AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IRCTC Bharat Darshan Tour: ಏಳು ಜ್ಯೋತಿರ್ಲಿಂಗ ಕ್ಷೇತ್ರ ಮತ್ತು ಪ್ರಮುಖ ಪ್ರವಾಸಿ ತಾಣಗಳಿಗೆ ಭಾರತ್ ದರ್ಶನ್ ಸ್ಪೆಷಲ್ ಟೂರಿಸ್ಟ್ ಟ್ರೇನ್ ಆಗಸ್ಟ್ 24ರಿಂದ

ಮೂಲಗಳ ಪ್ರಕಾರ ಐಆರ್​ಸಿಟಿಸಿ ಅತ್ಯಂತ ಮಿತವ್ಯಯಕರ ಮತ್ತು ಎಲ್ಲ ಖರ್ಚು-ವೆಚ್ಚಗಳನ್ನೊಳಗೊಂಡ ಪ್ಯಾಕೇಜ್ ಅನ್ನು ಪ್ರವಾಸ ಮಾಡಲಿಚ್ಛಸುವವರಿಗೆ ನೀಡಲಿದೆ. ಈ ಪ್ರವಾಸವು ಭಾರತದ ಏಳು ಜ್ಯೋತಿರ್ಲಿಂಗಳಿರುವ ಕ್ಷೇತ್ರಗಳು, ದ್ವಾರಕಾ ಮತ್ತು ಗುಜರಾತ್​ನಲ್ಲಿರುವ ಸ್ಟ್ಯಾಚ್ಯೂ ಅಫ್ ಯುನಿಟಿ ಸೇರಿದಂತೆ ಎಲ್ಲಾ ಪ್ರಮುಖ ಪ್ರವಾಸಿ ತಾಣಗಳನ್ನೊಳಗೊಂಡಿದೆ.

IRCTC Bharat Darshan Tour: ಏಳು ಜ್ಯೋತಿರ್ಲಿಂಗ ಕ್ಷೇತ್ರ ಮತ್ತು ಪ್ರಮುಖ ಪ್ರವಾಸಿ ತಾಣಗಳಿಗೆ ಭಾರತ್ ದರ್ಶನ್ ಸ್ಪೆಷಲ್ ಟೂರಿಸ್ಟ್ ಟ್ರೇನ್ ಆಗಸ್ಟ್ 24ರಿಂದ
ಭಾರತ ದರ್ಶನ ವಿಶೇಷ ರೈಲು
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Jun 25, 2021 | 8:03 PM

Share

ನವದೆಹಲಿ: ಬೇರೆಲ್ಲ ಸಾರಿಗೆ ಮಾಧ್ಯಮಗಳ ಹಾಗೆ ಭಾರತೀಯ ರೇಲ್ವೇಸ್ ಸಹ ಕೊವಿಡ್​-19 ಪಿಡುಗಿನಿಂದಾಗಿ ಭಾರೀ ಹಾನಿ ಅನುಭವಿಸಿದೆ. ಅದನ್ನು ಸ್ವಲ್ಪಮಟ್ಟಿಗಾದರು ಸರಿದೂಗಿಸಿಕೊಳ್ಳುವ ಎಂಬ ಯೋಚನೆಯೊಂದಿಗೆ ರೇಲ್ವೇ ಇಲಾಖೆಯು ಆಗಸ್ಟ್​ ತಿಂಗಳಲ್ಲಿ ಏಳು ಜ್ಯೋತಿರ್ಲಿಂಗಳಿರುವ ಪುಣ್ಯಕ್ಷೇತ್ರಗಳು ಸೇರಿದಂತೆ ದೇಶದ ಪ್ರಮುಖ ಪ್ರವಾಸಿ ತಾಣಗಳಿಗೆ ಒಂದು ವಿಶೇಷ ರೈಲು ಬಿಡುವ ನಿರ್ಧಾರ ತೆಗೆದುಕೊಂಡಿದೆ. ಈ ವಿಶೇಷ ರೈಲನ್ನು ಭಾರತ್ ದರ್ಶನ್ ಸ್ಪೆಷಲ್ ಟೂರಿಸ್ಟ್ ಟ್ರೇನ್ ಎಂದು ಕರೆಯಲಾಗುವುದು ಮತ್ತು ಇದನ್ನು ಭಾರತೀಯ ರೇಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್​ಸಿಟಿಸಿ) ಆಗಸ್ಟ್​ 24ರಿಂದ ಆಪರೇಟ್​ ಮಾಡಲಿದೆ.

ಮೂಲಗಳ ಪ್ರಕಾರ ಐಆರ್​ಸಿಟಿಸಿ ಅತ್ಯಂತ ಮಿತವ್ಯಯಕರ ಮತ್ತು ಎಲ್ಲ ಖರ್ಚು-ವೆಚ್ಚಗಳನ್ನೊಳಗೊಂಡ ಪ್ಯಾಕೇಜ್ ಅನ್ನು ಪ್ರವಾಸ ಮಾಡಲಿಚ್ಛಸುವವರಿಗೆ ನೀಡಲಿದೆ. ಈ ಪ್ರವಾಸವು ಭಾರತದ ಏಳು ಜ್ಯೋತಿರ್ಲಿಂಗಳಿರುವ ಕ್ಷೇತ್ರಗಳು, ದ್ವಾರಕಾ ಮತ್ತು ಗುಜರಾತ್​ನಲ್ಲಿರುವ ಸ್ಟ್ಯಾಚ್ಯೂ ಅಫ್ ಯುನಿಟಿ ಸೇರಿದಂತೆ ಎಲ್ಲಾ ಪ್ರಮುಖ ಪ್ರವಾಸಿ ತಾಣಗಳನ್ನೊಳಗೊಂಡಿದೆ.

