AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಮಾಡದಿದ್ದರೂ ನಾವು ಮುನ್ನಡೆಸುತ್ತೇವೆ: ಕೋಪ್ 26ನಲ್ಲಿ ವಿಶ್ವನಾಯಕರ ಮುಂದೆ ಭಾರತೀಯ ವಿದ್ಯಾರ್ಥಿನಿ ಭಾಷಣ

ನಾವು ಅರ್ಥ್‌ಶಾಟ್ ಪ್ರಶಸ್ತಿ ವಿಜೇತರು ಮತ್ತು ಫೈನಲಿಸ್ಟ್‌ಗಳು, ನಮ್ಮ ಭೂಮಿಯ ಇತಿಹಾಸದಲ್ಲಿ ದೊಡ್ಡ ಸವಾಲು ಕೂಡ ದೊಡ್ಡ ಅವಕಾಶವಾಗಿದೆ ಎಂಬುದಕ್ಕೆ ಸಾಕ್ಷಿ. ಮಾನವರು ಇದುವರೆಗೆ ತಿಳಿದಿರದ ನಾವೀನ್ಯತೆಗಳ ಮಹಾನ್ ಅಲೆಯನ್ನು ನಾವು ಮುನ್ನಡೆಸುತ್ತೇವೆ ಎಂದು ವಿನಿಶಾ ಉಮಾಶಂಕರ್ ಹೇಳಿದರು.

ನೀವು ಮಾಡದಿದ್ದರೂ ನಾವು ಮುನ್ನಡೆಸುತ್ತೇವೆ: ಕೋಪ್ 26ನಲ್ಲಿ ವಿಶ್ವನಾಯಕರ ಮುಂದೆ ಭಾರತೀಯ ವಿದ್ಯಾರ್ಥಿನಿ ಭಾಷಣ
ಪ್ರಿನ್ಸ್ ವಿಲಿಯಮ್ ಜತೆ ವಿನಿಶಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 03, 2021 | 8:06 PM

ಗ್ಲಾಸ್ಗೋ: ಪ್ರಿನ್ಸ್ ವಿಲಿಯಂ ಅವರ ಉದ್ಘಾಟನಾ ಅರ್ಥ್‌ಶಾಟ್ ಪ್ರಶಸ್ತಿಯ ಅಂತಿಮ ಸುತ್ತಿನ ಸ್ಪರ್ಧೆಗೆ 15 ವರ್ಷದ ಭಾರತೀಯ ಶಾಲಾ ಬಾಲಕಿ ವಿನಿಶಾ ಉಮಾಶಂಕರ್ ಅವರ ಸೌರಶಕ್ತಿಯ ಇಸ್ತ್ರಿ ಕಾರ್ಟ್ ಯೋಜನೆ ತಲುಪಿದೆ. ಗ್ಲಾಸ್ಗೋದಲ್ಲಿ ನಡೆದ ಕೋಪ್ 26 (COP26) ಸಮ್ಮೇಳನದ ವಿಶ್ವ ನಾಯಕರ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಈ ವಿದ್ಯಾರ್ಥಿನಿ ಮತ್ತು ಗ್ರಹವನ್ನು ಉಳಿಸಲು ಮತ್ತು ಅದಕ್ಕಾಗಿ ಕಾರ್ಯನಿರ್ವಹಿಸಲು ಕರೆ ನೀಡಿದರು. ತಮಿಳುನಾಡು ಮೂಲದ ವಿನಿಶಾ ಉಮಾಶಂಕರ್ ಅವರು ಮಂಗಳವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ನವದೆಹಲಿಗೆ ತೆರಳುವ ಮುನ್ನ “ಆಕ್ಸಿಲರೇಟಿಂಗ್ ಕ್ಲೀನ್ ಟೆಕ್ನಾಲಜಿ ಇನ್ನೋವೇಶನ್ ಮತ್ತು ಡಿಪ್ಲಾಯ್‌ಮೆಂಟ್” ನಲ್ಲಿ ಭಾಗವಹಿಸಿದ್ದರು.  ವಿಶ್ವ ನಾಯಕರು, ಅಂತರಾಷ್ಟ್ರೀಯ ಸಂಸ್ಥೆಗಳು, ನಾಗರಿಕ ಸಮಾಜ ಮತ್ತು ವ್ಯಾಪಾರ ನಾಯಕರನ್ನು ತನ್ನ ಪೀಳಿಗೆಯೊಂದಿಗೆ ನಿಲ್ಲುವಂತೆ ಮತ್ತು ಗ್ರಹವನ್ನು ಸರಿಪಡಿಸಲು ಕೆಲಸ ಮಾಡುವ ನಾವೀನ್ಯತೆಗಳು, ಪರಿಹಾರಗಳು ಮತ್ತು ಯೋಜನೆಗಳನ್ನು ಬೆಂಬಲಿಸಲು ಮತ್ತು ಮುಂದಿನ ಪೀಳಿಗೆಯನ್ನು ಕ್ರಮ ತೆಗೆದುಕೊಳ್ಳಲು ವಿನಿಶಾ ಆಹ್ವಾನಿಸಿದರು.

