AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾತಂತ್ರ್ಯ ಹೋರಾಟದ ವೇಳೆ ನಮೀಬಿಯಾದ ಜೊತೆ ನಿಂತಿದ್ದಕ್ಕೆ ಭಾರತಕ್ಕೆ ಹೆಮ್ಮೆಯಿದೆ; ಸಂಸತ್​​ನಲ್ಲಿ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾ ಸಂಸತ್ತಿನಲ್ಲಿ ತಮ್ಮ ಭಾಷಣವನ್ನು ಪ್ರಾರಂಭಿಸುತ್ತಿದ್ದಂತೆ ಸಂಸತ್ ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಇಂದು ನಮೀಬಿಯಾ ಸಂಸತ್ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಮೋದಿ ‘ಭಾರತವು ಆಫ್ರಿಕಾವನ್ನು ಕೇವಲ ಕಚ್ಚಾ ವಸ್ತುಗಳ ಮೂಲವಾಗಿ ನೋಡಿಲ್ಲ’ ಎಂದಿದ್ದಾರೆ.

ಸ್ವಾತಂತ್ರ್ಯ ಹೋರಾಟದ ವೇಳೆ ನಮೀಬಿಯಾದ ಜೊತೆ ನಿಂತಿದ್ದಕ್ಕೆ ಭಾರತಕ್ಕೆ ಹೆಮ್ಮೆಯಿದೆ; ಸಂಸತ್​​ನಲ್ಲಿ ಪ್ರಧಾನಿ ಮೋದಿ
Modi In Namibia Parliament
ಸುಷ್ಮಾ ಚಕ್ರೆ
|

Updated on: Jul 09, 2025 | 10:06 PM

Share

ವಿಂಡ್‌ಹೋಕ್‌, ಜುಲೈ 9: ನಮೀಬಿಯಾ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ನಮೀಬಿಯಾದ (PM Modi Namibia Visit) ಸಂಸತ್​​ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದಾರೆ. “ಭಾರತವು ತನ್ನ ದೇಶದ ಸ್ವಾತಂತ್ರ್ಯವನ್ನು ಪಡೆಯುವ ಮೊದಲೇ ನಮೀಬಿಯಾದ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿತ್ತು. ನಿಮ್ಮ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತದ ಜನರು ನಮೀಬಿಯಾದೊಂದಿಗೆ ಹೆಮ್ಮೆಯಿಂದ ನಿಂತರು. ಆ ಬಗ್ಗೆ ನಮಗೂ ಹೆಮ್ಮೆಯಿದೆ. ವಿಶ್ವಸಂಸ್ಥೆಯಲ್ಲಿ ನೈಋತ್ಯ ಆಫ್ರಿಕಾದ ಸಮಸ್ಯೆಯನ್ನು ಭಾರತ ಎತ್ತಿದೆ, ನೈಋತ್ಯ ಆಫ್ರಿಕಾ ಪೀಪಲ್ಸ್ ಆರ್ಗನೈಸೇಶನ್ (SWAPO) ಅನ್ನು ಬೆಂಬಲಿಸಿದೆ” ಎಂದು ಮೋದಿ ಹೇಳಿದ್ದಾರೆ.

ವಿಂಡ್‌ಹೋಕ್‌ನಲ್ಲಿ ನಮೀಬಿಯಾ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಮೀಬಿಯಾದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯನ್ನು ಮುನ್ನಡೆಸಿದ್ದು ಭಾರತೀಯ ಲೆಫ್ಟಿನೆಂಟ್ ಜನರಲ್ ದಿವಾನ್ ಪ್ರೇಮ್ ಚಂದ್. ಕೇವಲ ಮಾತಿನಲ್ಲಿ ಮಾತ್ರವಲ್ಲ ಕಾರ್ಯದಲ್ಲೂ ನಿಮ್ಮೊಂದಿಗೆ ನಿಂತಿದ್ದಕ್ಕೆ ಭಾರತ ಹೆಮ್ಮೆಪಡುತ್ತದೆ” ಎಂದು ಮೋದಿ ಹೇಳಿದ್ದಾರೆ.

