G20 ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರತಿನಿಧಿಗಳಿಗೆ ವಿಶೇಷ ಉಡುಗೊರೆ; ಗಿಫ್ಟ್ ಬಾಕ್ಸ್​​ನಲ್ಲಿ ಏನೆಲ್ಲಾ ಇತ್ತು?

ಸೆಪ್ಟೆಂಬರ್ 9 ಮತ್ತು 10ರಂದು ನಡೆದ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ ವಿವಿಧ ದೇಶಗಳ ಪ್ರತಿನಿಧಿಗಳಿಗೆ ಅತಿಥೇಯ ದೇಶವಾದ ಭಾರತ ವಿಶೇಷ ಉಡುಗೊರೆಗಳನ್ನು ನೀಡಿದೆ. ಬೇರೆ ಬೇರೆ ದೇಶದ ಪ್ರಧಾನಿ, ಕಾರ್ಯದರ್ಶಿ, ನಾಯಕರ ಸಂಗಾತಿಗಳಿಗೆ ವಿಶಿಷ್ಟ ಉಡುಗೊರೆಗಳನ್ನು ನೀಡಲಾಗಿದೆ. ಈ ಗಿಫ್ಟ್ ಬಾಕ್ಸ್ ನಲ್ಲಿ ಏನೇನು ಇತ್ತು? ಯಾರಿಗೆ ಯಾವ ಉಡುಗೊರೆ? ಇಲ್ಲಿದೆ ಮಾಹಿತಿ.

G20 ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರತಿನಿಧಿಗಳಿಗೆ ವಿಶೇಷ ಉಡುಗೊರೆ; ಗಿಫ್ಟ್ ಬಾಕ್ಸ್​​ನಲ್ಲಿ ಏನೆಲ್ಲಾ ಇತ್ತು?
ಜಿ20 ಪ್ರತಿನಿಧಿಗಳಿಗೆ ನೀಡಿದ ಗಿಫ್ಟ್ ಬಾಕ್ಸ್
Follow us
|

Updated on:Sep 12, 2023 | 7:01 PM

ದೆಹಲಿ ಸೆಪ್ಟೆಂಬರ್ 12: ದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ಜಿ20 ಶೃಂಗಸಭೆ (G20 Summit) ನಡೆದಿದೆ. ಈ ಸಭೆಯಲ್ಲಿ ಭಾಗವಹಿಸಿದ ವಿವಿಧ ದೇಶಗಳ ಪ್ರತಿನಿಧಿಗಳಿಗೆ ಅತಿಥೇಯ ದೇಶವಾದ ಭಾರತ ವಿಶೇಷ ಉಡುಗೊರೆಗಳನ್ನು (gift hamper) ನೀಡಿದೆ. ಬೇರೆ ಬೇರೆ ದೇಶದ ಪ್ರಧಾನಿ, ಕಾರ್ಯದರ್ಶಿ, ನಾಯಕರ ಸಂಗಾತಿಗಳಿಗೆ ವಿಶಿಷ್ಟ ಉಡುಗೊರೆಗಳನ್ನು ನೀಡಲಾಗಿದೆ. ಈ ಗಿಫ್ಟ್ ಬಾಕ್ಸ್ ನಲ್ಲಿ ಏನೇನು ಇತ್ತು? ಯಾರಿಗೆ ಯಾವ ಉಡುಗೊರೆ? ಇಲ್ಲಿದೆ ಮಾಹಿತಿ.

ಉಡುಗೊರೆಯ ಬಾಕ್ಸ್ ಕರಕುಶಲ ಕಲಾಕೃತಿಗಳು ಮತ್ತು ಉತ್ಪನ್ನಗಳನ್ನು ಒಳಗೊಂಡಿದೆ.  ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳಿಗೆ ಸಂಬಂಧಿಸಿದ್ದಾಗಿದೆ. ಕೆಲವು ಉತ್ಪನ್ನಗಳು ಶತಮಾನಗಳ ಸಂಪ್ರದಾಯದ ಉತ್ಪನ್ನವಾಗಿದೆ. ಇವುಗಳನ್ನು ಕುಶಲಕರ್ಮಿಗಳು ಮಾಡಿದ್ದು, ಇದು ನಮ್ಮದೇಶದ ವಿಶಿಷ್ಟ ಜೈವಿಕ ವೈವಿಧ್ಯತೆಯನ್ನು ಬಿಂಬಿಸುತ್ತದೆ.

