AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿವ್​-ಇನ್ ಸಂಗಾತಿಯನ್ನು ಕೊಂದು ಮಂಚದ ಬಾಕ್ಸ್​​ನಲ್ಲಿ ಶವ ಬಚ್ಚಿಟ್ಟಿದ್ದ ಸೇಲ್ಸ್​ಮೆನ್

ವ್ಯಕ್ತಿಯೊಬ್ಬ ಹತ್ತು ವರ್ಷಗಳಿಂದ ಜತೆಗಿದ್ದ ಲಿವ್-ಇನ್ ಸಂಗಾತಿಯನ್ನು ಕೊಂದು ಮಂಚದ ಬಾಕ್ಸ್​ನಲ್ಲಿ ಬಚ್ಚಿಟ್ಟಿದ್ದ ಘಟನೆ ಫರೀದಾಬಾದ್​ನಲ್ಲಿ ನಡೆದಿದೆ. ಆರೋಪಿ ಮಹಿಳೆಯ ಕೊಲೆ ಮಾಡಿ ಶವವನ್ನು ಹಾಸಿಗೆಯ ಬಾಕ್ಸ್​ನಲ್ಲಿ ಮುಚ್ಚಿಟ್ಟಿದ್ದ, ಅಕ್ಕಪಕ್ಕದ ಮನೆಯವರಿಗೆ ಕೊಳೆತ ದೇಹದ ವಾಸನೆ ಬಾರದಂತೆ ತಡೆಯಲು ಇಡೀ ಮನಯಾದ್ಯಂತ ಧೂಪ, ಊದಿನ ಕಡ್ಡಿಯ ಹೊಗೆ ಹಾಕುತ್ತಲೇ ಇದ್ದ. ಆಕೆಯನ್ನು ಕೊಂದ ಬಳಿಕ ಆತ ತನ್ನ ಅಜ್ಜಿಯ ಬಳಿಗೆ ಹೋಗಿ ಆ ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ.

ಲಿವ್​-ಇನ್ ಸಂಗಾತಿಯನ್ನು ಕೊಂದು ಮಂಚದ ಬಾಕ್ಸ್​​ನಲ್ಲಿ ಶವ ಬಚ್ಚಿಟ್ಟಿದ್ದ ಸೇಲ್ಸ್​ಮೆನ್
ಮನೆ Image Credit source: Jagran English
ನಯನಾ ರಾಜೀವ್
|

Updated on: Apr 28, 2025 | 8:57 AM

Share

ಫರಿದಾಬಾದ್, ಏಪ್ರಿಲ್ 28: ಲಿವ್​-ಇನ್ ಸಂಗಾತಿ(Live-in Partner)ಯನ್ನು ಕೊಂದು ಮಂಚದ ಬಾಕ್ಸ್​ನಲ್ಲಿ ವ್ಯಕ್ತಿಯೊಬ್ಬ ಬಚ್ಚಿಟ್ಟಿದ್ದ ಘಟನೆ ಫರೀದಾಬಾದ್​ನಲ್ಲಿ ನಡೆದಿದೆ. ಸರನ್ ಪೊಲೀಸ್ ಠಾಣೆ ವ್ಯಾಪ್ತಿಯ ಜವಾಹರ್ ಕಾಲೊನಿಯಲ್ಲಿ ಕಳೆದ 10 ವರ್ಷಗಳಿಂದ ಲಿವ್​-ಇನ್ ಸಂಬಂಧದಲ್ಲಿದ್ದ ಮಹಿಳೆಯನ್ನು ಸೆಲ್ಸ್​ಮೆನ್​ ಕೊಲೆ ಮಾಡಿದ್ದ. ಆರೋಪಿ ಮಹಿಳೆಯ ಕೊಲೆ ಮಾಡಿ ಶವವನ್ನು ಹಾಸಿಗೆಯ ಬಾಕ್ಸ್​ನಲ್ಲಿ ಮುಚ್ಚಿಟ್ಟಿದ್ದ, ಅಕ್ಕಪಕ್ಕದ ಮನೆಯವರಿಗೆ ಕೊಳೆತ ದೇಹದ ವಾಸನೆ ಬಾರದಂತೆ ತಡೆಯಲು ಇಡೀ ಮನಯಾದ್ಯಂತ ಧೂಪ, ಊದಿನ ಕಡ್ಡಿಯ ಹೊಗೆ ಹಾಕುತ್ತಲೇ ಇದ್ದ.

ಆಕೆಯನ್ನು ಕೊಂದ ಬಳಿಕ ಆತ ತನ್ನ ಅಜ್ಜಿಯ ಬಳಿಗೆ ಹೋಗಿ ಆ ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಯುವಕನ ಅಜ್ಜಿ ಕೂಡಲೇ ಸರನ್​ ಪೊಲೀಸರಿಗೆ ಮಾಹಿತಿ ನೀಡಿದ್ದಳು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಮನೆಯ ಬೀಗ ಮುರಿದು ಒಳಗೆ ಹೋಗಿ, ಹಾಸಿಗೆಯಿಂದ ಶವವನ್ನು ಹೊರತೆಗೆದರು. ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ.

