AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್​ ಭಾಗವತ್​ರನ್ನು ಭೇಟಿಯಾದ ಮಾಜಿ ಸಿಜೆಐ ಎಸ್​.ಎ.ಬೊಬ್ಡೆ; ಒಂದು ತಾಸು ಮಾತುಕತೆ

Maharashtra: ಎಸ್​.ಎ.ಬೊಬ್ಡೆಯವರು ಮೂಲತಃ ನಾಗ್ಪುರದವರು. ಹಲವು ವರ್ಷಗಳ ಕಾಲ ಇಲ್ಲೇ ಅವರು ಕಾನೂನು ಪ್ರ್ಯಾಕ್ಟೀಸ್​ ಮಾಡಿದ್ದರು. 2021ರ ಏಪ್ರಿಲ್​ರಂದು ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು.

ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್​ ಭಾಗವತ್​ರನ್ನು ಭೇಟಿಯಾದ ಮಾಜಿ ಸಿಜೆಐ ಎಸ್​.ಎ.ಬೊಬ್ಡೆ; ಒಂದು ತಾಸು ಮಾತುಕತೆ
ಮೋಹನ್​ ಭಾಗವತ್​ ಮತ್ತು ಎಸ್​.ಎ.ಬೊಬ್ಡೆ
TV9 Web
| Updated By: Lakshmi Hegde|

Updated on: Sep 01, 2021 | 2:19 PM

Share

ಮಾಜಿ ಸಿಜೆಐ (ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ) (Former CJI) ಎಸ್.ಎ.ಬೊಬ್ಡೆ (S.A.Bobde) ನಿನ್ನೆ (ಆಗಸ್ಟ್​ 31) ಆರ್​ಎಸ್​ಎಸ್​ ಸರಸಂಘಸಂಚಾಲಕ ಮೋಹನ್​ ಭಾಗವತ್​ (Mohan Bhagwat)ರನ್ನು ನಾಗ್ಪುರದಲ್ಲಿ ಭೇಟಿಯಾಗಿ ಸುಮಾರು 1 ತಾಸುಗಳ ಕಾಲ ಮಾತುಕತೆ ನಡೆಸಿದ್ದಾರೆ. ನಾಗ್ಪುರದ ಆರ್​ಎಸ್​ಎಸ್​ ಪ್ರಧಾನ ಕಚೇರಿಯಲ್ಲೇ ಈ ಭೇಟಿ ನಡೆದಿದೆ ಎಂದು ನಂಬಲರ್ಹ ಮೂಲಗಳಿಂದಲೇ ತಿಳಿದುಬಂದಿದ್ದರೂ, ಆರ್​ಎಸ್​ಎಸ್​ ಮಾತ್ರ ಇದನ್ನು ನಿರಾಕರಿಸಿದೆ. ಒಂದು ತಾಸುಗಳ ಮಾತುಕತೆ ನಡೆದಿದ್ದರೂ, ಯಾವ ವಿಷಯದ ಬಗ್ಗೆ ಚರ್ಚೆ ನಡೆಯಿತು ಎಂಬುದಿನ್ನೂ ತಿಳಿದಿಲ್ಲ. ಹಾಗೇ, ಮೋಹನ್​ ಭಾಗವತ್ ಆಗಲೀ, ಎಸ್.ಎ.ಬೊಬ್ಡೆಯವರಾಗಲೀ ಈ ಬಗ್ಗೆ ಇನ್ನೂ ಮಾತನಾಡಿಲ್ಲ.

ಬೊಬ್ಡೆಯವರು ಆರ್​ಎಸ್​ಎಸ್​ ಕಚೇರಿಯನ್ನಾಗಲೀ, ಮುಖ್ಯಸ್ಥ ಮೋಹನ್​ ಭಾಗವತ್​​ ಅವರನ್ನಾಗಲಿ ಭೇಟಿಯಾಗಿದ್ದು ಇದೇ ಮೊದಲು. ಇಲ್ಲಷ್ಟೇ ಅಲ್ಲದೆ, ಮಹಲ್​ ಏರಿಯಾದಲ್ಲಿರುವ, ಆರ್​ಎಸ್​ಎಸ್​ ಸಂಸ್ಥಾಪಕ ಕೇಶವ್​ ಬಲಿರಾಮ್​ ಹೆಗ್ಡೆವಾರ್ ಅವರ 100 ವರ್ಷಗಳಷ್ಟು ಹಳೆಯದಾದ ಮನೆಗೂ ಎಸ್​.ಎ.ಬೊಬ್ಡೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ​​ ಆ ಮನೆಯನ್ನು ಹೇಗೆ ನಿರ್ವಹಿಸಲಾಗುತ್ತಿದೆ..ಹೇಗೆಲ್ಲ ರಕ್ಷಿಸಲಾಗುತ್ತಿದೆ ಎಂಬುದನ್ನು ತಿಳಿಯಲು ಬೊಬ್ಡೆ ಅಲ್ಲಿಗೆ ತೆರಳಿದ್ದರು ಎನ್ನಲಾಗಿದೆ.

ಅಯೋಧ್ಯಾ ಐತಿಹಾಸಿಕ ತೀರ್ಪು ನೀಡಿದ್ದ ಬೊಬ್ಡೆ ಎಸ್​.ಎ.ಬೊಬ್ಡೆಯವರು ಮೂಲತಃ ನಾಗ್ಪುರದವರು. ಹಲವು ವರ್ಷಗಳ ಕಾಲ ಇಲ್ಲೇ ಅವರು ಕಾನೂನು ಪ್ರ್ಯಾಕ್ಟೀಸ್​ ಮಾಡಿದ್ದರು. 2021ರ ಏಪ್ರಿಲ್​ರಂದು ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು. ಅವರು ನಿವೃತ್ತರಾಗುವ ಕೆಲವೇ ದಿನಗಳ ಮೊದಲು ಅಯೋಧ್ಯೆ ಐತಿಹಾಸಿಕ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇತ್ತೀಚೆಗೆ ಮಾಜಿ ಸಿಜೆಐ ಅಂದರೆ ಎಸ್.ಎ.ಬೊಬ್ಡೆಗೂ ಮುನ್ನ ಇದ್ದ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇದೀಗ ಎಸ್​.ಎ.ಬೊಬ್ಡೆ ಮತ್ತು ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್​ ಭಾಗವತ್​ ಭೇಟಿ ಇದೇ ಕಾರಣಕ್ಕೆ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಅಪ್ಪನ ಸಾಲ ಮಗ ತೀರಿಸಬೇಕಲ್ಲ; ಯುಪಿಎ ಸರ್ಕಾರ ಮಾಡಿದ್ದನ್ನ ನಾವು ತೀರಿಸ್ತಾ ಇದೀವಿ; ಎಲ್​ಪಿಜಿ ಬೆಲೆ ಏರಿಕೆಗೆ ಸಂಗಣ್ಣ ಕರಡಿ ಉತ್ತರ

ಕೋಲಾರದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ; ಕೇರಳದಿಂದ ಬಂದವರೇ ಸೂಪರ್​ ಸ್ಪ್ರೆಡರ್ಸ್

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