಸಾಮಾಜಿಕ ಚಟುವಟಿಕೆಗಳು ಮತ್ತು ಕ್ಷುದ್ರ ಪೂಜೆಗಳಿಂದ ತತ್ತರಿಸಿದ್ದಾರೆ. ಅದಕ್ಕೆ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿರುವ ಸರಣಿ ಘಟನೆಗಳೇ ಸಾಕ್ಷಿ ಎನ್ನಬಹುದು. ಯಾರು ಮಾಡಿದ್ದಾರೋ ಗೊತ್ತಿಲ್ಲ ಆದರೆ ಇಲ್ಲಿ ಜರುಗುತ್ತಿರುವ ಕ್ಷುದ್ರ ಪೂಜೆಗಳು (Black Magic, superstition) ಸಂಚಲನ ಮೂಡಿಸುತ್ತಿವೆ. ಇತ್ತೀಚೆಗೆ ಪ್ರತಾಪ ರುದ್ರ ಹಾಸ್ಟೆಲ್ ಬಳಿ ಕ್ಷುದ್ರ ಪೂಜೆ ನಡೆದ ಕುರುಹುಗಳ ಕಂಡು ವಿದ್ಯಾರ್ಥಿಗಳು ಬೆಚ್ಚಿಬಿದ್ದರು.

ಕ್ಷುದ್ರ ಪೂಜೆ ನಡೆದ ಜಾಗದಲ್ಲಿ ಕುರಿ ಕೋಳಿ, ಮೇಕೆ ಬಲಿ ನೀಡಲಾಗಿದೆ.. ನಿಂಬೆಹಣ್ಣು, ಕುಂಬಳಕಾಯಿ ಹಾಕಿ ತಾಂತ್ರಿಕ ಪೂಜೆ.. ಪೂಜೆ ನಡೆದ ಜಾಗದಲ್ಲಿ ವೈರಿ ಆಕೃತಿ ಹಾಗೂ ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಕಾಕತೀಯ ವಿಶ್ವವಿದ್ಯಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿತ್ಯವೂ ಮಂತ್ರವಾದಿಗಳಿಂದ ಪೂಜೆಗಳು ನಡೆಯುತ್ತಿವೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಇದನ್ನೂ ಓದಿ: ಜೈಲಿನಲ್ಲಿ ಚಂದ್ರಬಾಬು ನಾಯ್ಡು ದೀಕ್ಷೆ ಮುಂದುವರಿಕೆ, ಗಾಂಧಿ ಜಯಂತಿ ದಿನ ಟಿಡಿಪಿ ಪದಾಧಿಕಾರಿಗಳ ಸತ್ಯಮೇವ ಜಯತೆ ತಾರಕಕ್ಕೆ

ಆದರೆ, ಕ್ಷುದ್ರ ಪೂಜೆ ನಡೆಯುತ್ತಿದ್ದ ಜಾಗದಲ್ಲಿ ಪೊಲೀಸರಿಗೆ ಬೈಕ್ ಸಿಕ್ಕಿದೆ. ಆ ಬೈಕ್ ಆಧರಿಸಿ, ಎನ್‌ಪಿಡಿಸಿಎಲ್‌ನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ ಭಾಗಿಯಾಗಿದ್ದಾರೆ ಎಂದು ಅನುಮಾನಿಸಲಾಗಿದೆ. ವಿಶ್ವವಿದ್ಯಾನಿಲಯದ ಆವರಣದಲ್ಲಿ ಕ್ಷುದ್ರ ಶಾಸ್ತ್ರದ ಪೂಜೆ ಏಕೆ ನಡೆಯಿತು. ಅತೀಂದ್ರಿಯ ಪೂಜೆಗೆ ಗುರಿಯಾದವರು ಯಾರು ಎಂಬ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.

ಒಟ್ಟಿನಲ್ಲಿ ವಿಶ್ವವಿದ್ಯಾಲಯದಲ್ಲಿ ಸೂಕ್ತ ಭದ್ರತೆಯ ಕೊರತೆ ಹಾಗೂ ಭದ್ರತೆಯ ವೈಫಲ್ಯ ಎದ್ದು ಕಾಣುತ್ತಿದೆ. ಕ್ಯಾಂಪಸ್ ನಲ್ಲಿ ಕ್ಷುದ್ರ ಪೂಜೆ ನಡೆಯುತ್ತಿದ್ದರೆ ಭದ್ರತಾ ವ್ಯವಸ್ಥೆ ಏನು ಮಾಡುತ್ತಿದೆ ಎಂಬ ಪ್ರಶ್ನೆಗಳು ಎದ್ದಿವೆ. ಕೆಲ ದಿನಗಳಿಂದ ಲಕ್ಷಗಟ್ಟಲೆ ಜನರಿಗೆ ಪಾಠ ಮಾಡಿದ ವಿವಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಅವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