AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಹನ ತಪಾಸಣೆ ವೇಳೆ, ಕುಡಿದ ಅಮಲಿನಲ್ಲಿ ಟ್ರಾಫಿಕ್​​​​​​ ಪೊಲೀಸರನ್ನೇ ಎಳೆದುಕೊಂಡು ಹೋದ ಕಾರು ಚಾಲಕ

ವಾಹನ ತಪಾಸಣೆ ವೇಳೆ ಕುಡಿದು ಕಾರು ಓಡಿಸುತ್ತಿದ್ದ ಚಾಲಕನನ್ನು ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ ಪರಿಶೀಲನೆ ಮಾಡಲು ಕಾರಿನ ಡೋರ್ ಓಪನ್​​ ಮಾಡಿ, ಒಳಗೆ ಹೋಗಬೇಕೆನ್ನುಷ್ಟರಲ್ಲಿ ಚಾಲಕ ಕಾರನ್ನು ಮುಂದೆ ವೇಗವಾಗಿ ಮೂವ್ ಮಾಡಿ, ಪೊಲೀಸನ್ನು ಸ್ವಲ್ಪ ದೂರದ ವರೆಗೆ ಎಳೆದುಕೊಂಡು ಹೋಗಿದ್ದಾನೆ

ವಾಹನ ತಪಾಸಣೆ ವೇಳೆ, ಕುಡಿದ ಅಮಲಿನಲ್ಲಿ ಟ್ರಾಫಿಕ್​​​​​​ ಪೊಲೀಸರನ್ನೇ ಎಳೆದುಕೊಂಡು ಹೋದ ಕಾರು ಚಾಲಕ
ವೈರಲ್​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on:Jun 22, 2024 | 4:38 PM

Share

ಫರಿದಾಬಾದ್, ಜೂ.22: ಹರಿಯಾಣದ ಫರಿದಾಬಾದ್​​ನಲ್ಲಿ ವಾಹನ ತಪಾಸಣೆ  ವೇಳೆ ಕಾರು ಚಾಲಕ ಕುಡಿದ ಅಮಲಿನಲ್ಲಿ  ಪೊಲೀಸರು ಎಂಬುದನ್ನು ಲೆಕ್ಕಿಸದೆ  ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ. ಪೊಲೀಸರು ಚಾಲಕನ ಬಳಿ ದಾಖಲೆ ಕೇಳಿದ್ದು, ಸರಿಯಾದ ದಾಖಲೆ ಹಾಗೂ ಕುಡಿದು ಕಾರು ಓಡಿಸುತ್ತಿದ್ದ ಕಾರಣ ಟ್ರಾಫಿಕ್​​​​ ಪೊಲೀಸರಿಗೆ ಉತ್ತರ ಹೇಳಲಾಗದೇ ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಬಲ್ಲಭಗಢ ಬಸ್ ನಿಲ್ದಾಣ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಪೊಲೀಸರ ಪ್ರಕಾರ, ನಿನ್ನೆ ಸಂಜೆ ಚಾಲಕನೊಬ್ಬ ಕುಡಿದ ಅಮಲಿನಲ್ಲಿ ತನ್ನ ಕಾರಿನಲ್ಲಿ ಒಂದಿಷ್ಟು ಪ್ರಯಾಣಿಕರನ್ನು ಕೂರಿಸಿಕೊಂಡು ಚಾಲನೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ಪೊಲೀಸರಿಗೆ ವಾಹನ ತಪಾಸಣೆ ವೇಳೆ ಈ ವಿಚಾರ ತಿಳಿದು ಬಂದಿದೆ. ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಚಾಲಕನ ಬಳಿಗೆ ಬಂದು ವಾಹನದ ದಾಖಲೆಗಳನ್ನು ಕೇಳಿದ್ದಾರೆ, ದಾಖಲೆಗಳು ಇಲ್ಲದ ಕಾರಣ ಆತನಿಗೆ ದಂಡ ವಿಧಿಸಿದ್ದಾರೆ. ನಂತರ ಇಬ್ಬರ ನಡುವೆ ವಾದ ನಡೆದಿದೆ.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಅನುಮತಿ ನೀಡಿದ ನ್ಯಾಯಾಧೀಶ ಆರ್‌ಕೆ ದಿವಾಕರ್‌ಗೆ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಕೊಲೆ ಬೆದರಿಕೆ

ನಂತರ ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ ಅವನನ್ನು ಪರಿಶೀಲನೆ ಮಾಡಲು ಕಾರಿನ ಡೋರ್ ಓಪನ್​​ ಮಾಡಿ, ಒಳಗೆ ಹೋಗಬೇಕೆನ್ನುಷ್ಟರಲ್ಲಿ ಚಾಲಕ ಕಾರನ್ನು ಮುಂದೆ ವೇಗವಾಗಿ ಮೂವ್ ಮಾಡಿ, ಪೊಲೀಸನ್ನು ಸ್ವಲ್ಪ ದೂರದ ವರೆಗೆ ಎಳೆದುಕೊಂಡು ಹೋಗಿದ್ದಾನೆ, ನಂತರ ಅಲ್ಲಿದ್ದ ಇತರ ಪೊಲೀಸ್​​ ಅಧಿಕಾರಿಗಳು ಬಂದು ಕಾರನ್ನು ಸುತ್ತುವರಿದು ಕಾಪಾಡಿದ್ದಾರೆ. ನಂತರ ಆತನನ್ನು ಹಿಡಿದು ಪೊಲೀಸ್​​ ಠಾಣೆಗೆ ಕರೆದುಕೊಂಡು ಹೋಗಿ ತನಿಖೆ ನಡೆಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:19 pm, Sat, 22 June 24

Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More