ಹಿತ್ತಾಳೆ ಪಟ್ಟಿಯೊಂದಿಗೆ ಶೀಶಮ್  ಮರದಿಂದ ಮಾಡಿದ  ಸಂದೂಕ್

ಸಂದೂಕ್’ ಅಂದರೆ ಹಿಂದಿಯಲ್ಲಿ ನಿಧಿ ಪೆಟ್ಟಿಗೆ. ಸಾಂಪ್ರದಾಯಿಕವಾಗಿ, ಇದು ಗಟ್ಟಿಯಾದ ಹಳೆಯ ಮರ ಅಥವಾ ಲೋಹದಿಂದ ಮಾಡಿದ  ಪೆಟ್ಟಿಗೆಯಾಗಿದ್ದು, ಮೇಲ್ಭಾಗದಲ್ಲಿ ಮುಚ್ಚಳ, ಅಲಂಕಾರಗಳನ್ನು ಹೊಂದಿದೆ. ಇದು ಭಾರತೀಯ ಸಾಂಸ್ಕೃತಿಕ ಮತ್ತು ಜಾನಪದ ದಂತಕಥೆಗಳಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ, ಜೊತೆಗೆ ಸೊಗಸಾದ ಕಲಾಕುಸುರಿ ಇದರಲ್ಲಿದೆ. ಈ ಸಂದೂಕ್ ಅನ್ನು ಶೀಶಮ್ (ಇಂಡಿಯನ್ ರೋಸ್​​ವುಡ್ ) ಬಳಸಿ ತಯಾರಿಸಲಾಗಿದೆ.ಇದು ಅದರ ಶಕ್ತಿ, ಬಾಳಿಕೆ, ವಿಶಿಷ್ಟವಾದ ಧಾನ್ಯದ ಮಾದರಿಗಳು ಮತ್ತು ಶ್ರೀಮಂತ ಬಣ್ಣದಿಂದ ಕೂಡಿದೆ. ಹಿತ್ತಾಳೆಯ ಪಟ್ಟಿಯನ್ನು (ಸ್ಟ್ರಿಪ್) ಸೂಕ್ಷ್ಮವಾಗಿ ಕೆತ್ತಲಾಗಿದ್ದು ಇದನ್ನು ಮರದಲ್ಲಿ ಕೆತ್ತಿ ಇರಿಸಲಾಗಿದೆ. ಇದು ಇತರ ಸಂಪತ್ತನ್ನು ಇಡುವುದಕ್ಕೆ ಇರುವುದಾದರೂ ಇದರ ಕಲಾತ್ಮಕತೆ ನೋಡಿದರೆ ಇದೇ ಒಂದು ನಿಧಿ .

ಕಾಶ್ಮೀರದ ಕೇಸರಿ

ಕೇಸರಿ (ಪರ್ಷಿಯನ್ ಭಾಷೆಯಲ್ಲಿ ‘ಝಫ್ರಾನ್’, ಹಿಂದಿಯಲ್ಲಿ ‘ಕೇಸರ್’) ವಿಶ್ವದ ಅತ್ಯಂತ ವಿಶಿಷ್ಟ ಮತ್ತು ದುಬಾರಿ ಮಸಾಲೆಯಾಗಿದೆ. ಸಂಸ್ಕೃತಿಗಳು ಮತ್ತು ನಾಗರಿಕತೆಗಳಾದ್ಯಂತ, ಕೇಸರಿಯನ್ನು ಪಾಕಶಾಲೆ ಮತ್ತು ಔಷಧೀಯ ಮೌಲ್ಯಕ್ಕಾಗಿ ಬಳಸಲಾಗಿದೆ. ಇದು ಪ್ರಕೃತಿಯ ನಿಧಿಯಾಗಿದ್ದು, ಅಪರೂಪದ ಮತ್ತು ಆಕರ್ಷಕವಾಗಿದೆ. Saffron Crocus ಎಂಬ ಗಿಡದ ಹೂವು ಇದು. ಇದರ ಕಡುಗೆಂಪು ಬಣ್ಣವು ಸೂರ್ಯನ ಬಿಸಿಲಿನಲ್ಲಿ ಒಣಗಿದ ಮತ್ತು ತಂಪಾದ ರಾತ್ರಿಗಳಲ್ಲಿರಿಸಿದರ ಪರಿಣಾಮ ಆಗಿರುತ್ತದೆ. ಕುಂಕುಮ ಹೂ ಅಥವಾ ಕೇಸರಿ ಬೆಳೆಸುವುದು ಬಹಳ ಶ್ರಮದಾಯಕ ಪ್ರಕ್ರಿಯೆ. ಮಸಾಲೆಯ ಕೇವಲ ಔನ್ಸ್ ಅನ್ನು ನೀಡಲು ಸಾವಿರಾರು ಹೂವುಗಳು ಬೇಕಾಗುತ್ತದೆ.

