AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವೂದ್ ಇಬ್ರಾಹಿಂ ವಿರುದ್ಧ ಕೇಸ್​ ದಾಖಲಿಸಿದ ಇ.ಡಿ.; 10 ಪ್ರದೇಶಗಳ ಮೇಲೆ ದಾಳಿ, ಕೆಲವು ರಾಜಕಾರಣಿಗಳ ಮೇಲೆ ಹದ್ದಿನ ಕಣ್ಣು

ದಾವೂದ್​ ಇಬ್ರಾಹಿಂ ಮುಂಬೈನ ಒಬ್ಬ ಪ್ರಾಮಾಣಿಕ ಪೊಲೀಸ್ ಕಾನ್​ಸ್ಟೆಬಲ್​​ನ ಪುತ್ರ. ಮುಂಬೈನ ಡೊಂಗ್ರಿ ಏರಿಯಾದಲ್ಲಿ ವಾಸವಾಗಿದ್ದ ಇದ್ದ ಈತ ಗ್ಯಾಂಗ್​ವಾರ್​ಗಳಲ್ಲಿ ತೊಡಗಿಕೊಂಡಿದ್ದ. 1980ರ ದಶಕದಲ್ಲಿ ಮೊಟ್ಟಮೊದಲು ದಾವೂದ್ ಅರೆಸ್ಟ್​ ಆಗಿದ್ದು, ಒಂದು ದರೋಡೆ ಪ್ರಕರಣದಲ್ಲಿ.

ದಾವೂದ್ ಇಬ್ರಾಹಿಂ ವಿರುದ್ಧ ಕೇಸ್​ ದಾಖಲಿಸಿದ ಇ.ಡಿ.; 10 ಪ್ರದೇಶಗಳ ಮೇಲೆ ದಾಳಿ, ಕೆಲವು ರಾಜಕಾರಣಿಗಳ ಮೇಲೆ ಹದ್ದಿನ ಕಣ್ಣು
ದಾವೂದ್​ ಇಬ್ರಾಹಿಂಗೆ ಲಿಂಕ್​ ಇದೆ ಎನ್ನಲಾದ ಪ್ರದೇಶಗಳ ಮೇಲೆ ಇ.ಡಿ.ದಾಳಿ
TV9 Web
| Edited By: |

Updated on:Feb 15, 2022 | 1:36 PM

Share

ಭೂಗತ ಪಾತಕಿ ದಾವೂದ್​ ಇಬ್ರಾಹಿಂ (Dawood Ibrahim) ಮತ್ತು ಆತನ ಸಹಾಯಕರಿಗೆ ಸೇರಿದ ಒಟ್ಟು 10 ಪ್ರದೇಶಗಳ ಮೇಲೆ ಜಾರಿ ನಿರ್ದೇಶನಾಯಲಯದ (ED) ಅಧಿಕಾರಿಗಳು ದಾಳಿ ಮಾಡಿ, ಶೋಧ ಕಾರ್ಯ ನಡೆಸಿದ್ದಾರೆ. ದಾವೂದ್​ ಇಬ್ರಾಹಿಂ ಮತ್ತು ಆತನ ಸಹಚರರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ, ಅಕ್ರಮ ಹಣ ವರ್ಗಾವಣೆ ಕೇಸ್ (Money Laundering Case)​ ದಾಖಲು ಮಾಡಿರುವ ಇ.ಡಿ.ಅಧಿಕಾರಿಗಳು ಮುಂಬೈ ಹಾಗೂ ಸುತ್ತಲಿನ ಒಟ್ಟು 10 ಪ್ರದೇಶಗಳಲ್ಲಿ ರೇಡ್​ ಮಾಡಿದ್ದಾರೆ.

