AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್ ಬಿಜೆಪಿ ದಾಖಲೆಯ ಗೆಲುವು: ವಿಮರ್ಶೆ, ವಿರೋಧ ಎಲ್ಲವನ್ನೂ ಮೀರಿ ನಿಂತಿದೆ ಮೋದಿ ಸಾಧನೆ ಎಂದ ವಿದೇಶಿ ಮಾಧ್ಯಮಗಳು

ಬಿಜೆಪಿಯ ಗೆಲುವಿನ ಪ್ರಮಾಣ ರಾಜ್ಯದಲ್ಲಿ ಕಾಂಗ್ರೆಸ್‌ನ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ 156 ಸ್ಥಾನಗಳನ್ನು ಗೆದ್ದಿದೆ. ಈ ಬಗ್ಗೆ ಜಾಗತಿಕ ಸುದ್ದಿವಾಹಿನಿಗಳಿಂದ ವ್ಯಾಪಕವಾಗಿ ವರದಿಯಾಗಿದೆ.

ಗುಜರಾತ್ ಬಿಜೆಪಿ ದಾಖಲೆಯ ಗೆಲುವು: ವಿಮರ್ಶೆ, ವಿರೋಧ ಎಲ್ಲವನ್ನೂ ಮೀರಿ ನಿಂತಿದೆ ಮೋದಿ ಸಾಧನೆ ಎಂದ ವಿದೇಶಿ ಮಾಧ್ಯಮಗಳು
Modi
TV9 Web
| Edited By: |

Updated on:Dec 09, 2022 | 6:32 PM

Share

ಗುಜರಾತ್‌ನಲ್ಲಿ (gujarat) ಬಿಜೆಪಿ (BJP) ಮಾಡಿದ ಗೆಲುವಿನ ಸಾಧನೆಗೆ ಇಡೀ ಜಗತ್ತೇ ಅಚ್ಚರಿಗೊಂಡಿದೆ. ಗುಜರಾತಿನಲ್ಲಿ ಪ್ರಧಾನಿ ಮಾಡಿದ ರ್ಯಾಲಿ ಎಲ್ಲರನ್ನೂ ಒಂದು ಭಾರೀ ಆಶ್ಚರ್ಯಗೊಳಿಸಿತ್ತು ಮತ್ತು ಬಹುಮತ ನೀಡುವಂತೆ ಮಾಡಿದೆ. ನರೇಂದ್ರ ಅವರಿಗೆ ತವರು ರಾಜ್ಯದಲ್ಲಿವಿದ್ದ ಸವಾಲುಗಳು ಒಂದೆರಡಲ್ಲ, ಒಂದು ಕಡೆ ಎಎಪಿ, ಇನ್ನೊಂದು ಕಡೆ ಕಾಂಗ್ರೆಸ್, ಇದರ ಜತೆಗೆ ಹಿಮಾಚಲದ ಚುನಾವಣೆ ಎಲ್ಲವೂ ಮೋದಿ ಮತ್ತು ಬಿಜೆಪಿಗೆ ದೊಡ್ಡ ಸವಾಲಗಿತ್ತು. ಬಿಜೆಪಿಯ ಗೆಲುವಿನ ಪ್ರಮಾಣ ರಾಜ್ಯದಲ್ಲಿ ಕಾಂಗ್ರೆಸ್‌ನ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ 156 ಸ್ಥಾನಗಳನ್ನು ಗೆದ್ದಿದೆ. ಈ ಬಗ್ಗೆ ಜಾಗತಿಕ ಸುದ್ದಿವಾಹಿನಿಗಳಿಂದ ವ್ಯಾಪಕವಾಗಿ ವರದಿಯಾಗಿದೆ.

2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಮೊದಲು ಪಕ್ಷದ ನಿರಂತರ ಜನಪ್ರಿಯತೆಯ ಸಂಕೇತವಾಗಿ ಪಿಎಂ ಮೋದಿ ಅವರು ತಮ್ಮ ಪಕ್ಷಕ್ಕೆ (ಬಿಜೆಪಿ) ಮಹತ್ವದ ಉತ್ತೇಜನ ನೀಡಿದ್ದಾರೆ ಎಂದು ಬ್ರಿಟಿಷ್ ಪ್ರಕಟಣೆ ದಿ ಗಾರ್ಡಿಯನ್ ವರದಿ ಮಾಡಿದೆ. 1995 ರಿಂದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿಲ್ಲ ಎಂಬುದನ್ನು ಉಲ್ಲೇಖಿಸಿದ ಜಪಾನ್‌ನ ನಿಕ್ಕಿ ಏಷ್ಯಾ, ಗುಜರಾತ್ ರಾಜ್ಯದಲ್ಲಿ ಮೋದಿಯವರ ಜನಪ್ರಿಯತೆಗೆ ಈ ಗೆಲುವಿಗೆ ಕಾರಣವಾಗಿದೆ ಎಂದು ಹೇಳಿದೆ.

ಇದನ್ನು ಓದಿ:ಗುಜರಾತಿನಲ್ಲಿ ದಾಖಲೆಯ ಗೆಲುವು ಸಾಧಿಸಲು ಕಾರಣವಾಗಿದ್ದು ಮೋದಿ- ಶಾ ನಾಯಕತ್ವ, ಹೇಗಿತ್ತು ಬಿಜೆಪಿ ಕಾರ್ಯತಂತ್ರ?

ಪ್ರಧಾನಿ ಮೋದಿ ಅವರು ರಾಜ್ಯದಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ, ಅವರು 2014ರಲ್ಲಿ ಪ್ರಧಾನಿಯಾಗುವ ಮೊದಲು ಸುಮಾರು 13 ವರ್ಷಗಳ ಕಾಲ ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಪತ್ರಿಕೆ ಹೇಳಿದೆ. ಪ್ರಧಾನಿ ಮೋದಿ ರಾಜ್ಯದಲ್ಲಿ ಸರಣಿ ಪ್ರಚಾರ ಸಭೆಗಳನ್ನು ನಡೆಸಿದರು, ಬಿಜೆಪಿಯ ಪ್ರಚಾರಕ್ಕೆ ತಮ್ಮ ಸ್ಟಾರ್ ಪವರ್ ನೀಡಿದ್ದಾರೆ ಎಂದು ಜಪಾನ್ ದಿನಪತ್ರಿಕೆ ಹೇಳಿದೆ. ಗುಜರಾತ್ ಸಂಜಾತ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ ಹಾಗಾಗಿ ಅವರಿಗೆ ಜವಾಬ್ದಾರಿಯುತ ಪ್ರಜ್ಞೆ ಇದೆ ಎಂದು ಭಾರತೀಯರು ಹೆಮ್ಮೆಪಡುತ್ತಾರೆ ಎಂದು ಪತ್ರಿಕೆ ಹೇಳಿದೆ.

