AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಂಘೈ ಸಹಕಾರ ಸಂಸ್ಥೆಯ ಎನ್‌ಎಸ್‌ಎ ಸಭೆಯಲ್ಲಿ ಭಾಗವಹಿಸಲಿದೆ ಭಾರತ ಮತ್ತು ಪಾಕಿಸ್ತಾನ

Shanghai Cooperation Organisation: ಈ ಸಭೆಯಲ್ಲಿ ಅಫ್ಘಾನಿಸ್ತಾನದ ಎನ್‌ಎಸ್‌ಎ ಹಮ್ದುಲ್ಲಾ ಮೊಹಿಬ್, ರಷ್ಯಾದ ಎನ್‌ಎಸ್‌ಎ ನಿಕೋಲಾಯ್ ಪಟ್ರುಶೇವ್ ಮತ್ತು ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಸಹವರ್ತಿಗಳು ಭಾಗವಹಿಸುವ ಸಾಧ್ಯತೆ ಇದೆ.

ಶಾಂಘೈ ಸಹಕಾರ ಸಂಸ್ಥೆಯ ಎನ್‌ಎಸ್‌ಎ ಸಭೆಯಲ್ಲಿ ಭಾಗವಹಿಸಲಿದೆ ಭಾರತ  ಮತ್ತು ಪಾಕಿಸ್ತಾನ
ಅಜಿತ್​ ದೋವಲ್​
TV9 Web
| Edited By: |

Updated on: Jun 20, 2021 | 1:40 PM

Share

ದೆಹಲಿ: ನಿಯಂತ್ರಣ ರೇಖೆ (ಎಲ್‌ಒಸಿ) ಯೊಂದಿಗೆ ಕದನ ವಿರಾಮ ಒಪ್ಪಂದವನ್ನು ಪಾಲಿಸಲು ಭಾರತ ಮತ್ತು ಪಾಕಿಸ್ತಾನ ನಿರ್ಧರಿಸಿದ ನಾಲ್ಕು ತಿಂಗಳ ನಂತರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮುಂದಿನ ವಾರ ದುಶಾಂಬೆಯಲ್ಲಿ  ನಡೆಯಲಿರುವ ಸಭೆಯಲ್ಲಿ ಭಾಗವಹಿಸಲಿದ್ದು, ಪಾಕಿಸ್ತಾನದ ಪ್ರತಿನಿಧಿ ಮೊಯೀದ್ ಯೂಸುಫ್  ಅವರೂ ಈ ಸಭೆಯಲ್ಲಿರಲಿದ್ದಾರೆ. ತಜಕಿಸ್ತಾನ್ ರಾಜಧಾನಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ)ಯ ಎನ್‌ಎಸ್‌ಎ(ರಾಷ್ಟ್ರೀಯ ಭದ್ರತಾ ಸಂಸ್ಥೆ )ಗಳ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಎಸ್‌ಸಿಒ ದೇಶಗಳ ಎನ್‌ಎಸ್‌ಎ ಮಟ್ಟದ ವರ್ಚುವಲ್ ಸಭೆ ಸೇರಿದ್ದು ಈ ಬಾರಿ ಜೂನ್ 23-24ರಂದು ದೋವಲ್ ಸಭೆಗೆ ಹಾಜರಾಗಲಿದ್ದಾರೆ.

ಈ ಸಭೆಯಲ್ಲಿ ಅಫ್ಘಾನಿಸ್ತಾನದ ಎನ್‌ಎಸ್‌ಎ ಹಮ್ದುಲ್ಲಾ ಮೊಹಿಬ್, ರಷ್ಯಾದ ಎನ್‌ಎಸ್‌ಎ ನಿಕೋಲಾಯ್ ಪಟ್ರುಶೇವ್ ಮತ್ತು ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಸಹವರ್ತಿಗಳು ಭಾಗವಹಿಸುವ ಸಾಧ್ಯತೆ ಇದೆ.

ಅಫ್ಘಾನಿಸ್ತಾನದಲ್ಲಿನ ಸಂದಿಗ್ಧ ಪರಿಸ್ಥಿತಿ ಮತ್ತು ಕಳೆದ ನಾಲ್ಕು ತಿಂಗಳುಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ದುರ್ಬಲವಾದ ಶಾಂತಿಯನ್ನು ಗಮನಿಸಿದರೆ, ದೋವಲ್ ಅವರ ಭಾಗವಹಿಸುವಿಕೆ ಮತ್ತು ಅವರ ದ್ವಿಪಕ್ಷೀಯ ಸಭೆಗಳು ಪ್ರಮುಖವಾಗಿರುತ್ತವೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಪ್ರತಿನಿಧಿಯೊಂದಿಗೆ ಯಾವುದೇ ಸಭೆಯನ್ನು “ಇಲ್ಲಿಯವರೆಗೆ” ಯೋಜಿಸಲಾಗಿಲ್ಲ ಎಂದು ಮೂಲಗಳು ಹೇಳಿವೆ.

