AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾನು ಭಾಷಣ ಮಾಡುವಾಗ ಅಖಿಲೇಶ್ ಜೊತೆ ಹರಟುತ್ತಿದ್ದ ಕಾರ್ಯಕರ್ತನ ಕೆನ್ನೆಗೆ ಬಾರಿಸಲು ಮುಂದಾದರು ಎಸ್​ಪಿಯ ರಾಮ್ಜಿಲಾಲ್ ಸುಮನ್!!

ತಮ್ಮ ಭಾಷಣ ನಡೆಯುತ್ತಿರುವಾಗ ವರ್ಮಾ ಮತ್ತು ಅಖಿಲೇಶ್ ಮಾತಿನಲ್ಲಿ ತೊಡಗಿದ್ದು ಸುಮನ್ ಅವರಿಗೆ ಕಿರಿಕಿರಿಯನ್ನುಂಟು ಮಾಡಿದೆ. ಅಖಿಲೇಶ್ ಅವರಿಗೆ ಗದರುವುದು ಸಾಧ್ಯವಿಲ್ಲವಲ್ಲ! ಹಾಗಾಗೇ ಪಾಪದ ಜೀವಿ ವರ್ಮಾ ಕೆನ್ನೆಗೆ ಬಾರಿಸುವ ಪ್ರಯತ್ನ ಮಾಡುತ್ತಾರೆ.

ತಾನು ಭಾಷಣ ಮಾಡುವಾಗ ಅಖಿಲೇಶ್ ಜೊತೆ ಹರಟುತ್ತಿದ್ದ ಕಾರ್ಯಕರ್ತನ ಕೆನ್ನೆಗೆ ಬಾರಿಸಲು ಮುಂದಾದರು ಎಸ್​ಪಿಯ ರಾಮ್ಜಿಲಾಲ್ ಸುಮನ್!!
ವರ್ಮಾ ಕೆನ್ನೆಗೆ ಬಾರಿಸಲು ಮುಂದಾಗಿರುವ ರಾಮ್ಜಿಲಾಲ ಸುಮನ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Feb 07, 2022 | 11:34 PM

ಚುನಾವಣಾ ಪ್ರಚಾರ ಸಭೆಯಲ್ಲಿ (electioneering) ಒಂದು ಪಕ್ಷದವರು ಇನ್ನೊಂದು ಪಕ್ಷದವರ ವಿರುದ್ಧ ಅರಚುವುದು ಕಿರುಚುವುದನ್ನು ನಾವು ನೋಡಿದ್ದೇವೆ. ಅದರೆ ವಿಧಾನ ಸಭೆ ಚುನಾವಣೆಯ (Assembly Polls) ಕಾವಿನಲ್ಲಿರುವ ಉತ್ತರ ಪ್ರದೇಶದಲ್ಲಿ (Uttar Pradesh) ಸೋಜಿಗದ ಸಂಗತಿಯೊಂದು ಸಂಭವಿಸಿರುವುದನ್ನು ನಾವಿಲ್ಲಿ ತೋರಿಸುತ್ತಿದ್ದೇವೆ. ಇದು ನಡೆದಿರುವುದು ರಾಜ್ಯದ ಬಾಹ್ ವಿಧಾನ ಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ (Samajwadi Party) ಚುನಾವಣಾ ಪ್ರಚಾರ ಸಾರ್ವಜನಿಕ ಸಭೆಯಲ್ಲಿ. ಸದರಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಗಿರುವ ರಾಮ್ಜಿಲಾಲ್ ಸುಮನ್ ಅವರು ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷರಾದ ಜಿತೆಂದ್ರ ವರ್ಮಾ ಅವರ ಕೆನ್ನೆಗೆ ಬಾರಿಸಲು ಮುಂದಾಗುತ್ತಿರುವ ಸ್ವಾರಸ್ಯಕರ ದೃಶ್ಯ ವಿಡಿಯೋನಲ್ಲಿ ನಿಮಗೆ ಕಾಣುತ್ತದೆ. ವೇದಿಕೆಯ ಮೇಲೆ ವರ್ಮಾ ಅವರು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರೊಂದಿಗೆ ಗಹನವಾದ ಚರ್ಚೆ ನಡೆಸುವಾಗ ಸುಮನ್ ಕಪಾಳ ಮೋಕ್ಷ ಮಾಡಲು ಮುಂದಾಗುತ್ತಾರೆ! ನೆರೆದಿದ್ದ ಜನರಲ್ಲಿ ಗಾಬರಿ.

ಸುಮನ್ ವರ್ತನೆ ವರ್ಮಾ ಅವರಲ್ಲಿ ದಗ್ಭ್ರಮೆ ಮೂಡಿಸಿದರೆ ಅಖಿಲೇಶ್ ಅವರಿಗೆ ವಿನೋದಮಯವಾಗಿ ಕಾಣುತ್ತದೆ ಮತ್ತು ಅವರು ಜೋರಾಗಿ ನಗಲಾರಂಭಿಸುತ್ತಾರೆ.

ನೀವೊಮ್ಮೆ ವೀಕ್ಷಿಸಿ.

ಸುಮನ್ ಅವರು ರವಿವಾವರದಂದು ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಘಟನೆ ಜರುಗಿದೆ. ವರ್ಮಾ ಅವರು ಅಖಿಲೇಶ್ ಅವರೊಂದಿಗೆ ಮಾತಾಡುತ್ತಿದ್ದಾಗ ಸುಮನ್ ತಮ್ಮ ಭಾಷಣ ನಿಲ್ಲಿಸಿ ಅವರತ್ತ ಕೆನ್ನೆಗೆ ಬಾರಿಸುವವರ ಹಾಗೆ ನುಗ್ಗುತ್ತಾರೆ.

ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ತಮ್ಮ ಭಾಷಣ ನಡೆಯುತ್ತಿರುವಾಗ ವರ್ಮಾ ಮತ್ತು ಅಖಿಲೇಶ್ ಮಾತಿನಲ್ಲಿ ತೊಡಗಿದ್ದು ಸುಮನ್ ಅವರಿಗೆ ಕಿರಿಕಿರಿಯನ್ನುಂಟು ಮಾಡಿದೆ. ಅಖಿಲೇಶ್ ಅವರಿಗೆ ಗದರುವುದು ಸಾಧ್ಯವಿಲ್ಲವಲ್ಲ! ಹಾಗಾಗೇ ಪಾಪದ ಜೀವಿ ವರ್ಮಾ ಕೆನ್ನೆಗೆ ಬಾರಿಸುವ ಪ್ರಯತ್ನ ಮಾಡುತ್ತಾರೆ.

ಅದರೆ, ಈ ಘಟನೆ ಒಂದು ಹಾಸ್ಯಮಯ ಸನ್ನಿವೇಶವಾಗಿ ಪರಿವರ್ತನೆಗೊಂಡು ವೇದಿಕೆಯ ಮೇಲಿದ್ದವರೆಲ್ಲ ಮತ್ತು ನೆರೆದಿದ್ದ ಜನ ಜೋರಾಗಿ ನಗಲಾರಂಭಿಸಿದ್ದಾರೆ. ಸುಮನ್ ಅವರ ಬಳಿಕ ಮಾತಾಡಿದ ಆಖಿಲೇಶ್ ಯಾದವ್ ಒಂದು ವೇಳೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಾಹ್ ಅನ್ನು ಜಿಲ್ಲಾ ಕೆಂದ್ರವಾಗಿ ಘೋಷಿಸುವ ಭರವಸೆ ನೀಡಿದರು.

ಇದನ್ನೂ ಓದಿ:   ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಶಾಸ್ತಿ ಮಾಡಿ ಎಂದು ರೈತರಲ್ಲಿ ಒತ್ತಾಯಿಸಿದ ಸಂಯುಕ್ತ ಕಿಸಾನ್ ಮೋರ್ಚಾ

Published On - 11:32 pm, Mon, 7 February 22

ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು