ನಮ್ಮ ಮಗು ಸತ್ತಾಗ ಬರ್ಲಿಲ್ಲ, ಪಾತಕಿಗಳ ಸಾವಿಗೆ ಬಂದಿರಾ? ದಿಶಾ ಕುಟುಂಬ ಕೆಂಡಾಮಂಡಲ

ಹೈದರಾಬಾದ್: NHRC ಸಮಿತಿ ಹೈದರಾಬಾದ್ ಭೇಟಿಗೆ ದಿಶಾ ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಿಶಾ ಪ್ರಕರಣದಲ್ಲಿ ಘೋರ ಅನ್ಯಾಯವಾದಾಗ ಸಮಿತಿ ಭೇಟಿ ನೀಡಲಿಲ್ಲ? ಕ್ರೂರ ಮೃಗಗಳಂತಹ ಕ್ರಿಮಿನಲ್​ಗಳು ಸತ್ತರೆ ಅದು ಹೇಗೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ದಿಶಾ ಕುಟುಂಬಸ್ಥರು ಪ್ರಶ್ನಿಸಿದ್ದಾರೆ. ಮೋಸ, ವಂಚನೆ, ಪಾಪ ಪುಣ್ಯ ಗೊತ್ತಿಲ್ಲದ ಮಗಳನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಆಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭೇಟಿ ನೀಡಲಿಲ್ಲ, ತನಿಖೆ ಮಾಡಲಿಲ್ಲ. ಯುವತಿಯನ್ನು ಗ್ಯಾಂಗ್ ರೇಪ್ ಮಾಡಿ,‌ ಹತ್ಯೆ ಮಾಡಿದಾಗ ಮಾನವ […]

ನಮ್ಮ ಮಗು ಸತ್ತಾಗ ಬರ್ಲಿಲ್ಲ, ಪಾತಕಿಗಳ ಸಾವಿಗೆ ಬಂದಿರಾ? ದಿಶಾ ಕುಟುಂಬ ಕೆಂಡಾಮಂಡಲ
ಸಾಧು ಶ್ರೀನಾಥ್​

Updated on: Dec 07, 2019 | 12:21 PM

ಹೈದರಾಬಾದ್: NHRC ಸಮಿತಿ ಹೈದರಾಬಾದ್ ಭೇಟಿಗೆ ದಿಶಾ ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಿಶಾ ಪ್ರಕರಣದಲ್ಲಿ ಘೋರ ಅನ್ಯಾಯವಾದಾಗ ಸಮಿತಿ ಭೇಟಿ ನೀಡಲಿಲ್ಲ? ಕ್ರೂರ ಮೃಗಗಳಂತಹ ಕ್ರಿಮಿನಲ್​ಗಳು ಸತ್ತರೆ ಅದು ಹೇಗೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ದಿಶಾ ಕುಟುಂಬಸ್ಥರು ಪ್ರಶ್ನಿಸಿದ್ದಾರೆ.

ಮೋಸ, ವಂಚನೆ, ಪಾಪ ಪುಣ್ಯ ಗೊತ್ತಿಲ್ಲದ ಮಗಳನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಆಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭೇಟಿ ನೀಡಲಿಲ್ಲ, ತನಿಖೆ ಮಾಡಲಿಲ್ಲ. ಯುವತಿಯನ್ನು ಗ್ಯಾಂಗ್ ರೇಪ್ ಮಾಡಿ,‌ ಹತ್ಯೆ ಮಾಡಿದಾಗ ಮಾನವ ಹಕ್ಕುಗಳ ಉಲ್ಲಂಘನೆಯಾಗಲಿಲ್ಲವೇ? ಎಂದು ದಿಶಾ ತಂದೆ-ತಾಯಿ ಕೆಂಡಾಮಂಡಲವಾಗಿದ್ದಾರೆ.

ಹಾಜಿಪುರ, ವರಂಗಲ್, ಆಸೀಫಾಬಾದ್​ಗಳಲ್ಲಿ ಚಿಕ್ಕಮಕ್ಕಳು, ಯುವತಿಯರು ಅತ್ಯಾಚಾರಕ್ಕೀಡಾಗಿ ಕೊಲೆಯಾದಾಗ ಆಯೋಗ ಏಕೆ ಬಾಯಿ ತೆರೆಯಲಿಲ್ಲ. ಈಗ ನಡೆದಿರೋ ಎನ್​ಕೌಂಟರ್ ನಾಗರಿಕ ಸಮಾಜ ಕೋರಿಕೊಂಡಂತಹುದು ಎಂದು ಎನ್‌ಹೆಚ್‌ಆರ್‌ಸಿ ಪರಿಶೀಲನೆಗೆ ದಿಶಾ ಕುಟುಂಬ ವಿರೋಧ ವ್ಯಕ್ತಪಡಿಸಿದೆ.

ವಿರೋಧದ ನಡುವೆಯೂ ಭೇಟಿ:
ಈ ಮಧ್ಯೆ ವಿರೋಧದ ನಡುವೆಯೂ ಮಹಬೂಬ್‌ನಗರದಲ್ಲಿರುವ ಆಸ್ಪತ್ರೆಗೆ NHRC ತಂಡ ಭೇಟಿ ನೀಡಿದೆ. 7 ಅಧಿಕಾರಿಗಳ ತಂಡ ಆಸ್ಪತ್ರೆಯಲ್ಲಿರುವ ಆರೋಪಿಗಳ ಮೃತದೇಹಗಳನ್ನ ಪರಿಶೀಲನೆ ನಡೆಸಿದ್ದಾರೆ. ಬಳಿಕ ಘಟನೆ ನಡೆದ ಪ್ರದೇಶಗಳ ಭೇಟಿಗೆ ತೆರಳಲು NHRC ತಂಡ ನಿರ್ಧರಿಸಿದೆ.

Published On - 11:27 am, Sat, 7 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us