ಭಾರತ ಮತ್ತು ಪಾಕಿಸ್ತಾನ ಕಳೆದ ಕೆಲವು ತಿಂಗಳುಗಳಿಂದ ಬ್ಯಾಕ್-ಚಾನೆಲ್ ಮಾತುಕತೆಗಳನ್ನು ನಡೆಸುತ್ತಿವೆ, ದೋವಲ್ ಪಾಕಿಸ್ತಾನದ ನಾಗರಿಕ-ಮಿಲಿಟರಿ ನಾಯಕತ್ವದೊಂದಿಗೆ ಭಾರತೀಯ ರಾಜತಾಂತ್ರಿಕ ಉಪಕ್ರಮವನ್ನು ಮುನ್ನಡೆಸಿದ್ದಾರೆ. ದೋವಲ್ ಅವರು ಯೂಸುಫ್ ಮತ್ತು ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ತೃತೀಯ ರಾಷ್ಟ್ರದಲ್ಲಿ ಭೇಟಿಯಾಗಿದ್ದು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರೊಂದಿಗೆ ಸಂವಹನ ನಡೆಸಿದ್ದಾರೆ.

ಕದನ ವಿರಾಮ ಒಪ್ಪಂದಕ್ಕೆ ಬದ್ಧರಾಗಿರುವುದಾಗಿ ಫೆಬ್ರವರಿ 25 ರಂದು ಘೋಷಿಸಿದಾಗಿನಿಂದ ಎಲ್‌ಒಸಿಯಲ್ಲಿ ಶಾಂತಿ ನೆಲೆಸಿದ್ದರೂ, ಎನ್‌ಎಸ್‌ಎಗಳ ನಡುವಿನ ಕೊನೆಯ ಎಸ್‌ಸಿಒ ಸಭೆ ಮಹತ್ವದ್ದಾಗಿತ್ತು.

ಇದು ಕಳೆದ ವರ್ಷ ಸೆಪ್ಟೆಂಬರ್ ಮಧ್ಯಭಾಗದಲ್ಲಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಪ್ರದೇಶವೆಂದು ತೋರಿಸಿದ ನಕ್ಷೆ ಬಗ್ಗೆ ಪ್ರತಿಭಟಿಸಿ ದೋವಲ್ ಸಭೆಯಿಂದ ಹೊರನಡೆದಿದ್ದರು.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ರಾಷ್ಟ್ರೀಯ ಭದ್ರತೆಯ ವಿಶೇಷ ಸಹಾಯಕ ಯೂಸುಫ್ ಅವರ ಹಿನ್ನೆಲೆಯಲ್ಲಿ ಈ ನಕ್ಷೆಯನ್ನು ಬಳಸಲಾಗುತ್ತಿತ್ತು. ಆ ಸಭೆಯಲ್ಲಿ ಪಾಕಿಸ್ತಾನವನ್ನು ಅದರ ಬಳಕೆಯ ವಿರುದ್ಧ ಮನವೊಲಿಸಲು ರಷ್ಯಾದ ಕಡೆಯವರು ಪ್ರಯತ್ನಿಸುತ್ತಿದ್ದಂತೆಯೇ ಭಾರತವು “ಕಾನೂನು ಬಾಹಿರ ನಕ್ಷೆ” ಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಎರಡೂ ಕಡೆಯವರು ಪರಿಸ್ಥಿತಿಯನ್ನು ಪ್ರಾಯೋಗಿಕವಾಗಿ ನೋಡಿದ್ದಾರೆ.ಉಭಯ ರಾಷ್ಟ್ರಗಳ ಸಂಬಂಧವನ್ನು ಸಹಜ ರೀತಿ ತರಲು ಎರಡು ಎನ್‌ಎಸ್‌ಎಗಳು ಕಳೆದ ಕೆಲವು ತಿಂಗಳುಗಳಿಂದ ಸಂವಹನ ನಡೆಸುತ್ತಿವೆ. ಇತ್ತೀಚಿನ ತಿಂಗಳುಗಳಲ್ಲಿ, ಪಾಕಿಸ್ತಾನದ ಮಿಲಿಟರಿ ನಾಯಕತ್ವವು ಭಾರತದೊಂದಿಗೆ ಶಾಂತಿಯನ್ನು ಸೂಚಿಸುತ್ತಿದೆ.

