Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ 19 ಲಸಿಕೆ ಪಡೆದವರಿಗೆ ಪ್ರಯಾಣ ಶುಲ್ಕದಲ್ಲಿ ಶೇ.10ರಷ್ಟು ರಿಯಾಯಿತಿ; ವಿಶೇಷ ಕೊಡುಗೆ ನೀಡಿದ ಇಂಡಿಗೋ ಏರ್​ಲೈನ್ಸ್​​

18ವರ್ಷ ಮೇಲ್ಪಟ್ಟ ಭಾರತೀಯರಿಗೆ ಈ ಕೊಡುಗೆ ಅನ್ವಯ ಆಗುತ್ತದೆ. ಟಿಕೆಟ್​ ಬುಕ್ಕಿಂಗ್​ ಮಾಡುವಾಗ ಅವರು ಭಾರತದಲ್ಲೇ ಇರಬೇಕು ಮತ್ತು ಭಾರತದಲ್ಲಿ ಮಾನ್ಯತೆ ಪಡೆದ ಕೊವಿಡ್ ಲಸಿಕೆಯ ಒಂದು ಅಥವಾ ಎರಡೂ ಡೋಸ್ ಲಸಿಕೆ ಪಡೆದಿರಬೇಕು.

ಕೊವಿಡ್​ 19 ಲಸಿಕೆ ಪಡೆದವರಿಗೆ ಪ್ರಯಾಣ ಶುಲ್ಕದಲ್ಲಿ ಶೇ.10ರಷ್ಟು ರಿಯಾಯಿತಿ; ವಿಶೇಷ ಕೊಡುಗೆ ನೀಡಿದ ಇಂಡಿಗೋ ಏರ್​ಲೈನ್ಸ್​​
ಇಂಡಿಗೋ ಸಂಸ್ಥೆಯ ವಿಮಾನ
Follow us
TV9 Web
| Updated By: Lakshmi Hegde

Updated on:Jun 23, 2021 | 2:54 PM

ಭಾರತದ ಲಸಿಕಾ ಅಭಿಯಾನವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಇಂಡಿಗೋ ವಿಮಾನಯಾನ ಸಂಸ್ಥೆ ಮಹತ್ವದ ನಿರ್ಧಾರ ಘೋಷಿಸಿದೆ. ಲಸಿಕೆಯನ್ನು ಪಡೆದ ಗ್ರಾಹಕರಿಗೆ ಪ್ರಯಾಣದ ವೆಚ್ಚದಲ್ಲಿ ಡಿಸ್​ಕೌಂಟ್​ ನೀಡುವುದಾಗಿ ತಿಳಿಸಿದೆ. ಅಂದರೆ ಲಸಿಕೆಯನ್ನು ಪಡೆದ (ಒಂದೇ ಡೋಸ್​ ಇರಲಿ, ಎರಡು ಡೋಸ್​ ಆಗಿರಲಿ) ಗ್ರಾಹಕರಿಗೆ ಇಂಡಿಗೋ ಪ್ರಯಾಣದ ಶುಲ್ಕದಲ್ಲಿ ಶೇ.10ರಷ್ಟು ಡಿಸ್​ಕೌಂಟ್ ನೀಡುವುದಾಗಿ ಹೇಳಿದೆ. ಇಂದಿನಿಂದಲೇ ಇದು ಅನ್ವಯ ಆಗಲಿದ್ದು, ಭಾರತದಲ್ಲಿ ವ್ಯಾಕ್ಸಿನ್​ ಪಡೆದವರಿಗೆ ಪ್ರಯಾಣ ಶುಲ್ಕದಲ್ಲಿ ರಿಯಾಯಿತಿ ನೀಡಿದ ಮೊದಲ ವಿಮಾನಯಾನ ಸಂಸ್ಥೆ ಆಗಿದೆ.

