AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Haryana: ಮೆಡಿಕಲ್ ಶಾಪ್ ಗೆ ಔಷಧಿಕೊಳ್ಳಲು ಬಂದ 23ರ ಯುವಕ ಅಲ್ಲೇ ಹೃದಯಾಘಾತಕ್ಕೊಳಗಾಗಿ ಪ್ರಾಣಬಿಟ್ಟ!

ಹರಿಯಾಣದ ಫರೀದಾಬಾದ್ ನಗರದಲ್ಲಿರುವ ಮೆಡಿಕಲ್ ಶಾಪೊಂದರ ಮುಂದೆ ಶುಕ್ರವಾರದಂದು ಈ ದುರಂತ ನಡೆದಿದೆ.

Haryana: ಮೆಡಿಕಲ್ ಶಾಪ್ ಗೆ ಔಷಧಿಕೊಳ್ಳಲು ಬಂದ 23ರ ಯುವಕ ಅಲ್ಲೇ ಹೃದಯಾಘಾತಕ್ಕೊಳಗಾಗಿ ಪ್ರಾಣಬಿಟ್ಟ!
ಕುಸಿಯುತ್ತಿರುವ ವ್ಯಕ್ತಿ
TV9 Web
| Edited By: |

Updated on: Jan 07, 2023 | 11:57 AM

Share

ಫರೀದಾಬಾದ್​ (ಹರಿಯಾಣ): ಸಾವು ಎಷ್ಟು ಅನಿಶ್ಚಿತ (uncertain) ಮತ್ತು ಕ್ರೂರ ಅನ್ನೋದನ್ನು ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ಅರ್ಥಮಾಡಿಕೊಳ್ಳಬಹುದು. ವಿಡಿಯೋದಲ್ಲಿ ಕಾಣುವ ವ್ಯಕ್ತಿಯದು ಖಂಡಿತ ಸಾಯುವ ಅದರಲ್ಲೂ ಹೃದಯಾಘಾತದ (heart attack) ಮೂಲಕ ಕುಸಿದು ಸಾವನ್ನಪ್ಪುವ ವಯಸ್ಸಲ್ಲ. ಔಷಧಿ ಕೊಳ್ಳಲೆಂದು ಮೆಡಿಕಲ್ ಶಾಪ್ (medical shop) ವೊಂದಕ್ಕೆ ಬರುವ ಅವನು ಎದೆ ನೀವಿಕೊಳ್ಳುತ್ತಲೇ ಮಾತ್ರೆ ಕೇಳುತ್ತಾನೆ. ಅವನ ಪಕ್ಕದಲ್ಲಿ ಒಬ್ಬ ಅಜ್ಜಿ ಮಾತ್ರೆ ಖರೀದಿಸಿ ಆರಾಮಾಗಿ ನಡೆದು ಹೋಗುತ್ತಾಳೆ. ಆದರೆ ಇವನ ಮುಖದಲ್ಲಿ ಗಾಬರಿ, ಅತಂಕ ಕಾಣಬಹುದು. ಎದೆನೋವು ಅವನಿಗೆ ಸಹಿಸಿಕೊಳ್ಳಲಾಗುತ್ತಿಲ್ಲ, ಎದೆ ಸವರಿಕೊಳ್ಳವುದನ್ನು ಮುಂದುವರಿಸುತ್ತಾನೆ. ಅಂಗಡಿಯವನು ಮೆಡಿಸಿನ್ ನೀಡಿದ ಬಳಿಕ ಅವನು ಜೇಬಿಂದ ಹಣ ತೆಗೆದು ಕೊಡುತ್ತಾನೆ. ಅಷ್ಟರಲ್ಲಿ ಎದೆನೋವು ಜಾಸ್ತಿಯಾಗಿ ಅಂಗಡಿಯ ಕೌಂಟರ್ ಪಕ್ಕದಲ್ಲೇ ಕುಸಿಯುತ್ತಾನೆ, ಅಂಗಡಿಯವ ಅವನ ಕೈಹಿಡಿಯುವ ಪ್ರಯತ್ನ ಮಾಡುವುದು ವಿಡಿಯೋದಲ್ಲಿ ಕಾಣುತ್ತದೆ. ಸುಮಾರು 3 ನಿಮಿಷಗಳ ಇಡೀ ದೃಶ್ಯಾವಳಿ ಅಂಗಡಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಕುಸಿದುಬಿದ್ದ ವ್ಯಕ್ತಿ ಅಲ್ಲೇ ಕೊನೆಯುಸಿರೆಳೆದಿದ್ದಾನೆ.

ಅಂದಹಾಗೆ, ಹರಿಯಾಣದ ಫರೀದಾಬಾದ್ ನಗರದಲ್ಲಿರುವ ಮೆಡಿಕಲ್ ಶಾಪೊಂದರ ಮುಂದೆ ಶುಕ್ರವಾರದಂದು ಈ ದುರಂತ ನಡೆದಿದೆ.

ಮೃತವ್ಯಕ್ತಿ ಉತ್ತರ ಪ್ರದೇಶದವನು

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ವ್ಯಕ್ತಿಯ ಹೆಸರು ಸಂಜಯ್ ಮತ್ತು ಅವನ ವಯಸ್ಸು ಕೇವಲ 23-ವರ್ಷ! ಸಂಜಯ್ ಉತ್ತರ ಪ್ರದೇಶದ ಇಟಾದ ನಿವಾಸಿ. ಮೆಡಿಕಲ್ ಶಾಪ್ ನಲ್ಲಿದ್ದ ವ್ಯಕ್ತಿ ನೀಡಿರುವ ಹೇಳಿಕೆಯ ಪ್ರಕಾರ ಅವನು ಓ ಅರ್ ಎಸ್ ಕೇಳಿದನಂತೆ. ಅಜ್ಜಿಗೆ ಔಷಧಿ ನೀಡಿದ ನಂತರ ಅಂಗಡಿಯವ ಸಂಜಯ್ ಗೆ ಓಅರ್ ಎಸ್ ಕೊಡುತ್ತಾನೆ. ಆದರೆ ಅಷ್ಟರಲ್ಲಿ ಸಂಜಯ್ ಕುಸಿಯಲಾರಂಭಿಸುತ್ತಾನೆ. ಹಾಗೆ ಕುಸಿದವನು ಮೇಲೇಳಲೇ ಇಲ್ಲ ಅಂತ ಅಂಗಡಿಯವ ಪೊಲೀಸರಿಗೆ ತಿಳಿಸಿದ್ದಾನೆ.

ಮಧ್ಯ ಪ್ರದೇಶದಲ್ಲೊಂದು ಘಟನೆ!

ಶುಕ್ರವಾರದಂದು ವ್ಯಕ್ತಿಯೊಬ್ಬ ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿ ಪ್ರಾಣಬಿಟ್ಟ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಆ ಸನ್ನಿವೇಶ ಜಿಮ್ ನಲ್ಲಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ. ಯುವಕರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪುತ್ತಿರುವುದು ಕಳವಳಕಾರಿ ಅಂಶವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