ಜವಾಹರ್ ಕಾಲೋನಿಯಲ್ಲಿ ವಾಸಿಸುವ ವೃದ್ಧೆ ಸುಂದರಿ ದೇವಿ ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಅವರ ಮೊಮ್ಮಗ ಜಿತೇಂದ್ರ ಕಳೆದ 10 ವರ್ಷಗಳಿಂದ ಸೋನಿಯಾ ಎಂಬ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಾರೆ. ಈ 10 ವರ್ಷಗಳಲ್ಲಿ,  ಜಿತೇಂದ್ರ ಒಮ್ಮೆಯೂ ಅವರ ಬಳಿ ಮಾತನಾಡಿರಲಿಲ್ಲ, ಯಾವುದೇ ಸಂಪರ್ಕವೂ ಇರಲಿಲ್ಲ.

ಇದನ್ನೂ ಓದಿ
Image
ಓಂ ಪ್ರಕಾಶ್​ ಕೊಲೆ: ಪತಿಯನ್ನು 8-10 ಬಾರಿ ಇರಿದು ಕೊಂದ ಪತ್ನಿ?
Image
ರಿಕ್ಕಿ ಬಲಗೈಯಲ್ಲಿದ್ದ ಗುಂಡನ್ನು ವೈದ್ಯರು ಹೊರತೆಗೆದಿದ್ದಾರೆ: ಜಗದೀಶ್
Image
ರಿಕ್ಕಿ ಮೇಲೆ ಫೈರಿಂಗ್​: ನಾಲ್ವರ ವಿರುದ್ಧ FIR ದಾಖಲು 
Image
ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್

ಮತ್ತಷ್ಟು ಓದಿ: Delhi: ಫಾರ್ಮ್​ಹೌಸ್​ನಲ್ಲಿ ಮಗಳ ಎದುರೇ ತಾಯಿ ಮೇಲೆ ಅತ್ಯಾಚಾರ

ಜಿತೇಂದ್ರ ಅವರಿಗೂ ಇಬ್ಬರು ಮಕ್ಕಳಿದ್ದಾರೆ. ಅವನು ತನ್ನ ಮಕ್ಕಳೊಂದಿಗೂ ಸಂಪರ್ಕದಲ್ಲಿ ಇರಲಿಲ್ಲ. ಜಿತೇಂದ್ರ ಅವರ ಪತ್ನಿ ಪೂನಂ ಸುಮಾರು 12 ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾದರು. ಅದಾದ ನಂತರ ಜಿತೇಂದ್ರ ಕೂಡ ತನ್ನ ಮಕ್ಕಳನ್ನು ತೊರೆದರು.

ಆರೋಪಿಗಳು ಸೈಕಲ್‌ನಲ್ಲಿ ಬಟ್ಟೆ ಮಾರಾಟ ಮಾಡುತ್ತಿದ್ದ.ಆತನ ಪತ್ನಿಯ ಮರಣದ ನಂತರ, ಅವರು ಜವಾಹರ್ ಕಾಲೋನಿಯ ಬದ್ಖಾಲ್ ಕಾಲೋನಿಯ ನಿವಾಸಿ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸಲು ಪ್ರಾರಂಭಿಸಿದರು.

ಶನಿವಾರ ಸಂಜೆ, ಜಿತೇಂದ್ರ ಸುಂದರಿ ದೇವಿಯ ಮನೆಗೆ ಹೋಗಿ ಸೋನಿಯಾಳನ್ನು ಕೊಂದಿರುವುದಾಗಿ ಹೇಳಿದ್ದಾನೆ. ಇದಾದ ನಂತರ ಅವರು ಸರನ್ ಪೊಲೀಸ್ ಠಾಣೆಗೆ ಹೋಗಿ ಶರಣಾಗುವುದಾಗಿ ಹೇಳಿದ್ದ. ಆದರೆ, ಆತ ಪೊಲೀಸ್ ಠಾಣೆಗೆ ಬರಲಿಲ್ಲ. ಮೊಮ್ಮಗನ ಮಾತು ಕೇಳಿ ಸುಂದರಿ ದೇವಿಗೆ ನಡುಕ ಶುರುವಾಗಿತ್ತು. ಕೂಡಲೇ ಸರನ್ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸುಂದರಿ ದೇವಿಯನ್ನು ತಮ್ಮೊಂದಿಗೆ ಕರೆದುಕೊಂಡು ಆರೋಪಿಗಳ ಮನೆಗೆ ಹೋಗಿದ್ದರು.

ಪೊಲೀಸರು ಮನೆ ಮಾಲೀಕ ಸುರೇಂದ್ರ ಅವರನ್ನು ಕರೆಸಿ ಬೀಗ ಮುರಿದರು. ಇದಾದ ನಂತರ, ಒಳಗೆ ಹೋದಾಗ, ಕೋಣೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಪೊಲೀಸರು ಹಾಸಿಗೆ ತೆರೆದಾಗ, ಸೋನಿಯಾಳ ದೇಹವು ತುಂಬಾ ಕೆಟ್ಟ ಸ್ಥಿತಿಯಲ್ಲಿ ಬಿದ್ದಿತ್ತು. ಪೊಲೀಸರು ವಿಧಿವಿಜ್ಞಾನ ತಂಡವನ್ನೂ ಸ್ಥಳಕ್ಕೆ ಕರೆಸಿದ್ದಾರೆ. ಅವರಿಬ್ಬರಿಗೆ ಪರಿಚಯವಾಗಿದ್ಹೇಗೆ, ಕೊಲೆ ಮಾಡಲು ಕಾರಣವೇನು ಎಲ್ಲಾ ವಿಚಾರಗಳ ಕುರಿತು ತನಿಖೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?