ಕಾಶ್ಮೀರಿ ಕೇಸರಿ ವಿಶಿಷ್ಟತೆ ಮತ್ತು ಅಸಾಧಾರಣ ಗುಣಮಟ್ಟದಿಂದ ಕೂಡಿದ್ದು ಇದರ ಸುಗಂಧ, ಗಾಢವಾದ ಬಣ್ಣ ಮತ್ತು ಸಾಟಿಯಿಲ್ಲದ ಸಾಮರ್ಥ್ಯವು ಇದನ್ನು ವಿಶಿಷ್ಟವಾಗಿರಿಸುತ್ತದೆ. ಇದಕ್ಕೆ ಕಾರಣ ಕಾಶ್ಮೀರದ ಗಾಳಿ ಹೇರಳವಾದ ಸೂರ್ಯನ ಬೆಳಕು ಮತ್ತು ಮಣ್ಣು, ಇದು ತೈಲಗಳ ಹೆಚ್ಚಿನ ಸಾಂದ್ರತೆಯೊಂದಿಗೆ ಕೇಸರಿ ಬಣ್ಣವನ್ನು ನೀಡುತ್ತದೆ.

ಐಷಾರಾಮಿ ಪಾಕಶಾಲೆ, ಅಡುಗೆ, ಸೌಂದರ್ಯ ವರ್ಧಕಗಳಲ್ಲಿ ಬಳಸುವ ಕೇಸರಿ,ಉತ್ತಮ ಆಂಟಿ ಆಕ್ಸಿಡೆಂಟ್ ಆಗಿದ್ದು, ಆರೋಗ್ಯಕ್ಕೂ ಸಹಕಾರಿ ಆಗಿದೆ.

ಪೆಕೊ ಡಾರ್ಜಿಲಿಂಗ್ ಮತ್ತು ನೀಲಗಿರಿ ಟೀ

ಪೆಕೊ ಡಾರ್ಜಿಲಿಂಗ್ ಮತ್ತು ನೀಲಗಿರಿ ಟೀ ದೇಶದ ವಿಶಿಷ್ಟ ಚಹಾಗಳು. ಡಾರ್ಜಿಲಿಂಗ್ ಚಹಾವು ವಿಶ್ವದ ಅತ್ಯಂತ ಮೌಲ್ಯಯುತವಾದ ಚಹಾವಾಗಿದೆ. 3000-5000 ಅಡಿ ಎತ್ತರದಲ್ಲಿರುವ ಪಶ್ಚಿಮ ಬಂಗಾಳದ ಮಂಜಿನ ಬೆಟ್ಟಗಳ ಮೇಲೆ ನೆಲೆಗೊಂಡಿರುವ ಚಹಾ ಗಿಡಗಳ ಪೊದೆಗಳಿಂದ ಎಳೆ ಚಿಗುರುಗಳನ್ನು ಮಾತ್ರ ಆರಿಸಲಾಗುತ್ತದೆ. ಎಲೆಗಳನ್ನು ಒಣಗಿಸಿ, ಪುಡಿ ಮಾಡಿ ಅವು ಚಹಾ ಪುಡಿ ರೂಪದಲ್ಲಿ ಅಥವಾ ಎಲೆಯ ರೂಪದಲ್ಲಿ ನಮ್ಮ ಕೈಗೆ ಸಿಕ್ಕಿ, ಸಕ್ಕರೆ ಹಾಲಿನೊಂದಿಗೆ ಹದವಾಗಿ ಬೆರೆತು ಕಪ್ಪಿನೊಳಗೆ ಸುರಿದಾಗ ಸಿಗುವ ರುಚಿಯೇ ಇವುಗಳನ್ನು ಭಿನ್ನವಾಗಿಸಿದ್ದು.

ನೀಲಗಿರಿ ಚಹಾವು ದಕ್ಷಿಣ ಭಾರತದ ಅತ್ಯಂತ ಅದ್ಭುತವಾದ ಪರ್ವತ ಶ್ರೇಣಿಯಿಂದ ಬರುತ್ತದೆ. 1000-3000 ಅಡಿ ಎತ್ತರದಲ್ಲಿ ಪರ್ವತಗಳ ಸೊಂಪಾದ ಭೂಪ್ರದೇಶದ ನಡುವೆ ಬೆಳೆಸಲಾಗುತ್ತದೆ. ಚಹಾವು ತುಲನಾತ್ಮಕವಾಗಿ ಸೌಮ್ಯವಾಗಿರುತ್ತದೆ.

