AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತಕ್ಕೆ ಪಾರ್ಟ್ನರ್ಸ್ ಬೇಕು, ನೀತಿಪಾಠ ಹೇಳೋರಲ್ಲ: ಯೂರೋಪ್ ದೇಶಗಳಿಗೆ ಜೈಶಂಕರ್ ಸ್ಪಷ್ಟ ಸಂದೇಶ

S Jaishankar's strong message to Europe: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮತ್ತೊಮ್ಮೆ ಪಾಶ್ಚಿಮಾತ್ಯ ದೇಶಗಳ ಮೇಲೆ ಹರಿಹಾಯ್ದಿದ್ದಾರೆ. ಐರೋಪ್ಯ ದೇಶಗಳ ಇಬ್ಬಗೆ ನೀತಿಯನ್ನು ಅವರು ಟೀಕಿಸಿದ್ದಾರೆ. ಉಕ್ರೇನ್ ಸೇರಿದಂತೆ ಹಲವು ವಿಚಾರಗಳಲ್ಲಿ ಭಾರತಕ್ಕೆ ಈ ದೇಶಗಳು ಪಾಠ ಮಾಡುವುದನ್ನು ಟೀಕಿಸಿರುವ ಸಚಿವರು, ಭಾರತಕ್ಕೆ ಬೋಧಕರು ಬೇಕಾಗಿಲ್ಲ, ಪಾರ್ಟ್ನರ್ಸ್ ಬೇಕಾಗಿದೆ ಎಂದಿದ್ದಾರೆ.

ಭಾರತಕ್ಕೆ ಪಾರ್ಟ್ನರ್ಸ್ ಬೇಕು, ನೀತಿಪಾಠ ಹೇಳೋರಲ್ಲ: ಯೂರೋಪ್ ದೇಶಗಳಿಗೆ ಜೈಶಂಕರ್ ಸ್ಪಷ್ಟ ಸಂದೇಶ
ಎಸ್ ಜೈಶಂಕರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 04, 2025 | 7:16 PM

ನವದೆಹಲಿ, ಮೇ 4: ಇದ್ದದ್ದನ್ನು ಇದ್ದಂತೆ ಯಾವ ಮುಲಾಜಿಲ್ಲದೆ ಹೇಳುವ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರು ಐರೋಪ್ಯ ದೇಶಗಳ ಇಬ್ಬಗೆ ನೀತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಾಗತಿಕ ವಿಚಾರಗಳಲ್ಲಿ ವಾಸ್ತವವನ್ನು ಆ ದೇಶಗಳು ಅರಿತುಕೊಳ್ಳುವ ಸಂದರ್ಭ ಇದು ಎಂದು ಜೈಶಂಕರ್ ಹೇಳಿದ್ದಾರೆ. ಇನ್ನೂ ಮುಂದುವರಿದ ಅವರು, ಭಾರತಕ್ಕೆ ನೀತಿ ಪಾಠ ಹೇಳುವವರು ಬೇಕಾಗಿಲ್ಲ, ಸಹವರ್ತಿಗಳು ಬೇಕು ಎಂದಿದ್ದಾರೆ.

‘ನಾವು ಜಗತ್ತಿನತ್ತ ನೋಡುತ್ತಿದ್ದೇವೆ ಎಂದರೆ ಅದು ಪಾರ್ಟ್ನರ್​​ಗಳನ್ನು ಎದುರು ನೋಡುತ್ತಿದ್ದೇವೆ ಎಂದರ್ಥ. ನಮಗೆ ಬೋಧಕರು ಬೇಕಾಗಿಲ್ಲ. ಅದರಲ್ಲೂ, ಹೊರಗೆ ಹೇಳೋದು ಒಂದು ಮನೆಯೊಳಗೆ ಮಾಡೋದು ಒಂದು ಎಂದಿರುವ ಬೋಧಕರಂತೂ ಬೇಕಾಗಿಲ್ಲ. ಕೆಲ ಯೂರೋಪ್ ಭಾಗವು ಈ ಸಮಸ್ಯೆ ಹೊಂದಿದೆ ಎಂದನಿಸುತ್ತೆ. ಕೆಲ ದೇಶಗಳು ಬದಲಾಗುತ್ತಿವೆ’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾದ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಕ್ರಮಕ್ಕೆ ಸಿದ್ಧತೆ? ವಾಯುಪಡೆ ಮುಖ್ಯಸ್ಥರನ್ನು ಭೇಟಿಯಾದ ಪ್ರಧಾನಿ ಮೋದಿ

ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಎ ಜೈಶಂಕರ್ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಅನೇಕ ವಿಚಾರದಲ್ಲಿ ಭಾರತದ ಮೇಲೆ ಒತ್ತಡ ಹಾಕಲು ಬಂದಾಗೆಲ್ಲಾ ಆ ದೇಶಗಳಿಗೆ ಅವರು ಖಡಕ್ ತಿರುಗೇಟು ನೀಡಿದ್ದಿದೆ. ಯೂರೋಪಿಯನ್ ಯೂನಿಯನ್ ವಿರುದ್ಧವೂ ಅನೇಕ ಬಾರಿ ಕಾಠಿಣ್ಯವಾಗಿ ಮಾತನಾಡಿದ್ದಿದೆ.

ತನ್ನ ಸಮಸ್ಯೆಗಳು ಜಗತ್ತಿನ ಸಮಸ್ಯೆ. ಜಗತ್ತಿನ ಸಮಸ್ಯೆಗಳು ಯೂರೋಪ್​​ನ ಸಮಸ್ಯೆಗಳಲ್ಲ ಎನ್ನುವ ಮನಸ್ಥಿತಿಯಲ್ಲಿ ಯೂರೋಪ್ ಇದೆ ಎಂದು ಜೈಶಂಕರ್ ಅವರು ಉಕ್ರೇನ್ ವಿಚಾರದಲ್ಲಿ ಕುಟುಕಿದ್ದರು.

ಉಕ್ರೇನ್ ವಿಚಾರದಲ್ಲಿ ಭಾರತ ರಷ್ಯಾ ವಿರುದ್ಧವಾದ ನಿಲುವು ತಳೆದಿಲ್ಲ ಎಂಬುದು ಪಾಶ್ಚಿಮಾತ್ಯ ದೇಶಗಳ ತಕರಾರು. ಚೀನಾ ಜೊತೆ ಸಮಸ್ಯೆ ಹೆಚ್ಚಾದಾಗ ಭಾರತಕ್ಕೆ ಜಾಗತಿಕ ಬೆಂಬಲ ಸಿಗದೇ ಹೋಗಬಹುದು ಎನ್ನುವ ಪರೋಕ್ಷ ಎಚ್ಚರಿಕೆಯನ್ನು ಐರೋಪ್ಯ ದೇಶಗಳು ಮಾಡುತ್ತಿವೆ.

ಇದನ್ನೂ ಓದಿ: ಪೂರ್ಣಪ್ರಮಾಣದ ಯುದ್ಧವಾದ್ರೆ ಪಾಕಿಸ್ತಾನದ ಬಳಿ ಇರೋ ಮದ್ದುಗುಂಡು 4ನೇ ದಿನದಲ್ಲಿ ಖತಂ

ಚೀನಾ ಜೊತೆಗಿನ ನಮ್ಮ ಸಮಸ್ಯೆಗಳಿಗೂ ಉಕ್ರೇನ್​ಗೂ ಸಂಬಂಧ ಇಲ್ಲ, ರಷ್ಯಾಗೂ ಸಂಬಂಧ ಇಲ್ಲ. ಮೊದಲ ಬಿಕ್ಕಟ್ಟು ದಾಟಿದರೆ ಎರಡನೇ ಬಿಕ್ಕಟ್ಟಿಗೆ ಸಹಾಯವಾಗುತ್ತದೆ ಎನ್ನುವ ತರ್ಕ ಕೆಲಸ ಮಾಡೋದಿಲ್ಲ. ಯೂರೋಪ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್
ಹಂತಕನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್