AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಮೊದಲ ‘ಡ್ರೋನ್ ಪೊಲೀಸ್ ಘಟಕ’ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾದ ತಮಿಳುನಾಡು

ಎಲ್ಲಾ ಡ್ರೋನ್ ಘಟಕಗಳು ಬಿಲ್ಟ್ ಇನ್ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯಗಳನ್ನು ಹೊಂದಿದ್ದು, ನೆಲದ ನಿಲ್ದಾಣದಿಂದ 5-10 ಕಿಮೀ ದೂರದವರೆಗೆ ಕಾರ್ಯನಿರ್ವಹಿಸಬಹುದು

ಭಾರತದ ಮೊದಲ 'ಡ್ರೋನ್ ಪೊಲೀಸ್ ಘಟಕ' ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾದ ತಮಿಳುನಾಡು
ಚೆನ್ನೈ ಡ್ರೋನ್ ಪೊಲೀಸ್
ರಶ್ಮಿ ಕಲ್ಲಕಟ್ಟ
|

Updated on: Jun 29, 2023 | 3:42 PM

Share

ಭಾರತದಲ್ಲಿ ಮೊದಲ ಬಾರಿಗೆ ತಮಿಳುನಾಡು (Tamil Nadu) ಪೊಲೀಸರು  ‘ಚೆನ್ನೈ ಡ್ರೋನ್ ಪೊಲೀಸ್ ಘಟಕ’ವನ್ನು (Chennai drone police unit) ಪ್ರಾರಂಭಿಸಿದ್ದು, ಇದರ ವೆಚ್ಚ 3.6 ಕೋಟಿ ರೂಪಾಯಿ ಆಗಿದೆ. ಪೊಲೀಸ್ ಇಲಾಖೆಗೆ ಹೊಸ ಡ್ರೋನ್ ಘಟಕವನ್ನು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಿ ಸೈಲೇಂದ್ರ ಬಾಬು ಮತ್ತು ಗ್ರೇಟರ್ ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಅವರು ಗುರುವಾರ ಚೆನ್ನೈನ ಅಡ್ಯಾರ್‌ನ ಬೆಸೆಂಟ್ ನಗರ ಅವೆನ್ಯೂದಲ್ಲಿ ಉದ್ಘಾಟಿಸಿದರು. ಮೂರು ವಿಭಾಗಗಳ ಅಡಿಯಲ್ಲಿ 9 ಡ್ರೋನ್‌ಗಳು ಘಟಕದ ಭಾಗವಾಗಲಿವೆ.

(i) ತ್ವರಿತ ಪ್ರತಿಕ್ರಿಯೆ ಕಣ್ಗಾವಲು ಡ್ರೋನ್ಸ್- 6

(ii) ಹೆವಿ ಲಿಫ್ಟ್ ಮಲ್ಟಿರೋಟರ್ ಡ್ರೋನ್ – 1

(iii) ಲಾಂಗ್ ರೇಂಜ್ ಸರ್ವೆ ವಿಂಗ್ ಪ್ಲೇನ್ – 2

ಎಲ್ಲಾ ಡ್ರೋನ್ ಘಟಕಗಳು ಬಿಲ್ಟ್ ಇನ್ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯಗಳನ್ನು ಹೊಂದಿದ್ದು, ನೆಲದ ನಿಲ್ದಾಣದಿಂದ 5-10 ಕಿಮೀ ದೂರದವರೆಗೆ ಕಾರ್ಯನಿರ್ವಹಿಸಬಹುದು. ಡ್ರೋನ್‌ಗಳು ಹಬ್ಬ ಅಥವಾ ಕೂಟದ ಸಮಯದಲ್ಲಿ ಜನಸಂದಣಿಯನ್ನು ನಿಖರವಾಗಿ ಅಂದಾಜು ಮಾಡಬಹುದು, ಜನಸಂದಣಿ ನಿಯಂತ್ರಣ ತಂತ್ರಗಳನ್ನು ಸರಿಯಾಗಿ ಯೋಜಿಸಲು ಪೊಲೀಸರಿಗೆ ಅನುವು ಮಾಡಿಕೊಡುತ್ತದೆ. ಡ್ರೋನ್‌ಗಳು ಎಎನ್‌ಪಿಆರ್ ಕ್ಯಾಮೆರಾಗಳನ್ನು ಹೊಂದಿದ್ದು, ವಾಹನಗಳ ನೋಂದಣಿ ಡೇಟಾಬೇಸ್ ಮತ್ತು ಶಂಕಿತರನ್ನು ಪತ್ತೆಹಚ್ಚಲು, ಕದ್ದ ವಾಹನಗಳನ್ನು ನೈಜ ಸಮಯದಲ್ಲಿ ಪರಿಶೀಲಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Delhi: ದೆಹಲಿಯ ಔರಂಗಜೇಬ್ ರಸ್ತೆಯ​ನ್ನು ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ

ಥರ್ಮಲ್ ಕ್ಯಾಮೆರಾಗಳನ್ನು ಹೊಂದಿರುವ ಹೆವಿ ಲಿಫ್ಟ್ ಕ್ಯಾಮೆರಾಗಳು ರಾತ್ರಿಯ ಸಮಯದಲ್ಲಿಯೂ ಲೈಫ್ ಜಾಕೆಟ್‌ಗಳನ್ನು ನಿಯೋಜಿಸುವ ಮೂಲಕ ಸಮುದ್ರದ ಅಲೆಗಳಲ್ಲಿ ಸಿಲುಕಿದ ಜನರನ್ನು ಪತ್ತೆ ಹಚ್ಚಿ ರಕ್ಷಿಸಬಹುದು.

ಚೆನ್ನೈಗೆ ಡ್ರೋನ್ ಪೊಲೀಸ್ ಘಟಕ ರಚನೆಯಾದ ನಂತರ, ಕೊಯಮತ್ತೂರು ಮತ್ತು ಮಧುರೈ ನಗರ ಪೊಲೀಸ್ ಘಟಕಗಳಿಂದ ಇದೇ ರೀತಿಯ ಬೇಡಿಕೆಗಳು ಹುಟ್ಟಿಕೊಂಡಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