ಇದನ್ನೂ ಓದಿ: G20 Summit: ಜಿ-20 ನಾಯಕರಿಗೆ ವಿಶೇಷ ಉಡುಗೊರೆ ನೀಡಿದ ಭಾರತ, ಇಲ್ಲಿದೆ ನೋಡಿ

ಅರಕು ಕಾಫಿ

ಅರಕು ಕಾಫಿಯು ಆಂಧ್ರಪ್ರದೇಶದ ಅರಕು ಕಣಿವೆಯಲ್ಲಿ ಸಾವಯವ ತೋಟಗಳಲ್ಲಿ ಬೆಳೆದ ಕಾಫಿಯಾಗಿದೆ. ಈ ಕಾಫಿ ಬೀಜಗಳು ಕಣಿವೆಯ ಶ್ರೀಮಂತ ಮಣ್ಣು ಮತ್ತು ಸಮಶೀತೋಷ್ಣ ಹವಾಮಾನದ ಸಾರವನ್ನು ಹೊಂದಿವೆ. ಕಾಫಿ ಗಿಡಗಳನ್ನು ಕಣಿವೆಯ ರೈತರು ಬೆಳೆಸುತ್ತಾರೆ, ಅವರು ಪ್ರಕೃತಿಯೊಂದಿಗೆ ಸಂಪೂರ್ಣ ಸಾಮರಸ್ಯದಿಂದ ಕೃಷಿ ಮಾಡುತ್ತಾರೆ. ಸಣ್ಣ ತೋಟಗಳಲ್ಲಿ ಯಂತ್ರಗಳು ಅಥವಾ ರಾಸಾಯನಿಕಗಳನ್ನು ಬಳಸದೆ ಕಾಫಿ ಕೃಷಿಕರು ನೈಸರ್ಗಿಕವಾಗಿ ಕಾಫಿಯನ್ನು ಬೆಳೆಯುತ್ತಾರೆ. ಅಪರೂಪದ ಘಮ ಇರುವಶುದ್ಧ ಅರೇಬಿಕಾ, ಅರಕು ಕಾಫಿ ಅದರ ವಿಶಿಷ್ಟ ವಿನ್ಯಾಸ ಮತ್ತು ಸುವಾಸನೆಗಳ ಹೆಸರುವಾಸಿಯಾಗಿದೆ.

ಸುಂದರಬನದ ಜೇನು

ಸುಂದರಬನಗಳು ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಅರಣ್ಯವಾಗಿದ್ದು, ಬಂಗಾಳ ಕೊಲ್ಲಿಯಲ್ಲಿ ಗಂಗಾ, ಬ್ರಹ್ಮಪುತ್ರ ಮತ್ತು ಮೇಘನಾ ನದಿಗಳ ಸಂಗಮದಿಂದ ರೂಪುಗೊಂಡ ಡೆಲ್ಟಾದಲ್ಲಿದೆ. ಇದು ಜೇನುನೊಣಗಳ ಕಾಡು. ಜೇನುಗೂಡು ಕೃಷಿ ಸಂಸ್ಕೃತಿಯ ಮೊದಲು, ಜನರು ಜೇನುಗೂಡುಗಳನ್ನು ಅರಣ್ಯದಿಂದ ಬೇಟೆಯಾಡುತ್ತಿದ್ದರು. ಜೇನುಗೂಡಿನ ಬೇಟೆಯಾಡುವ ಈ ಸಂಪ್ರದಾಯವು ಸುಂದರಬನದ ಜನರಲ್ಲಿ ಇಂದಿಗೂ ಇದೆ.

ಸುಂದರಬನದ ಜೇನುತುಪ್ಪದ ವಿಶಿಷ್ಟ ಮತ್ತು ಸುವಾಸನೆ ಜೈವಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ಇದರ ಸಿಹಿ ಗುಣವು ಖಲೀಶಾ, ಬಾನಿ ಮತ್ತು ಗರಾನ್‌ನಂತಹ ವಿವಿಧ ಮ್ಯಾಂಗ್ರೋವ್ ಹೂವುಗಳ ಮಕರಂದದ ಸಂಯೋಜನೆಯಾಗಿದೆ. ಇದು ಇತರ ರೀತಿಯ ಜೇನುತುಪ್ಪಕ್ಕಿಂತ ಕಡಿಮೆ ಸ್ನಿಗ್ಧತೆಯನ್ನು ಹೊಂದಿದೆ. ಶೇ 100 ನೈಸರ್ಗಿಕ ಮತ್ತು ಶುದ್ಧವಾಗಿರುವುದರ ಜೊತೆಗೆ, ಸುಂದರಬನ್ ಜೇನುತುಪ್ಪವು ಫ್ಲೇವನಾಯ್ಡ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ ಮತ್ತು ಅಮೂಲ್ಯವಾದ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.

