ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದ 5 ಯುದ್ಧ ವಿಮಾನ ಪತನ; ಐಎಎಫ್ ಮುಖ್ಯಸ್ಥ ಮಹತ್ವದ ಮಾಹಿತಿ
ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಮಿಲಿಟರಿ ಘರ್ಷಣೆಯ ಸಮಯದಲ್ಲಿ ಭಾರತವು ಅಮೆರಿಕ ನಿರ್ಮಿತ ಎಫ್ -16 ಮತ್ತು ಚೀನಾ ನಿರ್ಮಿತ ಜೆಎಫ್ -17 ಸೇರಿದಂತೆ 4ರಿಂದ 5 ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ (ಎಪಿ ಸಿಂಗ್) ತಿಳಿಸಿದ್ದಾರೆ.

ನವದೆಹಲಿ, ಅಕ್ಟೋಬರ್ 3: ಆಪರೇಷನ್ ಸಿಂಧೂರ್ (Operation Sindoor) ಬಗ್ಗೆ ಭಾರತೀಯ ವಾಯುಪಡೆಯ (Indian Air Force) ಮುಖ್ಯಸ್ಥ ಎಪಿ ಸಿಂಗ್ ಬಹಳ ಮಹತ್ವದ ಮಾಹಿತಿ ನೀಡಿದ್ದಾರೆ. ನಾವು ಭಾರತೀಯ ಫೈಟರ್ ಜೆಟ್ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಪಾಕಿಸ್ತಾನದ ಹೇಳಿಕೆಗಳನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ನಿರಾಕರಿಸಿದ್ದಾರೆ. ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ್ ದಾಳಿಯ ಸಮಯದಲ್ಲಿ ಪಾಕಿಸ್ತಾನಕ್ಕೆ ಉಂಟಾದ ಹಾನಿಯ ವಿವರವಾದ ಮಾಹಿತಿಯನ್ನು ಕೂಡ ಅವರು ನೀಡಿದ್ದಾರೆ.
ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಇಂದು (ಅಕ್ಟೋಬರ್ 3) ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ದೆಹಲಿಯಲ್ಲಿ ನಡೆದ 93ನೇ ವಾಯುಪಡೆ ದಿನಾಚರಣೆಯಲ್ಲಿ ಮಾತನಾಡಿದ ಎಪಿ ಸಿಂಗ್ ಅವರು “ನಾವು ಪಾಕಿಸ್ತಾನದ ವಾಯುನೆಲೆಯ ಮೇಲೆ ಹೆಚ್ಚಿನ ಸಂಖ್ಯೆಯ ದಾಳಿ ಮಾಡಿದ್ದೇವೆ ಮತ್ತು ನಾವು ಅವರ ಹೆಚ್ಚಿನ ಪ್ರಮಾಣದ ನೆಲೆಗಳನ್ನು ಮತ್ತು ಯುದ್ಧ ವಿಮಾನಗಳನ್ನು ಧ್ವಂಸ ಮಾಡಿದ್ದೇವೆ” ಎಂದು ಹೇಳಿದ್ದಾರೆ.
IAF Chief AP Singh makes big statememt on Operation Sindoor:
“India neutralised 9–10 Pakistani fighter jets”
“5 high-tech fighters shot down in air”
“Destroyed 4-5 F16s on ground during maintenance”
“Radars & command & control centers destroyed”
“Longest SAM… pic.twitter.com/BVdULZEmTK
— Nabila Jamal (@nabilajamal_) October 3, 2025
ಇದನ್ನೂ ಓದಿ:ಪಾಕ್ ಸೇನಾ ಮುಖ್ಯಸ್ಥ ಆಸಿಮ್ರನ್ನು ಸೇಲ್ಸ್ಮ್ಯಾನ್ ಎಂದು ಕರೆದು ಅಪಹಾಸ್ಯ ಮಾಡಿದ ಪಾಕಿಸ್ತಾನ ಜನ
ಪಾಕಿಸ್ತಾನ ಅನುಭವಿಸಿದ ವ್ಯಾಪಕ ನಷ್ಟಗಳನ್ನು ಅವರು ವಿವರಿಸಿದ್ದು, “ಭಾರತೀಯ ದಾಳಿಗಳು 4 ಸ್ಥಳಗಳಲ್ಲಿ ರಾಡಾರ್ಗಳನ್ನು ಹೊಡೆದವು. ಅವುಗಳಲ್ಲಿ ಎರಡು ಸ್ಥಳಗಳಲ್ಲಿ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು, ಎರಡು ಸ್ಥಳಗಳಲ್ಲಿ ರನ್ವೇಗಳು ಹಾನಿಗೊಳಗಾದವು. ನಂತರ 3 ವಿಭಿನ್ನ ನಿಲ್ದಾಣಗಳಲ್ಲಿನ ಅವುಗಳ 3 ಹ್ಯಾಂಗರ್ಗಳು ಹಾನಿಗೊಳಗಾಗಿವೆ” ಎಂದು ಹೇಳಿದ್ದಾರೆ.
“ಅದರೊಂದಿಗೆ ಪಾಕಿಸ್ತಾನದ ಒಂದು SAM ವ್ಯವಸ್ಥೆಯನ್ನು ನಾಶಪಡಿಸಲಾಗಿದೆ. 300 ಕಿ.ಮೀ.ಗಿಂತ ಹೆಚ್ಚು ದೂರದಲ್ಲಿ ದಾಳಿ ಮಾಡಿದ ಒಂದು ದೀರ್ಘ-ಶ್ರೇಣಿಯ ದಾಳಿಯ ಸ್ಪಷ್ಟ ಪುರಾವೆಗಳು ನಮ್ಮಲ್ಲಿವೆ. ಅದರೊಂದಿಗೆ, F-16 ಮತ್ತು JF-17 ವರ್ಗದ ನಡುವಿನ 5 ಹೈಟೆಕ್ ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸರ್ ಕ್ರೀಕ್ ವಿವಾದ: ಭುಜ್ ವಾಯುನೆಲೆಯಿಂದ ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಎಚ್ಚರಿಕೆ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ ತಮ್ಮ ಪಡೆಗಳು 7 ಭಾರತೀಯ ಜೆಟ್ಗಳನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡ ಕೆಲವು ದಿನಗಳ ನಂತರ ಭಾರತದ ವಾಯುಪಡೆಯಿಂದ ಈ ಹೇಳಿಕೆಗಳು ಬಂದಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




