Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನೋ ಹೇಳಿದ ಎಂದು ಮಾರ್ಕೆಟ್​​ನಲ್ಲಿ ಅಪ್ರಾಪ್ತನಿಗೆ ಒದ್ದು, ಕಪಾಳಕ್ಕೆ ಹೊಡೆದ ಪೊಲೀಸ್​; ಮರುಕ್ಷಣವೇ ಅಮಾನತು

ಅಪ್ರಾಪ್ತನಿಗೆ ಹೊಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಪೊಲೀಸ್​ ಅಧಿಕಾರಿ ವಿರುದ್ಧ ದೂರು ದಾಖಲಾಗಿತ್ತು. ಇದು ಅನುಚಿತ ವರ್ತನೆ ಎಂದು ಪರಿಗಣಿಸಿದ ಪೊಲೀಸ್​ ಉಪ ಆಯುಕ್ತರು ಶಕ್ತಿಸಿಂಹ್​ ಪರ್ವರನ್ನು ಅಮಾನತು ಮಾಡಿದ್ದಾರೆ.

ಏನೋ ಹೇಳಿದ ಎಂದು ಮಾರ್ಕೆಟ್​​ನಲ್ಲಿ ಅಪ್ರಾಪ್ತನಿಗೆ ಒದ್ದು, ಕಪಾಳಕ್ಕೆ ಹೊಡೆದ ಪೊಲೀಸ್​; ಮರುಕ್ಷಣವೇ ಅಮಾನತು
ಮಾರ್ಕೆಟ್​​ನಲ್ಲಿ ಅಪ್ರಾಪ್ತನಿಗೆ ಹೊಡೆದ ಪೊಲೀಸ್​
Follow us
TV9 Web
| Updated By: Lakshmi Hegde

Updated on: Apr 04, 2022 | 9:48 AM

ಗುಜರಾತ್​​ನ ವಡೋದರಾ (Gujarat) ಮಾರುಕಟ್ಟೆಯಲ್ಲಿ ಪೊಲೀಸ್​ ಸಿಬ್ಬಂದಿಯೊಬ್ಬ 13 ವರ್ಷದ ಬಾಲಕನಿಗೆ ಬೆನ್ನಿಗೆ ಒದ್ದು, ಕಪಾಳಕ್ಕೆ ಹೊಡೆದಿದ್ದಾರೆ. ಎರಡು ಮೂರು ಸಲ ಬಾಲಕನ ಮೇಲೆ ಕೈ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಪೊಲೀಸ್​ ಅಧಿಕಾರಿ ಅಮಾನತುಗೊಂಡಿದ್ದಾರೆ.  ಇದು ವಡೋದರಾದ ನಂದೇಸಾರಿ ಮಾರುಕಟ್ಟಯಲ್ಲಿ ಶನಿವಾರ ರಾತ್ರಿ ಸುಮಾರು 8.45ರ ಹೊತ್ತಿಗೆ ನಡೆದ ಘಟನೆ.  ಪೊಲೀಸ್​ ಸಿಬ್ಬಂದಿಯನ್ನು ಶಕ್ತಿಸಿಂಹ್​ ಪರ್ವಾ ಎಂದು ಗುರುತಿಸಲಾಗಿದ್ದು, ಇವರು ಛನ್ನಿ ಪೊಲೀಸ್​ ಠಾಣೆಯ ಕಂಟ್ರೋಲ್​ ರೂಂನಲ್ಲಿ ಕರ್ತವ್ಯದಲ್ಲಿದ್ದಾರೆ.

ಪೊಲೀಸ್ ಅಧಿಕಾರಿ ಶಕ್ತಿಸಿಂಹ್​ ಪರ್ವ ತಮ್ಮ ವಾಹನದಲ್ಲಿ  ಇನ್ನೊಂದು ಪೊಲೀಸ್ ಸ್ಟೇಶನ್​ಗೆ ಹೋಗಿ ವಾಪಸ್​ ಬರುತ್ತಿದ್ದರು. ಮಾರುಕಟ್ಟೆ ಬಳಿ ಬರುತ್ತಿದ್ದಾಗ ಈ ಹುಡುಗ ಏನೋ ಹೇಳುತ್ತಿದ್ದ. ತನ್ನನ್ನು ನೋಡಿಯೇ ಆತ ಅದೇನೋ ತಮಾಷೆ ಮಾಡುತ್ತಿದ್ದಾನೆ ಎಂದು ಭಾವಿಸಿದ ಶಕ್ತಿಸಿಂಹ್​ ಪರ್ವ, ವಾಹನದಿಂದ ಇಳಿದುಬಂದರು. ಪೊಲೀಸ್​​​ ಅಧಿಕಾರಿಯನ್ನು ನೋಡಿ ಬಾಲಕ ಓಡಿ ಹೋಗಿ ಅದ್ಯಾವುದೋ ಅಂಗಡಿಯಲ್ಲಿ ಸೇರಿಕೊಂಡಿದ್ದ. ಆದರೆ ಬೆನ್ನಟ್ಟಿ ಹೋದ ಪರ್ವ ಅವನನ್ನು ಅಲ್ಲಿಂದ ಹೊರಗೆ ಒದೆಯುತ್ತಲೇ ಕರೆದುಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ, ಕಪಾಳಕ್ಕೆ ಎರಡು ಏಟು ಹೊಡೆದಿದ್ದಾರೆ. ಬಳಿಯೇ ಅಲ್ಲಿದ್ದ ಕೆಲವರು ಬಂದು ಪೊಲೀಸ್ ಬಳಿ ವಿಚಾರಿಸಿದ್ದಾರೆ. ಇವೆಲ್ಲವೂ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಪ್ರಾಪ್ತನಿಗೆ ಹೊಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಪೊಲೀಸ್​ ಅಧಿಕಾರಿ ವಿರುದ್ಧ ದೂರು ದಾಖಲಾಗಿತ್ತು. ಇದು ಅನುಚಿತ ವರ್ತನೆ ಎಂದು ಪರಿಗಣಿಸಿದ ಪೊಲೀಸ್​ ಉಪ ಆಯುಕ್ತರು ಶಕ್ತಿಸಿಂಹ್​ ಪರ್ವರನ್ನು ಅಮಾನತು ಮಾಡಿದ್ದಾರೆ. ಇಂಥ ಅನುಚಿತ ವರ್ತನೆಯನ್ನು ಯಾರೇ ತೋರಿಸಿದರೂ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಶಕ್ತಿಸಿಂಹ ಪರ್ವನನ್ನು ಅಮಾನತು ಮಾಡಲಾಗಿದ್ದು, ವಿಚಾರಣೆ ನಡೆಸಲಾಗುತ್ತದೆ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: IPL 2022: ಪಾಯಿಂಟ್ ಟೇಬಲ್​ನಲ್ಲಿ ಯಾರು ಟಾಪರ್?: ಆರೆಂಜ್-ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಯಾರಿದ್ದಾರೆ?

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು