AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾವೈರಸ್ ದೇವರ ಸೂಪರ್​​ಕಂಪ್ಯೂಟರ್​​​ನಲ್ಲಿ ಸೃಷ್ಟಿಯಾಗಿದೆ ಎಂದರು ಆಸ್ಸಾಮಿನ ಬಹುಖಾತೆಗಳ ಸಚಿವ ಚಂದ್ರಮೋಹನ್ ಪಟೊವರಿ!

ಕೊವಿಡ್-19 ಪಿಡುಗಿನ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ವಿಜ್ಞಾನಿಗಳು ಔಷಧಿ ಕಂಡುಹಿಡಿಯಲು ವಿಫಲರಾಗಿದ್ದಾರೆ. ಹಾಗಾಗಿ, ಪ್ರಕೃತಿ ಮನುಕುಲದ ವಿರುದ್ಧ ಸಮರ ಸಾರಿದೆ ಎಂದು ಸಚಿವರು ಹೇಳಿದರು.

ಕೊರೊನಾವೈರಸ್ ದೇವರ ಸೂಪರ್​​ಕಂಪ್ಯೂಟರ್​​​ನಲ್ಲಿ ಸೃಷ್ಟಿಯಾಗಿದೆ ಎಂದರು ಆಸ್ಸಾಮಿನ ಬಹುಖಾತೆಗಳ ಸಚಿವ ಚಂದ್ರಮೋಹನ್ ಪಟೊವರಿ!
ಚಂದ್ರಮೋಹನ್ ಪಟೊವರಿ
TV9 Web
| Edited By: |

Updated on: Aug 28, 2021 | 1:33 AM

Share

ಗುವಹಾಟಿ: ಅಸ್ಸಾಮಿನ ಸಚಿವರೊಬ್ಬರ ಪ್ರಕಾರ ಕೊರೋನಾವೈರಸ್ ದೇವರ ಸೂಪರ್ಕಂಪ್ಯೂಟರ್ನಲ್ಲಿ ಸೃಷ್ಟಿಯಾಗಿದ್ದು ಯಾರಿಗೆ ಸೋಂಕು ತಾಕಿಸಬೇಕು ಯಾರನ್ನು ಬಲಿತೆಗೆದುಕೊಳ್ಳಬೇಕು ಅಂತ ಅದೇ ನಿರ್ಧರಿಸುತ್ತದಂತೆ! ಅಂದಹಾಗೆ, ಈ ಮಹಾನುಭಾವ ಸಚಿವರ ಹೆಸರು ಚಂದ್ರಮೋಹನ್ ಪಟೊವರಿ. ಗುವಹಾಟಿಯ ಅಮೀನ್ಗಾಂವ್​ನಲ್ಲಿ ಬುಧವಾರದಂದು ಕೋವಿಡ್-19 ಸೋಂಕಿನಿಂದ ಪತಿಯರನ್ನು ಕಳೆದುಕೊಂದ ಮಹಿಳೆಯರಿಗೆ ರಾಜ್ಯ ಸರ್ಕಾರದ ಯೋಜನೆಯೊಂದರಡಿ ಹಣಕಾಸಿನ ನೆರವನ್ನು ವಿತರಿಸುವಾಗ ಸಚಿವರು ಈ ಅಣಿಮುತ್ತುಗಳನ್ನು ಉದುರಿಸಿದರು.

‘ಯಾರಿಗೆ ಸೋಂಕು ತಾಕಬೇಕು, ಯಾರಿಗೆ ತಾಕಬಾರದು, ಯಾರನ್ನು ಭೂಮಿಯಿಂದ ಎತ್ತಿಕೊಂಡು ಹೋಗಬೇಕು ಅನ್ನೋದನ್ನೆಲ್ಲ ಪ್ರಕೃತಿ ನಿರ್ಧರಿಸುತ್ತದೆ. ಇದು ಮಾನವಕೃತವಲ್ಲ, ದೇವರ ಬಳಿಯಿರುವ ಸೂಪರ್ಕಂಪ್ಯೂಟರ್ ಇದನ್ನೆಲ್ಲ ನಿರ್ವಹಿಸುತ್ತದೆ. ಭೂಮಿಯ ಮೇಲಿರುವ ಶೇಕಡಾ 2 ರಷ್ಟು ಜನಗಳನ್ನು ಬಲಿ ತೆಗೆದುಕೊಳ್ಳಲು ಕಂಪ್ಯೂಟರ್ ಕೋವಿಡ್-19 ವೈರಸ್ ಅನ್ನು ಕಳಿಸಿದೆ,’ ಎಂದು ಅಸ್ಸಾಮಿನ ಸಾರಿಗೆ, ಕೈಗಾರಿಕೆ ಮತ್ತು ವಾಣಿಜ್ಯ, ಌಕ್ಟ್ ಈಸ್ಟ್ ಆಫ್ ಪಾಲಿಸಿ ಆಫೇರ್ಸ್, ಕೌಶಲ್ಯಾಭಿವೃದ್ಧಿ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಖಾತೆಗಳ ಸಚಿವರಾಗಿರುವ ಪಟೊವರಿ ಹೇಳಿದರು.