ಕಾಶ್ಮೀರಿ ಪಶ್ಮಿನಾ

ಕಾಶ್ಮೀರಿ ಪಶ್ಮಿನಾ ಶಾಲು ತುಂಬಾ ಮೃದುವಾದ ಬಟ್ಟೆ. ‘ಪಾಶ್ಮ್’ ಎಂದರೆ ಪರ್ಷಿಯನ್ ಭಾಷೆಯಲ್ಲಿ ಉಣ್ಣೆ ಎಂದರ್ಥ. ಆದರೆ ಕಾಶ್ಮೀರಿಯಲ್ಲಿ, ಇದು ಸಮುದ್ರ ಮಟ್ಟದಿಂದ 14,000 ಅಡಿ ಎತ್ತರದಲ್ಲಿ ಮಾತ್ರ ಕಂಡುಬರುವ ಚಾಂಗ್ತಂಗಿ ಮೇಕೆಯ(ಪ್ರಪಂಚದ ಅತ್ಯಂತ ವಿಶಿಷ್ಟವಾದ ಕ್ಯಾಶ್ಮೀರ್ ಮೇಕೆ)  ಕಚ್ಚಾ ಉಣ್ಣೆಯನ್ನು ಉಲ್ಲೇಖಿಸುತ್ತದೆ. ಈ ಮೇಕೆಯ ಮೇಲಿರುವ ಉಣ್ಣೆಯನ್ನು ಸಂಗ್ರಹಿಸಿ ನುರಿತ ಕುಶಲಕರ್ಮಿಗಳು ಹಳೇ ಪ್ರಕ್ರಿಯೆಗಳನ್ನು ಬಳಸಿಕೊಂಡು ತಮ್ಮ ಸೂಕ್ಷ್ಮ ನಾರುಗಳನ್ನು ಹೆಣೆದು ಅದರ ಮೇಲೆ ಕಸೂತಿ ಮಾಡುತ್ತಾರೆ. ಇದು ಹಗುರವಾದ, ಬೆಚ್ಚಗಿನ ಮತ್ತು ಸೊಗಸಾದ ಶಾಲು ಆಗಿದ್ದು ಇದು ಕಲಾತ್ಮಕತೆಯನ್ನು ಹೊಂದಿದೆ. ಹಿಂದೆ ಪಶ್ಮಿನಾವನ್ನು ಗೌರವ ಮತ್ತು ಉದಾತ್ತತೆಯ ಸೂಚಕವಾಗಿ ಬಳಸಲಾಗುತ್ತಿತ್ತು. ಬಟ್ಟೆ ಯಾರಿಗಾದರೂ ಗೌರವವನ್ನು ನೀಡುವ ಆಚರಣೆಗಳ ಅವಿಭಾಜ್ಯ ಅಂಗವಾಗಿತ್ತು.

