AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1998ರಲ್ಲಿ ಒಂದೂವರೆ ವರ್ಷದ ಮಗುವಾಗಿದ್ದಾಗ ಮೊದಲ ಯಕೃತ್ತು ಕಸಿ ಸ್ವೀಕರಿಸಿದ್ದ ಸಂಜಯ್ ಈಗ ವೈದ್ಯ

ನಾನು ಶಸ್ತ್ರಚಿಕಿತ್ಸೆ ಬಗ್ಗೆ ನೆನಪಿಟ್ಟುಕೊಳ್ಳಲು ತುಂಬಾ ಚಿಕ್ಕವನಾಗಿದ್ದೆ, ಆದರೆ ನನ್ನ ಹೊಟ್ಟೆಯ ಮೇಲಿನ ಶಸ್ತ್ರಚಿಕಿತ್ಸೆಯ ಗಾಯದ ಬಗ್ಗೆ ನನ್ನ ತಾಯಿಯಲ್ಲಿ ಕೇಳಿದ್ದು ನನಗೆ ನೆನಪಿದೆ. ನನ್ನ ತಂದೆ ನನಗಾಗಿ ಏನು ಮಾಡಿದರು ಮತ್ತು ವೈದ್ಯರು ನನ್ನ ಜೀವವನ್ನು ಹೇಗೆ ಉಳಿಸಿದರು ಎಂಬುದನ್ನು ಅರ್ಥಮಾಡಿಕೊಳ್ಳುವ ವಯಸ್ಸನ್ನು ನಾನು ತಲುಪಿದಾಗ, ನಾನು ಕೂಡ ವೈದ್ಯನಾಗಬೇಕು ಮತ್ತು ಹೆಚ್ಚಿನ ಜೀವಗಳನ್ನು ಉಳಿಸಬೇಕೆಂದು ನಿರ್ಧರಿಸಿದೆ ಎಂದು ಕಂದಸಾಮಿ ಹೇಳಿದ್ದಾರೆ.

1998ರಲ್ಲಿ ಒಂದೂವರೆ ವರ್ಷದ ಮಗುವಾಗಿದ್ದಾಗ ಮೊದಲ ಯಕೃತ್ತು ಕಸಿ ಸ್ವೀಕರಿಸಿದ್ದ ಸಂಜಯ್ ಈಗ ವೈದ್ಯ
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on: Nov 15, 2023 | 8:25 PM

Share

ದೆಹಲಿ  ನವೆಂಬರ್ 15: 1998 ನವೆಂಬರ್ 15ರಂದು ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ (Indraprastha Apollo Hospital) ವೈದ್ಯರ ತಂಡವು ಜೀವ ಉಳಿಸುವ ಯಕೃತ್ತಿನ ಕಸಿ ಮಾಡಿದಾಗ ಸಂಜಯ್ ಕಂದಸಾಮಿಗೆ ಆಗ ಕೇವಲ 20 ತಿಂಗಳು. ದೇಶದ ಮೊದಲ ಮಕ್ಕಳ ಯಕೃತ್ತು ಕಸಿ (liver transplant) ಆಗಿತ್ತು ಅದು. ಇಪ್ಪತ್ತೈದು ವರ್ಷಗಳ ನಂತರ, ಸಂಜಯ್ ಈಗ ಸ್ವತಃ ವೈದ್ಯರಾಗಿದ್ದು, ಕಾಂಚೀಪುರಂನಲ್ಲಿರುವ ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದಾರೆ. ಅಂಗಾಂಗ ದಾನಕ್ಕಾಗಿ (organ donation) ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುತ್ತಿರುವ ಇವರು ಕಸಿ ಸ್ವೀಕರಿಸುವವರು ಶಸ್ತ್ರಚಿಕಿತ್ಸೆಯ ನಂತರ ಸಂಪೂರ್ಣವಾಗಿ ಸಾಮಾನ್ಯ ಜೀವನವನ್ನು ಹೇಗೆ ನಡೆಸಬಹುದು ಎಂಬುದನ್ನು ಉದಾಹರಣೆಯ ಮೂಲಕ ಸಾಬೀತುಪಡಿಸಿದ್ದಾರೆ. ಅವರು ತಮ್ಮ ಊರಿಗೆ ತೆರಳುವ ಮೊದಲು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

