AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜರ್ಮನಿಯಲ್ಲಿ ಪ್ರಧಾನಿ ಎದುರು ದೇಶಭಕ್ತಿ ಗೀತೆ ಹಾಡಿದ್ದ ಬಾಲಕನ ತಂದೆ ಫುಲ್​ ಗರಂ; ಟ್ವೀಟ್ ಡಿಲೀಟ್ ಮಾಡಿದ ಹಾಸ್ಯನಟ ಕುನಾಲ್ ಕಾಮ್ರಾ

ದೇಶದ ಖ್ಯಾತ ಕಾಮಿಡಿಯನ್​ ಆಗಿರುವ ಕುನಾಲ್​ ಕಾಮ್ರಾ, ಪ್ರಧಾನಿ ನರೇಂದ್ರ ಮೋದಿಯವರ ಎದುರು ಬಾಲಕ ಹಾಡು ಹಾಡಿದ್ದರ ವಿಡಿಯೋ ಇಟ್ಟುಕೊಂಡು ಹಾಸ್ಯ ಮಾಡಿದ್ದರು.

ಜರ್ಮನಿಯಲ್ಲಿ ಪ್ರಧಾನಿ ಎದುರು ದೇಶಭಕ್ತಿ ಗೀತೆ ಹಾಡಿದ್ದ ಬಾಲಕನ ತಂದೆ ಫುಲ್​ ಗರಂ; ಟ್ವೀಟ್ ಡಿಲೀಟ್ ಮಾಡಿದ ಹಾಸ್ಯನಟ ಕುನಾಲ್ ಕಾಮ್ರಾ
ಪ್ರಧಾನಿಯೆದುರು ದೇಶಭಕ್ತಿ ಗೀತೆ ಹಾಡಿದ ಬಾಲಕ ಮತ್ತು ಕುನಾಲ್ ಕಾಮ್ರಾ
Follow us
TV9 Web
| Updated By: Lakshmi Hegde

Updated on:May 05, 2022 | 5:48 PM

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಜರ್ಮನಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಲ್ಲೊಬ್ಬ ಭಾರತೀಯ ಮೂಲದ ಪುಟ್ಟ ಬಾಲಕ ದೇಶಭಕ್ತಿ ಗೀತೆ  ಹಾಡುವ ಮೂಲಕ ಗಮನಸೆಳೆದಿದ್ದ. ಆತನ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗಿತ್ತು. ಹುಡುಗನ ದೇಶಭಕ್ತಿ ಗೀತೆ ಕೇಳಿ ಪ್ರಧಾನಿ ಮೋದಿ ಕೂಡ ತುಂಬ ಸಂತೋಷ ವ್ಯಕ್ತಪಡಿಸಿದ್ದರು. ಆತನನ್ನು ಮುದ್ದಿಸಿದ್ದರು. ಆದರೆ ಈಗ ಬಾಲಕನ ತಂದೆ ಸಿಕ್ಕಾಪಟೆ ಗರಂ ಆಗಿದ್ದಾರೆ. ನನ್ನ ಪುಟ್ಟ ಮಗ ಹಾಡುಹಾಡಿದ್ದಕ್ಕೂ ರಾಜಕೀಯ ಬಣ್ಣ ಬಳಿಯಬೇಡಿ ಎಂದು ಕಿಡಿಕಾರಿದ್ದಾರೆ. ಅಂದಹಾಗೇ, ಅವರು ಹೀಗೆ ಹೇಳಿದ್ದು  ಹಾಸ್ಯನಟ ಕುನಾಲ್​ ಕಮ್ರಾರಿಗೆ.

ದೇಶದ ಖ್ಯಾತ ಕಾಮಿಡಿಯನ್​ ಆಗಿರುವ ಕುನಾಲ್​ ಕಾಮ್ರಾ, ಪ್ರಧಾನಿ ನರೇಂದ್ರ ಮೋದಿಯವರ ಎದುರು ಬಾಲಕ ಹಾಡು ಹಾಡಿದ್ದರ ವಿಡಿಯೋ ಇಟ್ಟುಕೊಂಡು ಹಾಸ್ಯ ಮಾಡಿದ್ದರು. ಯಾರೋ ಎಡಿಟ್​ ಮಾಡಿ ಟ್ರೋಲ್ ಮಾಡಿದ ವಿಡಿಯೋವನ್ನು ಶೇರ್​ ಮಾಡಿಕೊಂಡು, ಯಾರಿದನ್ನು ಮಾಡಿದ್ದು ಎಂದು ಪ್ರಶ್ನಿಸಿ, ದೊಡ್ಡದಾಗಿ ನಗುತ್ತಿರುವ ಇಮೋಜಿ ಹಾಕಿದ್ದರು.  ಕುನಾಲ್ ಶೇರ್​ ಮಾಡಿದ ವಿಡಿಯೋದಲ್ಲಿ ಹಾಡನ್ನೇ ಬದಲಿಸಲಾಗಿದೆ. ಬಾಲಕ ಹಾಡಿರುವ ಹೇ ಜನ್ಮಭೂಮಿ ಭಾರತ್​ ಎಂಬ ಹಾಡಿನ ಬದಲಿಗೆ Mehengayi daayan khaaye jaat hain ಎಂಬ ಹಾಡನ್ನು (2010ರಲ್ಲಿ ಬಿಡುಗಡೆಯಾದ ಪೀಪ್ಲಿ ಲೈವ್​ ಸಿನಿಮಾದ ಗೀತೆ) ಹಾಕಲಾಗಿದೆ. ಇದು ಹಣದುಬ್ಬರ ಎಂಬ ವಿಚಾರಕ್ಕೆ ಸಂಬಂಧಪಟ್ಟ ಹಾಡು.

ಆದರೆ ಕುನಾಲ್​ ಈ ವಿಡಿಯೋ ಶೇರ್ ಮಾಡಿಕೊಂಡಿದ್ದೇ ತಡ ಬಾಲಕನ ತಂದೆ ಗಣೇಶ್ ಪೋಲ್​ ತಿರುಗೇಟು ನೀಡಿದ್ದಾರೆ. ಕುನಾಲ್​​ರನ್ನು ಕಳಪೆ ಮನಸ್ಥಿತಿಯವರು ಎಂದು ಕರೆದ ಅವರು, ನನ್ನ ಪುತ್ರನಿಗೆ ಇನ್ನೂ 7ವರ್ಷ. ಅವನು ಆತನ ಪ್ರೀತಿಯ ತಾಯ್ನಾಡು ಭಾರತಕ್ಕಾಗಿ ಈ ಹಾಡು ಹಾಡಿದ್ದಾನೆ. ಆತ  ಇನ್ನೂ ತುಂಬ ಚಿಕ್ಕವನು ಮತ್ತು ಖಂಡಿತವಾಗಿಯೂ ನಿಮಗಿಂತಲೂ ಹೆಚ್ಚು ದೇಶಭಕ್ತಿ ಅವನಿಗೆ ಇದೆ. ನಿಮ್ಮ ಹೊಲಸು ರಾಜಕೀಯದಿಂದ ಪುಟ್ಟ ಹುಡುಗನನ್ನು ಬದಿಗಿಡಿ. ಕಳಪೆ ಜೋಕುಗಳನ್ನು ಮಾಡುತ್ತೀರಲ್ಲ, ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿ ಎಂದು ಕಿಡಿಕಾರಿದ್ದಾರೆ. ಆದರೆ ಕುನಾಲ್​ ಅವರ ಟ್ವಿಟರ್ ಅಕೌಂಟ್​ನಲ್ಲಿ ಸದ್ಯ ಆ ವಿಡಿಯೋ ಕಾಣಿಸುತ್ತಿಲ್ಲ.

ಹಾಗೇ, ಗಣೇಶ್ ಪೋಲ್​​ ಅವರ ಟ್ವೀಟ್ ಶೇರ್ ಮಾಡಿಕೊಂಡ ಕುನಾಲ್, ನಾವು ಜೋಕ್​ ಮಾಡಿದ್ದು ನಿಮ್ಮ ಮಗನ ಬಗ್ಗೆ ಅಲ್ಲ. ಭಾರತ ಮಾತೆಯ ಜನಪ್ರಿಯ ಪುತ್ರನ ಎದುರು ನಿಮ್ಮ ಪುತ್ರ ಹಾಡು ಹೇಳಿದ್ದನ್ನು ಕೇಳಿ ನೀವು ತುಂಬ ಖುಷಿಪಟ್ಟಿರಿ. ಆದರೆ ಭಾರತ ಮಾತೆಯ ಆ ಪುತ್ರ ಜನರಿಂದ ಇನ್ನಷ್ಟು ಹಾಡನ್ನು ಕೇಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಹೆಡ್ ಬುಷ್’ ಚಿತ್ರದ ಜೊತೆ ಅಜಿತ್ ಜಯರಾಜ್ ಗೆ ಯಾವುದೇ ಸಂಬಂಧವಿಲ್ಲ: ಅಗ್ನಿ ಶ್ರೀಧರ್

Published On - 5:47 pm, Thu, 5 May 22

25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?