ಜಿಘ್ರನಾ ಇತ್ತರ್

ಉತ್ತರ ಪ್ರದೇಶದ ಕನೌಜ್‌ನಿಂದ ಬಂದ ಜಿಘ್ರಾನಾ ಇತ್ತರ್ ಸುಗಂಧ ದ್ರವ್ಯ. ‘ಇತ್ತರ್’ (ಅಂದರೆ ‘ಸುಗಂಧ’) ಸಸ್ಯಶಾಸ್ತ್ರೀಯ ಮೂಲಗಳಿಂದ ಪಡೆದ ಸಾರಭೂತ ತೈಲವಾಗಿದೆ. ತಲೆಮಾರುಗಳ ಮೂಲಕ ಹಾದುಹೋಗುವ ವಿಧಾನವನ್ನು ಬಳಸಿಕೊಂಡು ಕೌಶಲ್ಯದಿಂದ ಈ ಸುಗಂಧ ದ್ರವ್ಯವನ್ನು ಬಟ್ಟಿ ಇಳಿಸಲಾಗುತ್ತದೆ. ಇತ್ತರ್ ನಿಖರತೆ ಮತ್ತು ತಾಳ್ಮೆಗೆ ಸಂಕೇತವಾಗಿದೆ. ಕುಶಲಕರ್ಮಿಗಳು ಮಲ್ಲಿಗೆ ಮತ್ತು ಗುಲಾಬಿಗಳಂತಹ ಅಪರೂಪದ ಹೂವುಗಳನ್ನು ಸುಗಂಧವನ್ನು ಬೆಳಗಿನ ಸಮಯದಲ್ಲಿ ಸೂಕ್ಷ್ಮವಾಗಿ ಸಂಗ್ರಹಿಸುತ್ತಾರೆ. ಹೈಡ್ರೊ-ಡಿಸ್ಟಿಲೇಷನ್‌ನ ನಿಖರವಾದ ಪ್ರಕ್ರಿಯೆಯ ಮೂಲಕ, ಸಾರಭೂತ ತೈಲಗಳನ್ನು ಹೊರತೆಗೆಯಲಾಗುತ್ತದೆ ಮತ್ತು ನಂತರ ಕಾಲಾನಂತರದಲ್ಲಿ ಪಕ್ವಗೊಳಿಸಲಾಗುತ್ತದೆ. ಇದು ಕನೌಜ್‌ನ ಶ್ರೀಮಂತ ಪರಂಪರೆಯನ್ನು ಪ್ರತಿಧ್ವನಿಸುತ್ತದೆ. ಜಿಘ್ರಾನಾ ಇತ್ತರ್ ಪ್ರಾಚೀನ ಬಜಾರ್‌ಗಳು ಮತ್ತು ರಾಜಮನೆತನದ ಚಿತ್ರಗಳನ್ನು ರೂಪಿಸುತ್ತದೆ. ಇಲ್ಲಿ ಘಮ್ಮೆನ್ನುವ ಪರಿಮಳಕ್ಕೆ ಇತ್ತರ್ ಕಾರಣ.

ಪ್ರಧಾನ ಮಂತ್ರಿಯಿಂದ ರಾಜ್ಯಗಳ ಮುಖ್ಯಸ್ಥರು ಮತ್ತು ನಾಯಕರಿಗೆ ಉಡುಗೊರೆ

ಖಾದಿ ಸ್ಕಾರ್ಫ್

ಭಾರತದಿಂದ ಹುಟ್ಟಿಕೊಂಡ, ಖಾದಿಯು ಪರಿಸರ ಸ್ನೇಹಿ ಬಟ್ಟೆ ವಸ್ತುವಾಗಿದ್ದು, ಋತುಗಳ ಉದ್ದಕ್ಕೂ ಅದರ ಸುಂದರವಾದ ವಿನ್ಯಾಸ ಇದನ್ನು ವಿಶಿಷ್ಟವಾಗಿರಿಸುತ್ತದೆ. ಇದನ್ನು ಹತ್ತಿ, ರೇಷ್ಮೆ, ಸೆಣಬು ಅಥವಾ ಉಣ್ಣೆಯಿಂದ ಮಾಡಲಾಗುತ್ತದೆ. ಇದು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಸಂಕೇತಗಳಲ್ಲಿ ಒಂದಾಗಿದೆ. ವಾಸ್ತವವಾಗಿ, ಅದರ ಇದಕ್ಕೆ ಖಾದಿ ಎಂದು ಹೆಸರುಕೊಟ್ಟಿದ್ದೇ ಮಹಾತ್ಮ ಗಾಂಧಿ. 70% ಮಹಿಳೆಯರನ್ನು ಒಳಗೊಂಡಿರುವ ಭಾರತದ ಗ್ರಾಮೀಣ ಕುಶಲಕರ್ಮಿಗಳು, ಕೈಯಿಂದ ನೇಯ್ಗೆ ಮಾಡುತ್ತಿದ್ದು, ಖಾದಿ ಪ್ರಾಚೀನವಾಗಿದ್ದರೂ ಫ್ಯಾಷನ್ ಆಗಿ ಮಾರ್ಪಾಡಾಗಿದೆ. ಭಾರತದ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ನೂಲುವ ಚಕ್ರದಲ್ಲಿ ಅದರ ಪ್ರಾರಂಭದಿಂದ ಇಂದಿನವರೆಗೆ ಉತ್ತಮ ಗುಣಮಟ್ಟದ ಮತ್ತು ಐಷಾರಾಮಿ ಮಾರ್ಕರ್ ಆಗಿ, ಖಾದಿ ದಶಕಗಳಿಂದ ಸುಸ್ಥಿರ ಫ್ಯಾಶನ್ ಅನ್ನು ಪ್ರತಿನಿಧಿಸುತ್ತಿದೆ.

