ಹೈದರಾಬಾದ್ನಲ್ಲಿ ಮಲತಂದೆಯಿಂದ 11 ವರ್ಷದ ಬಾಲಕನ ಕೊಲೆ
ಹೈದರಾಬಾದ್ನ ಬಂಡ್ಲಗುಡದಲ್ಲಿ ಮಲತಂದೆ ಹಲ್ಲೆ ನಡೆಸಿ ಥಳಿಸಿದ ಪರಿಣಾಮದಿಂದ ಅಪ್ರಾಪ್ತ ಬಾಲಕ ಸಾವನ್ನಪ್ಪಿದ್ದಾನೆ. ಹೈದರಾಬಾದ್ನ 11 ವರ್ಷದ ಬಾಲಕನೊಬ್ಬ ತನ್ನ ಮಲತಂದೆಯಿಂದ ಕ್ರೂರವಾಗಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದಾನೆ. ಮೊಹಮ್ಮದ್ ಅಸ್ಗರ್ ಎಂದು ಗುರುತಿಸಲಾದ ಅಪ್ರಾಪ್ತ ಬಾಲಕ ಚಂದ್ರಾಯನಗುಟ್ಟ ಪ್ರದೇಶದ ನಿವಾಸಿ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆತನಿಗೆ ಹೊಡೆದು ನೆಲಕ್ಕೆ ಎಸೆಯಲಾಗಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡ ಬಾಲಕ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾನೆ.

ಹೈದರಾಬಾದ್, ಡಿಸೆಂಬರ್ 13: ಹೈದರಾಬಾದ್ (Hyderabad) ನಗರದ ಬಂಡ್ಲಗುಡದಲ್ಲಿ ಮಲತಂದೆಯಿಂದ ತೀವ್ರವಾಗಿ ಥಳಿಸಲ್ಪಟ್ಟ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಬಾಲಕ ಮೊಹಮ್ಮದ್ ಅಸ್ಗರ್ ತನ್ನ ತಾಯಿ, ತಮ್ಮ ಮತ್ತು ಮಲತಂದೆ ಶೇಖ್ ಇಮ್ರಾನ್ ಜೊತೆ ಬಂಡ್ಲಗುಡದಲ್ಲಿ ವಾಸವಾಗಿದ್ದ. ಅಸ್ಗರ್ ಕೆಲವು ಮಕ್ಕಳೊಂದಿಗೆ ಆಟವಾಡುತ್ತಿರುವುದನ್ನು ನೋಡಿದ ಇಮ್ರಾನ್, ಮೊದಲು ಆತನ ಕೈಗಳಿಂದ ಬಾಲಕನನ್ನು ಹೊಡೆದನು. ನಂತರ ಆತನನ್ನು ಎತ್ತಿ ನೆಲದ ಮೇಲೆ ಎಸೆದನು.
ಇದರಿಂದಾಗಿ ಆ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಶುಕ್ರವಾರ ಚಿಕಿತ್ಸೆಯ ಸಮಯದಲ್ಲಿ ಅವನು ಸಾವನ್ನಪ್ಪಿದನು. ಇಮ್ರಾನ್ ಕೆಲವು ಮಕ್ಕಳನ್ನು ಭೇಟಿಯಾಗಬಾರದು ಎಂದು ಆ ಬಾಲಕನಿಗೆ ಸೂಚನೆ ನೀಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಬೀಗ ಹಾಕಿದ ಮನೆಯೊಳಗೆ ನೇಣು ಹಾಕಿಕೊಂಡು ತಾಯಿ-ಮಕ್ಕಳು ಸಾವು
ಆದರೂ ಆತ ಅದೇ ಹುಡುಗರ ಗುಂಪಿನೊಂದಿಗೆ ಆಟವಾಡುತ್ತಿದ್ದಾಗ ಇಮ್ರಾನ್ ಕೋಪದಿಂದ ಆ ಬಾಲಕನನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದ ಮೇಲಿನ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




