AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದಾನಿ ಗ್ರೂಪ್ ವಿರುದ್ಧ ಇಡಿಗೆ ದೂರು ಸಲ್ಲಿಸುವುದನ್ನು ಪೊಲೀಸ್ ತಡೆದ ನಂತರ ಪತ್ರವನ್ನು ಇಮೇಲ್ ಮಾಡಿದ ಮಲ್ಲಿಕಾರ್ಜುನ ಖರ್ಗೆ

ಮೆರವಣಿಗೆಯ ನೇತೃತ್ವ ವಹಿಸಿದ್ದ ಖರ್ಗೆ ಮಾತನಾಡಿ, ಅದಾನಿ ಪ್ರಕರಣದ ತನಿಖೆಗೆ ಒತ್ತಾಯಿಸಲು ಸರ್ಕಾರ ಬಯಸದ ಕಾರಣ ಪೊಲೀಸರು ಇಡಿ ಕಚೇರಿಗೆ ಹೋಗಲು ಬಿಡಲಿಲ್ಲ ಎಂದಿದ್ದಾರೆ. ಈ ವಿಷಯದ ಬಗ್ಗೆ ತಮ್ಮ ಕಾರ್ಯತಂತ್ರವನ್ನು ಸಂಘಟಿಸಲು ವಿರೋಧ ಪಕ್ಷದ ನಾಯಕರು ಈ ಹಿಂದೆ ಖರ್ಗೆ ಅವರ ಕಚೇರಿಯಲ್ಲಿ ಸಭೆ ಸೇರಿದ್ದರು.

ಅದಾನಿ ಗ್ರೂಪ್ ವಿರುದ್ಧ ಇಡಿಗೆ ದೂರು ಸಲ್ಲಿಸುವುದನ್ನು ಪೊಲೀಸ್ ತಡೆದ ನಂತರ ಪತ್ರವನ್ನು ಇಮೇಲ್ ಮಾಡಿದ ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Follow us
ರಶ್ಮಿ ಕಲ್ಲಕಟ್ಟ
|

Updated on:Mar 15, 2023 | 6:32 PM

ಅದಾನಿ ಗ್ರೂಪ್  ವಂಚನೆ ಆರೋಪ ಬಗ್ಗೆ ತಕ್ಷಣವೇ ಕ್ರಮಕೈಗೊಳ್ಳುವಂತೆ ಕೋರಿ  16 ವಿರೋಧ ಪಕ್ಷಗಳ ನಾಯಕರು ಫೆಡರಲ್ ಏಜೆನ್ಸಿಗೆ ನೇರ ಹೋಗಿ ದೂರು ಸಲ್ಲಿಸುವುದನ್ನು ತಡೆದ ನಂತರ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬುಧವಾರ ಜಾರಿ ನಿರ್ದೇಶನಾಲಯಕ್ಕೆ (ED) ಇಮೇಲ್ ಕಳುಹಿಸಿದ್ದಾರೆ. ಪತ್ರವನ್ನು ಸಲ್ಲಿಸಲು ಸಂಸತ್ತಿನ ಸಂಕೀರ್ಣದಿಂದ ಇಡಿ ಕಚೇರಿಗೆ ನಾಯಕರು ಮೆರವಣಿಗೆ ಮಾಡುವುದನ್ನು ತಡೆಯಲು ಪೊಲೀಸರು ಹೆಚ್ಚುವರಿ ಪಡೆಗಳನ್ನು ನಿಯೋಜಿಸಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144 ಅನ್ನು ಸಹ ಸಂಕೀರ್ಣದ ಸುತ್ತಲೂ ವಿಧಿಸಲಾಗಿದ್ದು, ಇದು ನಾಲ್ಕು ಜನರ ಸಭೆಯನ್ನು ನಿರ್ಬಂಧಿಸುತ್ತದೆ.

ಮೆರವಣಿಗೆಯ ನೇತೃತ್ವ ವಹಿಸಿದ್ದ ಖರ್ಗೆ ಮಾತನಾಡಿ, ಅದಾನಿ ಪ್ರಕರಣದ ತನಿಖೆಗೆ ಒತ್ತಾಯಿಸಲು ಸರ್ಕಾರ ಬಯಸದ ಕಾರಣ ಪೊಲೀಸರು ಇಡಿ ಕಚೇರಿಗೆ ಹೋಗಲು ಬಿಡಲಿಲ್ಲ ಎಂದಿದ್ದಾರೆ. ಈ ವಿಷಯದ ಬಗ್ಗೆ ತಮ್ಮ ಕಾರ್ಯತಂತ್ರವನ್ನು ಸಂಘಟಿಸಲು ವಿರೋಧ ಪಕ್ಷದ ನಾಯಕರು ಈ ಹಿಂದೆ ಖರ್ಗೆ ಅವರ ಕಚೇರಿಯಲ್ಲಿ ಸಭೆ ಸೇರಿದ್ದರು.

ಅದಾನಿ ಗ್ರೂಪ್‌  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (ಎಲ್‌ಐಸಿ)ಯಲ್ಲಿಯೂ ಹೂಡಿಕೆ ಮಾಡಿದ್ದು, ಆರೋಪದ ಬಗ್ಗೆ ತನಿಖೆಗೆ ಒತ್ತಾಯಿಸಿ ವಿಪಕ್ಷಗಳು ಸರ್ಕಾರವನ್ನು ಮೂಲೆಗುಂಪು ಮಾಡಿವೆ. ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ವಿಪಕ್ಷ ಒತ್ತಾಯಿಸಿದೆ.