ಭೂಗತಪಾತಕಿ ದಾವೂದ್​ನ ಹವಾಲಾ ದಂಧೆಯ ಜಾಲ ಮತ್ತು ಆತ ಮಹಾರಾಷ್ಟ್ರದ ಕೆಲವು ರಾಜಕಾರಣಿಗಳೊಟ್ಟಿಗೆ ಆಸ್ತಿ ವ್ಯವಹಾರ ಮಾಡಿದ್ದಾನೆ ಎಂಬ ಬಲವಾದ ಶಂಕೆಯ ಮೇರೆಗೆ ತನಿಖೆಗಾಗಿ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡಿದೆ. ರಾಷ್ಟ್ರೀಯ ತನಿಖಾ ದಳ (NIA) ದಾಖಲಿಸಿದ್ದ ಎಫ್​ಐಆರ್​ ಆಧಾರದಲ್ಲಿ ಇ.ಡಿ. ತನಿಖೆ ಕೈಗೆತ್ತಿಕೊಂಡಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್​ ವರದಿ ಮಾಡಿದೆ. ಇದೀಗ ದಾವೂದ್​ಗೆ ಸೇರಿದ ನಾಗಪಾದ ಸೇರಿ 10 ಸ್ಥಳಗಳ ಮೇಲೆ ದಾಳಿ ನಡೆದಿದೆ. ದಾವೂದ್​​ನ ಮೃತ ಸೋದರಿ ಹಸೀನಾ ಪರ್ಕರ್​ ಮನೆಗೂ ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ. ಅದರಲ್ಲಿ ಈ ನಾಗಪಾದ ಎಂಬುದು ದಾವೂದ್ ಇಬ್ರಾಹಿಂನ ಭದ್ರಕೋಟೆ ಎಂದೇ ಹೇಳಲಾಗುತ್ತದೆ.  ಅಷ್ಟೇ ಅಲ್ಲ, ಈ ಕೇಸ್​ಗೆ ಸಂಬಂಧಪಟ್ಟಂತೆ ಹಲವು ರಾಜಕಾರಣಿಗಳನ್ನೂ ಇ.ಡಿ. ಕಣ್ಗಾವಲಲ್ಲಿ ಇಟ್ಟಿದೆ ಎಂಬ ಮಾಹಿತಿಯೂ ಅಧಿಕೃತ ಮೂಲಗಳಿಂದ ಲಭ್ಯವಾಗಿದೆ.

1993ರ ಮುಂಬೈ ದಾಳಿಯ ರೂವಾರಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರು 1993ರ ಮುಂಬೈ ದಾಳಿಗೂ ಮುನ್ನವೇ ಪಾಕಿಸ್ತಾನಕ್ಕೆ ಹೋಗಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ. ಆತ ವಿದೇಶದಲ್ಲಿದ್ದುಕೊಂಡೇ ಹವಾಲಾ ಜಾಲದ ಮೂಲಕ ನ್ಯಾಕ್ರೋ ಭಯೋತ್ಪಾದನೆ(ಮಾದಕ ದ್ರವ್ಯಗಳ ಸಾಗಣೆ ಇತರ ಕಾನೂನು ಬಾಹಿರ ಕೆಲಸ) ಯಲ್ಲಿ ತೊಡಗಿದ್ದಾನೆ.  ಅಂದಹಾಗೇ, ದಾವೂದ್​ ಇಬ್ರಾಹಿಂ ಮುಂಬೈನ ಒಬ್ಬ ಪ್ರಾಮಾಣಿಕ ಪೊಲೀಸ್ ಕಾನ್​ಸ್ಟೆಬಲ್​​ನ ಪುತ್ರ. ಮುಂಬೈನ ಡೊಂಗ್ರಿ ಏರಿಯಾದಲ್ಲಿ ವಾಸವಾಗಿದ್ದ ಇದ್ದ ಈತ ಗ್ಯಾಂಗ್​ವಾರ್​ಗಳಲ್ಲಿ ತೊಡಗಿಕೊಂಡಿದ್ದ. 1980ರ ದಶಕದಲ್ಲಿ ಮೊಟ್ಟಮೊದಲು ದಾವೂದ್ ಅರೆಸ್ಟ್​ ಆಗಿದ್ದು, ಒಂದು ದರೋಡೆ ಪ್ರಕರಣದಲ್ಲಿ. ಅದಾದ ನಂತರ ಆತನ ಕ್ರೈಂಗಳು ಒಂದೇ ಸಮನೆ ಏರತೊಡಗಿದವು.

