AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್​ ಭಾಗವತ್​ರನ್ನು ಭೇಟಿಯಾದ ಮಾಜಿ ಸಿಜೆಐ ಎಸ್​.ಎ.ಬೊಬ್ಡೆ; ಒಂದು ತಾಸು ಮಾತುಕತೆ

Maharashtra: ಎಸ್​.ಎ.ಬೊಬ್ಡೆಯವರು ಮೂಲತಃ ನಾಗ್ಪುರದವರು. ಹಲವು ವರ್ಷಗಳ ಕಾಲ ಇಲ್ಲೇ ಅವರು ಕಾನೂನು ಪ್ರ್ಯಾಕ್ಟೀಸ್​ ಮಾಡಿದ್ದರು. 2021ರ ಏಪ್ರಿಲ್​ರಂದು ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು.

ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್​ ಭಾಗವತ್​ರನ್ನು ಭೇಟಿಯಾದ ಮಾಜಿ ಸಿಜೆಐ ಎಸ್​.ಎ.ಬೊಬ್ಡೆ; ಒಂದು ತಾಸು ಮಾತುಕತೆ
ಮೋಹನ್​ ಭಾಗವತ್​ ಮತ್ತು ಎಸ್​.ಎ.ಬೊಬ್ಡೆ
TV9 Web
| Updated By: Lakshmi Hegde|

Updated on: Sep 01, 2021 | 2:19 PM

Share

ಮಾಜಿ ಸಿಜೆಐ (ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ) (Former CJI) ಎಸ್.ಎ.ಬೊಬ್ಡೆ (S.A.Bobde) ನಿನ್ನೆ (ಆಗಸ್ಟ್​ 31) ಆರ್​ಎಸ್​ಎಸ್​ ಸರಸಂಘಸಂಚಾಲಕ ಮೋಹನ್​ ಭಾಗವತ್​ (Mohan Bhagwat)ರನ್ನು ನಾಗ್ಪುರದಲ್ಲಿ ಭೇಟಿಯಾಗಿ ಸುಮಾರು 1 ತಾಸುಗಳ ಕಾಲ ಮಾತುಕತೆ ನಡೆಸಿದ್ದಾರೆ. ನಾಗ್ಪುರದ ಆರ್​ಎಸ್​ಎಸ್​ ಪ್ರಧಾನ ಕಚೇರಿಯಲ್ಲೇ ಈ ಭೇಟಿ ನಡೆದಿದೆ ಎಂದು ನಂಬಲರ್ಹ ಮೂಲಗಳಿಂದಲೇ ತಿಳಿದುಬಂದಿದ್ದರೂ, ಆರ್​ಎಸ್​ಎಸ್​ ಮಾತ್ರ ಇದನ್ನು ನಿರಾಕರಿಸಿದೆ. ಒಂದು ತಾಸುಗಳ ಮಾತುಕತೆ ನಡೆದಿದ್ದರೂ, ಯಾವ ವಿಷಯದ ಬಗ್ಗೆ ಚರ್ಚೆ ನಡೆಯಿತು ಎಂಬುದಿನ್ನೂ ತಿಳಿದಿಲ್ಲ. ಹಾಗೇ, ಮೋಹನ್​ ಭಾಗವತ್ ಆಗಲೀ, ಎಸ್.ಎ.ಬೊಬ್ಡೆಯವರಾಗಲೀ ಈ ಬಗ್ಗೆ ಇನ್ನೂ ಮಾತನಾಡಿಲ್ಲ.

ಬೊಬ್ಡೆಯವರು ಆರ್​ಎಸ್​ಎಸ್​ ಕಚೇರಿಯನ್ನಾಗಲೀ, ಮುಖ್ಯಸ್ಥ ಮೋಹನ್​ ಭಾಗವತ್​​ ಅವರನ್ನಾಗಲಿ ಭೇಟಿಯಾಗಿದ್ದು ಇದೇ ಮೊದಲು. ಇಲ್ಲಷ್ಟೇ ಅಲ್ಲದೆ, ಮಹಲ್​ ಏರಿಯಾದಲ್ಲಿರುವ, ಆರ್​ಎಸ್​ಎಸ್​ ಸಂಸ್ಥಾಪಕ ಕೇಶವ್​ ಬಲಿರಾಮ್​ ಹೆಗ್ಡೆವಾರ್ ಅವರ 100 ವರ್ಷಗಳಷ್ಟು ಹಳೆಯದಾದ ಮನೆಗೂ ಎಸ್​.ಎ.ಬೊಬ್ಡೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ​​ ಆ ಮನೆಯನ್ನು ಹೇಗೆ ನಿರ್ವಹಿಸಲಾಗುತ್ತಿದೆ..ಹೇಗೆಲ್ಲ ರಕ್ಷಿಸಲಾಗುತ್ತಿದೆ ಎಂಬುದನ್ನು ತಿಳಿಯಲು ಬೊಬ್ಡೆ ಅಲ್ಲಿಗೆ ತೆರಳಿದ್ದರು ಎನ್ನಲಾಗಿದೆ.

ಅಯೋಧ್ಯಾ ಐತಿಹಾಸಿಕ ತೀರ್ಪು ನೀಡಿದ್ದ ಬೊಬ್ಡೆ ಎಸ್​.ಎ.ಬೊಬ್ಡೆಯವರು ಮೂಲತಃ ನಾಗ್ಪುರದವರು. ಹಲವು ವರ್ಷಗಳ ಕಾಲ ಇಲ್ಲೇ ಅವರು ಕಾನೂನು ಪ್ರ್ಯಾಕ್ಟೀಸ್​ ಮಾಡಿದ್ದರು. 2021ರ ಏಪ್ರಿಲ್​ರಂದು ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು. ಅವರು ನಿವೃತ್ತರಾಗುವ ಕೆಲವೇ ದಿನಗಳ ಮೊದಲು ಅಯೋಧ್ಯೆ ಐತಿಹಾಸಿಕ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇತ್ತೀಚೆಗೆ ಮಾಜಿ ಸಿಜೆಐ ಅಂದರೆ ಎಸ್.ಎ.ಬೊಬ್ಡೆಗೂ ಮುನ್ನ ಇದ್ದ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇದೀಗ ಎಸ್​.ಎ.ಬೊಬ್ಡೆ ಮತ್ತು ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್​ ಭಾಗವತ್​ ಭೇಟಿ ಇದೇ ಕಾರಣಕ್ಕೆ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಅಪ್ಪನ ಸಾಲ ಮಗ ತೀರಿಸಬೇಕಲ್ಲ; ಯುಪಿಎ ಸರ್ಕಾರ ಮಾಡಿದ್ದನ್ನ ನಾವು ತೀರಿಸ್ತಾ ಇದೀವಿ; ಎಲ್​ಪಿಜಿ ಬೆಲೆ ಏರಿಕೆಗೆ ಸಂಗಣ್ಣ ಕರಡಿ ಉತ್ತರ

ಕೋಲಾರದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ; ಕೇರಳದಿಂದ ಬಂದವರೇ ಸೂಪರ್​ ಸ್ಪ್ರೆಡರ್ಸ್

ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?