AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​​ಗೆ​​ ರಾಹುಲ್ ಗಾಂಧಿ ಭೇಟಿ: ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಪ್ರಾರ್ಥನೆ

ರಾಹುಲ್ ಗಾಂಧಿಯವರು ಅಮೃತಸರ ಸಾಹಿಬ್‌ಗೆ ಸಚ್‌ಖಂಡ್ ಶ್ರೀ ಹರ್ಮಂದಿರ್ ಸಾಹಿಬ್‌ಗೆ ಪೂಜೆ ಸಲ್ಲಿಸಲು ಬರುತ್ತಿದ್ದಾರೆ. ಇದು ಅವರ ವೈಯಕ್ತಿಕ, ಆಧ್ಯಾತ್ಮಿಕ ಭೇಟಿಯಾಗಿದೆ, ಅವರ ಖಾಸಗಿತನವನ್ನು ಗೌರವಿಸೋಣ. ಈ ಭೇಟಿಗೆ ಎಲ್ಲಾ ಪಕ್ಷದ ಕಾರ್ಯಕರ್ತರು ಖುದ್ದಾಗಿ ಹಾಜರಾಗದಂತೆ ವಿನಂತಿಸಿ. ನೀವೆಲ್ಲರೂ ನಿಮ್ಮ ಬೆಂಬಲವನ್ನು ತೋರಿಸಬಹುದು. ಮುಂದಿನ ಬಾರಿ ಉತ್ಸಾಹದಿಂದ ಅವರನ್ನು ಭೇಟಿ ಮಾಡಿ" ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪಂಜಾಬ್​​ಗೆ​​ ರಾಹುಲ್ ಗಾಂಧಿ ಭೇಟಿ: ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಪ್ರಾರ್ಥನೆ
ರಾಹುಲ್ ಗಾಂಧಿ
ರಶ್ಮಿ ಕಲ್ಲಕಟ್ಟ
|

Updated on:Oct 02, 2023 | 2:41 PM

Share

ಅಮೃತಸರ ಅಕ್ಟೋಬರ್ 02: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೋಮವಾರ ಪಂಜಾಬ್​​ಗೆ (Punjab) ಭೇಟಿ ನೀಡಿದ್ದು, ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ (Golden Temple) ಪ್ರಾರ್ಥನೆ ಸಲ್ಲಿಸಿದ್ದು ಸಚ್‌ಖಂಡ್ ಶ್ರೀ ಹರ್ಮಂದಿರ್ ಸಾಹಿಬ್‌ನಲ್ಲಿ ಸ್ವಯಂಸೇವಕ ಸೇವೆಯಲ್ಲಿ ಭಾಗವಹಿಸಿದ್ದಾರೆ. ಇಂದು ಬೆಳಗ್ಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ರಾಜಾ ವಾರಿಂಗ್ ಅವರು ರಾಹುಲ್ ಗಾಂಧಿ ತಮ್ಮ ವೈಯಕ್ತಿಕ, ಆಧ್ಯಾತ್ಮಿಕ ಭೇಟಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿಯವರು ಅಮೃತಸರ ಸಾಹಿಬ್‌ಗೆ ಸಚ್‌ಖಂಡ್ ಶ್ರೀ ಹರ್ಮಂದಿರ್ ಸಾಹಿಬ್‌ಗೆ ಪೂಜೆ ಸಲ್ಲಿಸಲು ಬರುತ್ತಿದ್ದಾರೆ. ಇದು ಅವರ ವೈಯಕ್ತಿಕ, ಆಧ್ಯಾತ್ಮಿಕ ಭೇಟಿಯಾಗಿದೆ, ಅವರ ಖಾಸಗಿತನವನ್ನು ಗೌರವಿಸೋಣ. ಈ ಭೇಟಿಗೆ ಎಲ್ಲಾ ಪಕ್ಷದ ಕಾರ್ಯಕರ್ತರು ಖುದ್ದಾಗಿ ಹಾಜರಾಗದಂತೆ ವಿನಂತಿಸಿ. ನೀವೆಲ್ಲರೂ ನಿಮ್ಮ ಬೆಂಬಲವನ್ನು ತೋರಿಸಬಹುದು. ಮುಂದಿನ ಬಾರಿ ಉತ್ಸಾಹದಿಂದ ಅವರನ್ನು ಭೇಟಿ ಮಾಡಿ” ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