ಕೊವಿಡ್-19 ಪಿಡುಗಿನ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ವಿಜ್ಞಾನಿಗಳು ಔಷಧಿ ಕಂಡುಹಿಡಿಯಲು ವಿಫಲರಾಗಿದ್ದಾರೆ. ಹಾಗಾಗಿ, ಪ್ರಕೃತಿ ಮನುಕುಲದ ವಿರುದ್ಧ ಸಮರ ಸಾರಿದೆ ಎಂದು ಸಚಿವರು ಹೇಳಿದರು.

‘ಕೊವಿಡ್-19 ಬಗ್ಗೆ ಜಗತ್ತಿಗೆಲ್ಲ ಉಪದೇಶ ಸಾರಿದ ವಿಜ್ಞಾನಿಗಳು ಎಲ್ಲಿದ್ದಾರೆ? ಪಿಡುಗನ್ನು ನಿರ್ಮೂಲ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಲಸಿಕೆ ತೆಗೆದುಕೊಂಡ ನಂತರವೂ ಜನ ಸಾಯುತ್ತಿದ್ದಾರೆ. ಕೇವಲ ಪ್ರಕೃತಿಗೆ ಮಾತ್ರ ಈ ಸೋಂಕಿನ ಮೇಲೆ ನಿಯಂತ್ರಣ ಸಾಧಿಸುವುದು ಸಾಧ್ಯ. ನಾವು ನಿಸರ್ಗದ ವಿರುದ್ಧ ಯುದ್ಧ ನಡೆಸಿದೆವು, ಈಗ ಅದು ನಮ್ಮ ವಿರುದ್ಧ ಸಮರ ಘೋಷಿಸಿದೆ,’ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಅಸ್ಸಾಂನಲ್ಲಿ ಇನ್ಮುಂದೆ ಹಿಂದು ಧಾರ್ಮಿಕ ಪ್ರದೇಶಗಳ 5 ಕಿ.ಮೀ.ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟ, ಖರೀದಿ ಮಾಡುವಂತಿಲ್ಲ

Follow Us
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಈ ವಾರ ಈ ರಾಶಿಗೆ ಆಕಸ್ಮಿಕ ಧನಲಾಭ, ಹಳೆಯ ಬಾಕಿ ವಸೂಲಿ
ಈ ವಾರ ಈ ರಾಶಿಗೆ ಆಕಸ್ಮಿಕ ಧನಲಾಭ, ಹಳೆಯ ಬಾಕಿ ವಸೂಲಿ
ಹೋಟೆಲ್, ಮೊಬೈಲ್ ಶಾಪ್ ಸೇರಿ 12ಕ್ಕೂ ಅಧಿಕ ಅಂಗಡಿಗಳು ಬೆಂಕಿಗಾಹುತಿ!
ಹೋಟೆಲ್, ಮೊಬೈಲ್ ಶಾಪ್ ಸೇರಿ 12ಕ್ಕೂ ಅಧಿಕ ಅಂಗಡಿಗಳು ಬೆಂಕಿಗಾಹುತಿ!
ಲಷ್ಕರ್ ಕಮಾಂಡರ್ ಬಿಲಾಲ್ ಆರಿಫ್ ಮೇಲೆ ಗುಂಡಿನ ದಾಳಿ
ಲಷ್ಕರ್ ಕಮಾಂಡರ್ ಬಿಲಾಲ್ ಆರಿಫ್ ಮೇಲೆ ಗುಂಡಿನ ದಾಳಿ
ಬ್ರಹ್ಮಣಿಪುರ ಕೆರೆಯಲ್ಲಿ ಬೆಳ್ಳಂ ಬೆಳಿಗ್ಗೆ ಕಾಣಿಸಿಕೊಂಡ ಕಾಡಾನೆಗಳ ಹಿಂಡು
ಬ್ರಹ್ಮಣಿಪುರ ಕೆರೆಯಲ್ಲಿ ಬೆಳ್ಳಂ ಬೆಳಿಗ್ಗೆ ಕಾಣಿಸಿಕೊಂಡ ಕಾಡಾನೆಗಳ ಹಿಂಡು