ಯುಕೆ ಮೂಲದ ದಿ ಇಂಡಿಪೆಂಡೆಂಟ್ ಸುದ್ದಿಸಂಸ್ಥೆ ಗುಜರಾತ್‌ನಲ್ಲಿ ದಾಖಲೆಯ ಗೆಲುವು 2024ರ ರಾಷ್ಟ್ರೀಯ ಚುನಾವಣೆಗೆ ಮುನ್ನ ಬಿಜೆಪಿಗೆ ದೊಡ್ಡ ಉತ್ತೇಜನವಾಗಿದೆ ಎಂದು ಹೇಳಿದೆ. ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಅಜಯ್ ಗುಡವರ್ತಿ ಅವರು ಬಿಜೆಪಿಯ ಅಲ್ ಜಜೀರಾ ಅವರಿಗೆ ಗುಜರಾತ್‌ನಲ್ಲಿ ಅನುಕೂಲಕರ ಗೆಲುವು ಹಿಂದೂ ಮತಗಳ ಮತ್ತಷ್ಟು ಕ್ರೋಢೀಕರಣವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ, ತಮ್ಮ ವೈಯಕ್ತಿಕ ಟ್ವಿಟ್ಟರ್ ಖಾತೆಯಲ್ಲಿ, ಗುಜರಾತ್ ಜನತೆಗೆ ಧನ್ಯವಾದ ಅರ್ಪಿಸಿದರು, ಇದರ ಜೊತೆಗೆ ಅಭಿವೃದ್ಧಿಯ ರಾಜಕೀಯವನ್ನು ಮಾಡುವ ಎಂದು ಹೇಳಿದ್ದಾರೆ. ಧನ್ಯವಾದಗಳು ಗುಜರಾತ್. ಅಭೂತಪೂರ್ವ ಚುನಾವಣಾ ಫಲಿತಾಂಶಗಳನ್ನು ನೋಡಿ ನಾನು ಬಹಳಷ್ಟು ಭಾವುಕನಾಗಿದ್ದೇನೆ. ಜನರು ಅಭಿವೃದ್ಧಿಯ ರಾಜಕಾರಣಕ್ಕೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು. ನಾನು ಗುಜರಾತ್‌ನ ಜನಶಕ್ತಿಗೆ ತಲೆಬಾಗುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಈ ಗೆಲುವಿಗಾಗಿ ಪರಿಶ್ರಮಿಸಿದ ಗುಜರಾತ್​ನ ನನ್ನ ಎಲ್ಲ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ನೀವು ಪ್ರತಿಯೊಬ್ಬರೂ ಚಾಂಪಿಯನ್! ನಮ್ಮ ಪಕ್ಷದ ನಿಜವಾದ ಶಕ್ತಿಯಾಗಿರುವ ನಮ್ಮ ಕಾರ್ಯಕರ್ತರ ಅಸಾಧಾರಣ ಪರಿಶ್ರಮವಿಲ್ಲದೆ ಈ ಐತಿಹಾಸಿಕ ಗೆಲುವು ಎಂದಿಗೂ ಸಾಧ್ಯವಿಲ್ಲ, ಎಂದು ಅವರು ಹೇಳಿದರು. ಸುಮಾರು ಮೂರು ದಶಕಗಳ ಕಾಲ ರಾಜ್ಯವನ್ನು ನಡೆಸುತ್ತಿದ್ದರೂ ಗುಜರಾತ್‌ನಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ಅಂತರವು ಮೋದಿಯ ತವರು ರಾಜ್ಯದಲ್ಲಿ ಮೋದಿಯವರ ಜನಪ್ರಿಯತೆಯ ಬಲವರ್ಧನೆಯನ್ನು ಸೂಚಿಸುತ್ತದೆ.

ಚುನಾವಣೆಗಳು ಸಮೀಪಿಸಿದಾಗ, ಆಡಳಿತ ವಿರೋಧಿತನವನ್ನು ಸಾಮಾನ್ಯವಾಗಿ ರಾಜಕೀಯ ತಜ್ಞರು ಮತ್ತು ವಿಮರ್ಶಕರು ಚರ್ಚಿಸುತ್ತಾರೆ, ಅವರು ಅಧಿಕಾರದಲ್ಲಿರುವ ಸರ್ಕಾರದ ವಿರುದ್ಧ ಜನರು ಮತ ಚಲಾಯಿಸುತ್ತಾರೆ ಎಂದು ಭಾವಿಸುತ್ತಾರೆ ಎಂದು ಮೋದಿ ನವೆಂಬರ್ 21ರಂದು ಸುರೇಂದ್ರನಗರದಲ್ಲಿ ತಮ್ಮ ರ್ಯಾಲಿಯಲ್ಲಿ ಹೇಳಿದ್ದರು. ಆದರೆ ಗುಜರಾತ್ ಜನರು ಇದು ತಪ್ಪು ಕಲ್ಪನೆ ಎಂದು ಸಾಬೀತುಪಡಿಸಿದ್ದಾರೆ. ಅಧಿಕಾರದ ಪರವಾದ ಸಂಸ್ಕೃತಿಯನ್ನು ಸ್ಥಾಪಿಸುವ ಮೂಲಕ ಪದೇ ಪದೇ ಬಿಜೆಪಿಯನ್ನು ಆಯ್ಕೆ ಮಾಡಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:32 pm, Fri, 9 December 22

Follow Us
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?