ನಾನು ಶಸ್ತ್ರಚಿಕಿತ್ಸೆ ಬಗ್ಗೆ ನೆನಪಿಟ್ಟುಕೊಳ್ಳಲು ತುಂಬಾ ಚಿಕ್ಕವನಾಗಿದ್ದೆ, ಆದರೆ ನನ್ನ ಹೊಟ್ಟೆಯ ಮೇಲಿನ ಶಸ್ತ್ರಚಿಕಿತ್ಸೆಯ ಗಾಯದ ಬಗ್ಗೆ ನನ್ನ ತಾಯಿಯಲ್ಲಿ ಕೇಳಿದ್ದು ನನಗೆ ನೆನಪಿದೆ. ನನ್ನ ತಂದೆ ನನಗಾಗಿ ಏನು ಮಾಡಿದರು ಮತ್ತು ವೈದ್ಯರು ನನ್ನ ಜೀವವನ್ನು ಹೇಗೆ ಉಳಿಸಿದರು ಎಂಬುದನ್ನು ಅರ್ಥಮಾಡಿಕೊಳ್ಳುವ ವಯಸ್ಸನ್ನು ನಾನು ತಲುಪಿದಾಗ, ನಾನು ಕೂಡ ವೈದ್ಯನಾಗಬೇಕು ಮತ್ತು ಹೆಚ್ಚಿನ ಜೀವಗಳನ್ನು ಉಳಿಸಬೇಕೆಂದು ನಿರ್ಧರಿಸಿದೆ ಎಂದು ಕಂದಸಾಮಿ ಹೇಳಿದ್ದಾರೆ.

ಕಂದಸಾಮಿ ಹುಟ್ಟಿದಾಗ ಕಾಗ್ನೆನ್ಶಿಯಲ್ ಕಂಡೀಷನ್, ಪಿತ್ತರಸದ ಅಟ್ರೆಸಿಯಾ, ಇದು ಪಿತ್ತಜನಕಾಂಗದ ಅಸ್ವಸ್ಥತೆಯಾಗಿದ್ದು, ಇದು ಪಿತ್ತಜನಕಾಂಗದಿಂದ ಪಿತ್ತಕೋಶಕ್ಕೆ ಪಿತ್ತರಸವನ್ನು ಸಾಗಿಸುವ ಟ್ಯೂಬ್‌ಗಳಲ್ಲಿ (ನಾಳಗಳು) ಅಡಚಣೆಯನ್ನು ಉಂಟುಮಾಡುತ್ತದೆ. ಪಿತ್ತಜನಕಾಂಗದ ಒಳಗೆ ಅಥವಾ ಹೊರಗೆ ಪಿತ್ತರಸ ನಾಳಗಳು ಸಾಮಾನ್ಯವಾಗಿ ಬೆಳವಣಿಗೆಯಾಗದಿದ್ದಾಗ ಈ ಕಾಗ್ನೆನ್ಶಿಯಲ್ ಕಂಡೀಷನ್ ಸಂಭವಿಸುತ್ತದೆ. ಅವನ ವಿಷಯದಲ್ಲಿ, ಈ ಸ್ಥಿತಿಯು ಕಾಮಾಲೆಗೆ ಕಾರಣವಾಯಿತು, ಇದು ಅವನ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು.

ಕಸಿ ಮಾಡುವ ಪ್ರಸ್ತಾಪವನ್ನು ಕುಟುಂಬದೊಂದಿಗೆ ಚರ್ಚಿಸಿದಾಗ, ಸಂಜಯ್ ಅವರ ತಂದೆ ಯಾವುದೇ ಹಿಂಜರಿಕೆಯಿಲ್ಲದೆ ದಾನಿಯಾಗಲು ಒಪ್ಪಿಕೊಂಡರು. ಸದ್ಯ ಅವರಿಗೆ 61 ವರ್ಷ ವಯಸ್ಸಾಗಿದ್ದು, ಆರೋಗ್ಯವಾಗಿದ್ದಾರೆ.

