AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುರೋಪ್​ನಲ್ಲಿ ಕಾಂಗ್ರೆಸ್ ಘಟಕಗಳಿಗೆ ಅಧ್ಯಕ್ಷರ ಆಯ್ಕೆ; ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದವರಲ್ಲಿದ್ದಾರೆ ಬಿಯರ್ ಉದ್ಯಮಿಗಳು, ವಿಜ್ಞಾನಿಗಳು

Country Presidents: ಚಕ್ರ ಬಿಯರ್ ಬ್ರಾಂಡ್‌ನ ಮಾಲೀಕರಾದ ಗ್ಯಾರಿಸೋಬರ್ ಸಿಂಗ್ ಗಿಲ್, ನಾರ್ವೆಯ ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಒಸಿ) ಯ ಹೊಸ ಕಂಟ್ರಿ ಪ್ರೆಸಿಡೆಂಟ್ ಆಗಿದ್ದಾರೆ. ಚಕ್ರ ಬಿಯರ್ ವೆಬ್‌ಸೈಟ್‌ನ ಪ್ರಕಾರ, 2006 ರಲ್ಲಿ ಗಿಲ್ ಪ್ರಾರಂಭಿಸಿದ ಬ್ರ್ಯಾಂಡ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ‘ಮೊದಲ ಪಂಜಾಬಿ ಬ್ರೂವರೀಸ್ ಬ್ರಾಂಡ್’ ಆಗಿತ್ತು.

ಯುರೋಪ್​ನಲ್ಲಿ ಕಾಂಗ್ರೆಸ್ ಘಟಕಗಳಿಗೆ ಅಧ್ಯಕ್ಷರ ಆಯ್ಕೆ; ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದವರಲ್ಲಿದ್ದಾರೆ ಬಿಯರ್ ಉದ್ಯಮಿಗಳು, ವಿಜ್ಞಾನಿಗಳು
ಸ್ಯಾಮ್ ಪಿತ್ರೊಡಾ
TV9 Web
| Edited By: |

Updated on: Jul 11, 2021 | 4:37 PM

Share

ದೆಹಲಿ: ರಾಹುಲ್ ಗಾಂಧಿ ಅಧಿಕಾರದಿಂದ ಕೆಳಗಿಳಿದ ನಂತರ ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಪಕ್ಷವನ್ನು ನಡೆಸಲು ಪೂರ್ಣ ಸಮಯದ ಅಧ್ಯಕ್ಷರನ್ನು ಹುಡುಕಲು ಕಾಂಗ್ರೆಸ್​​ಗೆ ಸಾಧ್ಯವಾಗದೇ ಇರಬಹುದು. ಆದರೆ ಇದು ಕೇವಲ ಯುರೋಪಿನಾದ್ಯಂತದ “ಕಂಟ್ರಿ ಪ್ರೆಸಿಡೆಂಟ್ಸ್” ನೇಮಕಾತಿಗಳನ್ನು ಕಾಂಗ್ರೆಸ್ ಪೂರ್ಣಗೊಳಿಸಿದೆ. ಜಗತ್ತಿನಾದ್ಯಂತ ತಮ್ಮ ವಿಚಾರಧಾರೆಯನ್ನು ಪಸರಿಸಲು ಬಿಯರ್ ಉದ್ಯಮಿಗಳಿಂದ ಹಿಡಿದು ವಿಜ್ಞಾನಿಗಳನ್ನು ಕಾಂಗ್ರೆಸ್ ತಮ್ಮ ಘಟಕದ ಅಧ್ಯಕ್ಷರನ್ನಾಗಿ ಮಾಡಿದೆ.

ಈ ವಾರದ ಆರಂಭದಲ್ಲಿ ಟೆಕ್ನೋಕ್ರಾಟ್-ರಾಜಕಾರಣಿ ಸ್ಯಾಮ್ ಪಿತ್ರೊಡಾ ನೇತೃತ್ವದ ಸಾಗರೋತ್ತರ ಕಾಂಗ್ರೆಸ್ ಇಲಾಖೆಯು ಎಲ್ಲಾ ಭಾರತೀಯ ಮೂಲದ ನೇಮಕಾತಿಗಳನ್ನು ಘೋಷಿಸಿದೆ ಎಂದುದಿ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ.

