AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಬೆಂಬಲ ಸಿ.ಎಂ.ಇಬ್ರಾಹಿಂಗೆ! ಕಾಂಗ್ರೆಸ್​ಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ರೆ ಅವರನ್ನ ಸಿಎಂ ಮಾಡಲಿ: ಸಿ.ಟಿ.ರವಿ

ಅವರ ಹೆಸರಿನಲ್ಲೇ ಸಿ.ಎಂ. ಇದೆ, ಅದನ್ನು ಅಧಿಕೃತ ಮಾಡಿ. ಇಬ್ರಾಹಿಂ ಅನೇಕ ಜನರಿಗೆ ಪೌರೋಹಿತ್ಯ ವಹಿಸಿದ್ದಾರೆ. ಪೌರೋಹಿತ್ಯ ವಹಿಸಿದವರಿಗೆ ತಾನು ಮದುವೆಯಾಗಬೇಕು ಎಂದು ಆಸೆ ಇರುತ್ತದೆ. ಕಾಂಗ್ರೆಸ್ಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ರೆ ಮಾಡಲಿ.

ನನ್ನ ಬೆಂಬಲ ಸಿ.ಎಂ.ಇಬ್ರಾಹಿಂಗೆ! ಕಾಂಗ್ರೆಸ್​ಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ರೆ ಅವರನ್ನ ಸಿಎಂ ಮಾಡಲಿ: ಸಿ.ಟಿ.ರವಿ
ಸಿ.ಟಿ.ರವಿ (ಸಂಗ್ರಹ ಚಿತ್ರ)
TV9 Web
| Edited By: ಆಯೇಷಾ ಬಾನು|

Updated on: Jun 28, 2021 | 11:18 AM

Share

ದೆಹಲಿ: ಕಾಂಗ್ರೆಸ್ನಲ್ಲಿ ಭವಿಷ್ಯದ ಸಿಎಂ ಅಭ್ಯರ್ಥಿ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ MLC ಸಿ.ಎಂ.ಇಬ್ರಾಹಿಂ ಹೇಳಿಕೆ ಗಮನಿಸಿದ್ದೇನೆ. ಇಬ್ರಾಹಿಂ ಸಿಎಂ ಆಗಬೇಕು ಎಂಬ ಹೇಳಿಕೆಯಲ್ಲಿ ನ್ಯಾಯ ಇದೆ. ನನ್ನ ಬೆಂಬಲ ಸಿ.ಎಂ.ಇಬ್ರಾಹಿಂಗೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಬಿಜೆಪಿಗೆ ಬಹುಮತವಿದೆ, ಯಡಿಯೂರಪ್ಪ ಸಿಎಂ ಆಗಿದ್ದಾರೆ. ಕಾಂಗ್ರೆಸ್‌ನವರು ಬಹುಮತ ಇಲ್ಲದಿದ್ರೂ ಹಲವರು ಸಿಎಂ ಆಗಲು ಕನಸು ಕಾಣುತ್ತಿದ್ದಾರೆ. ಹನುಮಂತನ ಬಾಲದ ರೀತಿಯಲ್ಲಿ ಪಟ್ಟಿ ಬೆಳೆಯುತ್ತಿದೆ. ಕಾಂಗ್ರೆಸ್ MLC ಸಿ.ಎಂ.ಇಬ್ರಾಹಿಂ ಹೇಳಿಕೆ ಗಮನಿಸಿದ್ದೇನೆ. ಇಬ್ರಾಹಿಂ ಸಿಎಂ ಆಗಬೇಕು, ಹೇಳಿಕೆಯಲ್ಲಿ ನ್ಯಾಯ ಇದೆ. ನನ್ನ ಬೆಂಬಲ ಸಿ.ಎಂ.ಇಬ್ರಾಹಿಂಗೆ ಇದೆ ಎಂದರು.

ಅವರ ಹೆಸರಿನಲ್ಲೇ ಸಿ.ಎಂ. ಇದೆ, ಅದನ್ನು ಅಧಿಕೃತ ಮಾಡಿ. ಇಬ್ರಾಹಿಂ ಅನೇಕ ಜನರಿಗೆ ಪೌರೋಹಿತ್ಯ ವಹಿಸಿದ್ದಾರೆ. ಪೌರೋಹಿತ್ಯ ವಹಿಸಿದವರಿಗೆ ತಾನು ಮದುವೆಯಾಗಬೇಕು ಎಂದು ಆಸೆ ಇರುತ್ತದೆ. ಕಾಂಗ್ರೆಸ್ಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ರೆ ಮಾಡಲಿ. ಅಲ್ಪಸಂಖ್ಯಾತರ ಮೊಣಕೈಗೆ ತುಪ್ಪ ಸವರಬೇಡಿ. ದಲಿತರಿಗೆ ಮೋಸ ಮಾಡಿದ್ರಿ, ಅಲ್ಪಸಂಖ್ಯಾತರಿಗೆ ಮಾಡಬೇಡಿ. ಜಮೀರ್, ತನ್ವೀರ್, ಇಬ್ರಾಹಿಂ ಯಾರನ್ನಾದ್ರೂ ಮಾಡಿ ಆದ್ರೆ ಇಬ್ರಾಹಿಂ ಅವರನ್ನು ಸಿಎಂ ಮಾಡಲು ನನ್ನ ಬೆಂಬಲ ಇದೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ರು.

ಇದನ್ನೂ ಓದಿ: ರಾಜ್ಯ ಕಾಂಗ್ರೆಸ್​ನಲ್ಲಿ ತಾರಕಕ್ಕೇರಿದ ಸಿಎಂ ಗಲಾಟೆ; ಖಡಕ್ ಸೂಚನೆ ನೀಡಲು ರಾಹುಲ್​ಗೆ ಹಿರಿಯ ನಾಯಕರ ಒತ್ತಾಯ

Follow Us
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್