ಆಗಸ್ಟ್​ 24 ರಂದಯ ಆರಂಭವಾಗುವ ಈ ರೇಲ್ವೇಸ್​ ಭಾರತ್ ದರ್ಶನ್ ಸ್ಪೆಷಲ್ ಟ್ರೇನ್ ಸೇವೆಯು ಎರಡು ವಾರಗಳ ಅವಧಿಯದಾಗಿರುತ್ತದೆ. ಈ ಟ್ರೇನು ಸೆಪ್ಟಂಬರ್ ಏಳರಂದು ನವದೆಹಲಿಗೆ ಹಿಂತಿರುಗಲಿದೆ. ಈ ಪ್ಯಾಕೇಜ್​ನಡಿಯಲ್ಲಿ ಪ್ರವಾಸಿಗರು ಟಿಕೆಟ್​ಗಳನ್ನು ಬುಕ್ ಮಾಡಿಕೊಂಡು ಯಾವುದೇ ಸ್ಥಳದ ರೇಲ್ವೆ ನಿಲ್ದಾಣದಿಂದ ಭಾರತ್ ದರ್ಶನ್ ಸ್ಪೆಷಲ್ ಟ್ರೇನ್​ನಲ್ಲಿ ಹತ್ತಬಹುದಾಗಿದೆ ಮತ್ತು ಇಳಿಯಬಹುದಾಗಿದೆ. ಲಖನೌ, ಗೊರಖ್​ಪುರ, ದೋರಿಯಾ, ಜೌನ್​ಪುರ್ ಸಿಟಿ, ಸುಲ್ತಾನಪುರ, ಕಾನ್ಪುರ್ ಮತ್ತು ಝಾಂಸಿ ಮೊದಲಾದ ಸ್ಥಳಗಳಲ್ಲಿ ಟ್ರೇನನ್ನು ಹತ್ತಬಹುದು ಮತ್ತು ಇಳಿಯಬಹುದಾಗಿದೆ. ಭಾರತ್ ದರ್ಶನ್ ಪ್ಯಾಕೇಜಿನ ಅಂದಾಜು ವೆಚ್ಚ ಪ್ರತಿ ಪ್ರಯಾಣಿಕನಿಗೆ ರೂ. 12,285 ಆಗಲಿದೆ ಎಂದು ಐಆರ್​ಸಿಟಿಸಿ ಮೂಲಗಳು ತಿಳಿಸಿವೆ

ಇದೇ ಮೂಲಗಳ ಪ್ರಕಾರ ಭಾರತ್ ದರ್ಶನ್ ಸ್ಪೆಷಲ್ ಟ್ರೇನ್, ಓಂಕಾರೇಶ್ವರ್, ಉಜ್ಜಯನಿ, ಅಹಮದಾಬಾದ್, ದ್ವಾರಕಾ, ನಾಗೇಶ್ವರ್, ಸೋಮ್​ನಾಥ, ತ್ರಿಂಬಕೇಶ್ವರ, ಶಿರಡಿ, ಭೀಮಾಶಂಕರ್, ಕೆವಾಡಿಯಾ ಮೊದಲಾದ ಸ್ಥಳಗಳಿಗೆ ಹೋಗಲಿದೆ.

ಪ್ರವಾಸದ ಸಮಯದಲ್ಲಿ, ಎಲ್ಲ ಪ್ರಯಾಣಿಕರಿಗೆ ಮೂರು ಹೊತ್ತು ಸಸ್ಯಾಹಾರಿ ಆಹಾರ ನೀಡಲಾಗುವುದು. ಅದಲ್ಲದೆ, ಧರ್ಮಶಾಲಾದಲ್ಲಿ ಅವರಿಗೆ ವಾತಾನುಕೂಲಿತವಲ್ಲದ ವಸತಿ ಸೌಕರ್ಯ ಮತ್ತು ಸ್ಥಳೀಯ ಟೂರಿಸ್ಟ್​ ಸ್ಥಳಗಳಿಗೆ ಭೇಟಿ ನೀಡಲು ಬಸ್​ ವ್ಯವಸ್ಥೆ ಮಾಡಲಾಗುವುದು ಎಂದು ಐಆರ್​ಸಿಟಿಸಿ ಮೂಲಗಳು ತಿಳಿಸಿವೆ. ಭಾರತ್ ದರ್ಶನ್ ಪ್ರವಾಸಕ್ಕೆ ಟಿಕೆಟ್​ಗಳನ್ನು ಕಾಯ್ದಿರಿಸುವುದು ಹೇಗೆ?

ಪ್ರವಾಸ ಮಾಡಲಿಚ್ಛಿಸುವವರು ಐಆರ್​ಸಿಟಿಸಿ ವೆಬ್​ಸೈಟ್​ www.irctctourism.com. ಮೂಲಕ ಟಿಕೆಟ್​ಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, ಈ ಸಹಾಯವಾಣಿ ನಂಬರ್​ಗಳಿಗೆ ಫೋನಾಯಿಸಿ ಪ್ಯಾಕೇಜ್​ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿದೆ- 8287930908, 8287930909, 8287930910 ಮತ್ತು 8287930911.

ಇದನ್ನೂ ಓದಿ: Indian Railway: ವಿಶ್ವದಲ್ಲೇ ಬೃಹತ್ ಪರಿಸರ ಸ್ನೇಹಿ ರೈಲ್ವೆ ವ್ಯವಸ್ಥೆಯಾಗಿ ಮಾರ್ಪಡಲು ಭಾರತೀಯ ರೈಲ್ವೆಯ ಸಿದ್ಧತೆ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!