ಚಕ್ರ ಬಿಯರ್ ಬ್ರಾಂಡ್‌ನ ಮಾಲೀಕರಾದ ಗ್ಯಾರಿಸೋಬರ್ ಸಿಂಗ್ ಗಿಲ್, ನಾರ್ವೆಯ ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಒಸಿ) ಯ ಹೊಸ ಕಂಟ್ರಿ ಪ್ರೆಸಿಡೆಂಟ್ ಆಗಿದ್ದಾರೆ. ಚಕ್ರ ಬಿಯರ್ ವೆಬ್‌ಸೈಟ್‌ನ ಪ್ರಕಾರ, 2006 ರಲ್ಲಿ ಗಿಲ್ ಪ್ರಾರಂಭಿಸಿದ ಬ್ರ್ಯಾಂಡ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ‘ಮೊದಲ ಪಂಜಾಬಿ ಬ್ರೂವರೀಸ್ ಬ್ರಾಂಡ್’ ಆಗಿತ್ತು.

ಭಾರತದ ಮಾಜಿ ರಾಷ್ಟ್ರಮಟ್ಟದ ಫುಟ್ಬಾಲ್ ಆಟಗಾರ ಅವರ ಅಪ್ಪ ಗುರ್ಮೇಲ್ ಗಿಲ್ ಯುರೋಪಿನಲ್ಲಿ ಐಒಸಿಯ ಸ್ಥಾಪಕರಾಗಿದ್ದರು ಮತ್ತು ಪಕ್ಷವು ನಾರ್ವೆಯಲ್ಲಿ ಉತ್ತಮ ಅಸ್ತಿತ್ವವನ್ನು ಹೊಂದಿದೆ ಎಂದು ಗಿಲ್ ಹೇಳಿದ್ದಾರೆ. “ನನ್ನ ತಂದೆ ಜೀವನದುದ್ದಕ್ಕೂ ಕಾಂಗ್ರೆಸ್‌ನಲ್ಲಿದ್ದರು. ಈಗ ನಾನು ಅಧಿಕಾರ ವಹಿಸಿಕೊಂಡಿದ್ದೇನೆ. ಹೂಡಿಕೆ, ಕೈಗಾರಿಕೆಗಳನ್ನು ಭಾರತಕ್ಕೆ ತರುವುದು ಇದರ ಉದ್ದೇಶ ”ಎಂದು ಅವರು ಹೇಳಿದರು.

ರಾಜಕೀಯಕ್ಕೆ ಯಾಕೆ ಬಂದಿದ್ದೀರಿ ಎಂದು ಕೇಳಿದಾಗ ನನ್ನ ದೇಶದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು ಎಂದು ಅವರು ಹೇಳಿದರು.

ಫಿನ್‌ಲ್ಯಾಂಡ್‌ಗೆ ಸಂಬಂಧಿಸಿದಂತೆ, ಕಾಂಗ್ರೆಸ್  35 ವರ್ಷದ ವಿಜ್ಞಾನಿ ಕೋಮಲ್ ಕುಮಾರ್ ಜವರಪ್ಪ ಅವರನ್ನು ಆಯ್ಕೆ ಮಾಡಿದೆ. ಇವರು ರಕ್ತ ಕ್ಯಾನ್ಸರ್ ಕ್ಷೇತ್ರದಲ್ಲಿ ಕೆಲಸ ಮಾಡುವ ಆಣ್ವಿಕ ಜೀವಶಾಸ್ತ್ರಜ್ಞರಾಗಿದ್ದು ಕೋಪನ್ ಹ್ಯಾಗನ್‌ನ ಪ್ರಸಿದ್ಧ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಐಒಸಿಯನ್ನು ಫಿನ್‌ಲ್ಯಾಂಡ್‌ನಲ್ಲಿ ಇತ್ತೀಚೆಗೆ ಸ್ಥಾಪಿಸಲಾಯಿತು ಎಂದು ಮೈಸೂರು ಮೂಲದ ಜವರಪ್ಪ ಹೇಳಿದ್ದು,ಅವರು ಅದರ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದಾರೆ ಎಂದಿದ್ದಾರೆ. ಅವರು ಪಿತ್ರೊಡಾಗೆ ಪಕ್ಷಕ್ಕೆ ನಾನು ಸೇರಲು ನನ್ನ ಆಸಕ್ತಿಯನ್ನು ವ್ಯಕ್ತಪಡಿಸಿ ನಾನು ಪಿತ್ರೊಡಾಗೆ ಇಮೇಲ್ ಬರೆದಿದ್ದೆ. ಅವರು ನನಗೆ ಸಲಹೆ ನೀಡಿದರು ಎಂದಿದ್ದಾರೆ ಜವರಪ್ಪ.

“ನಾನು ವಿಜ್ಞಾನಿಯಾಗಿ ವಿವಿಧ ದೇಶಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ಭಾರತವನ್ನು ನೋಡಿದಾಗ… ವಿಜ್ಞಾನ ಕ್ಷೇತ್ರ, ವಿಶೇಷವಾಗಿ ಆರೋಗ್ಯ ನಮಗೆ ಉತ್ತಮ ಸಂಶೋಧನೆ ಇಲ್ಲ ಎಂದು ನಾನು ಭಾವಿಸುತ್ತೇನೆ. ನನ್ನಂತಹ ವಿಜ್ಞಾನಿಗಳು ಈ ರೀತಿಯ ಕೆಲಸಗಳಲ್ಲಿ ಭಾಗಿಯಾಗಬೇಕು. ಭವಿಷ್ಯದಲ್ಲಿ ಭಾರತಕ್ಕೆ ಹಿಂತಿರುಗಿ ನನ್ನ ದೇಶಕ್ಕೆ ಏನಾದರೂ ಒಳ್ಳೆಯದನ್ನು ಮಾಡುವುದು ನನ್ನ ಆಲೋಚನೆ. ಕಾಂಗ್ರೆಸ್ಸಿನ ಸಿದ್ಧಾಂತವು ನನ್ನನ್ನು ಆಕರ್ಷಿಸಿತು ಮತ್ತು ಪ್ರೇರೇಪಿಸಿತು ಎಂದು ಜವರಪ್ಪ ಹೇಳಿದ್ದಾರೆ.

ದಿಲ್ಬಾಗ್ ಚನ್ನಾ (ಇಟಲಿ), ಜಾಯ್ ಕೊಚಟ್ಟು (ಸ್ವಿಟ್ಜರ್ಲೆಂಡ್), ಸೋನಿಯಾ ಹೆಲ್ಡ್ ಸ್ಟೆಡ್ (ಸ್ವೀಡನ್), ಸುನಿಲ್ ಕೋರಾ (ಆಸ್ಟ್ರಿಯಾ), ಸುಖೀವನ್ ಪ್ರೀತ್ ಸಿಂಗ್ (ಬೆಲ್ಜಿಯಂ), ಹರ್ಪಿಂದರ್ ಸಿಂಗ್ ಘಾಗ್ (ಹಾಲೆಂಡ್), ಮತ್ತು ಅಮರ್ಜಿತ್ ಸಿಂಗ್ (ಪೋಲೆಂಡ್) -ಇತರ ದೇಶಗಳಲ್ಲಿ ನೇಮಕವಾದವರು.

