AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿ20 ಶೃಂಗಸಭೆ; ಗಣ್ಯರ ಸ್ವಾಗತ ವೇಳೆ ಗಮನ ಸೆಳೆದ ಕೋನಾರ್ಕ್ ಚಕ್ರ, ಬೈಡನ್​ಗೆ ಮಹತ್ವ ವಿವರಿಸಿದ ಮೋದಿ

ಒಡಿಶಾದ ಭವ್ಯವಾದ ಸಂಸ್ಕೃತಿ ಮತ್ತು ಪರಂಪರೆಗೆ ಜಿ20 ಶೃಂಗಸಭೆಯಲ್ಲಿ ಹೆಮ್ಮೆಯ ಸ್ಥಾನವನ್ನು ನೀಡಲಾಗಿದೆ. ಕೋನಾರ್ಕ್ ಚಕ್ರವು ಸಮಯ, ಸ್ಥಳ, ನಿರಂತರತೆ ಮತ್ತು ಭವಿಷ್ಯದ ನಾಗರಿಕತೆಯ ಪರಿಕಲ್ಪನೆಗಳನ್ನು ವಿವರಿಸುವ ವಾಸ್ತುಶಿಲ್ಪದ ಅದ್ಭುತ ಪ್ರಸ್ತುತಿಯಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ‘ಎಕ್ಸ್​​’ ಪೋಸ್ಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಜಿ20 ಶೃಂಗಸಭೆ; ಗಣ್ಯರ ಸ್ವಾಗತ ವೇಳೆ ಗಮನ ಸೆಳೆದ ಕೋನಾರ್ಕ್ ಚಕ್ರ, ಬೈಡನ್​ಗೆ ಮಹತ್ವ ವಿವರಿಸಿದ ಮೋದಿ
ಬೈಡನ್​ಗೆ ಕೋನಾರ್ಕ್ ಚಕ್ರದ ಮಹತ್ವ ವಿವರಿಸಿದ ಮೋದಿ
Ganapathi Sharma
|

Updated on: Sep 09, 2023 | 2:25 PM

Share

ನವದೆಹಲಿ, ಸೆಪ್ಟೆಂಬರ್ 9: ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ (G20 Summit) ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ವಿಶ್ವ ನಾಯಕರನ್ನು ಸ್ವಾಗತಿಸಿದರು. ಭವ್ಯವಾದ ಕೋನಾರ್ಕ್ ಚಕ್ರ (Konark chakra) ಮತ್ತು ಸೂರ್ಯ ದೇವಾಲಯದ ವಾಸ್ತುಶಿಲ್ಪದ ಹಿನ್ನೆಲೆಯಲ್ಲಿ ಗಣ್ಯರನ್ನು ಮೋದಿ ಸ್ವಾಗತಿಸುತ್ತಿರುವ ದೃಶ್ಯಗಳು ಒಡಿಶಾ ಸಂಸ್ಕೃತಿಗೆ ಮೆರುಗನ್ನು ತಂದಿವೆ. ಕೋನಾರ್ಕ್ ಚಕ್ರ ಮತ್ತು ಸೂರ್ಯ ದೇವಾಲಯದ ವಾಸ್ತುಶಿಲ್ಪದ ಬ್ಯಾಗ್ರೌಂಡ್​​ನಲ್ಲಿ ಪ್ರಧಾನಿ ಮೋದಿ ಅವರು ಶೃಂಗಸಭೆಗೆ ಆಗಮಿಸಿದ ಪ್ರತಿನಿಧಿಗಳೊಂದಿಗೆ ಹಸ್ತಲಾಘವ ಮಾಡಿದರು. 13 ನೇ ಶತಮಾನದ ರಚನೆಯ ಮಹತ್ವವನ್ನು ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ವಿವರಿಸಿದರು.

ಈ ವಿಚಾರವಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದು, ಶೃಂಗಸಭೆಯಲ್ಲಿ ಒಡಿಶಾದ ಭವ್ಯವಾದ ಸಂಸ್ಕೃತಿ ಮತ್ತು ಪರಂಪರೆಗೆ ಸ್ಥಾನ ನೀಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಒಡಿಶಾದ ಭವ್ಯವಾದ ಸಂಸ್ಕೃತಿ ಮತ್ತು ಪರಂಪರೆಗೆ ಜಿ20 ಶೃಂಗಸಭೆಯಲ್ಲಿ ಹೆಮ್ಮೆಯ ಸ್ಥಾನವನ್ನು ನೀಡಲಾಗಿದೆ. ಕೋನಾರ್ಕ್ ಚಕ್ರವು ಸಮಯ, ಸ್ಥಳ, ನಿರಂತರತೆ ಮತ್ತು ಭವಿಷ್ಯದ ನಾಗರಿಕತೆಯ ಪರಿಕಲ್ಪನೆಗಳನ್ನು ವಿವರಿಸುವ ವಾಸ್ತುಶಿಲ್ಪದ ಅದ್ಭುತ ಪ್ರಸ್ತುತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪರಂಪರೆ ಮತ್ತು ಜ್ಞಾನ ಸಂಪ್ರದಾಯಗಳ ಮಹತ್ವವನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರಿಗೆ ವಿವರಿಸುತ್ತಿರುವ ದೃಶ್ಯ ನಿಜಕ್ಕೂ ಸುಂದರವಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ‘ಎಕ್ಸ್​​’ ಪೋಸ್ಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಗಂಗಾ ರಾಜವಂಶದ ದೊರೆ ಒಂದನೇ ನರಸಿಂಹದೇವ ನಿರ್ಮಿಸಿದ ಸೂರ್ಯ ದೇವಾಲಯವು ಒಡಿಶಾದ ವೈಭವದ ಪರಂಪರೆಯ ಸಂಕೇತವಾಗಿದೆ. ಸುಮಾರು 1,200 ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳು ಕೋನಾರ್ಕ್‌ನಲ್ಲಿ ಬಂಗಾಳ ಕೊಲ್ಲಿಯ ತೀರದಲ್ಲಿ ಕ್ಲೋರೈಟ್ ಮತ್ತು ಮರಳುಗಲ್ಲುಗಳನ್ನು ಬಳಸಿಕೊಂಡು ಸುಮಾರು 12 ವರ್ಷಗಳನ್ನು ತೆಗೆದುಕೊಂಡು ಇದನ್ನು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: G20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂದೆ ಇಂಡಿಯಾ ಬದಲು ಭಾರತ್ ನಾಮಫಲಕ

ಈ ದೇವಾಲಯವನ್ನು ಸೂರ್ಯ ದೇವರ ರಥವೆಂದು ಪರಿಗಣಿಸಲಾಗಿದೆ. 24 ಚಕ್ರಗಳ ಮೇಲೆ ಜೋಡಿಸಲಾದ ರಥದ ರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ. ಅವುಗಳಲ್ಲಿ ಪ್ರತಿಯೊಂದೂ ಸುಮಾರು 10 ಅಡಿ ವ್ಯಾಸವನ್ನು ಹೊಂದಿದೆ ಮತ್ತು ಏಳು ಪ್ರಬಲ ಕುದುರೆಗಳಿಂದ ಎಳೆಯುವಂತೆ ಚಿತ್ರಿಸಲಾಗಿದೆ. ದೇವಾಲಯದ ತಳದ ಸುತ್ತಲೂ ಕೆತ್ತಿದ ಶಿಲ್ಪಕಲೆಗಳು ವಾಸ್ತುಶಿಲ್ಪದ ವೈಭವವನ್ನು ಪ್ರದರ್ಶಿಸುತ್ತವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