AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾವೈರಸ್ ದೇವರ ಸೂಪರ್​​ಕಂಪ್ಯೂಟರ್​​​ನಲ್ಲಿ ಸೃಷ್ಟಿಯಾಗಿದೆ ಎಂದರು ಆಸ್ಸಾಮಿನ ಬಹುಖಾತೆಗಳ ಸಚಿವ ಚಂದ್ರಮೋಹನ್ ಪಟೊವರಿ!

ಕೊವಿಡ್-19 ಪಿಡುಗಿನ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ವಿಜ್ಞಾನಿಗಳು ಔಷಧಿ ಕಂಡುಹಿಡಿಯಲು ವಿಫಲರಾಗಿದ್ದಾರೆ. ಹಾಗಾಗಿ, ಪ್ರಕೃತಿ ಮನುಕುಲದ ವಿರುದ್ಧ ಸಮರ ಸಾರಿದೆ ಎಂದು ಸಚಿವರು ಹೇಳಿದರು.

ಕೊರೊನಾವೈರಸ್ ದೇವರ ಸೂಪರ್​​ಕಂಪ್ಯೂಟರ್​​​ನಲ್ಲಿ ಸೃಷ್ಟಿಯಾಗಿದೆ ಎಂದರು ಆಸ್ಸಾಮಿನ ಬಹುಖಾತೆಗಳ ಸಚಿವ ಚಂದ್ರಮೋಹನ್ ಪಟೊವರಿ!
ಚಂದ್ರಮೋಹನ್ ಪಟೊವರಿ
TV9 Web
| Edited By: |

Updated on: Aug 28, 2021 | 1:33 AM

Share

ಗುವಹಾಟಿ: ಅಸ್ಸಾಮಿನ ಸಚಿವರೊಬ್ಬರ ಪ್ರಕಾರ ಕೊರೋನಾವೈರಸ್ ದೇವರ ಸೂಪರ್ಕಂಪ್ಯೂಟರ್ನಲ್ಲಿ ಸೃಷ್ಟಿಯಾಗಿದ್ದು ಯಾರಿಗೆ ಸೋಂಕು ತಾಕಿಸಬೇಕು ಯಾರನ್ನು ಬಲಿತೆಗೆದುಕೊಳ್ಳಬೇಕು ಅಂತ ಅದೇ ನಿರ್ಧರಿಸುತ್ತದಂತೆ! ಅಂದಹಾಗೆ, ಈ ಮಹಾನುಭಾವ ಸಚಿವರ ಹೆಸರು ಚಂದ್ರಮೋಹನ್ ಪಟೊವರಿ. ಗುವಹಾಟಿಯ ಅಮೀನ್ಗಾಂವ್​ನಲ್ಲಿ ಬುಧವಾರದಂದು ಕೋವಿಡ್-19 ಸೋಂಕಿನಿಂದ ಪತಿಯರನ್ನು ಕಳೆದುಕೊಂದ ಮಹಿಳೆಯರಿಗೆ ರಾಜ್ಯ ಸರ್ಕಾರದ ಯೋಜನೆಯೊಂದರಡಿ ಹಣಕಾಸಿನ ನೆರವನ್ನು ವಿತರಿಸುವಾಗ ಸಚಿವರು ಈ ಅಣಿಮುತ್ತುಗಳನ್ನು ಉದುರಿಸಿದರು.

‘ಯಾರಿಗೆ ಸೋಂಕು ತಾಕಬೇಕು, ಯಾರಿಗೆ ತಾಕಬಾರದು, ಯಾರನ್ನು ಭೂಮಿಯಿಂದ ಎತ್ತಿಕೊಂಡು ಹೋಗಬೇಕು ಅನ್ನೋದನ್ನೆಲ್ಲ ಪ್ರಕೃತಿ ನಿರ್ಧರಿಸುತ್ತದೆ. ಇದು ಮಾನವಕೃತವಲ್ಲ, ದೇವರ ಬಳಿಯಿರುವ ಸೂಪರ್ಕಂಪ್ಯೂಟರ್ ಇದನ್ನೆಲ್ಲ ನಿರ್ವಹಿಸುತ್ತದೆ. ಭೂಮಿಯ ಮೇಲಿರುವ ಶೇಕಡಾ 2 ರಷ್ಟು ಜನಗಳನ್ನು ಬಲಿ ತೆಗೆದುಕೊಳ್ಳಲು ಕಂಪ್ಯೂಟರ್ ಕೋವಿಡ್-19 ವೈರಸ್ ಅನ್ನು ಕಳಿಸಿದೆ,’ ಎಂದು ಅಸ್ಸಾಮಿನ ಸಾರಿಗೆ, ಕೈಗಾರಿಕೆ ಮತ್ತು ವಾಣಿಜ್ಯ, ಌಕ್ಟ್ ಈಸ್ಟ್ ಆಫ್ ಪಾಲಿಸಿ ಆಫೇರ್ಸ್, ಕೌಶಲ್ಯಾಭಿವೃದ್ಧಿ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಖಾತೆಗಳ ಸಚಿವರಾಗಿರುವ ಪಟೊವರಿ ಹೇಳಿದರು.

ಕೊವಿಡ್-19 ಪಿಡುಗಿನ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ವಿಜ್ಞಾನಿಗಳು ಔಷಧಿ ಕಂಡುಹಿಡಿಯಲು ವಿಫಲರಾಗಿದ್ದಾರೆ. ಹಾಗಾಗಿ, ಪ್ರಕೃತಿ ಮನುಕುಲದ ವಿರುದ್ಧ ಸಮರ ಸಾರಿದೆ ಎಂದು ಸಚಿವರು ಹೇಳಿದರು.

‘ಕೊವಿಡ್-19 ಬಗ್ಗೆ ಜಗತ್ತಿಗೆಲ್ಲ ಉಪದೇಶ ಸಾರಿದ ವಿಜ್ಞಾನಿಗಳು ಎಲ್ಲಿದ್ದಾರೆ? ಪಿಡುಗನ್ನು ನಿರ್ಮೂಲ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಲಸಿಕೆ ತೆಗೆದುಕೊಂಡ ನಂತರವೂ ಜನ ಸಾಯುತ್ತಿದ್ದಾರೆ. ಕೇವಲ ಪ್ರಕೃತಿಗೆ ಮಾತ್ರ ಈ ಸೋಂಕಿನ ಮೇಲೆ ನಿಯಂತ್ರಣ ಸಾಧಿಸುವುದು ಸಾಧ್ಯ. ನಾವು ನಿಸರ್ಗದ ವಿರುದ್ಧ ಯುದ್ಧ ನಡೆಸಿದೆವು, ಈಗ ಅದು ನಮ್ಮ ವಿರುದ್ಧ ಸಮರ ಘೋಷಿಸಿದೆ,’ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಅಸ್ಸಾಂನಲ್ಲಿ ಇನ್ಮುಂದೆ ಹಿಂದು ಧಾರ್ಮಿಕ ಪ್ರದೇಶಗಳ 5 ಕಿ.ಮೀ.ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ, ಖರೀದಿ ಮಾಡುವಂತಿಲ್ಲ

Follow Us
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್