AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್​​ನಿಂದ ಭಾರತೀಯರ ಸ್ಥಳಾಂತರಕ್ಕೆ ಪಾಕಿಸ್ತಾನ ವಾಯುಮಾರ್ಗ ಬಳಕೆ ಮಾಡಿಕೊಳ್ಳದ ವಾಯುಸೇನೆ

ಈ ಹಿಂದೆ ಲಡಾಖ್​​ನಲ್ಲಿ ಚೀನಾದೊಂದಿಗೆ ಸಂಘರ್ಷ ಹೆಚ್ಚಾಗಿದ್ದಾಗ ಅಲ್ಲಿಗೆ ಯುದ್ಧ ಟ್ಯಾಂಕ್​​ಗಳನ್ನು ಸಾಗಿಸಿದ್ದು ಇದೇ ಸಿ-17 ಗ್ಲೋಬ್​ ಮಾಸ್ಟರ್​ ಏರ್​ಕ್ರಾಫ್ಟ್​. ಅಷ್ಟೇ ಅಲ್ಲ, ಕೊವಿಡ್​ 19 ಎರಡನೇ ಅಲೆಯಲ್ಲಿ ದೇಶದಲ್ಲಿ ಆಕ್ಸಿಜನ್​ ಕೊರತೆಯಾದಾಗ ವಿವಿಧ ದೇಶಗಳಿಂದ ಆಕ್ಸಿಜನ್​ ಟ್ಯಾಂಕರ್​ ಹೊತ್ತು ತಂದಿದೆ.

ಉಕ್ರೇನ್​​ನಿಂದ ಭಾರತೀಯರ ಸ್ಥಳಾಂತರಕ್ಕೆ ಪಾಕಿಸ್ತಾನ ವಾಯುಮಾರ್ಗ  ಬಳಕೆ ಮಾಡಿಕೊಳ್ಳದ ವಾಯುಸೇನೆ
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:Mar 03, 2022 | 10:18 AM

