AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ‘ಪಶ್ಚಿಮ ಬಂಗಾಳದ ಗಲಭೆಯಲ್ಲಿ ಗಾಯಗೊಂಡ  ಯೋಧ’ ಎಂದು ಬಿಜೆಪಿ ನಾಯಕರು ಶೇರ್ ಮಾಡಿದ ಫೋಟೊ ಜಾರ್ಖಂಡ್​ನದ್ದು

West Bengal Elections 2021: ಏಪ್ರಿಲ್ 10ರಂದು ಕೂಚ್ ಬೆಹಾರ್ ಜಿಲ್ಲೆಯ ಸಿತಾಲ್​ಗುಚಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ವೇಳೆ ಗಾಯಗೊಂಡ ಯೋಧ ಎಂದು ಬಿಜೆಪಿ ನಾಯಕರು ಶೇರ್ ಮಾಡಿರುವ ಫೋಟೊ ಜಾರ್ಖಂಡ್​ನಲ್ಲಿ ಲಂಗೂರ್ ಮಂಗಗಳ ದಾಳಿಗೊಳಗಾದ ಅಧಿಕಾರಿಯದ್ದು.

Fact Check: 'ಪಶ್ಚಿಮ ಬಂಗಾಳದ ಗಲಭೆಯಲ್ಲಿ ಗಾಯಗೊಂಡ  ಯೋಧ' ಎಂದು ಬಿಜೆಪಿ ನಾಯಕರು ಶೇರ್ ಮಾಡಿದ ಫೋಟೊ ಜಾರ್ಖಂಡ್​ನದ್ದು
ವೈರಲ್ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on: Apr 14, 2021 | 7:00 PM

Share

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ವೇಳೆ ಏಪ್ರಿಲ್ 10ರಂದು ಕೂಚ್ ಬೆಹಾರ್ ಜಿಲ್ಲೆಯ ಸಿತಾಲ್​ಗುಚಿ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳು (Central Industrial Security Force – CISF) ಯೋಧರು ಹಾರಿಸಿದ ಗುಂಡಿಗೆ ನಾಲ್ಕು ಮಂದಿ ಬಲಿಯಾಗಿದ್ದರು. ಯೋಧರು ಗುಂಡು ಹಾರಿಸಿದ್ದು ಸ್ವಯಂ ರಕ್ಷಣೆಗಾಗಿ ಎಂದು ಕೂಚ್ ಬೆಹಾರ್ ಪೊಲೀಸ್ ಅಧಿಕಾರಿ ಹೇಳಿದ್ದು, ಇದಕ್ಕೆಲ್ಲ ಕಾರಣ ಕೇಂದ್ರ ಸಚಿವ ಅಮಿತ್ ಶಾ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ

ಕೂಚ್ ಬೆಹಾರ್​ನಲ್ಲಿ ಯೋಧರು ನಾಗರಿಕರ ಮೇಲೆ ಗುಂಡು ಹಾರಿಸಿದ ಘಟನೆಯ ಬೆನ್ನಲ್ಲೇ ಬಿಜೆಪಿ ನಾಯಕರು ಗಾಯಗೊಂಡಿರುವ ಸಿಐಎಸ್ಎಫ್ ಯೋಧ  ಎಂಬ ಶೀರ್ಷಿಕೆಯೊಂದಿಗೆ ಫೋಟೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ. ಬಿಜೆಪಿ ನಾಯಕ, ಸಂಸದ ಸೌಮಿತ್ರ ಖಾನ್ ಅವರು ಇದೇ ಫೋಟೊವನ್ನು ಶೇರ್ ಮಾಡಿಸಿತಾಲ್​ಗುಚಿ ಗಲಭೆಯಲ್ಲಿ ಗಾಯಗೊಂಡ ಯೋಧ ಎಂದು ಹೇಳಿದ್ದಾರೆ.