ಅಫ್ಘಾನಿಸ್ತಾನದಿಂದ ವಲಸೆ ಬಂದಿರುವ ಪಠಾಣ್​ ಗ್ಯಾಂಗ್​ ಮತ್ತು ಹಾಜಿ ಗ್ಯಾಂಗ್​ ನಡುವೆ ನಡೆಯುತ್ತಿದ್ದ ಹೊಡೆದಾಟದಲ್ಲಿ ದಾವೂದ್ ಸಕ್ರಿಯನಾಗಿದ್ದ. ಇದರ ಮೂಲಕನೇ ಆತ ಅತ್ಯಂತ ಅಪಾಯಕಾರಿಯಾಗಿ ಬೆಳೆಯಲು ತೊಡಗಿದ್ದು. ಪಠಾಣ್​ ಗ್ಯಾಂಗ್​ ದಾವೂದ್ ಇಬ್ರಾಹಿಂನ ಒಬ್ಬ ಸೋದರನನ್ನು ಕೊಂದಿತ್ತು. ಆ ಸೇಡನ್ನು ದಾವೂದ್ ತೀರಿಸಿಕೊಂಡಿದ್ದ. ಪಠಾಣ್​ ಗ್ಯಾಂಗ್​​ನ ಒಬ್ಬೊಬ್ಬರನ್ನೇ ಕೊಲ್ಲುತ್ತ ಬಂದ. ಮುಂದೆ ಹಾಜಿ ಗ್ಯಾಂಗ್​​ನಲ್ಲೇ ಬೆಳೆದ ಈ ವ್ಯಕ್ತಿ, ಭೂಗತ ಲೋಕದಲ್ಲಿ ಸಿಕ್ಕಾಪಟೆ ಬೆಳೆದುಬಿಟ್ಟ.  ದಾವೂದ್​ ಇಬ್ರಾಹಿಂಗೆ ಬಾಲಿವುಡ್​ ಜತೆಗೂ ನಂಟಿತ್ತು. ಬೇರೆ ಹೆಸರಿನಲ್ಲಿ ಹಲವು ಸಿನಿಮಾಗಳನ್ನೂ ನಿರ್ಮಿಸಿದ್ದಾನೆ ಎಂದೂ ಹೇಳಲಾಗುತ್ತದೆ. ಅಷ್ಟೇ ಅಲ್ಲ, ಕೆಲವು ಬಾಲಿವುಡ್ ನಟಿಯರೊಟ್ಟಿಗೆ ಡೇಟಿಂಗ್​ ಕೂಡ ಮಾಡಿದ್ದಾನೆ. ಅಷ್ಟೆಲ್ಲ ಆದರೂ 1993ರ ಮುಂಬೈ ಸ್ಫೋಟದವರೆಗೆ ದಾವೂದ್ ಇಬ್ರಾಹಿಂ ಹೆಸರು ಅಷ್ಟೊಂದು ಬೆಳಕಿಗೆ ಬಂದಿರಲಿಲ್ಲ.

ಇದನ್ನೂ ಓದಿ: ಡೆಲಿವರಿ ನೀಡಲು ಬಂದು ಆಭರಣ ಕದ್ದ ಮಹಿಳೆ; ಮರಳುವ ಮುನ್ನ ಹೇಳಿದ್ದೇನು ಗೊತ್ತಾ? ಇಲ್ಲಿದೆ ಸಿಸಿಟಿವಿ ವಿಡಿಯೋ

Published On - 1:36 pm, Tue, 15 February 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