ಯುರೋಪಿನ ಐಒಸಿ ಕನ್ವೀನರ್ ರಾಜ್ವಿಂದರ್ ಸಿಂಗ್, ಈ ಸಂಘಟನೆ 23 ಯುರೋಪಿಯನ್ ದೇಶಗಳಲ್ಲಿ ಅಸ್ತಿತ್ವವಿದೆ. ಇದು ಬ್ರಿಟನ್ ನಲ್ಲಿ ಅತ್ಯಂತ ಪ್ರಬಲವಾಗಿದೆ. ದೇಶದ ಅಧ್ಯಕ್ಷರಾಗಿ ನೇಮಕಗೊಂಡವರಲ್ಲಿ ಹೆಚ್ಚಿನವರು ಉದ್ಯಮಿಗಳು, ವೃತ್ತಿಪರರು ಮತ್ತು ಶೈಕ್ಷಣಿಕ ಕ್ಷೇತ್ರದವರು ಎಂದು ಅವರು ಹೇಳಿದರು. ಸಿಂಗ್ ಸ್ವತಃ ಹೋಟೆಲ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿದ್ದಾರೆ.

ಚನ್ನಾ ಅವರು ವಲಸೆ ಸಲಹೆಗಾರರಾಗಿದ್ದಾರೆ. ಅವರು ಹೆಲ್ಡ್‌ಸ್ಟೆಡ್ ಸ್ಟಾಕ್‌ಹೋಮ್‌ನ ಆಸ್ಪತ್ರೆಯಲ್ಲಿ ಎಚ್‌ಆರ್ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಾರೆ. ಸುಖೀವನ್ ಅವರು ಭಾರತದ ಆಹಾರ ವ್ಯಾಪಾರಿ ಮತ್ತು ವಿತರಕರಾಗಿದ್ದಾರೆ.  ಘಾಗ್ ಸಾರಿಗೆಯಲ್ಲಿದ್ದಾರೆ, ಕೊಚಟ್ಟು ವಿಶ್ವ ಮಲಯಾಳಿ ಕೌನ್ಸಿಲ್​​ನೊಂದಿಗೆ ಒಬ್ಬ ಉದ್ಯಮಿ ಕೂಡಾ. ಅಮರ್ಜಿತ್ ಹಣಕಾಸು ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ ಮತ್ತು ಕೋರಾಹ್ ಐಟಿ ತಜ್ಞ ಎಂದು ಸಿಂಗ್ ಹೇಳಿದ್ದಾರೆ.

ಮ್ಯೂನಿಚ್‌ನಲ್ಲಿ ಕೆಲಸ ಮಾಡುವ ಮತ್ತು ಶಶಿ ತರೂರ್ ನೇತೃತ್ವದ ಅಖಿಲ ಭಾರತ ವೃತ್ತಿಪರ ಕಾಂಗ್ರೆಸ್‌ನ ಚಟುವಟಿಕೆಗಳನ್ನು ಮುನ್ನಡೆಸುತ್ತಿರುವ ಕೃಷಿ ವಿಜ್ಞಾನಿ ರಾಹುಲ್ ಪತಿನೆಟ್ಟಿಲ್ ರಾಜ್, ಕಾಂಗ್ರೆಸ್ ವಿಚಾರಧಾರೆ ಹರಡಲು ಮತ್ತು ವೃತ್ತಿಪರರನ್ನು ಆಕರ್ಷಿಸಲು ಯುರೋಪಿನಾದ್ಯಂತ ಭಾರತದಿಂದ ವೃತ್ತಿಪರರೊಂದಿಗೆ ಐಒಸಿ ಸಹಕರಿಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಕಾರ್ಯಕರ್ತನ ಮೇಲೆ ಡಿಕೆಶಿ ಹಲ್ಲೆ; ಕಾಂಗ್ರೆಸ್ಸಿಗರ ಸಂಸ್ಕೃತಿ ಏನೆಂಬುದು ಇದರಿಂದ ತಿಳಿಯುತ್ತೆ ಎಂದ ನಳಿನ್ ಕುಮಾರ್ ಕಟೀಲು

(Congress appointments Country Presidents across Europe to spread its ideology far and wide on foreign shores)

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?