Cyclone Gulab: ಗುಲಾಬ್​ ಚಂಡಮಾರುತದಿಂದ ಭೂಕುಸಿತದ ಅಪಾಯ; ಒಡಿಶಾ, ಆಂಧ್ರಪ್ರದೇಶದಲ್ಲಿ ರಕ್ಷಣಾ ಪಡೆಗಳು ಸಜ್ಜು, ರೈಲು ಸಂಚಾರ ರದ್ದು

| Updated By: Lakshmi Hegde

Updated on: Sep 26, 2021 | 11:53 AM

ಓಡಿಶಾದ ದಕ್ಷಿಣ ಭಾಗದಲ್ಲಿರುವ ಒಟ್ಟು ಏಳು ಜಿಲ್ಲೆಗಳಿಗೆ ಗುಲಾಬ್​ ಚಂಡಮಾರುತದ ಪ್ರಭಾವ ಹೆಚ್ಚಾಗಿರಲಿದ್ದು, ಅಲ್ಲಿನ ಜನರನ್ನು ಸ್ಥಳಾಂತರ ಮಾಡುವ ಕಾರ್ಯವನ್ನು ಈಗಾಗಲೇ ಸರ್ಕಾರ ಶುರು ಮಾಡಿದೆ.

Cyclone Gulab: ಗುಲಾಬ್​ ಚಂಡಮಾರುತದಿಂದ ಭೂಕುಸಿತದ ಅಪಾಯ; ಒಡಿಶಾ, ಆಂಧ್ರಪ್ರದೇಶದಲ್ಲಿ ರಕ್ಷಣಾ ಪಡೆಗಳು ಸಜ್ಜು, ರೈಲು ಸಂಚಾರ ರದ್ದು
ಗುಲಾಬ್​ ಸೈಕ್ಲೋನ್​ (ಸಾಂಕೇತಿಕ ಚಿತ್ರ)
Follow us on

ದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಎದ್ದಿರುವ ಗುಲಾಬ್​ ಚಂಡಮಾರುತ (Cyclone Gulab) ಇಂದು ಸಂಜೆ ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ ಭೂಕುಸಿತ ಉಂಟು ಮಾಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ಸಂಜೆಯ ಹೊತ್ತಿಗೆ ಒಡಿಶಾದ ಗೋಪಾಲ್​ಪುರ ಮತ್ತು ಆಂಧ್ರಪ್ರದೇಶದ ಕಳಿಂಗಪಟ್ಟಣಂ ನಡುವೆ ಪ್ರತಿ ಗಂಟೆಗೆ 95 ಕಿಮೀ  ವೇಗದಲ್ಲಿ ಚಂಡಮಾರುತದ ವೇಗ ಇರಲಿದ್ದು, ಈ ಭಾಗದ ಜನರು ಎಚ್ಚರಿಕೆಯಿಂದ ಇರಬೇಕು ಎಂದೂ ಹೇಳಿದೆ. 

ಪ್ರಸ್ತುತ ಗುಲಾಬ್​ ಚಂಡಮಾರತ ಓಡಿಶಾದ ಗೋಪಾಲ್​ಪುರದಿಂದ ಪೂರ್ವ-ಆಗ್ನೇಯದಿಂದ 270 ಕಿಮೀ ದೂರದಲ್ಲಿ ಮತ್ತು ಆಂಧ್ರಪ್ರದೇಶದ ಕಳಿಂಗಪಟ್ಟಣಂನಿಂದ 330 ಕಿಮೀ ದೂರದಲ್ಲಿದೆ. ಚಂಡಮಾರುತದಿಂದ ಉಂಟಾಗಬಹುದಾದ ಹಾನಿ, ಅಪಾಯವನ್ನು ಎದುರಸಿಲು ಓಡಿಶಾದಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆಯ (NDRF)13 ತಂಡಗಳು, ಆಂಧ್ರಪ್ರದೇಶದಲ್ಲಿ 5 ತಂಡಗಳು ಸಜ್ಜಾಗಿವೆ ಎಂದು ಎನ್​ಡಿಆರ್​ಎಫ್​​ನ ಡಿಜಿ ಸತ್ಯನಾರಾಯಣ ಪ್ರಧಾನ್​ ತಿಳಿಸಿದ್ದಾರೆ.

ರೈಲು ಸಂಚಾರ ರದ್ದು
ಗುಲಾಬ್​ ಸೈಕ್ಲೋನ್​ನಿಂದ ಮಳೆ, ಭೂಕುಸಿತ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕಡೆ ಸಂಚರಿಸುವ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಗುಲಾಬ್​ ಚಂಡಮಾರುತದ ಪ್ರಭಾವ ಉಂಟಾಗಬಹುದಾದ ಸ್ಥಳಗಳನ್ನು ಸಂಪರ್ಕಿಸುವ ಹಲವು ರೈಲುಗಳ ಪ್ರಯಾಣದ ಸಮಯವನ್ನು ಮುಂದೂಡಲಾಗಿದೆ.

ಇನ್ನು ಓಡಿಶಾದ ದಕ್ಷಿಣ ಭಾಗದಲ್ಲಿರುವ ಒಟ್ಟು ಏಳು ಜಿಲ್ಲೆಗಳಿಗೆ ಗುಲಾಬ್​ ಚಂಡಮಾರುತದ ಪ್ರಭಾವ ಹೆಚ್ಚಾಗಿರಲಿದ್ದು, ಅಲ್ಲಿನ ಜನರನ್ನು ಸ್ಥಳಾಂತರ ಮಾಡುವ ಕಾರ್ಯವನ್ನು ಈಗಾಗಲೇ ಸರ್ಕಾರ ಶುರು ಮಾಡಿದೆ. ಅದರಲ್ಲೂ ಗಂಜಮ್​ ಮತ್ತು ಗಜಪತಿ ಜಿಲ್ಲೆಗಳಲ್ಲಿ ಹೆಚ್ಚಿನ ರಕ್ಷಣಾ ಕ್ರಮ ಹಮ್ಮಿಕೊಳ್ಳಲಾಗಿದೆ. ಈ ಎರಡು ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದ ಅಪಾಯ ಉಂಟಾಗುವ ಸಾಧ್ಯತೆ ಇರಲಿದೆ ಎಂದು ಹೇಳಲಾಗಿದೆ.  ಗಂಜಮ್​ ಒಂದೇ ಜಿಲ್ಲೆಯಲ್ಲಿ 15 ರಕ್ಷಣಾ ಪಡೆಗಳು ಇವೆ. ಕಳೆದ ನಾಲ್ಕು ತಿಂಗಳ ಹಿಂದೆ ಓಡಿಶಾಕ್ಕೆ ಯಾಸ್ ಚಂಡಮಾರುತ ಅಪ್ಪಳಿಸಿತ್ತು. ಅದಾದ ಬಳಿಕ ಈಗ ಗುಲಾಬ್​ ಆಗಮಿಸಿದೆ. 2018ರಲ್ಲಿ ಒಡಿಶಾಕ್ಕೆ ಅಪ್ಪಳಿಸಿದ್ದ ತಿತ್ಲಿಯಷ್ಟೇ ತೀವ್ರವಾಗಿ ಈ ಗುಲಾಬ್​ ಚಂಡಮಾರುತ ಇರಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Mann ki Baat: ವಿಶ್ವ ನದಿಗಳ ದಿನವನ್ನು ನೆನಪಿಸಿದ ಪ್ರಧಾನಿ ಮೋದಿ; ವರ್ಷಕ್ಕೊಮ್ಮೆಯಾದರೂ ನದಿಗಳ ಉತ್ಸವ ನಡೆಸಲು ಮನ್​ ಕೀ ಬಾತ್​​ನಲ್ಲಿ ಕರೆ

Viral Video: ರಸ್ತೆ ಗುಂಡಿಗಳ ಸಮಸ್ಯೆಯನ್ನು ಹೀಗೂ ಹೇಳಬಹುದಾ?; ಮಜವಾದ ಈ ವಿಡಿಯೊ ನೋಡಿ