ಪೂರ್ವ ಮತ್ತು ಪಶ್ಚಿಮ ಏಷ್ಯಾದ ನಡುವಿನ ಸಂಪರ್ಕವನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ಥಿರ ಸಂಬಂಧವು ಪ್ರಮುಖವಾಗಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಏಪ್ರಿಲ್ ತಿಂಗಳಲ್ಲಿ ಹೇಳಿದ್ದಾರೆ. “ಭೂತಕಾಲವನ್ನು ಮರೆತು ಮುಂದೆ ಸಾಗುವ ಸಮಯ ಇದಾಗಿದೆ ಎಂದು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದ್ದರು.

ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಮೂಲಕ ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸಲು ಭಾರತ ಮೊದಲ ಹೆಜ್ಜೆ ಇಡಬೇಕಾಗುತ್ತದೆ ಎಂದು ಇಮ್ರಾನ್ ಖಾನ್ ಹೇಳಿದರು.

“ಒಂದೇ ಕೋಣೆಯಲ್ಲಿ” ಭಾರತೀಯ ಮತ್ತು ಪಾಕಿಸ್ತಾನದ ಎನ್ಎಸ್ಎಗಳ ಉಪಸ್ಥಿತಿಯು ಮಹತ್ವದ್ದಾಗಿದ್ದರೂ, ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ತಾಲಿಬಾನ್ ದಾಳಿ ಪ್ರಮುಖ ಸಂಗತಿಯಾಗಲಿದೆ. ಈ ಬಗ್ಗೆ ಕೇಂದ್ರ ಆತಂಕಕ್ಕೊಳಗಾಗಿದೆ ಮತ್ತು ಹಿಂಸಾಚಾರದ ಮೂಲಕ ತಾಲಿಬಾನ್ ಪಟ್ಟುಬಿಡದೆ ಅಧಿಕಾರವನ್ನು ಮುಂದುವರಿಸುವುದು ಅಫ್ಘಾನಿಸ್ತಾನದಲ್ಲಿ ಅನಿಶ್ಚಿತ ವಾತಾವರಣವನ್ನು ಸೃಷ್ಟಿಸಿದೆ. ದೇಶದ ಪರಿಸ್ಥಿತಿ ಈ ಹಂತದಲ್ಲಿ ಸಂದಿಗ್ಧವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶ್ರೀಂಗ್ಲಾ ಶುಕ್ರವಾರ ಹೇಳಿದ್ದಾರೆ.

ಸೈನ್ಯವನ್ನು ಹಿಂತೆಗೆದುಕೊಳ್ಳಲು ಅಮೆರಿಕ ಸಿದ್ಧತೆ ನಡೆಸುತ್ತಿರುವಾಗ ಅಫ್ಘಾನಿಸ್ತಾನ ಶಾಂತಿ ಪ್ರಕ್ರಿಯೆಯಲ್ಲಿ ಭಾರತ ತನ್ನ ರಾಜತಾಂತ್ರಿಕ ಚಟುವಟಿಕೆಗಳನ್ನು ಚುರುಕುಗೊಳಿಸುತ್ತಿರುವುದರಿಂದ, ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಅವರು, ಅಫ್ಘಾನಿಸ್ತಾನದಲ್ಲಿ ಭಾರತದ ಉಪಸ್ಥಿತಿಯು ಬಹುಶಃ ಪ್ರಮುಖವಾಗಿದೆ ಎಂದಿದ್ದಾರೆ.

ಮಾರ್ಚ್ ತಿಂಗಳಲ್ಲಿ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಖುರೇಷಿ ಅವರು ಅಫ್ಘಾನಿಸ್ತಾನದ ದುಶಾಂಬೆಯಲ್ಲಿ ‘ಹಾರ್ಟ್ ಆಫ್ ಏಷ್ಯಾ’ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಆದರೆ ಇಬ್ಬರು ಸಚಿವರ ನಡುವೆ ಯಾವುದೇ ಸಭೆ ನಡೆದಿಲ್ಲ.

ಇದನ್ನೂ ಓದಿ: ಕಾಶ್ಮೀರದ ರಾಜಕೀಯ ನಾಯಕರೊಂದಿಗೆ ಪ್ರಧಾನಿ ಮೋದಿ ಸಭೆ; ಸುದ್ದಿ ತಿಳಿಯುತ್ತಿದ್ದಂತೆ ಭಾರತಕ್ಕೆ ಎಚ್ಚರಿಕೆ ರವಾನಿಸಿದ ಪಾಕಿಸ್ತಾನ

ಅರಳಿ ಮರ ಬಾಡುವುದಿಲ್ಲ ಯಾಕೆ?
ಅರಳಿ ಮರ ಬಾಡುವುದಿಲ್ಲ ಯಾಕೆ?
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