ಜುಲೈನಲ್ಲಿ ರಾಷ್ಟ್ರಪತಿ ಆಯ್ಕೆ, ರಾಜಕೀಯ ಲೆಕ್ಕಾಚಾರ ಏನಿದೆ? ಯಾವ ಪಕ್ಷದ ಅಭ್ಯರ್ಥಿ ಆಗ್ತಾರೆ ರಾಷ್ಟ್ರಪತಿ ಭವನ ಉತ್ತರಾಧಿಕಾರಿ?

2022 Indian presidential election: ಈ ಹಿನ್ನೆಲೆಯಲ್ಲಿ ಎರಡು ಪ್ರಾದೇಶಿಕ ಪಕ್ಷಗಳ ನೇತಾರರ ಮುಂದಿನ ನಡೆ ಬಹು ಮುಖ್ಯವಾಗಲಿದೆ. ಜಗನ್ ಮೋಹನ್​ ರೆಡ್ಡಿ ಅವರ ವೈ ಎಸ್​ಆರ್​​ ಕಾಂಗ್ರೆಸ್​ ಮತ್ತು ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳದ ನಿರ್ಣಯ ಮಹತ್ವಪೂರ್ಣವೆನಿಸಲಿದೆ. ಇದನ್ನ ಮನಗಂಡು ಇತರೆ ವಿಪಕ್ಷಗಳು ಈ ಎರಡೂ ಪಕ್ಷಗಳನ್ನು ಅದಾಗಲೇ ಸಂಪರ್ಕಿಸಿವೆ.

ಜುಲೈನಲ್ಲಿ ರಾಷ್ಟ್ರಪತಿ ಆಯ್ಕೆ, ರಾಜಕೀಯ ಲೆಕ್ಕಾಚಾರ ಏನಿದೆ? ಯಾವ ಪಕ್ಷದ ಅಭ್ಯರ್ಥಿ ಆಗ್ತಾರೆ ರಾಷ್ಟ್ರಪತಿ ಭವನ ಉತ್ತರಾಧಿಕಾರಿ?
ಜುಲೈನಲ್ಲಿ ರಾಷ್ಟ್ರಪತಿ ಆಯ್ಕೆ, ರಾಜಕೀಯ ಪಕ್ಷಗಳ ಲೆಕ್ಕಾಚಾರ ಏನಿದೆ? ಯಾವ ಪಕ್ಷದ ಅಭ್ಯರ್ಥಿ ಆಗ್ತಾರೆ ರಾಷ್ಟ್ರಪತಿ ಭವನದ ಉತ್ತರಾಧಿಕಾರಿ?
Follow us
| Updated By: ಸಾಧು ಶ್ರೀನಾಥ್​

