Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಮೊದಲ ‘ಡ್ರೋನ್ ಪೊಲೀಸ್ ಘಟಕ’ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾದ ತಮಿಳುನಾಡು

ಎಲ್ಲಾ ಡ್ರೋನ್ ಘಟಕಗಳು ಬಿಲ್ಟ್ ಇನ್ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯಗಳನ್ನು ಹೊಂದಿದ್ದು, ನೆಲದ ನಿಲ್ದಾಣದಿಂದ 5-10 ಕಿಮೀ ದೂರದವರೆಗೆ ಕಾರ್ಯನಿರ್ವಹಿಸಬಹುದು

ಭಾರತದ ಮೊದಲ 'ಡ್ರೋನ್ ಪೊಲೀಸ್ ಘಟಕ' ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾದ ತಮಿಳುನಾಡು
ಚೆನ್ನೈ ಡ್ರೋನ್ ಪೊಲೀಸ್
Follow us
ರಶ್ಮಿ ಕಲ್ಲಕಟ್ಟ
|

Updated on: Jun 29, 2023 | 3:42 PM

ಭಾರತದಲ್ಲಿ ಮೊದಲ ಬಾರಿಗೆ ತಮಿಳುನಾಡು (Tamil Nadu) ಪೊಲೀಸರು  ‘ಚೆನ್ನೈ ಡ್ರೋನ್ ಪೊಲೀಸ್ ಘಟಕ’ವನ್ನು (Chennai drone police unit) ಪ್ರಾರಂಭಿಸಿದ್ದು, ಇದರ ವೆಚ್ಚ 3.6 ಕೋಟಿ ರೂಪಾಯಿ ಆಗಿದೆ. ಪೊಲೀಸ್ ಇಲಾಖೆಗೆ ಹೊಸ ಡ್ರೋನ್ ಘಟಕವನ್ನು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಿ ಸೈಲೇಂದ್ರ ಬಾಬು ಮತ್ತು ಗ್ರೇಟರ್ ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಅವರು ಗುರುವಾರ ಚೆನ್ನೈನ ಅಡ್ಯಾರ್‌ನ ಬೆಸೆಂಟ್ ನಗರ ಅವೆನ್ಯೂದಲ್ಲಿ ಉದ್ಘಾಟಿಸಿದರು. ಮೂರು ವಿಭಾಗಗಳ ಅಡಿಯಲ್ಲಿ 9 ಡ್ರೋನ್‌ಗಳು ಘಟಕದ ಭಾಗವಾಗಲಿವೆ.

(i) ತ್ವರಿತ ಪ್ರತಿಕ್ರಿಯೆ ಕಣ್ಗಾವಲು ಡ್ರೋನ್ಸ್- 6

(ii) ಹೆವಿ ಲಿಫ್ಟ್ ಮಲ್ಟಿರೋಟರ್ ಡ್ರೋನ್ – 1

(iii) ಲಾಂಗ್ ರೇಂಜ್ ಸರ್ವೆ ವಿಂಗ್ ಪ್ಲೇನ್ – 2

ಎಲ್ಲಾ ಡ್ರೋನ್ ಘಟಕಗಳು ಬಿಲ್ಟ್ ಇನ್ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯಗಳನ್ನು ಹೊಂದಿದ್ದು, ನೆಲದ ನಿಲ್ದಾಣದಿಂದ 5-10 ಕಿಮೀ ದೂರದವರೆಗೆ ಕಾರ್ಯನಿರ್ವಹಿಸಬಹುದು. ಡ್ರೋನ್‌ಗಳು ಹಬ್ಬ ಅಥವಾ ಕೂಟದ ಸಮಯದಲ್ಲಿ ಜನಸಂದಣಿಯನ್ನು ನಿಖರವಾಗಿ ಅಂದಾಜು ಮಾಡಬಹುದು, ಜನಸಂದಣಿ ನಿಯಂತ್ರಣ ತಂತ್ರಗಳನ್ನು ಸರಿಯಾಗಿ ಯೋಜಿಸಲು ಪೊಲೀಸರಿಗೆ ಅನುವು ಮಾಡಿಕೊಡುತ್ತದೆ. ಡ್ರೋನ್‌ಗಳು ಎಎನ್‌ಪಿಆರ್ ಕ್ಯಾಮೆರಾಗಳನ್ನು ಹೊಂದಿದ್ದು, ವಾಹನಗಳ ನೋಂದಣಿ ಡೇಟಾಬೇಸ್ ಮತ್ತು ಶಂಕಿತರನ್ನು ಪತ್ತೆಹಚ್ಚಲು, ಕದ್ದ ವಾಹನಗಳನ್ನು ನೈಜ ಸಮಯದಲ್ಲಿ ಪರಿಶೀಲಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Delhi: ದೆಹಲಿಯ ಔರಂಗಜೇಬ್ ರಸ್ತೆಯ​ನ್ನು ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ

ಥರ್ಮಲ್ ಕ್ಯಾಮೆರಾಗಳನ್ನು ಹೊಂದಿರುವ ಹೆವಿ ಲಿಫ್ಟ್ ಕ್ಯಾಮೆರಾಗಳು ರಾತ್ರಿಯ ಸಮಯದಲ್ಲಿಯೂ ಲೈಫ್ ಜಾಕೆಟ್‌ಗಳನ್ನು ನಿಯೋಜಿಸುವ ಮೂಲಕ ಸಮುದ್ರದ ಅಲೆಗಳಲ್ಲಿ ಸಿಲುಕಿದ ಜನರನ್ನು ಪತ್ತೆ ಹಚ್ಚಿ ರಕ್ಷಿಸಬಹುದು.

ಚೆನ್ನೈಗೆ ಡ್ರೋನ್ ಪೊಲೀಸ್ ಘಟಕ ರಚನೆಯಾದ ನಂತರ, ಕೊಯಮತ್ತೂರು ಮತ್ತು ಮಧುರೈ ನಗರ ಪೊಲೀಸ್ ಘಟಕಗಳಿಂದ ಇದೇ ರೀತಿಯ ಬೇಡಿಕೆಗಳು ಹುಟ್ಟಿಕೊಂಡಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