AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾವೈರಸ್ ದೇವರ ಸೂಪರ್​​ಕಂಪ್ಯೂಟರ್​​​ನಲ್ಲಿ ಸೃಷ್ಟಿಯಾಗಿದೆ ಎಂದರು ಆಸ್ಸಾಮಿನ ಬಹುಖಾತೆಗಳ ಸಚಿವ ಚಂದ್ರಮೋಹನ್ ಪಟೊವರಿ!

ಕೊವಿಡ್-19 ಪಿಡುಗಿನ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ವಿಜ್ಞಾನಿಗಳು ಔಷಧಿ ಕಂಡುಹಿಡಿಯಲು ವಿಫಲರಾಗಿದ್ದಾರೆ. ಹಾಗಾಗಿ, ಪ್ರಕೃತಿ ಮನುಕುಲದ ವಿರುದ್ಧ ಸಮರ ಸಾರಿದೆ ಎಂದು ಸಚಿವರು ಹೇಳಿದರು.

ಕೊರೊನಾವೈರಸ್ ದೇವರ ಸೂಪರ್​​ಕಂಪ್ಯೂಟರ್​​​ನಲ್ಲಿ ಸೃಷ್ಟಿಯಾಗಿದೆ ಎಂದರು ಆಸ್ಸಾಮಿನ ಬಹುಖಾತೆಗಳ ಸಚಿವ ಚಂದ್ರಮೋಹನ್ ಪಟೊವರಿ!
ಚಂದ್ರಮೋಹನ್ ಪಟೊವರಿ
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 28, 2021 | 1:33 AM

Share

ಗುವಹಾಟಿ: ಅಸ್ಸಾಮಿನ ಸಚಿವರೊಬ್ಬರ ಪ್ರಕಾರ ಕೊರೋನಾವೈರಸ್ ದೇವರ ಸೂಪರ್ಕಂಪ್ಯೂಟರ್ನಲ್ಲಿ ಸೃಷ್ಟಿಯಾಗಿದ್ದು ಯಾರಿಗೆ ಸೋಂಕು ತಾಕಿಸಬೇಕು ಯಾರನ್ನು ಬಲಿತೆಗೆದುಕೊಳ್ಳಬೇಕು ಅಂತ ಅದೇ ನಿರ್ಧರಿಸುತ್ತದಂತೆ! ಅಂದಹಾಗೆ, ಈ ಮಹಾನುಭಾವ ಸಚಿವರ ಹೆಸರು ಚಂದ್ರಮೋಹನ್ ಪಟೊವರಿ. ಗುವಹಾಟಿಯ ಅಮೀನ್ಗಾಂವ್​ನಲ್ಲಿ ಬುಧವಾರದಂದು ಕೋವಿಡ್-19 ಸೋಂಕಿನಿಂದ ಪತಿಯರನ್ನು ಕಳೆದುಕೊಂದ ಮಹಿಳೆಯರಿಗೆ ರಾಜ್ಯ ಸರ್ಕಾರದ ಯೋಜನೆಯೊಂದರಡಿ ಹಣಕಾಸಿನ ನೆರವನ್ನು ವಿತರಿಸುವಾಗ ಸಚಿವರು ಈ ಅಣಿಮುತ್ತುಗಳನ್ನು ಉದುರಿಸಿದರು.

‘ಯಾರಿಗೆ ಸೋಂಕು ತಾಕಬೇಕು, ಯಾರಿಗೆ ತಾಕಬಾರದು, ಯಾರನ್ನು ಭೂಮಿಯಿಂದ ಎತ್ತಿಕೊಂಡು ಹೋಗಬೇಕು ಅನ್ನೋದನ್ನೆಲ್ಲ ಪ್ರಕೃತಿ ನಿರ್ಧರಿಸುತ್ತದೆ. ಇದು ಮಾನವಕೃತವಲ್ಲ, ದೇವರ ಬಳಿಯಿರುವ ಸೂಪರ್ಕಂಪ್ಯೂಟರ್ ಇದನ್ನೆಲ್ಲ ನಿರ್ವಹಿಸುತ್ತದೆ. ಭೂಮಿಯ ಮೇಲಿರುವ ಶೇಕಡಾ 2 ರಷ್ಟು ಜನಗಳನ್ನು ಬಲಿ ತೆಗೆದುಕೊಳ್ಳಲು ಕಂಪ್ಯೂಟರ್ ಕೋವಿಡ್-19 ವೈರಸ್ ಅನ್ನು ಕಳಿಸಿದೆ,’ ಎಂದು ಅಸ್ಸಾಮಿನ ಸಾರಿಗೆ, ಕೈಗಾರಿಕೆ ಮತ್ತು ವಾಣಿಜ್ಯ, ಌಕ್ಟ್ ಈಸ್ಟ್ ಆಫ್ ಪಾಲಿಸಿ ಆಫೇರ್ಸ್, ಕೌಶಲ್ಯಾಭಿವೃದ್ಧಿ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಖಾತೆಗಳ ಸಚಿವರಾಗಿರುವ ಪಟೊವರಿ ಹೇಳಿದರು.

ಕೊವಿಡ್-19 ಪಿಡುಗಿನ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ವಿಜ್ಞಾನಿಗಳು ಔಷಧಿ ಕಂಡುಹಿಡಿಯಲು ವಿಫಲರಾಗಿದ್ದಾರೆ. ಹಾಗಾಗಿ, ಪ್ರಕೃತಿ ಮನುಕುಲದ ವಿರುದ್ಧ ಸಮರ ಸಾರಿದೆ ಎಂದು ಸಚಿವರು ಹೇಳಿದರು.

‘ಕೊವಿಡ್-19 ಬಗ್ಗೆ ಜಗತ್ತಿಗೆಲ್ಲ ಉಪದೇಶ ಸಾರಿದ ವಿಜ್ಞಾನಿಗಳು ಎಲ್ಲಿದ್ದಾರೆ? ಪಿಡುಗನ್ನು ನಿರ್ಮೂಲ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಲಸಿಕೆ ತೆಗೆದುಕೊಂಡ ನಂತರವೂ ಜನ ಸಾಯುತ್ತಿದ್ದಾರೆ. ಕೇವಲ ಪ್ರಕೃತಿಗೆ ಮಾತ್ರ ಈ ಸೋಂಕಿನ ಮೇಲೆ ನಿಯಂತ್ರಣ ಸಾಧಿಸುವುದು ಸಾಧ್ಯ. ನಾವು ನಿಸರ್ಗದ ವಿರುದ್ಧ ಯುದ್ಧ ನಡೆಸಿದೆವು, ಈಗ ಅದು ನಮ್ಮ ವಿರುದ್ಧ ಸಮರ ಘೋಷಿಸಿದೆ,’ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಅಸ್ಸಾಂನಲ್ಲಿ ಇನ್ಮುಂದೆ ಹಿಂದು ಧಾರ್ಮಿಕ ಪ್ರದೇಶಗಳ 5 ಕಿ.ಮೀ.ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ, ಖರೀದಿ ಮಾಡುವಂತಿಲ್ಲ

Follow Us
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?