ಇದನ್ನೂ ಓದಿ: G20 summit: ಜಸ್ಟಿನ್ ಟ್ರುಡೊ ಭಾರತದ ಭೇಟಿಯನ್ನು ಟೀಕಿಸಿದ ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ

ನಾಣ್ಯಗಳು

ಭಾರತದ G20 ಪ್ರೆಸಿಡೆನ್ಸಿಯ ಸ್ಮರಣಾರ್ಥವಾಗಿ, ಭಾರತದ ಪ್ರಧಾನಮಂತ್ರಿಯವರು 26 ಜುಲೈ 2023 ರಂದು ವಿಶೇಷ G20 ಅಂಚೆ ಚೀಟಿಗಳು ಮತ್ತು ನಾಣ್ಯಗಳನ್ನು ಬಿಡುಗಡೆ ಮಾಡಿದರು. G20 ಇಂಡಿಯಾ ಅಂಚೆಚೀಟಿಗಳು ಮತ್ತು ನಾಣ್ಯಗಳನ್ನು ನವದೆಹಲಿಯ ಪ್ರಗತಿ ಮೈದಾನದಲ್ಲಿ ಭಾರತ್ ಮಂಟಪದ ಉದ್ಘಾಟನೆಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ನಾಣ್ಯಗಳು ಮತ್ತು ಅಂಚೆಚೀಟಿಗಳ ವಿನ್ಯಾಸಗಳು ಭಾರತದ G20 ಲೋಗೋ ಮತ್ತು ‘ವಸುಧೈವ ಕುಟುಂಬಕಂ’ ಅಥವಾ ‘ಒನ್ ಅರ್ಥ್’ ಥೀಮ್‌ನಿಂದ ಸ್ಫೂರ್ತಿ ಪಡೆದಿವೆ. ತಲಾ 20 ಮುಖಬೆಲೆಯ ಎರಡು ಅಂಚೆ ಚೀಟಿಗಳು, ಭಾರತದ G20 ಪ್ರೆಸಿಡೆನ್ಸಿ ಅವಧಿಯನ್ನು 1 ಡಿಸೆಂಬರ್ 2022-30 ನವೆಂಬರ್ 2023 ರಿಂದ ಆಚರಿಸುತ್ತವೆ.

ಚಿನ್ನದ ಬಣ್ಣದಲ್ಲಿ ಪ್ರದರ್ಶಿಸಲಾದ ಎರಡನೇ G20 ಸ್ಮರಣಾರ್ಥ ಅಂಚೆಚೀಟಿ, ಭಾರತದ ವೈವಿಧ್ಯತೆ, ಒಳಗೊಳ್ಳುವಿಕೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಇದು ಭಾರತದ G20 ಪ್ರೆಸಿಡೆನ್ಸಿ ಲೋಗೋದಲ್ಲಿ ಪ್ರತಿನಿಧಿಸಲ್ಪಟ್ಟಿರುವಂತೆ ಭಾರತದ ರಾಷ್ಟ್ರೀಯ ಪುಷ್ಪವಾದ ಕಮಲದಿಂದ ಸ್ಫೂರ್ತಿ ಪಡೆಯುತ್ತದೆ. ಭಾರತದ G20 ಪ್ರೆಸಿಡೆನ್ಸಿಯ ಈ ಮೈಲುಗಲ್ಲನ್ನು ಗುರುತಿಸಿ, 75 ಮತ್ತು 100 ಮುಖಬೆಲೆಯ ಎರಡು G20 ಸ್ಮರಣಾರ್ಥ ನಾಣ್ಯಗಳನ್ನು ಪ್ರಧಾನ ಮಂತ್ರಿ ಬಿಡುಗಡೆ ಮಾಡಿದರು.

ಈ ನಾಣ್ಯಗಳು ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸುವುದನ್ನು ಮತ್ತು 100 ವರ್ಷಗಳ ಸ್ವಾತಂತ್ರ್ಯದ ಕಡೆಗೆ ಭಾರತದ ಪ್ರಯಾಣದ ‘ಅಮೃತಕಾಲ್’ ಆರಂಭವನ್ನು ಸೂಚಿಸುತ್ತವೆ. G20 ಸ್ಮರಣಾರ್ಥ ನಾಣ್ಯಗಳ ವಿನ್ಯಾಸಗಳು ಭಾರತದ G20 ಲೋಗೋ ಮತ್ತು ಥೀಮ್‌ನ ಶೈಲೀಕೃತ ಚಿತ್ರಣಗಳಾಗಿವೆ. ಪ್ರತಿ ನಾಣ್ಯವು ಬೆಳ್ಳಿ, ನಿಕಲ್, ಸತು ಮತ್ತು ತಾಮ್ರದ ಚತುರ್ಭುಜ ಮಿಶ್ರಲೋಹದಿಂದ ಮಾಡಲ್ಪಟ್ಟಿದೆ.