‘ಭಾರತವು ಆಫ್ರಿಕಾ ಖಂಡವನ್ನು ಕೇವಲ ಕಚ್ಚಾ ವಸ್ತುಗಳ ಮೂಲವಾಗಿ ನೋಡುವುದಿಲ್ಲ. ಆಫ್ರಿಕಾ ಮತ್ತು ಜಾಗತಿಕ ದಕ್ಷಿಣವು ತನ್ನದೇ ಆದ ಭವಿಷ್ಯವನ್ನು ರೂಪಿಸಿಕೊಳ್ಳುತ್ತದೆ ಮತ್ತು ತನ್ನದೇ ಆದ ಮಾರ್ಗವನ್ನು ಅನುಸರಿಸುತ್ತದೆ ಎಂಬ ನಂಬಿಕೆ ನಮಗಿದೆ’ ಎನ್ನುವ ಮೂಲಕ ಪ್ರಧಾನಿ ಮೋದಿ ನಮೀಬಿಯಾ ಮತ್ತು ಭಾರತದ ನಡುವಿನ ಸ್ನೇಹ ಸಂಬಂಧವನ್ನು ಎತ್ತಿ ತೋರಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ನಮೀಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

ನಮೀಬಿಯಾ ಏಕೀಕೃತ ಪಾವತಿ ಇಂಟರ್ಫೇಸ್ (UPI) ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದಕ್ಕೆ ಮೋದಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. “ಭಾರತದ UPI ತಂತ್ರಜ್ಞಾನವನ್ನು ಅಳವಡಿಸಿಕೊಂಡ ಮೊದಲ ದೇಶ ನಮೀಬಿಯಾ ಎಂದು ನಮಗೆ ಸಂತೋಷವಾಗಿದೆ. ಶೀಘ್ರದಲ್ಲೇ, ಜನರು “ಟ್ಯಾಂಗಿ ಉನೆನೆ” ಎಂದು ಹೇಳುವುದಕ್ಕಿಂತ ವೇಗವಾಗಿ ಹಣವನ್ನು ಕಳುಹಿಸಲು ಸಾಧ್ಯವಾಗುತ್ತದೆ. ಶೀಘ್ರದಲ್ಲೇ, ಕುನೆನೆಯಲ್ಲಿರುವ ಹಿಂಬಾ ಅಜ್ಜಿ ಅಥವಾ ಕಟುತುರಾದಲ್ಲಿನ ಅಂಗಡಿಯವರು ಸ್ಪ್ರಿಂಗ್‌ಬಾಕ್‌ಗಿಂತ ವೇಗವಾಗಿ ಕೇವಲ ಒಂದು ಟಚ್ ಮೂಲಕ ಡಿಜಿಟಲ್‌ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ದ್ವಿಪಕ್ಷೀಯ ವ್ಯಾಪಾರ 800 ಮಿಲಿಯನ್ ಡಾಲರ್‌ಗಳನ್ನು ದಾಟಿದೆ. ನಾವು ಇನ್ನೂ ವಾರ್ಮ್ ಅಪ್ ಆಗುತ್ತಿದ್ದೇವೆ. ನಾವು ವೇಗವಾಗಿ ಹೆಚ್ಚಿನ ಸ್ಕೋರ್ ಮಾಡುತ್ತೇವೆ” ಎಂದು ಕ್ರಿಕೆಟ್ ಭಾಷೆಯಲ್ಲಿ ಮೋದಿ ಹೇಳಿದ್ದಾರೆ.