’ಇದೇ ಫೋಟೊನ್ನು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕೂಡಾ ಶೇರ್ ಮಾಡಿದ್ದರು. ಬಿಜೆಪಿ ಸಂಸದ ಅರ್ಜುನ್ ಸಿಂಗ್ ಇದೇ ಫೋಟೊವನ್ನು ಫೇಸ್​ಬುಕ್ ಮತ್ತು ಟ್ವಿಟರ್​ನಲ್ಲಿ ಶೇರ್ ಮಾಡಿದ್ದು, ಆಮೇಲೆ ಡಿಲೀಟ್ ಮಾಡಿದ್ದರು. ಗಮನಿಸಿ ಬೇಕಾದ ಸಂಗತಿ ಎಂದರೆ ಬಿಜೆಪಿ ನಾಯಕರು ಎಲ್ಲಿಯೂ ಈ ಗಲಭೆಯಲ್ಲಿ ನಾಲ್ವರು ನಾಗರಿಕರು ಬಲಿಯಾಗಿರುವ ವಿಷಯವನ್ನು ಉಲ್ಲೇಖಿಸಿಲ್ಲ. ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಸಂತೋಷ್ ರಂಜನ್ ರೈ ಅವರು ಕೂಡಾ ಅದೇ ಫೋಟೊ ಟ್ವೀಟ್ ಮಾಡಿದ್ದಾರೆ.

ಫ್ಯಾಕ್ಟ್ ಚೆಕ್ ಬಿಜೆಪಿ ನಾಯಕರು ಟ್ವೀಟ್ ಮಾಡಿರುವ ಈ ಫೋಟೊ ಬಗ್ಗೆ ಫ್ಯಾಕ್ಟ್​ಚೆಕ್ ಮಾಡಿದ ಆಲ್ಟ್ ನ್ಯೂಸ್ ಇದು ಸಿತಾಲ್​ಗುಚಿಯಲ್ಲಿ ನಡೆದ ಗಲಭೆಯಲ್ಲಿ ಗಾಯಗೊಂಡ ಯೋಧನ ಫೋಟೊ ಅಲ್ಲ ಎಂದು ಹೇಳಿದೆ. ಈ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2021 ಏಪ್ರಿಲ್ 10ರಂದು ದೈನಿಕ್ ಜಾಗರಣ್​ನಲ್ಲಿ ಪ್ರಕಟವಾದ ವರದಿಯಲ್ಲಿ ಈ ಫೋಟೊ ಇದೆ.

Dainik Jagran

ದೈನಿಕ್ ಜಾಗರಣ್ ಸುದ್ದಿ

ವರದಿ ಪ್ರಕಾರ ಇದು ಎಎಸ್ಐ ಎಸ್.ಪಿ .ಶರ್ಮಾ ಅವರದ್ದು. ಜಾರ್ಖಂಡ್​ನ ಭೀಮಕನರಿ ಸಿಐಎಸ್ಎಫ್ ಶಿಬಿರದಲ್ಲಿ ಕರ್ತವ್ಯ ನಿರತರಾಗಿದ್ದಾಗ ಲಂಗೂರ್ ದಾಳಿ ಮಾಡಿತ್ತು. ನಾಲ್ಕು ಲಂಗೂರ್​ಗಳು (ಮಂಗ)  ಶರ್ಮಾ ಅವರ ಮೇಲೆ ದಾಳಿ ನಡೆಸಿದ್ದು, ಅವರ ಕುತ್ತಿಗೆಗೆ ಗಾಯಗಳಾಗಿತ್ತು. ಶರ್ಮಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಲ್ಲಿದೆ. ಧನಬಾದ್​ನಲ್ಲಿರುವ ಸಿಐಎಸ್​ಎಫ್ ಪ್ರಧಾನ ಕಚೇರಿ ಕೂಡಾ ಬಘಮರದಲ್ಲಿ ಎಸ್.ಪಿ ಶರ್ಮಾ ಅವರ ಮೇಲೆ ಲಂಗೂರ್ ಗಳು ದಾಳಿ ಮಾಡಿದ ಫೋಟೊ ಇದು  ಎಂದು ಬೂಮ್ ಲೈವ್​ಗೆ ತಿಳಿಸಿದೆ.

ಇದನ್ನೂ ಓದಿ: Fact Check: ಮಗಳನ್ನು ಹಿಂದೂ ಹುಡುಗನಿಗೆ ಮದುವೆ ಮಾಡಿಕೊಟ್ಟ ಕೇರಳದ ಮುಸ್ಲಿಂ ದಂಪತಿ; ವೈರಲ್ ಚಿತ್ರದ ಹಿಂದಿನ ಸತ್ಯಾಸತ್ಯತೆ ಏನು?

Fact Check: ಪಶ್ಚಿಮ ಬಂಗಾಳದ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಜನರನ್ನು ಆಕರ್ಷಿಸಲು ಖಾಲಿ ಕುರ್ಚಿಯಲ್ಲಿ ಊಟದ ಪೊಟ್ಟಣ, ವೈರಲ್ ಆಗಿದ್ದು ಹಳೇ ಫೋಟೊ