AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ISRO-MapmyIndia ಪ್ರಯತ್ನ; ಗೂಗಲ್ ಮ್ಯಾಪ್ಸ್, ಗೂಗಲ್ ಅರ್ಥ್ ಬದಲು ಸ್ವದೇಶಿ ಪೋರ್ಟಲ್ ನಿರ್ಮಾಣ

ISRO-MapmyIndia ಸಂಸ್ಥೆಯು ಜಂಟಿಯಾಗಿ ಸ್ವದೇಶಿ ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸುತ್ತಿದೆ. ಗೂಗಲ್ ಮ್ಯಾಪ್ಸ್/ ಅರ್ಥ್ ಬದಲು ಭಾರತೀಯ ಮ್ಯಾಪಿಂಗ್ ಅಪ್ಲಿಕೇಷನ್ ಲಭ್ಯವಾಗುವ ಸೂಚನೆ ಲಭಿಸಿದೆ.

ISRO-MapmyIndia ಪ್ರಯತ್ನ; ಗೂಗಲ್ ಮ್ಯಾಪ್ಸ್, ಗೂಗಲ್ ಅರ್ಥ್ ಬದಲು ಸ್ವದೇಶಿ ಪೋರ್ಟಲ್ ನಿರ್ಮಾಣ
ISRO - MapmyIndia
TV9 Web
| Edited By: |

Updated on:Apr 06, 2022 | 8:01 PM

Share

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO- Indian Space Research Organisation) ಮತ್ತು ಲೊಕೇಷನ್-ನೇವಿಗೇಷನ್ ಟೆಕ್ನಾಲಜಿ ಸೊಲ್ಯುಷನ್ಸ್ ಒದಗಿಸುವ ಮ್ಯಾಪ್​ಮೈ ಇಂಡಿಯಾ (MapmyIndia) ಸಂಸ್ಥೆ ಜಂಟಿಯಾಗಿ ಹೊಸ ಮ್ಯಾಪಿಂಗ್ ಸಂಸ್ಥೆ ಆರಂಭಿಸಲು ಮೊದಲ ಹೆಜ್ಜೆ ಇಟ್ಟಿವೆ. ಭಾರತದ ಉತ್ತಮ ಮತ್ತು ಸ್ವದೇಶಿ ನಿರ್ಮಿತ ಮ್ಯಾಪಿಂಗ್ ಪೋರ್ಟಲ್​ಗೆ (Mapping Portal) ಹಾಗೂ ಜಿಯೋಸ್ಪೇಷಿಯಲ್ ಸರ್ವೀಸ್ (Geospatial Service) ನೀಡಲು ಮುಂದಾಗಿದೆ. ಈ ವಿಚಾರ ಪ್ರಾಯೋಗಿಕವಾಗಿ ನಿಜವಾದರೆ, ಗೂಗಲ್ ಅರ್ಥ್ ಅಥವಾ ಗೂಗಲ್ ಮ್ಯಾಪ್ಸ್ (Google Earth/Google Maps) ಬಳಕೆ ಕಡಿಮೆ ಆಗುವ ಸಂಭಾವ್ಯತೆ ಊಹಿಸಲಾಗುತ್ತಿದೆ.

ಈ ಬಗ್ಗೆ MapmyIndia ಸಿಇಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ರೋಹನ್ ವರ್ಮಾ ಮಾತನಾಡಿದ್ದಾರೆ. ಈ ತಂತ್ರಜ್ಞಾನವು MapmyIndiaದ ಡಿಜಿಟಲ್ ಮ್ಯಾಪ್ ಹಾಗೂ ಇಸ್ರೋ ಸ್ಯಾಟಲೈಟ್​ನ ಮಾಹಿತಿ ಪಡೆದು ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ. ಲಿಂಕ್ಡ್​ಇನ್ ಅಪ್ಲಿಕೇಷನ್​ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ವರ್ಮಾ, ನಿಮಗೆ ಇನ್ನು Goo*le Maps/Earth ಬೇಕಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಭಾರತದ ಮ್ಯಾಪ್ ಹಾಗೂ ಜಿಯೋಸ್ಪೇಷಿಯಲ್ ಸೇವೆಗಳಿಗೆ ಸ್ವದೇಶಿ ಅಪ್ಲಿಕೇಷನ್​ಗಳೇ ಹೆಚ್ಚು ಉತ್ತಮ ಎನ್ನಲು ಹಲವು ಕಾರಣಗಳಿವೆ ಎಂದೂ ವರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದು ‘ಆತ್ಮನಿರ್ಭರ್ ಭಾರತ್’ ಹಾದಿಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ ಎಂದು ರೋಹನ್ ವರ್ಮಾ ತಿಳಿಸಿದ್ದಾರೆ. ಈ ಮೂಲಕ, ಭಾರತದ ಬಳಕೆದಾರರು ವಿದೇಶಿ ಸಂಸ್ಥೆಗಳನ್ನು ಅವಲಂಬಿಸಬೇಕಾಗಿ ಬರುವುದಿಲ್ಲ. ಮ್ಯಾಪ್, ನೇವಿಗೇಷನ್ ಮುಂತಾದ ಸಮಸ್ಯೆಗಳಿಗೆ ಭಾರತದ ಸಂಸ್ಥೆಯಿಂದಲೇ ಪರಿಹಾರ ಸಿಗುತ್ತದೆ ಎಂದು ಹೇಳಿದ್ದಾರೆ.

ಇಸ್ರೋ ಮಾಹಿತಿಯಂತೆ, ISRO ಅಡಿಯಲ್ಲಿ ಬರುವ ಡಿಪಾರ್ಟ್​ಮೆಂಟ್ ಆಫ್ ಸ್ಪೇಸ್ (DoS), MapmyIndia ಜೊತೆ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಕೈಜೋಡಿಸಿದೆ. DoS ಹಾಗೂ MapmyIndia ಮಾತೃಸಂಸ್ಥೆ CE Info Systems Pvt Ltd ಜೊತೆಯಾಗಿ ಈ ವ್ಯವಸ್ಥೆ ಅಭಿವೃದ್ಧಿಪಡಿಸುತ್ತಿದೆ.

ಇದನ್ನೂ ಓದಿ: ದೇಶೀಯ ವಿಡಿಯೋ ಆ್ಯಪ್​ಗಳಿಗೆ ವರವಾಯ್ತು ಟಿಕ್​ ಟಾಕ್ ನಿಷೇಧ: ಮಾರುಕಟ್ಟೆಯಲ್ಲಿ ಶೇ. 40 ಪಾಲು ಗಳಿಕೆ

ಸ್ಥಗಿತಗೊಂಡ ಮೆಸೇಜಿಂಗ್ ಆ್ಯಪ್ ಹೈಕ್.. ದೇಶೀ ಆ್ಯಪ್ ನೇಪಥ್ಯಕ್ಕೆ

Published On - 7:52 pm, Sat, 13 February 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