ನಾವು, ಅರ್ಥ್‌ಶಾಟ್ ಪ್ರಶಸ್ತಿ ವಿಜೇತರು ಮತ್ತು ಫೈನಲಿಸ್ಟ್‌ಗಳು, ನಮ್ಮ ಭೂಮಿಯ ಇತಿಹಾಸದಲ್ಲಿ ದೊಡ್ಡ ಸವಾಲು ಕೂಡ ದೊಡ್ಡ ಅವಕಾಶವಾಗಿದೆ ಎಂಬುದಕ್ಕೆ ಸಾಕ್ಷಿ. ಮಾನವರು ಇದುವರೆಗೆ ತಿಳಿದಿರದ ನಾವೀನ್ಯತೆಗಳ ಮಹಾನ್ ಅಲೆಯನ್ನು ನಾವು ಮುನ್ನಡೆಸುತ್ತೇವೆ ಎಂದು ವಿನಿಶಾ ಉಮಾಶಂಕರ್ ಹೇಳಿದರು. “ನಾವು ಆಪಾದನೆ ಮಾಡದೇ ಇರಲು ನಿರ್ಧರಿಸಿದ್ದೇವೆ, ಆದರೆ ನಮ್ಮನ್ನು ಶ್ರೀಮಂತ ಮತ್ತು ಆರೋಗ್ಯವಂತರನ್ನಾಗಿ ಮಾಡುವ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ನಾವು ಈ ಕೆಲಸಗಳನ್ನು ಮಾಡಲು ಆರಿಸಿಕೊಂಡಿದ್ದೇವೆ, ಏಕೆಂದರೆ ಅವು ಸುಲಭವಲ್ಲ, ಆದರೆ ಅವು ಕಠಿಣವಾಗಿವೆ. ಈ ಸವಾಲುಗಳನ್ನು ಎದುರಿಸುವುದು ಹೊಸ ಪೀಳಿಗೆಯನ್ನು ರೂಪಿಸುತ್ತದೆ. ನಮ್ಮೆಲ್ಲರಿಗೂ ಮತ್ತು ಮುಂದಿನ ಪೀಳಿಗೆಗಳಿಗೂ ಉತ್ತಮ ಜಗತ್ತನ್ನು ನಿರ್ಮಿಸುವ ಪೀಳಿಗೆ, ”ಎಂದು ಅವರು ಹೇಳಿದರು.

“ನೀವು ಕಾರ್ಯಪ್ರವೃತ್ತರಾಗಿ ಎಂದು ನಾವು ಕಾಯುವುದಿಲ್ಲ. ನೀವು ಮಾಡದಿದ್ದರೂ ನಾವು ಮುನ್ನಡೆಸುತ್ತೇವೆ. ನೀವು ಹಿಂದೆ ಸಿಲುಕಿಕೊಂಡರೂ ನಾವು ಭವಿಷ್ಯವನ್ನು ನಿರ್ಮಿಸುತ್ತೇವೆ. ದಯವಿಟ್ಟು ನನ್ನ ಆಹ್ವಾನವನ್ನು ಸ್ವೀಕರಿಸಿ. ನೀವು ವಿಷಾದಿಸುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ,” ಎಂದು ಅವರು ಹೇಳಿದರು. ವಿನಿಶಾ ಉಮಾಶಂಕರ್ ಅವರು ಅವರು “ಕ್ಲೀನ್ ಅವರ್ ಏರ್” (Clean Our Air )ವಿಭಾಗದಲ್ಲಿ 1 ಮಿಲಿಯನ್ ಪೌಂಡ್‌ಗಳ ಅರ್ಥ್‌ಶಾಟ್ ಪ್ರಶಸ್ತಿಯ ಶಾರ್ಟ್‌ಲಿಸ್ಟ್ ತಲುಪಿದ್ದಾರೆ. ಪ್ರತಿ ದಿನ ಲಕ್ಷಾಂತರ ಭಾರತೀಯರಿಗೆ ಬಟ್ಟೆಗಳನ್ನು ಇಸ್ತ್ರಿ ಮಾಡುವ ಇದ್ದಿಲು ಚಾಲಿತ ಬೀದಿಯಲ್ಲಿ ಇಸ್ತ್ರಿ ಮಾಡುವ ಗಾಡಿ ವ್ಯವಸ್ಥೆ ಬದಲು ಸೌರಶಕ್ತಿ ಚಾಲಿತ ಇಸ್ತ್ರಿ ಮಾಡುವ ಗಾಡಿಯ ಪರಿಕಲ್ಪನೆಯನ್ನು ತೋರಿಸಿದ್ದಾರೆ.

