AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Haryana: ಮೆಡಿಕಲ್ ಶಾಪ್ ಗೆ ಔಷಧಿಕೊಳ್ಳಲು ಬಂದ 23ರ ಯುವಕ ಅಲ್ಲೇ ಹೃದಯಾಘಾತಕ್ಕೊಳಗಾಗಿ ಪ್ರಾಣಬಿಟ್ಟ!

ಹರಿಯಾಣದ ಫರೀದಾಬಾದ್ ನಗರದಲ್ಲಿರುವ ಮೆಡಿಕಲ್ ಶಾಪೊಂದರ ಮುಂದೆ ಶುಕ್ರವಾರದಂದು ಈ ದುರಂತ ನಡೆದಿದೆ.

Haryana: ಮೆಡಿಕಲ್ ಶಾಪ್ ಗೆ ಔಷಧಿಕೊಳ್ಳಲು ಬಂದ 23ರ ಯುವಕ ಅಲ್ಲೇ ಹೃದಯಾಘಾತಕ್ಕೊಳಗಾಗಿ ಪ್ರಾಣಬಿಟ್ಟ!
ಕುಸಿಯುತ್ತಿರುವ ವ್ಯಕ್ತಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 07, 2023 | 11:57 AM

ಫರೀದಾಬಾದ್​ (ಹರಿಯಾಣ): ಸಾವು ಎಷ್ಟು ಅನಿಶ್ಚಿತ (uncertain) ಮತ್ತು ಕ್ರೂರ ಅನ್ನೋದನ್ನು ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ಅರ್ಥಮಾಡಿಕೊಳ್ಳಬಹುದು. ವಿಡಿಯೋದಲ್ಲಿ ಕಾಣುವ ವ್ಯಕ್ತಿಯದು ಖಂಡಿತ ಸಾಯುವ ಅದರಲ್ಲೂ ಹೃದಯಾಘಾತದ (heart attack) ಮೂಲಕ ಕುಸಿದು ಸಾವನ್ನಪ್ಪುವ ವಯಸ್ಸಲ್ಲ. ಔಷಧಿ ಕೊಳ್ಳಲೆಂದು ಮೆಡಿಕಲ್ ಶಾಪ್ (medical shop) ವೊಂದಕ್ಕೆ ಬರುವ ಅವನು ಎದೆ ನೀವಿಕೊಳ್ಳುತ್ತಲೇ ಮಾತ್ರೆ ಕೇಳುತ್ತಾನೆ. ಅವನ ಪಕ್ಕದಲ್ಲಿ ಒಬ್ಬ ಅಜ್ಜಿ ಮಾತ್ರೆ ಖರೀದಿಸಿ ಆರಾಮಾಗಿ ನಡೆದು ಹೋಗುತ್ತಾಳೆ. ಆದರೆ ಇವನ ಮುಖದಲ್ಲಿ ಗಾಬರಿ, ಅತಂಕ ಕಾಣಬಹುದು. ಎದೆನೋವು ಅವನಿಗೆ ಸಹಿಸಿಕೊಳ್ಳಲಾಗುತ್ತಿಲ್ಲ, ಎದೆ ಸವರಿಕೊಳ್ಳವುದನ್ನು ಮುಂದುವರಿಸುತ್ತಾನೆ. ಅಂಗಡಿಯವನು ಮೆಡಿಸಿನ್ ನೀಡಿದ ಬಳಿಕ ಅವನು ಜೇಬಿಂದ ಹಣ ತೆಗೆದು ಕೊಡುತ್ತಾನೆ. ಅಷ್ಟರಲ್ಲಿ ಎದೆನೋವು ಜಾಸ್ತಿಯಾಗಿ ಅಂಗಡಿಯ ಕೌಂಟರ್ ಪಕ್ಕದಲ್ಲೇ ಕುಸಿಯುತ್ತಾನೆ, ಅಂಗಡಿಯವ ಅವನ ಕೈಹಿಡಿಯುವ ಪ್ರಯತ್ನ ಮಾಡುವುದು ವಿಡಿಯೋದಲ್ಲಿ ಕಾಣುತ್ತದೆ. ಸುಮಾರು 3 ನಿಮಿಷಗಳ ಇಡೀ ದೃಶ್ಯಾವಳಿ ಅಂಗಡಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಕುಸಿದುಬಿದ್ದ ವ್ಯಕ್ತಿ ಅಲ್ಲೇ ಕೊನೆಯುಸಿರೆಳೆದಿದ್ದಾನೆ.

ಅಂದಹಾಗೆ, ಹರಿಯಾಣದ ಫರೀದಾಬಾದ್ ನಗರದಲ್ಲಿರುವ ಮೆಡಿಕಲ್ ಶಾಪೊಂದರ ಮುಂದೆ ಶುಕ್ರವಾರದಂದು ಈ ದುರಂತ ನಡೆದಿದೆ.

ಮೃತವ್ಯಕ್ತಿ ಉತ್ತರ ಪ್ರದೇಶದವನು

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ವ್ಯಕ್ತಿಯ ಹೆಸರು ಸಂಜಯ್ ಮತ್ತು ಅವನ ವಯಸ್ಸು ಕೇವಲ 23-ವರ್ಷ! ಸಂಜಯ್ ಉತ್ತರ ಪ್ರದೇಶದ ಇಟಾದ ನಿವಾಸಿ. ಮೆಡಿಕಲ್ ಶಾಪ್ ನಲ್ಲಿದ್ದ ವ್ಯಕ್ತಿ ನೀಡಿರುವ ಹೇಳಿಕೆಯ ಪ್ರಕಾರ ಅವನು ಓ ಅರ್ ಎಸ್ ಕೇಳಿದನಂತೆ. ಅಜ್ಜಿಗೆ ಔಷಧಿ ನೀಡಿದ ನಂತರ ಅಂಗಡಿಯವ ಸಂಜಯ್ ಗೆ ಓಅರ್ ಎಸ್ ಕೊಡುತ್ತಾನೆ. ಆದರೆ ಅಷ್ಟರಲ್ಲಿ ಸಂಜಯ್ ಕುಸಿಯಲಾರಂಭಿಸುತ್ತಾನೆ. ಹಾಗೆ ಕುಸಿದವನು ಮೇಲೇಳಲೇ ಇಲ್ಲ ಅಂತ ಅಂಗಡಿಯವ ಪೊಲೀಸರಿಗೆ ತಿಳಿಸಿದ್ದಾನೆ.

ಮಧ್ಯ ಪ್ರದೇಶದಲ್ಲೊಂದು ಘಟನೆ!

ಶುಕ್ರವಾರದಂದು ವ್ಯಕ್ತಿಯೊಬ್ಬ ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿ ಪ್ರಾಣಬಿಟ್ಟ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಆ ಸನ್ನಿವೇಶ ಜಿಮ್ ನಲ್ಲಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ. ಯುವಕರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪುತ್ತಿರುವುದು ಕಳವಳಕಾರಿ ಅಂಶವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್