AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾವೈರಸ್ ದೇವರ ಸೂಪರ್​​ಕಂಪ್ಯೂಟರ್​​​ನಲ್ಲಿ ಸೃಷ್ಟಿಯಾಗಿದೆ ಎಂದರು ಆಸ್ಸಾಮಿನ ಬಹುಖಾತೆಗಳ ಸಚಿವ ಚಂದ್ರಮೋಹನ್ ಪಟೊವರಿ!

ಕೊವಿಡ್-19 ಪಿಡುಗಿನ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ವಿಜ್ಞಾನಿಗಳು ಔಷಧಿ ಕಂಡುಹಿಡಿಯಲು ವಿಫಲರಾಗಿದ್ದಾರೆ. ಹಾಗಾಗಿ, ಪ್ರಕೃತಿ ಮನುಕುಲದ ವಿರುದ್ಧ ಸಮರ ಸಾರಿದೆ ಎಂದು ಸಚಿವರು ಹೇಳಿದರು.

ಕೊರೊನಾವೈರಸ್ ದೇವರ ಸೂಪರ್​​ಕಂಪ್ಯೂಟರ್​​​ನಲ್ಲಿ ಸೃಷ್ಟಿಯಾಗಿದೆ ಎಂದರು ಆಸ್ಸಾಮಿನ ಬಹುಖಾತೆಗಳ ಸಚಿವ ಚಂದ್ರಮೋಹನ್ ಪಟೊವರಿ!
ಚಂದ್ರಮೋಹನ್ ಪಟೊವರಿ
TV9 Web
| Edited By: |

Updated on: Aug 28, 2021 | 1:33 AM

Share

ಗುವಹಾಟಿ: ಅಸ್ಸಾಮಿನ ಸಚಿವರೊಬ್ಬರ ಪ್ರಕಾರ ಕೊರೋನಾವೈರಸ್ ದೇವರ ಸೂಪರ್ಕಂಪ್ಯೂಟರ್ನಲ್ಲಿ ಸೃಷ್ಟಿಯಾಗಿದ್ದು ಯಾರಿಗೆ ಸೋಂಕು ತಾಕಿಸಬೇಕು ಯಾರನ್ನು ಬಲಿತೆಗೆದುಕೊಳ್ಳಬೇಕು ಅಂತ ಅದೇ ನಿರ್ಧರಿಸುತ್ತದಂತೆ! ಅಂದಹಾಗೆ, ಈ ಮಹಾನುಭಾವ ಸಚಿವರ ಹೆಸರು ಚಂದ್ರಮೋಹನ್ ಪಟೊವರಿ. ಗುವಹಾಟಿಯ ಅಮೀನ್ಗಾಂವ್​ನಲ್ಲಿ ಬುಧವಾರದಂದು ಕೋವಿಡ್-19 ಸೋಂಕಿನಿಂದ ಪತಿಯರನ್ನು ಕಳೆದುಕೊಂದ ಮಹಿಳೆಯರಿಗೆ ರಾಜ್ಯ ಸರ್ಕಾರದ ಯೋಜನೆಯೊಂದರಡಿ ಹಣಕಾಸಿನ ನೆರವನ್ನು ವಿತರಿಸುವಾಗ ಸಚಿವರು ಈ ಅಣಿಮುತ್ತುಗಳನ್ನು ಉದುರಿಸಿದರು.

‘ಯಾರಿಗೆ ಸೋಂಕು ತಾಕಬೇಕು, ಯಾರಿಗೆ ತಾಕಬಾರದು, ಯಾರನ್ನು ಭೂಮಿಯಿಂದ ಎತ್ತಿಕೊಂಡು ಹೋಗಬೇಕು ಅನ್ನೋದನ್ನೆಲ್ಲ ಪ್ರಕೃತಿ ನಿರ್ಧರಿಸುತ್ತದೆ. ಇದು ಮಾನವಕೃತವಲ್ಲ, ದೇವರ ಬಳಿಯಿರುವ ಸೂಪರ್ಕಂಪ್ಯೂಟರ್ ಇದನ್ನೆಲ್ಲ ನಿರ್ವಹಿಸುತ್ತದೆ. ಭೂಮಿಯ ಮೇಲಿರುವ ಶೇಕಡಾ 2 ರಷ್ಟು ಜನಗಳನ್ನು ಬಲಿ ತೆಗೆದುಕೊಳ್ಳಲು ಕಂಪ್ಯೂಟರ್ ಕೋವಿಡ್-19 ವೈರಸ್ ಅನ್ನು ಕಳಿಸಿದೆ,’ ಎಂದು ಅಸ್ಸಾಮಿನ ಸಾರಿಗೆ, ಕೈಗಾರಿಕೆ ಮತ್ತು ವಾಣಿಜ್ಯ, ಌಕ್ಟ್ ಈಸ್ಟ್ ಆಫ್ ಪಾಲಿಸಿ ಆಫೇರ್ಸ್, ಕೌಶಲ್ಯಾಭಿವೃದ್ಧಿ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಖಾತೆಗಳ ಸಚಿವರಾಗಿರುವ ಪಟೊವರಿ ಹೇಳಿದರು.

ಕೊವಿಡ್-19 ಪಿಡುಗಿನ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ವಿಜ್ಞಾನಿಗಳು ಔಷಧಿ ಕಂಡುಹಿಡಿಯಲು ವಿಫಲರಾಗಿದ್ದಾರೆ. ಹಾಗಾಗಿ, ಪ್ರಕೃತಿ ಮನುಕುಲದ ವಿರುದ್ಧ ಸಮರ ಸಾರಿದೆ ಎಂದು ಸಚಿವರು ಹೇಳಿದರು.

‘ಕೊವಿಡ್-19 ಬಗ್ಗೆ ಜಗತ್ತಿಗೆಲ್ಲ ಉಪದೇಶ ಸಾರಿದ ವಿಜ್ಞಾನಿಗಳು ಎಲ್ಲಿದ್ದಾರೆ? ಪಿಡುಗನ್ನು ನಿರ್ಮೂಲ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಲಸಿಕೆ ತೆಗೆದುಕೊಂಡ ನಂತರವೂ ಜನ ಸಾಯುತ್ತಿದ್ದಾರೆ. ಕೇವಲ ಪ್ರಕೃತಿಗೆ ಮಾತ್ರ ಈ ಸೋಂಕಿನ ಮೇಲೆ ನಿಯಂತ್ರಣ ಸಾಧಿಸುವುದು ಸಾಧ್ಯ. ನಾವು ನಿಸರ್ಗದ ವಿರುದ್ಧ ಯುದ್ಧ ನಡೆಸಿದೆವು, ಈಗ ಅದು ನಮ್ಮ ವಿರುದ್ಧ ಸಮರ ಘೋಷಿಸಿದೆ,’ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಅಸ್ಸಾಂನಲ್ಲಿ ಇನ್ಮುಂದೆ ಹಿಂದು ಧಾರ್ಮಿಕ ಪ್ರದೇಶಗಳ 5 ಕಿ.ಮೀ.ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ, ಖರೀದಿ ಮಾಡುವಂತಿಲ್ಲ

Follow Us
ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?
ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ
ಆನೇಕಲ್: ರೈಲು ಹಳಿಯ ಮೇಲೆಯೇ ಕೆಟ್ಟು ನಿಂತ BMTC ಬಸ್, ಆಮೇಲೇನಾಯ್ತು ನೋಡಿ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