2015 ರ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಬಂಧಿಸಿದ ನಂತರ ರಾಹುಲ್ ಗಾಂಧಿ ಪಂಜಾಬ್‌ಗೆ ಭೇಟಿ ನೀಡಿದ್ದಾರೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಕೋರ್ಟ್ ಶನಿವಾರ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಪೊಲೀಸರು 7 ದಿನಗಳ ಬಂಧನಕ್ಕೆ ಒತ್ತಾಯಿಸಿದರು. ಪೊಲೀಸರ ಸಾಕ್ಷ್ಯವನ್ನು ನೋಡಿದ ನಂತರ ನ್ಯಾಯಾಧೀಶರು ಅವರ ಮನವಿಯನ್ನು ತಿರಸ್ಕರಿಸಿದರು. ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು ಎಂದು ವಕೀಲರು ಹೇಳಿದ್ದಾರೆ.

2015 ರಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ದಾಖಲಾಗಿರುವ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಖೈರಾ ಅವರನ್ನು ಚಂಡೀಗಢದ ನಿವಾಸದಿಂದ ಗುರುವಾರ ಬೆಳಿಗ್ಗೆ ಬಂಧಿಸಲಾಯಿತು. ಖೈರಾ ಬಂಧನಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪರಸ್ಪರ ವಾಕ್ಸಮರ ನಡೆಸಿದೆ.

ಇದನ್ನೂ ಓದಿ: 5 ವರ್ಷಗಳಲ್ಲಿ ಕಾಂಗ್ರೆಸ್ ರಾಜಸ್ಥಾನದ ಗುರುತನ್ನು ನಾಶಪಡಿಸಿದೆ: ಪ್ರಧಾನಿ ನರೇಂದ್ರ ಮೋದಿ 

ಕಾಂಗ್ರೆಸ್ ಇದನ್ನು ಎಎಪಿಯ ಸೇಡಿನ ರಾಜಕೀಯ ಎಂದು ಕರೆಯುತ್ತಿದ್ದು, ಆಡಳಿತ ಪಕ್ಷ ಎಎಪಿ ಮಾದಕ ದ್ರವ್ಯಗಳ ವಿರುದ್ಧದ ಅವರ “ಶೂನ್ಯ-ಸಹಿಷ್ಣು ನೀತಿ”ಯ ಭಾಗವೇ ಈ ಬಂಧನ ಎಂದು ಹೇಳಿದೆ. 2015 ರಲ್ಲಿ, ಪಂಜಾಬ್‌ನ ಫಾಜಿಲ್ಕಾದಲ್ಲಿ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಪತ್ತೆಹಚ್ಚುವುದರೊಂದಿಗೆ ಎರಡು ಪ್ರಕರಣಗಳು ಹುಟ್ಟಿಕೊಂಡಿವೆ. ಇದು ಹೆರಾಯಿನ್, ಚಿನ್ನದ ಬಿಸ್ಕತ್ತುಗಳು, ಶಸ್ತ್ರಾಸ್ತ್ರಗಳು, ಕಾರ್ಟ್ರಿಡ್ಜ್‌ಗಳು ಮತ್ತು ಪಾಕಿಸ್ತಾನಿ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲು ಕಾರಣವಾಯಿತು .

ಫೆಬ್ರವರಿ 16, 2023 ರಂದು, ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ವಿಕ್ರಮ್ ನಾಥ್ ಅವರ ಸುಪ್ರೀಂ ಕೋರ್ಟ್ ಪೀಠವು ಡ್ರಗ್ಸ್ ಪ್ರಕರಣದಲ್ಲಿ ಖೈರಾ ವಿರುದ್ಧದ ಸಮನ್ಸ್ ಆದೇಶವನ್ನು ರದ್ದುಗೊಳಿಸಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Mon, 2 October 23