Sign In

By signing in or creating an account, you agree with Associated Broadcasting Company's Terms & Conditions and Privacy Policy.

₹ 41 ಕೋಟಿ ಬೆಲೆಯ ಜಮೀನು ₹ 353 ಕೋಟಿಗೆ ಮಾರಾಟ ಮಾಡಿದ ದೆಹಲಿ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ಆರೋಪ

ದೂರಿನ ಪ್ರಕಾರ, ಕುಮಾರ್ ಅವರು ತಮ್ಮ ಮಗನಿಗೆ ಉದ್ಯೋಗ ನೀಡುವ ಮತ್ತೊಂದು ಕಂಪನಿಗೆ ₹ 315 ಕೋಟಿ ಲಾಭವನ್ನು ಖಚಿತಪಡಿಸಿಕೊಳ್ಳಲು ಭೂಸ್ವಾಧೀನ ಒಪ್ಪಂದವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ದೂರುದಾರರ ಗುರುತನ್ನು ರಹಸ್ಯವಾಗಿಡಲಾಗಿದೆ ಎಂದು ಮೂಲಗಳು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

₹ 41 ಕೋಟಿ ಬೆಲೆಯ ಜಮೀನು ₹ 353 ಕೋಟಿಗೆ ಮಾರಾಟ ಮಾಡಿದ ದೆಹಲಿ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ಆರೋಪ
ನರೇಶ್ ಕುಮಾರ್
Follow us
ರಶ್ಮಿ ಕಲ್ಲಕಟ್ಟ
|

Updated on:Nov 10, 2023 | 9:11 PM

ದೆಹಲಿ ನವೆಂಬರ್ 10: ದೆಹಲಿ (Delhi)ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಕಚೇರಿಯಲ್ಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ (Naresh Kumar) ವಿರುದ್ಧ ಭ್ರಷ್ಟಾಚಾರ ದೂರು ಬಂದಿದ್ದು, ದೂರನ್ನು ವಿಜಿಲೆನ್ಸ್ ಸಚಿವೆ ಅತಿಶಿ ಅವರಿಗೆ ರವಾನಿಸಲಾಗಿದೆ. ದೂರಿನ ಪ್ರಕಾರ, ಕುಮಾರ್ ಅವರು ತಮ್ಮ ಮಗನಿಗೆ ಉದ್ಯೋಗ ನೀಡುವ ಮತ್ತೊಂದು ಕಂಪನಿಗೆ ₹ 315 ಕೋಟಿ ಲಾಭವನ್ನು ಖಚಿತಪಡಿಸಿಕೊಳ್ಳಲು ಭೂಸ್ವಾಧೀನ ಒಪ್ಪಂದವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ದೂರುದಾರರ ಗುರುತನ್ನು ರಹಸ್ಯವಾಗಿಡಲಾಗಿದೆ ಎಂದು ಮೂಲಗಳು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ಆದಾಗ್ಯೂ,ಮುಖ್ಯಮಂತ್ರಿ ಕಚೇರಿ ವಿಸ್ತೃತ ವರದಿ ಕೇಳಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಭೂಮಾಲೀಕರಲ್ಲಿ ಒಬ್ಬರಿಗೆ ಎನ್‌ಎಚ್‌ಎಐ ಪಾವತಿಸಲು ಆದೇಶಿಸಿದ ಹೆಚ್ಚಿನ ಬೆಲೆಯನ್ನು ದಿಲ್ಲಿ ಮುಖ್ಯ ಕಾರ್ಯದರ್ಶಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರುದಾರರು ವಾದಿಸಿದ್ದಾರೆ.

ಹೆಚ್ಚಿನ ಬೆಲೆಯನ್ನು ಪಡೆಯಬೇಕಿದ್ದ ಭೂಮಾಲೀಕರು ಸುಭಾಷ್ ಚಂದ್ ಕಥುರಿಯಾ ರಿಯಾಲ್ಟಿ ಸಂಸ್ಥೆಯ ಅನಂತ್ ರಾಜ್ ಲಿಮಿಟೆಡ್‌ನ ಪ್ರವರ್ತಕರಾಗಿರುವ ಅಮನ್ ಸರಿನ್‌ ಜತೆ ನೇರ ಸಂಬಂಧ ಹೊಂದಿದ್ದಾರೆ..ಸರಿನ್ ಅವರು ಮುಖ್ಯ ಕಾರ್ಯದರ್ಶಿಯವರ ಮಗ ಕರಣ್‌ಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ದಿ ವೈರ್ ಪ್ರಕಾರ, ಕರಣ್ ಮತ್ತೊಂದು ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದಾರೆ. ಇದು ಬಿಗ್ ಟೌನ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಎಂದು ಕರೆಯಲ್ಪಡುತ್ತದೆ, ಇದು ಅನಂತ್ ರಾಜ್ ಲಿಮಿಟೆಡ್‌ನ ಅದೇ ಅಂಚೆ ಮತ್ತು ಇಮೇಲ್ ವಿಳಾಸಗಳನ್ನು ಹೊಂದಿದೆ.

ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಜೂನ್‌ನಲ್ಲಿ ಈ ವಿಷಯವನ್ನು ಕುಮಾರ್ ಅವರ ಗಮನಕ್ಕೆ ತರಲಾಯಿತು. ಮುಖ್ಯ ಕಾರ್ಯದರ್ಶಿ ಅವರು ಪ್ರಕರಣದ ತನಿಖೆ ನಡೆಸುವಂತೆ ದೆಹಲಿಯ ವಿಜಿಲೆನ್ಸ್ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಿದರು. ಸೆಪ್ಟೆಂಬರ್‌ನಲ್ಲಿ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಅನುಮೋದನೆಯೊಂದಿಗೆ, ಹೇಮಂತ್ ಕುಮಾರ್ ವಿರುದ್ಧ ಸಿಬಿಐ ತನಿಖೆ ಮತ್ತು ಇಲಾಖಾ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: ದೆಹಲಿ ಮಳೆಗೆ ತಗ್ಗಿದ ವಾಯು ಮಾಲಿನ್ಯ; ದೇವರಿಗೆ ಪ್ರಾರ್ಥನೆ ಕೇಳಿಸಿತು, ಸರ್ಕಾರಕ್ಕೆ ಧನ್ಯವಾದ ಹೇಳಲ್ಲ; ಸುಪ್ರೀಂಕೋರ್ಟ್

ಪರಿಸರ ಸಚಿವ ಗೋಪಾಲ್ ರಾಯ್, ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಮತ್ತು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಸೇರಿದಂತೆ ಹಲವಾರು ಎಎಪಿ ನಾಯಕರು ಈ ವಿವಾದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಚಡ್ಡಾ ಅವರು ಇದನ್ನು “ಆಘಾತಕಾರಿ” ಎಂದು ಕರೆದಿದ್ದಾರೆ. ಕಳೆದ ವರ್ಷ… ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಬಗ್ಗೆ ಗಂಭೀರ ಪ್ರಶ್ನೆಗಳನ್ನು (ಎತ್ತಲಾಗಿದೆ) ಈಗ ಇದು ಎಂದು ಭಾರದ್ವಾಜ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:10 pm, Fri, 10 November 23