ಕಂದಸಾಮಿ ಅವರ ವೈದ್ಯರೂ ಆಗಿದ್ದ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಗಳ ಗುಂಪಿನ ವೈದ್ಯಕೀಯ ನಿರ್ದೇಶಕ ಮತ್ತು ಹಿರಿಯ ಮಕ್ಕಳ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಅನುಪಮ್ ಸಿಬಲ್ ಅವರು 20 ತಿಂಗಳ ಮಗುವಿಗೆ ಯಕೃತ್ತು ಕಸಿ ಮಾಡುವ ನಿರ್ಧಾರವನ್ನು ತೆಗೆದುಕೊಂಡಾಗ ಸಾಕಷ್ಟು ಅನುಮಾನಗಳು ಮತ್ತು ಆತಂಕಗಳು ಇದ್ದವು.

ಮೊದಲ ಬಾರಿಗೆ ಏನನ್ನಾದರೂ ಮಾಡಿದಾಗ, ನೀವು ಭಯಪಡುತ್ತೀರಿ ಮತ್ತು ಉದ್ವಿಗ್ನರಾಗುತ್ತೀರಿ, ವಿಶೇಷವಾಗಿ ಯಾರೊಬ್ಬರ ಜೀವನವು ಅಪಾಯದಲ್ಲಿರುವಾಗ. ಆದರೆ ಸಂಜಯ್ ಮತ್ತು ಅವರ ಕುಟುಂಬದವರು ಸಾಕಷ್ಟು ಧೈರ್ಯ ಮತ್ತು ದೃಢತೆಯನ್ನು ತೋರಿಸಿದರು. ಯಕೃತ್ತು ಸ್ವೀಕರಿಸುವವರು ತಮ್ಮ ಜೀವನದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಕಾಗಿಲ್ಲ ಎಂಬುದಕ್ಕೆ ಅವರು ನಿಜವಾದ ಉದಾಹರಣೆಯಾಗಿದ್ದಾರೆ ಎಂದು ಸಿಬಲ್ ಹೇಳಿದರು.

ಇದನ್ನೂ ಓದಿ: ಕಿಡ್ನಿ ಕಸಿಗೆ ಒಳಗಾಗಿದ್ದ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೋ ವೈರಲ್​​​​

ಸಂಜಯ್‌ನಿಂದ ಪ್ರೀತಿಯಿಂದ “ಡಾಕ್ಟರ್ ಅಂಕಲ್” ಎಂದು ಕರೆಯಲ್ಪಡುವ ಸಿಬಲ್, ಇತ್ತೀಚೆಗೆ ಮಾರ್ಚ್‌ನಲ್ಲಿ ತನ್ನ ಮದುವೆಗೆ ಕಂದಸಾಮಿ ಕುಟುಂಬದಿಂದ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಯಕೃತ್ತು ಕಸಿ ಮಾಡುವ ಮಕ್ಕಳು ಸಕ್ರಿಯ ಜೀವನವನ್ನು ನಡೆಸುತ್ತಾರೆ. ನಮ್ಮ ಅನೇಕ ರೋಗಿಗಳು ಉತ್ತಮ ವೃತ್ತಿಜೀವನವನ್ನು ಮುಂದುವರೆಸುತ್ತಾರೆ, ಅವರು ಮದುವೆಯಾಗುತ್ತಾರೆ ಮತ್ತು ಸಂಪೂರ್ಣವಾಗಿ ಸಾಮಾನ್ಯ ಜೀವನವನ್ನು ಹೊಂದಿದ್ದಾರೆಎಂದು ಅವರು ಹೇಳಿದರು.

ಕಂದಸಾಮಿ ಅವರ ಕಸಿ ಮಾಡಿದ 25 ನೇ ವಾರ್ಷಿಕೋತ್ಸವವನ್ನು ಗುರುತಿಸಲು ಅಪೋಲೋ ಆಸ್ಪತ್ರೆಯ ವೈದ್ಯರು 500 ನೇ ಮಕ್ಕಳ ಯಕೃತ್ತಿನ ಕಸಿಯನ್ನು ಯಶಸ್ವಿಯಾಗಿ ನಡೆಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ
ಬಾಯ್​ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?