ಈ ಆರೋಪಗಳನ್ನು ಗೌತಮ್ ಅದಾನಿ ನೇತೃತ್ವದ ಗುಂಪು ನಿರಾಕರಿಸಿದ ನಂತರವೂ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶಕ್ಕೆ ವಿಪಕ್ಷ ಅಡ್ಡಿಪಡಿಸಿದೆ.

ಇಡಿಗೆ ಬರೆದ ಪತ್ರದಲ್ಲಿ ವಿರೋಧ ಪಕ್ಷಗಳು ಈ ವಿಷಯದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದವು, ಇದು ಭಾರತದ ಆರ್ಥಿಕತೆಗೆ ಮಾತ್ರವಲ್ಲದೆ ಮುಖ್ಯವಾಗಿ ಪ್ರಜಾಪ್ರಭುತ್ವಕ್ಕೆ ಗಂಭೀರ ಪರಿಣಾಮಗಳನ್ನು ಬೀರುತ್ತಲೆ. ಈ ಪ್ರಕರಣವು ಕಾರ್ಪೊರೇಟ್ ವಂಚನೆ, ರಾಜಕೀಯ ಭ್ರಷ್ಟಾಚಾರ, ಮೋಸದ ವಿಧಾನಗಳ ಮೂಲಕ ಸ್ಟಾಕ್  ಬೆಲೆ ವಂಚನೆ ಗಂಭೀರ ಆರೋಪಗಳನ್ನು ಒಳಗೊಂಡಿದೆ.ಒಂದೇ ಕಾರ್ಪೊರೇಟ್ ಗುಂಪಿಗೆ ಲಾಭವಾಗುವಂತೆ ಸಾರ್ವಜನಿಕ ಸಂಪನ್ಮೂಲಗಳ ದುರುಪಯೋಗ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕಡಲಾಚೆಯ ಶೆಲ್ ಕಂಪನಿಗಳು ಮತ್ತು ನಿಧಿಗಳೊಂದಿಗೆ ಗುಂಪಿನ ಲಿಂಕ್‌ಗಳ ಆರೋಪಗಳನ್ನು ನಿರ್ದಿಷ್ಟವಾಗಿ ಪರಿಶೀಲಿಸುವಂತೆ ವಿಪಕ್ಷ ಇಡಿ ಒತ್ತಾಯಿಸಿದೆ. ಇದು ಸಾರ್ವಜನಿಕ ಡೊಮೇನ್‌ನಲ್ಲಿನ ಡೇಟಾವನ್ನು ಉಲ್ಲೇಖಿಸಿದೆ. ಈ ಗುಂಪು ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅಥವಾ ನಿಕಟ ಸಹವರ್ತಿಗಳ ಮೂಲಕ ಮತ್ತು ಸೈಪ್ರಸ್, ಯುಎಇ, ಸಿಂಗಾಪುರ್ ಮತ್ತು ಕೆರಿಬಿಯನ್ ದ್ವೀಪಗಳಲ್ಲಿನ ಇತರ ಘಟಕಗಳ ಮೂಲಕ 38 ಮಾರಿಷಸ್ ಶೆಲ್ ಘಟಕಗಳನ್ನು ನಿಯಂತ್ರಿಸಿದೆ ಎಂದು ಆರೋಪಿಸಿದೆ.

ಈ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವಲ್ಲಿ ವಿನೋದ್ ಅದಾನಿ ಮತ್ತು ಅವರ ಸಹಚರರು “ನಿರ್ಣಾಯಕ” ಎಂದು ಪತ್ರದಲ್ಲಿ ತಿಳಿಸಲಾಗಿದೆ. “ಅಂತಹ ಲಿಂಕ್ ಅನ್ನು ಬಹಿರಂಗಪಡಿಸುವ ವ್ಯವಹಾರಗಳ ವಿವರವಾದ ಸ್ವರೂಪವು ಈಗ ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿದೆ.”

ಕನಿಷ್ಠ ಶೇ 25 ಉಚಿತ ಫ್ಲೋಟ್ ಅಥವಾ ಸಾರ್ವಜನಿಕವಾಗಿ ವ್ಯಾಪಾರ ಮಾಡಬಹುದಾದ ಕಂಪನಿಯ ಷೇರುಗಳನ್ನು ಪ್ರಚಾರಕರಲ್ಲದ ಘಟಕಗಳು ಹೊಂದಿರುವ ಮೂಲಭೂತ ನಿಯಮವನ್ನು ಉಲ್ಲಂಘಿಸುವುದರಿಂದ ಈ ಕ್ರಮಗಳು ಸಹ ಕಾನೂನುಬಾಹಿರವೆಂದು ಪತ್ರದಲ್ಲಿ ತಿಳಿಸಲಾಗಿದೆ.

ಇದು AdiCorp ಎಂಬ ಕಂಪನಿಗೆ ಸಾಲ ನೀಡುವ ಗುಂಪಿನ ಆರೋಪಗಳನ್ನು ಉಲ್ಲೇಖಿಸಿದೆ. ಹಣವನ್ನು ಮತ್ತಷ್ಟು ಅದಾನಿ ಪವರ್‌ಗೆ ಹರಿಸಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಇದು “ರಾಜಕೀಯ ಒಲವು” ಮತ್ತು 3000 ಕೆಜಿ ಮುಂದ್ರಾ ಪೋರ್ಟ್ ಡ್ರಗ್ ದಾಳಿ ಗುಂಪಿನೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿರುವ ಹಲವಾರು ಉನ್ನತ-ಪ್ರೊಫೈಲ್ ಪ್ರಕರಣಗಳನ್ನು ಕಡೆಗಣಿಸಿದ್ದಕ್ಕೆ ಇಡಿಯನ್ನು ದೂಷಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:34 pm, Wed, 15 March 23

ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್