ಇದಕ್ಕೂ ಮೊದಲು ವಿನಿಶಾ ಈ ವಿಭಾಗದಲ್ಲಿನ ವಿಜೇತ ವಿದ್ಯುತ್ ಮೋಹನ್ ಜತೆ ಪ್ರಧಾನ ಮಂತ್ರಿ ಮೋದಿಯವರನ್ನು ಭೇಟಿಯಾಗಿದ್ದರು.

“ಅದು ಬಹಳ ಗೌರವಯುತ ಭೇಟಿಯಾಗಿತ್ತು, ಅವರು ನನ್ನ ವಿಜೇತ ಕೃಷಿ ತ್ಯಾಜ್ಯ ಮರುಬಳಕೆ ಯೋಜನೆಯ ಬಗ್ಗೆ ಬಹಳ ಕುತೂಹಲ ಹೊಂದಿದ್ದರು ಮತ್ತು ಭಾರತದಾದ್ಯಂತ ರೈತರಿಗೆ ಸಹಾಯ ಮಾಡಲು ಇದನ್ನು ಹೆಚ್ಚಿಸುವ ಬಗ್ಗೆ ಕೆಲವು ಪ್ರೋತ್ಸಾಹದಾಯಕ ಮಾತುಗಳನ್ನು ಹೊಂದಿದ್ದರು” ಎಂದು ಟಕಾಚಾರ್ ಸಹ-ಸಂಸ್ಥಾಪಕ ಮೋಹನ್ ಹೇಳಿದರು. ಬೆಳೆ ಉಳಿಕೆಗಳನ್ನು ಮಾರಾಟ ಮಾಡಬಹುದಾದ ಜೈವಿಕ ಉತ್ಪನ್ನಗಳಾಗಿ ಪರಿವರ್ತಿಸುವ ಅಗ್ಗದ, ಸಣ್ಣ-ಪ್ರಮಾಣದ, ಪೋರ್ಟಬಲ್ ತಂತ್ರಜ್ಞಾನಕ್ಕಾಗಿ ಕಳೆದ ತಿಂಗಳು ಬಹುಮಾನದ ವಿಜೇತ ಎಂದು ವಿದ್ಯುತ್ ಮೋಹನ್ ಅವರನ್ನು ಆಯ್ಕೆ ಮಾಡಲಾಗಿತ್ತು.

“ಬಹುಮಾನವು ಬಹಳಷ್ಟು ಮಹತ್ವದ್ದು, ಏಕೆಂದರೆ ಇದು ಯೋಜನೆಗೆ ಜಾಗತಿಕ ಮಟ್ಟವನ್ನು ನೀಡುತ್ತದೆ ಮತ್ತು ನಮಗೆ ನಿರ್ಣಾಯಕ ಬೆಂಬಲ ಮತ್ತು ಫಂಡ್ ಸಿಗುವಂತೆ ಮಾಡುತ್ತದೆ” ಎಂದು ಮೋಹನ್ ಅವರು ತಮ್ಮ 1 ಮಿಲಿಯನ್ ಪೌಂಡ್‌ ಮೌಲ್ಯದ ಬಹುಮಾನದ ಗೆಲುವನ್ನು ಉಲ್ಲೇಖಿಸಿ ಹೇಳಿದರು.

ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಆಯೋಜಿಸಿದ್ದ ವಿಶ್ವ ನಾಯಕರ ಶೃಂಗಸಭೆಯಲ್ಲಿ ಕೇಂಬ್ರಿಡ್ಜ್ ಡ್ಯೂಕ್ ಪ್ರಿನ್ಸ್ ವಿಲಿಯಂ ವಿಜೇತರು ಮತ್ತು ಫೈನಲಿಸ್ಟ್‌ಗಳನ್ನು ಭೇಟಿಯಾದರು. ಅಲ್ಲಿ ಹವಾಮಾನ ಬದಲಾವಣೆಯನ್ನು ನಿಭಾಯಿಸಲು ರಾಷ್ಟ್ರೀಯ ಯೋಜನೆಗಳನ್ನು ನೀಡಲು ಸೋಮವಾರ ಮತ್ತು ಮಂಗಳವಾರದಂದು ರಾಜ್ಯದ ಮುಖ್ಯಸ್ಥರು ಮತ್ತು ಸರ್ಕಾರದ ನಾಯಕರು ಒಟ್ಟುಗೂಡಿದ್ದರು.