“ಕೆಲವು ತಿಂಗಳ ಹಿಂದೆ ನೀವು ಐತಿಹಾಸಿಕ ಕ್ಷಣವನ್ನು ಆಚರಿಸಿದ್ದೀರಿ, ನಮೀಬಿಯಾ ತನ್ನ ಮೊದಲ ಮಹಿಳಾ ಅಧ್ಯಕ್ಷೆಯನ್ನು ಆಯ್ಕೆ ಮಾಡಿದೆ. ನಾವು ನಿಮ್ಮ ಹೆಮ್ಮೆ ಮತ್ತು ಸಂತೋಷವನ್ನು ಅರ್ಥಮಾಡಿಕೊಳ್ಳುತ್ತೇವೆ. ಏಕೆಂದರೆ ಭಾರತದಲ್ಲಿ ಕೂಡ ನಾವು ಹೆಮ್ಮೆಯಿಂದ ಮೇಡಂ ಅಧ್ಯಕ್ಷರೇ (ರಾಷ್ಟ್ರಪತಿ) ಎಂದು ಹೇಳುತ್ತೇವೆ. ಬಡ ಬುಡಕಟ್ಟು ಕುಟುಂಬದ ಮಗಳು ಈಗ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರಪತಿಯಾಗಿರುವುದು ಭಾರತದ ಸಂವಿಧಾನದ ಶಕ್ತಿಯಾಗಿದೆ. ಬಡ ಕುಟುಂಬದಲ್ಲಿ ಜನಿಸಿದ ನನ್ನಂತಹ ವ್ಯಕ್ತಿಗೆ ಮೂರು ಬಾರಿ ಪ್ರಧಾನಿಯಾಗುವ ಅವಕಾಶವನ್ನು ನೀಡಿದ್ದು ಸಂವಿಧಾನದ ಶಕ್ತಿಯಾಗಿದೆ” ಎಂದಿದ್ದಾರೆ.

ಇದನ್ನೂ ಓದಿ: ‘ಮೋದಿ’ಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ

“ಸಾಂಕ್ರಾಮಿಕ ಸಮಯದಲ್ಲಿ ಅನೇಕರು ಹಂಚಿಕೊಳ್ಳಲು ನಿರಾಕರಿಸಿದಾಗಲೂ ಲಸಿಕೆಗಳು ಮತ್ತು ಔಷಧಿಗಳನ್ನು ಒದಗಿಸುವ ಮೂಲಕ ನಾವು ಆಫ್ರಿಕಾದೊಂದಿಗೆ ನಿಂತಿದ್ದೇವೆ. ನಮ್ಮ ಆರೋಗ್ಯ ಮೈತ್ರಿ ಉಪಕ್ರಮವು ಆಫ್ರಿಕಾವನ್ನು ಆಸ್ಪತ್ರೆಗಳು, ಉಪಕರಣಗಳು, ಔಷಧಿಗಳು ಮತ್ತು ತರಬೇತಿಯೊಂದಿಗೆ ಬೆಂಬಲಿಸುತ್ತದೆ. ಸುಧಾರಿತ ಕ್ಯಾನ್ಸರ್ ಆರೈಕೆಗಾಗಿ ಭಾರತ ನಮೀಬಿಯಾಕ್ಕೆ ಭಭಾಟ್ರಾನ್ ರೇಡಿಯೊಥೆರಪಿ ಯಂತ್ರವನ್ನು ಪೂರೈಸಲು ಸಿದ್ಧವಾಗಿದೆ. ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಈ ಯಂತ್ರವನ್ನು 15 ದೇಶಗಳಲ್ಲಿ ನಿಯೋಜಿಸಲಾಗಿದೆ. ವಿವಿಧ ದೇಶಗಳಲ್ಲಿ ಸುಮಾರು ಅರ್ಧ ಮಿಲಿಯನ್ ರೋಗಿಗಳಿಗೆ ನಿರ್ಣಾಯಕ ಕ್ಯಾನ್ಸರ್ ಆರೈಕೆಯೊಂದಿಗೆ ಸಹಾಯ ಮಾಡಿದೆ. ಕೈಗೆಟುಕುವ ಮತ್ತು ಗುಣಮಟ್ಟದ ಔಷಧಿಗಳ ಪ್ರವೇಶಕ್ಕಾಗಿ ಜನೌಷಧಿ ಕಾರ್ಯಕ್ರಮಕ್ಕೆ ಸೇರಲು ನಾವು ನಮೀಬಿಯಾವನ್ನು ಆಹ್ವಾನಿಸುತ್ತೇವೆ” ಎಂದಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