Fact Check 18-40 ವರ್ಷ ವಯಸ್ಸಿನವರಿಗೆ ಕೇಂದ್ರ ಸರ್ಕಾರ ಪ್ರತಿ ತಿಂಗಳು ₹1,800 ನೀಡುತ್ತಿದೆಯೇ?

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್​​ಧನ್ ಯೋಜನೆಗಾಗಿ ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡುವ ವ್ಯಕ್ತಿಗೆ ಕೇಂದ್ರ ಸರ್ಕಾರವು ಪ್ರತಿ ತಿಂಗಳು 1,800 ರೂಪಾಯಿಗಳನ್ನು ನೀಡುತ್ತದೆ ಎಂದು ಹೇಳುವ ಲಿಂಕ್ ಫೇಕ್ .

Fact Check 18-40 ವರ್ಷ ವಯಸ್ಸಿನವರಿಗೆ ಕೇಂದ್ರ ಸರ್ಕಾರ ಪ್ರತಿ ತಿಂಗಳು ₹1,800 ನೀಡುತ್ತಿದೆಯೇ?
ವೈರಲ್ ಆಗಿರುವ ಸಂದೇಶ
Edited By:

Updated on: May 04, 2022 | 3:52 PM

ದೆಹಲಿ: ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್​​ಧನ್ ಯೋಜನೆಗಾಗಿ (Pradhan Mantri Shram Yogi Maandhan Yojana)ಆನ್‌ಲೈನ್ ಫಾರ್ಮ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡುವ ವ್ಯಕ್ತಿಗೆ ಕೇಂದ್ರ ಸರ್ಕಾರವು ಪ್ರತಿ ತಿಂಗಳು 1,800 ರೂಪಾಯಿಗಳನ್ನು ನೀಡುತ್ತದೆ ಎಂದು ಅದು ಹೇಳುತ್ತದೆ. ಅರ್ಜಿ ಸಲ್ಲಿಸಲು ಫಾರ್ಮ್​​ನಲ್ಲಿ ಲಿಂಕ್ ಕೂಡಾ ನೀಡಲಾಗಿದೆ. 18 ರಿಂದ 40 ವರ್ಷ ವಯಸ್ಸಿನವರು ಯೋಜನೆಗೆ ಅರ್ಹರು ಎಂದು ಫಾರ್ಮ್ ಹೇಳುತ್ತದೆ. ಪತ್ರಿಕಾ ಮಾಹಿತಿ ಬ್ಯೂರೋ (PIB) ಈ ಆನ್‌ಲೈನ್ ಫಾರ್ಮ್ ಅನ್ನು ಪರಿಶೀಲಿಸಿದ್ದು ಅದು ನಕಲಿ ಎಂದು ಕಂಡುಹಿಡಿದಿದೆ. ಪಿಐಬಿಯ ಫ್ಯಾಕ್ಟ್ ಚೆಕ್ (Fact Check) ಮತ್ತು ಸರ್ಕಾರದ ಪ್ರಕಾರ, ಅಂತಹ ಯಾವುದೇ ಯೋಜನೆ ಅಸ್ತಿತ್ವದಲ್ಲಿಲ್ಲ. (Source)

ಫ್ಯಾಕ್ಟ್ ಚೆಕ್
ಆನ್‌ಲೈನ್ ಫಾರ್ಮ್‌ಗೆ ಸಂಬಂಧಿಸಿದ ಮಾಹಿತಿಯನ್ನು ಪಿಐಬಿಯ ಅಧಿಕೃತ ಫ್ಯಾಕ್ಟ್ ಚೆಕ್ ಟ್ವಿಟರ್ ಖಾತೆಯಲ್ಲಿ ಒದಗಿಸಲಾಗಿದೆ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್​​ಧನ್ ಯೋಜನೆಯು ಸರ್ಕಾರಿ ಪ್ರಾಯೋಜಿತ ಪಿಂಚಣಿ ಯೋಜನೆಯಾಗಿದೆ. ಫಲಾನುಭವಿಗಳಿಗೆ 60 ವರ್ಷ ತುಂಬುವವರೆಗೆ ಪಿಂಚಣಿ ಸಿಗುವುದಿಲ್ಲ.