ಶದಲ್ಲೇ ಅತ್ಯಂತ ದೊಡ್ಡ ವಿಮಾನಸಂಸ್ಥೆ ನಮ್ಮದು. ಕೊರೊನಾ ವಿರುದ್ಧ ಹೋರಾಟದಲ್ಲಿ ನಾವೂ ಪಾಲ್ಗೊಂಡಿದ್ದೇವೆ. ಹಾಗೇ, ಲಸಿಕಾ ಅಭಿಯಾನವನ್ನು ಉತ್ತೇಜಿಸುವುದೂ ಸಹ ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ ನಾವೂ ಸಹ ವಿಶೇಷ ಕೊಡುಗೆ ಘೋಷಣೆ ಮಾಡಿದ್ದೇವೆ. ನಮ್ಮ ಈ ಕೊಡುಗೆಯಿಂದ ಹೆಚ್ಚೆಚ್ಚು ಜನರು ಲಸಿಕೆಯನ್ನು ಪಡೆಯಬಹುದು. ಅಲ್ಲದೆ, ಕಡಿಮೆ ದರದಲ್ಲಿ, ಸುರಕ್ಷಿತವಾಗಿ ಇಂಡಿಗೋದಲ್ಲಿ ಪ್ರಯಾಣ ಮಾಡಬಹುದು ಎಂಬ ನಂಬಿಕೆಯೂ ಅವರಲ್ಲಿ ಹುಟ್ಟುತ್ತದೆ ಎಂದು ಇಂಡಿಗೋದ ಕಂದಾಯ ಅಧಿಕಾರಿ ಸಂಜಯ್​ ಕುಮಾರ್​ ತಿಳಿಸಿದ್ದಾರೆ.

18ವರ್ಷ ಮೇಲ್ಪಟ್ಟ ಭಾರತೀಯರಿಗೆ ಈ ಕೊಡುಗೆ ಅನ್ವಯ ಆಗುತ್ತದೆ. ಟಿಕೆಟ್​ ಬುಕ್ಕಿಂಗ್​ ಮಾಡುವಾಗ ಅವರು ಭಾರತದಲ್ಲೇ ಇರಬೇಕು ಮತ್ತು ಭಾರತದಲ್ಲಿ ಮಾನ್ಯತೆ ಪಡೆದ ಕೊವಿಡ್ ಲಸಿಕೆಯ ಒಂದು ಅಥವಾ ಎರಡೂ ಡೋಸ್ ಲಸಿಕೆ ಪಡೆದಿರಬೇಕು ಎಂದೂ ಇಂಡಿಗೋ ಸಂಸ್ಥೆ ಸ್ಪಷ್ಟಪಡಿಸಿದೆ. ಹಾಗೇ, ಪ್ರಯಾಣಿಕರು ತಮ್ಮ ಆರೋಗ್ಯ ಸೇತು ಆ್ಯಪ್​ನಲ್ಲಿ ಲಸಿಕೆ ಪಡೆದ ಮಾಹಿತಿಯನ್ನು ಏರ್​ಪೋರ್ಟ್​​ನ ಚೆಕ್​ ಇನ್​ ಕೌಂಟರ್​ ಮತ್ತು ಬೋರ್ಡಿಂಗ್​ ಗೇಟ್​ ಬಳಿ ಅಧಿಕಾರಿಗಳಿಗೆ ತೋರಿಸಬೇಕು ಎಂದೂ ತಿಳಿಸಿದೆ. ಸದ್ಯ ಈ ಕೊಡುಗೆಯಡಿ ಸೀಮಿತ ಟಿಕೆಟ್​ಗಳಷ್ಟೇ ಲಭ್ಯವಿದ್ದು, ಅದಕ್ಕೆ ತಕ್ಕಂತೆ ನೀಡುತ್ತೇವೆ ಎಂದೂ ಕಂಪನಿ ಹೇಳಿದೆ.

ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದ ಆ ಒಂದು ಕರೆಗೆ ಪವಾಡವೇ ನಡೆದು ಹೋಯ್ತು

IndiGo rolls out 10 Percent discount for vaccinated customers first in Country

Published On - 2:51 pm, Wed, 23 June 21

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