Updated on: May 02, 2022 | 10:38 PM

ಭಾರತ ಸದ್ಯದಲ್ಲಿಯೇ ತನ್ನ 17ನೆಯ ರಾಷ್ಟ್ರಪತಿಯನ್ನು ಆಯ್ಕೆ ಮಾಡಬೇಕಿದೆ (2022 Indian presidential election). ಹಾಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರ (President Ram Nath Kovind) 5 ವರ್ಷಗಳ ಅಧಿಕಾರಾವಾಧಿ ಜುಲೈ 25ಕ್ಕೆ ಮುಗಿಯಲಿದೆ. ಸದ್ಯಕ್ಕೆ ಯಾರು ಮುಂದಿನ ರಾಷ್ಟ್ರಪತಿ ಅನ್ನುವುದಕ್ಕಿಂತ ಯಾವ ಪಕ್ಷದ ಅಭ್ಯರ್ಥಿ ರಾಷ್ಟ್ರಪತಿ ಭವನದ ಉತ್ತರಾಧಿಕಾರಿ ಆಗ್ತಾರೆ ಎಂಬುದು ರಾಜಕೀಯ ಕುತೂಹಲದ ಸಂಗತಿಯಾಗಿದೆ. ಪ್ರಚಲಿತ ರಾಜಕೀಯ ವಿದ್ಯಮಾನಗಳನ್ನು ವಿಶ್ಲೇಷಿಸುವುದಾದರೆ ರಾಜಕೀಯ ಪಂಡಿತರ ಪ್ರಕಾರ ರಾಮನಾಥ್​ ಕೋವಿಂದ್ ಅವರ ಮರು ಆಯ್ಕೆ ದೂರದ ಮಾತಾಗಿದೆ. ಹಾಗಾಗಿ ಆಡಳಿತಾರೂಢ ಬಿಜೆಪಿ ನಾಯಕತ್ವ ಮತ್ತು ಪ್ರಮುಖ ವಿರೋಧ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಪ್ರತಿಷ್ಠಾಪಿಸಲು ಸತತ ಪ್ರಯತ್ನ ನಡೆಸಿವೆ. ಸಂಖ್ಯಾಬಲ ಗಣನೆಗೆ ತೆಗೆದುಕೊಂಡಾಗ ಆಡಳಿತಾರೂಢ ಬಿಜೆಪಿಗೆ ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವುದು ಕಷ್ಟವೇನೂ ಆಗಲಾರದು. ಆದರೆ ವಿಪಕ್ಷಗಳು ಬಿಜೆಪಿಗೆ ಟಾಂಗ್​ ಕೊಡಲು ಶಕ್ತಿಮೀರಿ ಪ್ರಯತ್ನ ಪಡುವುದು ಖಚಿತ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಎರಡು ಪ್ರಾದೇಶಿಕ ಪಕ್ಷಗಳ ನೇತಾರರ ಮುಂದಿನ ನಡೆ ಬಹು ಮುಖ್ಯವಾಗಲಿದೆ. ಜಗನ್ ಮೋಹನ್​ ರೆಡ್ಡಿ ಅವರ ವೈ ಎಸ್​ಆರ್​​ ಕಾಂಗ್ರೆಸ್​ ಮತ್ತು ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳದ ನಿರ್ಣಯ ಮಹತ್ವಪೂರ್ಣವೆನಿಸಲಿದೆ. ಇದನ್ನ ಮನಗಂಡು ಇತರೆ ವಿಪಕ್ಷಗಳು ಈ ಎರಡೂ ಪಕ್ಷಗಳನ್ನು ಅದಾಗಲೇ ಸಂಪರ್ಕಿಸಿವೆ. ಆದರೆ ಈ ಎರಡೂ ಪಕ್ಷಗಳ ಒಲವು ಬಿಜೆಪಿಯತ್ತ ವಾಲಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ವೈ ಎಸ್​ಆರ್​​ ಕಾಂಗ್ರೆಸ್​ ಮತ್ತು ಬಿಜು ಜನತಾ ದಳದ ಅಧಿನಾಯಕರು ವಿರೋಧ ಪಕ್ಷಗಳ ಜೊತೆ ಕೈಜೋಡಿಸುವ ಇಚ್ಛೆ ಹೊಂದಿಲ್ಲ. ಅದಕ್ಕಿಂತ ಹೆಚ್ಚಿಗೆ ಆಡಳಿತಾರೂಢ ಬಿಜೆಪಿಗೆ ಠಕ್ಕರ್​ ಕೊಡಲು ಬಯಸಿಲ್ಲ. ವಿರೋಧ ಪಕ್ಷಗಳ ಜೊತೆ ಕೈಜೋಡಿಸುವುದರಿಂದ ತನಗೆ ಬರುವುದಾದರೂ ಏನು ಎಂಬ ಮನೋಭಾವ, ಲೆಕ್ಕಾಚಾರ ಹಾಕಿ ಎರಡೂ ಪಕ್ಷಗಳು ಸೈಲೆಂಟಾಗಿವೆ. ಹಾಗಾಗಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ವಿಪಕ್ಷಗಳ ಯಾವುದೇ ಪ್ರಯತ್ನಗಳನ್ನು ಇವೆರಡೂ ಪಕ್ಷಗಳು ಉತ್ತೇಜಿಸುವುದಿಲ್ಲ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

ಕಾಂಗ್ರೆಸ್​ ಶಕ್ತಿ ಕ್ಷೀಣವಾಗಿರುವಾಗ ಇತರೆ ವಿಪಕ್ಷಗಳಿಗೆ ಎಲ್ಲಿಂದ ಧೈರ್ಯ ಬರಬೇಕು ಎಂಬ ಮಾತೂ ಸರಿದಾಡುತ್ತಿದೆ. ಕಾಂಗ್ರೆಸ್​ ಸತತವಾಗಿ ಚುನಾವಣೆಗಳನ್ನು ಸೋಲುತ್ತಾ ಬಂದಿದ್ದು, ರಾಷ್ಟ್ರಪತಿ ಅಂತಹ ಮಹತ್ವದ ಸ್ಥಾನಕ್ಕಾಗಿ ಪೈಪೋಟಿ ನಡೆಸುವ ಉಮೇದಿಯೂ ಇಲ್ಲವಾಗಿದೆ ಎನ್ನಲಾಗಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: ತೆರಿಗೆಯ ಹೊರೆ ಇಲ್ಲದೆ ಎಷ್ಟು ಪ್ರಮಾಣದಲ್ಲಿ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು?

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