ಪ್ರಧಾನ ಮಂತ್ರಿಯಿಂದ ಅರ್ಜೆಂಟೀನಾ ಅಧ್ಯಕ್ಷರ ಸಂಗಾತಿಗೆ ಉಡುಗೊರೆ

ಎಬೊನಿ ಜಾಲಿ ಪೆಟ್ಟಿಗೆಯಲ್ಲಿ ಬನಾರಸಿ ರೇಷ್ಮೆ ಸ್ಟೋಲ್

ಬನಾರಸಿ ರೇಷ್ಮೆ ಸ್ಟೋಲ್‌ಗಳು ಭಾರತದ ಸೊಗಸಾದ ಸಂಪತ್ತು. ವಾರಣಾಸಿಯಲ್ಲಿ ಕರಕುಶಲ ಸ್ಟೋಲ್ ಗಳು ಇವು. ಇದು ನಗರದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಅದರ ನೇಯ್ಗೆ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಬನಾರಸಿ ರೇಷ್ಮೆ ಸ್ಟೋಲ್‌ಗಳನ್ನು ಮದುವೆ ಮತ್ತು ವಿಶೇಷ ಸಂದರ್ಭಗಳಲ್ಲಿ ಧರಿಸಲಾಗುತ್ತದೆ. ಇವುಗಳನ್ನು ಭುಜದ ಮೇಲೆ ಹೊದಿಸಿ ಅಥವಾ ತಲೆಗೆ ಸ್ಕಾರ್ಫ್‌ಗಳನ್ನು ಧರಿಸಿದ್ದರೂ, ಈ ಸ್ಟೋಲ್‌ಗಳು ಚಂದವಾಗಿ ಕಾಣುತ್ತದೆ.

ಸ್ಟೋಲ್ ಅನ್ನು ಎಬೊನಿ ಮರದ ಜಾಲಿ ಪೆಟ್ಟಿಗೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಇದನ್ನು ಕೇರಳದ ಕುಶಲಕರ್ಮಿಗಳು ಅತ್ಯಂತ ದಟ್ಟವಾದ ಮತ್ತು ಸೂಕ್ಷ್ಮವಾದ ವಿನ್ಯಾಸದ ಭಾರತೀಯ ಎಬೊನಿ ಮರದ ಮೇಲೆ ಸೂಕ್ಷ್ಮವಾದ ಜಾಲರಿ ಅಥವಾ ‘ಜಾಲಿ’ಯನ್ನು ಕರಕುಶಲತೆಯಿಂದ ರಚಿಸಿದ್ದಾರೆ.

ಪಪಿಯರ್ ಮಷೆ ಬಾಕ್ಸ್‌ನಲ್ಲಿ ಕಾಶ್ಮೀರಿ ಪಶ್ಮಿನಾ ಸ್ಟೋಲ್

ಪ್ರಧಾನ ಮಂತ್ರಿ ಆಸ್ಟ್ರೇಲಿಯಾದ ಪ್ರಧಾನಿಯ ಸಂಗಾತಿಗೆ ನೀಡಿದ ಉಡುಗೊರೆ ಇದು. ಈ ಸ್ಟೋಲ್ ಅನ್ನು ಪೆಪಿಯರ್ ಮಷೆ ಬಾಕ್ಸ್‌ನಲ್ಲಿ ಪ್ರಸ್ತುತಪಡಿಸಲಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಸೂಕ್ಷ್ಮವಾದ, ಅಲಂಕಾರಿಕ ಮತ್ತು ಹೆಸರಾಂತ ಕರಕುಶಲ ವಸ್ತುಗಳಲ್ಲಿ ಒಂದಾಗಿದೆ. ಇದನ್ನು ಕಾಗದದ ತಿರುಳು, ಬೈಹುಲ್ಲು ಮತ್ತು ತಾಮ್ರದ ಸಲ್ಫೇಟ್ ಮಿಶ್ರಣದಿಂದ ತಯಾರಿಸಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:49 pm, Tue, 12 September 23

ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?