Share

ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರ ಮಾಡುತ್ತಿರುವ ಭಾರತೀಯ ವಾಯುಪಡೆ (Air Force) ತನ್ನ ವಿಮಾನ ಸಂಚಾರಕ್ಕೆ ಪಾಕಿಸ್ತಾನ ವಾಯುಮಾರ್ಗವನ್ನು ಬಳಸುತ್ತಿಲ್ಲ ಎಂದು ಹೇಳಲಾಗಿದೆ. ಐಎಎಫ್​​ನ ಸಿ-17 ಗ್ಲೋಬ್​ಮಾಸ್ಟರ್​ ಟ್ರಾನ್ಸ್​ಪೋರ್ಟ್​ನ ನಾಲ್ಕು ವಿಮಾನಗಳು ಯುದ್ಧ ಪೀಡಿತ ಉಕ್ರೇನ್​​ನಿಂದ  (Ukraine)ಭಾರತೀಯರನ್ನು ವಾಪಸ್​ ಕರೆತರುವ ಕೆಲಸ ಮಾಡುತ್ತಿವೆ. ಈಗಾಗಲೇ ಏರ್​​ಫೋರ್ಸ್​ ವಿಮಾನಗಳು 800 ಭಾರತೀಯರನ್ನು ಕರೆತಂದಿವೆ. ಆದರೆ ಇವು ಪಾಕಿಸ್ತಾನದ ಏರ್​ಸ್ಪೇಸ್​ ಬಳಸಿಕೊಳ್ಳುತ್ತಿಲ್ಲ. ಇಂಥ ಸಂದರ್ಭದಲ್ಲಿ ನಾವ್ಯಾಕೆ ಪಾಕಿಸ್ತಾನದಿಂದ ಸಹಾಯ ಕೇಳಬೇಕು? ಆ ದೇಶದಿಂದ ಮಿಲಿಟರಿ ಸಹಕಾರವನ್ನು ಕೇಳಬೇಕು? ಪಾಕಿಸ್ತಾನ ವಾಯುಮಾರ್ಗ ಬಳಸಿಕೊಳ್ಳದೆ ಇದ್ದರೆ 25-30 ನಿಮಿಷ ಹೆಚ್ಚು ಸಮಯ ಬೇಕಾಗಬಹುದು ಹೊರತು ಇನ್ನೇನೂ ವ್ಯತ್ಯಾಸ ಆಗುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಉಕ್ರೇನ್​​ನಲ್ಲಿ ಪರಿಸ್ಥತಿ ಹದಗೆಟ್ಟಿದೆ. ಭಾರತೀಯರು ಸೇರಿ ಹಲವು ದೇಶಗಳ ಪ್ರಜೆಗಳನ್ನು ಬಂಕರ್​​ನಲ್ಲಿ, ಹಾಸ್ಟೆಲ್​ನ ಬೇಸ್​​ಮೆಂಟ್​ಗಳಲ್ಲಿ ಅವಿತಿಟ್ಟುಕೊಂಡು ಜೀವ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು ಅಲ್ಲಿಂದ ವಾಪಸ್​ ಕರೆತರಲು ಕೇಂದ್ರ ಸರ್ಕಾರ ಆಪರೇಶನ್​ ಗಂಗಾ ಎಂಬ ಕಾರ್ಯಾಚರಣೆ ನಡೆಸುತ್ತಿದೆ. ಇನ್ನಿತರ ಕಮರ್ಷಿಯಲ್​ ವಿಮಾನಗಳ ಜತೆ ಭಾರತೀಯ ವಾಯುಪಡೆಯೂ ಕೈಜೋಡಿಸಿದೆ. ಈ ಹಿಂದೆ ಲಡಾಖ್​​ನಲ್ಲಿ ಚೀನಾದೊಂದಿಗೆ ಸಂಘರ್ಷ ಹೆಚ್ಚಾಗಿದ್ದಾಗ ಅಲ್ಲಿಗೆ ಯುದ್ಧ ಟ್ಯಾಂಕ್​​ಗಳನ್ನು ಸಾಗಿಸಿದ್ದು ಇದೇ ಸಿ-17 ಗ್ಲೋಬ್​ ಮಾಸ್ಟರ್​ ಏರ್​ಕ್ರಾಫ್ಟ್​. ಅಷ್ಟೇ ಅಲ್ಲ, ಕೊವಿಡ್​ 19 ಎರಡನೇ ಅಲೆಯಲ್ಲಿ ದೇಶದಲ್ಲಿ ಆಕ್ಸಿಜನ್​ ಕೊರತೆಯಾದಾಗ ವಿವಿಧ ದೇಶಗಳಿಂದ ಆಕ್ಸಿಜನ್​ ಟ್ಯಾಂಕರ್​ ಹೊತ್ತು ತಂದಿದೆ. ಇತ್ತೀಚೆಗೆ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಾಗ ಅಲ್ಲಿರುವವ ಭಾರತೀಯರು, ಅಲ್ಪಸಂಖ್ಯಾತರನ್ನೂ ಹೊತ್ತು ತಂದಿದ್ದು ಇದೇ ವಿಮಾನವಾಗಿದೆ. ಸುಮಾರು 80 ಟನ್​​ಗಳಷ್ಟು ತೂಕವನ್ನು ಹೊರಬಲ್ಲ ಸಾಮರ್ಥ್ಯ ಇರುವ ಸಿ-17 ಗ್ಲೋಬ್​ ಮಾಸ್ಟರ್​ ಸದ್ಯ ಉಕ್ರೇನ್​ನಿಂದ ಭಾರತೀಯರನ್ನು ಏರ್​​ಲಿಫ್ಟ್ ಮಾಡಲು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ರಷ್ಯಾ ಅಧ್ಯಕ್ಷ ಪುಟಿನ್​ ಜತೆ ಫೋನ್​ನಲ್ಲಿ ಮಾತನಾಡಿದ ಪ್ರಧಾನಿ ಮೋದಿ; ಭಾರತೀಯರ ಸ್ಥಳಾಂತರದ ಬಗ್ಗೆ ಚರ್ಚೆ

Published On - 9:57 am, Thu, 3 March 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?