“ನಮ್ಮ ಫೈನಲಿಸ್ಟ್‌ಗಳು ಶಕ್ತಿ, ಆಲೋಚನೆಗಳು ಮತ್ತು ಮಹತ್ವಾಕಾಂಕ್ಷೆ ಹೊಂದಿದ್ದಾರೆ ಆದ್ದರಿಂದ ದಯವಿಟ್ಟು ಅವರಲ್ಲಿ ಅನೇಕರು ನಿಮ್ಮ ಬಾಗಿಲನ್ನು ತಟ್ಟುತ್ತಾರೆ ಎಂದು ನಿರೀಕ್ಷಿಸಿ! ಅವರ ಜಾಣ್ಮೆ ಅದ್ಭುತ. ಅವರ ಸಾಮರ್ಥ್ಯವು ಚಾರ್ಟ್‌ಗಳಿಂದ ಹೊರಗಿದೆ. ಇಂದು ಈ ಕೋಣೆಯಲ್ಲಿ ನಿಜವಾದ ಸೂಪರ್‌ಸ್ಟಾರ್‌ಗಳನ್ನು ನಿಮಗೆ ಪರಿಚಯಿಸಲು ನನಗೆ ಸಂತೋಷವಾಗಿದೆ, ”ಎಂದು ಪ್ರಿನ್ಸ್ ವಿಲಿಯಂ ಅವರು ಶೃಂಗಸಭೆಯನ್ನು ಉದ್ದೇಶಿಸಿ ಹೇಳಿದರು.

ಮಂಗಳವಾರದಂದು, ಅರ್ಥ್‌ಶಾಟ್ ಪ್ರಶಸ್ತಿ ವಿಜೇತರ ಜಾಗತಿಕ ಸಲಹೆಗಾರ ಮೈಕೆಲ್ ಆರ್. ಬ್ಲೂಮ್‌ಬರ್ಗ್ ಅವರು COP26 ನ ಹಸಿರು ವಲಯದಲ್ಲಿ ಅರ್ಥ್‌ಶಾಟ್ ಪ್ರಶಸ್ತಿ ಗ್ಲೋಬಲ್ ಅಲೈಯನ್ಸ್ ಅಸೆಂಬ್ಲಿಗೆ ಸ್ವಾಗತಕೂಟ ಆಯೋಜಿಸಿದರು. ಫೈನಲಿಸ್ಟ್‌ಗಳು ಮೊದಲ ಬಾರಿಗೆ ಕೆಲವು ಗ್ಲೋಬಲ್ ಅಲೈಯನ್ಸ್‌ನೊಂದಿಗೆ ಭೇಟಿಯಾದರು, ಲೋಕೋಪಕಾರಿಗಳು, ಎನ್‌ಜಿಒಗಳು ಮತ್ತು ಜಾಗತಿಕವಾಗಿ 3.6 ಮಿಲಿಯನ್ ಉದ್ಯೋಗಿಗಳನ್ನು ಪ್ರತಿನಿಧಿಸುವ ವಿಶ್ವದ ಕೆಲವು ದೊಡ್ಡ ಕಂಪನಿಗಳು ಮತ್ತು ಬ್ರ್ಯಾಂಡ್‌ಗಳ ಅಭೂತಪೂರ್ವ ನೆಟ್‌ವರ್ಕ್ ಒಟ್ಟಾಗಿ ನವೀನ ಮತ್ತು ಎಲ್ಲಾ 15 ಅಂತಿಮ ಸ್ಪರ್ಧಿಗಳಿಂದ ಅಭಿವೃದ್ಧಿಪಡಿಸಲಾಗಿರುವ ವಾಸ್ತವ ಪರಿಹಾರಗಳನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಬುಧವಾರ ವಿಜೇತರು ಸ್ಥಳೀಯ ಸ್ಕಾಟಿಷ್ ಶಾಲಾ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಇದನ್ನೂ ಓದಿ:  Video: ಗ್ಲಾಸ್ಗೋದಿಂದ ಭಾರತಕ್ಕೆ ಹೊರಟ ಪ್ರಧಾನಿ ಮೋದಿಗೆ ಸಾಂಪ್ರದಾಯಿಕ ವಿದಾಯ; ತಾವೂ ಡ್ರಮ್​ ಬಾರಿಸಿ, ಮಕ್ಕಳೊಂದಿಗೆ ಖುಷಿಪಟ್ಟ ಮೋದಿ

Published On - 7:59 pm, Wed, 3 November 21

RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಸಿದ್ದರಾಮಯ್ಯ ಜೊತೆ ಮೊಮ್ಮಗನನ್ನು ಕಂಡು ಶಿವಕುಮಾರ್​ಗೆ ಕುತೂಹಲ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ
ಆರ್​ಸಿಬಿ ತಂಡವನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು; ಜಾತ್ರೆಯಂತಾದ ಮೆಟ್ರೋ