ಇದನ್ನೂ ಓದಿ
ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲೀಸಾ ಪಠಣಕ್ಕೆ ಲಂಡನ್​​ನಲ್ಲಿ ಬೆಂಬಲ; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?
Fact Check ಹಿಮಾಚಲ ಪ್ರದೇಶದಲ್ಲಿ ಮಹಿಳೆಯರಿಗೆ ತಿಂಗಳಿಗೆ ₹1000 ನೀಡುತ್ತೇವೆ ಎಂಬ ಬ್ಯಾನರ್ ಎಎಪಿ ಹಾಕಿಲ್ಲ; ವೈರಲ್ ಆಗಿದ್ದು ತಿರುಚಿದ ಫೋಟೊ


ಲಿಂಕ್ ಕ್ಲಿಕ್ ಮಾಡುವಾಗ ಜಾಗರೂಕರಾಗಿರಿ

ಲಿಂಕ್​​ಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಅಂತಹ ಹಗರಣಗಳ ಬಗ್ಗೆ ಎಚ್ಚರದಿಂದಿರಬೇಕು. ಹಂಚಿಕೊಳ್ಳಲಾಗುತ್ತಿರುವ ಲಿಂಕ್‌ಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು ಮತ್ತು ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಗೆ ಪ್ರವೇಶವನ್ನು ಪಡೆಯಬಹುದು. ವಂಚಕರು ಲಿಂಕ್ ಅನ್ನು ಬಳಸಿಕೊಂಡು ನಿಮ್ಮ ಇಮೇಲ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್‌ಗೆ ಪ್ರವೇಶವನ್ನು ಪಡೆಯಬಹುದು.

ಏನಿದು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್​ಧನ್ ಯೋಜನೆ ?
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್​​ಧನ್ ಅಸಂಘಟಿತ ಕಾರ್ಮಿಕರ ವೃದ್ಧಾಪ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಗಾಗಿ ಸರ್ಕಾರಿ ಯೋಜನೆಯಾಗಿದೆ. ಗೃಹಾಧಾರಿತ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಮಧ್ಯಾಹ್ನದ ಊಟದ ಕೆಲಸಗಾರರು, ತಲೆ ಹೊರೆಯುವವರು, ಇಟ್ಟಿಗೆ ಗೂಡು ಕೆಲಸಗಾರರು, ಚಮ್ಮಾರರು, ಚಿಂದಿ ಆಯುವವರು, ಮನೆಗೆಲಸದವರು, ತೊಳೆಯುವವರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಖಾತೆ ಕೆಲಸಗಾರರು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮದ ಕೆಲಸಗಾರರು, ಶ್ರವಣ-ದೃಶ್ಯ ಕೆಲಸಗಾರರು ಅಥವಾ ಇದೇ ರೀತಿಯ ಉದ್ಯೋಗದಲ್ಲಿರುವ ಕೆಲಸಗಾರರು ಸೇರಿದಂತೆ ಬಹುಪಾಲು ಅಸಂಘಟಿತ ಕಾರ್ಮಿಕರಿಗೆ ಇರುವ ಯೋಜನೆ ಇದಾಗಿದೆ.

ಇದು ಸ್ವಯಂಪ್ರೇರಿತ ಮತ್ತು ಕೊಡುಗೆಯ ಪಿಂಚಣಿ ಕಾರ್ಯಕ್ರಮವಾಗಿದ್ದು, ಫಲಾನುಭವಿಯು 60 ವರ್ಷವನ್ನು ತಲುಪಿದ ನಂತರ ತಿಂಗಳಿಗೆ ರೂ 3,000 ರ ಕನಿಷ್ಠ ಆದಾಯವನ್ನು ಪಡೆಯುತ್ತಾನೆ. ಫಲಾನುಭವಿಯು ಮರಣಹೊಂದಿದರೆ ಫಲಾನುಭವಿಯ ಸಂಗಾತಿಯು ಕುಟುಂಬ ಪಿಂಚಣಿಯಾಗಿ 50 ಪ್ರತಿಶತದಷ್ಟು ಪಿಂಚಣಿಗೆ ಅರ್ಹರಾಗಿರುತ್ತಾರೆ. ಕುಟುಂಬ ಪಿಂಚಣಿಗೆ ಸಂಗಾತಿಗೆ ಮಾತ್ರ ಅರ್ಹತೆ ಇದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 3:47 pm, Wed, 4 May 22